Homeಅಂಕಣಗಳುಸಕಲೇಶಪುರದ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ಒಂದಿಷ್ಟು ಮಾತುಗಳು: ಪ್ರಸಾದ್ ರಕ್ಷಿದಿ

ಸಕಲೇಶಪುರದ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ಒಂದಿಷ್ಟು ಮಾತುಗಳು: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದುಹೋದ ದಿನಗಳು ಭಾಗ -2, ಅಧ್ಯಾಯ- 3.

ಗಣಪಯ್ಯನವರ ಕಾಲದಲ್ಲೇ ಪ್ರಾರಂಭವಾದ ಬಾಲನಿಕೇತನ ಅನಾಥಾಶ್ರಮ ನಡೆದು ಬಂದಿತ್ತು. ಹಲವಾರು ಮಕ್ಕಳು ಅದರಿಂದ ಬದುಕು ಕಟ್ಟಿಕೊಂಡರು. ಆ ಕುಟುಂಬಗಳ ಹಲವರ ಮಕ್ಕಳು ಇಂದು ಶಿಕ್ಷಕರಾಗಿ, ಇಂಜಿನಿಯರ್ ಗಳಾಗಿ, ಹಲವಾರು ಬೇರೆ ಬೇರೆ ಉದ್ಯೋಗ, ಉದ್ಯಮಗಳಲ್ಲಿ ತೊಡಗಿಕೊಂಡು ಸಮಾಜದಲ್ಲಿ ಮನ್ನಣೆ ಗಳಿಸಿದ್ದಾರೆ.

ರವೀಂದ್ರನಾಥರು ರೋಟರಿ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದರು. ಸಕಲೇಶಪುರದಲ್ಲಿ 1980 ರಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭವಾಯಿತು. ಈ ಶಾಲೆಯ ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣ ಇವೆಲ್ಲದರಲ್ಲೂ ರವೀಂದ್ರನಾಥರ ನೆರವು ಮತ್ತು ಪರಿಶ್ರಮವಿತ್ತು. ಈ ಎಲ್ಲ ಕೆಲಸಗಳಲ್ಲಿ ರೋಟರಿ ಸಂಸ್ಥೆಯ ಎಂ.ಎನ್.ಶಿವಪ್ರಸಾದ್, ನಂದೀಶ್ ಬಾಳ್ಳು, ಬಾಳ್ಳು ಜಗನ್ನಾಥ್, ಮುಂತಾದವರೆಲ್ಲರೂ ಜೊತೆಗೂಡಿದ್ದರು. ಆಗ ದೆಹಲಿಯಲ್ಲಿದ್ದ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಾಗಿದ್ದ ಬೈಕೆರೆ ನಾಗೇಶ್ ಅವರ ಸಹಕಾರವೂ ಪ್ರಮುಖವಾಗಿತ್ತು.

ಇವೆಲ್ಲದರ ಬಗ್ಗೆ ಅರಿವಿದ್ದ ಅಂದಿನ ಹಾಸನ ಜಿಲ್ಲಾಧಿಕಾರಿಗಳು ರವೀಂದ್ರನಾಥರಲ್ಲಿ “ನೀವು ಯಾಕೆ ಸಕಲೇಶಪುರದಲ್ಲಿ ಒಂದು ವಿಕಲ ಚೇತನ ಮಕ್ಕಳ ಶಾಲೆಯನ್ನು ಮಾಡಬಾರದು? ಹಾಗೇನಾದರೂ ಮಾಡಿದರೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಕೊಡಿಸುತ್ತೇನೆ” ಎಂದರಂತೆ.

ರೋಟರಿ ವಿಶೇಷ ಚೇತನ ಮಕ್ಕಳ ಶಾಲೆ

ಅದರಿಂತ ಉತ್ತೇಜಿತರಾದ ರವೀಂದ್ರನಾಥರು ಸಕಲೇಶಪುರ ನಗರದಲ್ಲಿ ತಮ್ಮ ತಂದೆ ಗಣಪಯ್ಯನವರ ಹೆಸರಿನಲ್ಲಿ ವಿಕಲಾಂಗ ಮಕ್ಕಳ ಶಾಲೆಯನ್ನು ಪ್ರಾರಂಭಿಸಿದರು. ಮೊದಲಿಗೆ ಸಕಲೇಶಪುರದ ಸುಭಾಷ್ ಮೈದಾನ ಹತ್ತಿರದ ಒಂದು ಕೊಠಡಿಯಲ್ಲಿ ಏಳು ಜನ ವಿದ್ಯಾರ್ಥಿಗಳು ಮತ್ತು ನಾಲ್ಕು ಜನ ಸಿಬ್ಬಂದಿಯೊಂದಿಗೆ ಶಾಲೆ ಪ್ರಾರಂಭವಾಯಿತು. ಕೆಲವು ಸಮಯದ ನಂತರ ಸಕಲೇಶಪುರದ ಅಂದಿನ ಉಪವಿಭಾಗಾಧಿಕಾರಿಗಳಾಗಿದ್ದ ವಂದಿತಾ ಶರ್ಮ ಅವರು ನಗರದ ಮಧ್ಯಬಾಗದಲ್ಲಿದ್ದ ತಾಲ್ಲೂಕು ಅಭಿವೃದ್ಧಿ ಮಂಡಳಿಗೆ ಸೇರಿದ್ದ ಕಟ್ಟಡವೊಂದನ್ನು ತಾತ್ಕಾಲಿಕವಾಗಿ ಕೊಟ್ಟರಲ್ಲದೆ ಮುಂದೆ ಕಟ್ಟಡವನ್ನು ಕಟ್ಟಿಕೊಳ್ಳಲು ಪಕ್ಕದ ಕೌಡಳ್ಳಿ ಗ್ರಾಮದಲ್ಲಿ ಸ್ಥಳವನ್ನೂ ಮಂಜೂರು ಮಾಡಿದರು. ವಂದಿತಾ ಶರ್ಮ ಈಗ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಾಗಿದ್ದಾರೆ.

ಹೀಗೇ ಪ್ರಾರಂಭವಾದ “ಎನ್.ಕೆ.ಗಣಪಯ್ಯ ವಿಕಲಾಂಗ ಮಕ್ಕಳ ಪಾಠಶಾಲೆ” ಮೊದಲಿಗೆ ಎಲ್ಲ ವಿಕಲಾಂಗ ಮಕ್ಕಳಿಗೆಂದು ಪ್ರಾರಂಭವಾಯಿತಾದರೂ ನಂತರ ಬೇರೆ ರೀತಿಯ ಅಂಗವಿಕಲತೆಯ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿಯೂ ವಿದ್ಯೆ ಕಲಿಯುವುದು ಸಾಧ್ಯವೆಂದರಿತು, ಈ ಶಾಲೆಯನ್ನು ವಿಶೇಷವಾಗಿ ಕಿವುಡು ಮತ್ತು ಮೂಕ ಮಕ್ಕಳಿಗೆಂದೇ ರೂಪಿಸಲಾಯಿತು.

ಆಗ ಈ ಶಾಲೆಗೆ ಬೇಕಾದ ರೂಪು ರೇಷೆ, ಅಲ್ಲಿನ ಮಕ್ಕಳ ತಪಾಸಣೆ ಹಾಗೂ ಶಿಕ್ಷಕರ ತರಭೇತಿಗೆ ಅನುಕೂಲ ಮಾಡಿಕೊಟ್ಟವರು ಮೈಸೂರಿನ ವಾಕ್ ಶ್ರವಣ ಸಂಸ್ಥೆಯ ಸಂಸ್ಥಾಪಕರೂ ಹೆಸರಾಂತ ರಂಗ ಕರ್ಮಿಗಳೂ ಆದ  ನ. ರತ್ನ. ಅವರು ಸ್ವತಃ ಸಕಲೇಶಪುರಕ್ಕೆ ಬಂದು ಇಲ್ಲಿನ ಕೆಲಸಗಳಿಗೆ ಮಾರ್ಗದರ್ಶನ ಮಾಡಿದರಲ್ಲದೆ ಹಾರ್ಲೆ ಎಸ್ಟೇಟಿಗೂ ಬಂದು ಉಳಿದಿದ್ದರು. ಆ ವಿವರಗಳನ್ನು ಸ್ವತಃ ರತ್ನ ಅವರೇ ಈ ಲೇಖಕನಲ್ಲಿ ಒಮ್ಮೆ ಹಂಚಿಕೊಂಡರು.

1988ರಲ್ಲಿ ಈ ಶಾಲೆಯನ್ನು ಕರ್ನಾಟಕದ ರಾಜ್ಯಪಾಲರಾಗಿದ್ದ ವೆಂಕಟಸುಬ್ಬಯ್ಯನವರು ಉದ್ಘಾಟಿಸಿದರು. ಆಗ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ.ದೇವೇಗೌಡರು ಅತಿಥಿಗಳಾಗಿದ್ದರು. ನಂತರ ಶಾಲೆಗೆ ಹಲವರು ಜನರ ಸಹಾಯ ಸಹಕಾರ ನಿರಂತರವಾಗಿ ದೊರೆತರೂ ಇಂದಿಗೂ ರವೀಂದ್ರನಾಥ ಮತ್ತು ಕುಟುಂಬದವರ ಪೋಷಕರಾಗಿಯೇ ಮುಂದುವರೆದಿದ್ದಾರೆ. ಆ ಸಮಯದಲ್ಲಿ ಕರ್ನಾಟಕದ ದೊಡ್ಡ ಕಾಫಿ ಬೆಳೆಗಾರ ಕಂಪನಿಗಳಲ್ಲಿ ಒಂದಾದ ಕಾಫಿ ಲ್ಯಾಂಡ್ಸ್ ಸಂಸ್ಥೆಯ ಆಡಳಿತ ಕಛೇರಿ ಸಕಲೇಶಪುರದಲ್ಲಿ ಇತ್ತು. ಕಾಫಿ ಲ್ಯಾಂಡ್ಸ್‌ನ ತೋಟಗಳನ್ನು ಟಾಟಾ ಸಮೂಹದ ಕನ್ಸಾಲಿಡೇಟೆಡ್ ಕಾಫಿ ಕಂಪನಿ ಖರೀದಿಸಿತು. ಆಗ ಕಾಫಿಲ್ಯಾಂಡ್‌ನ ಮ್ಯಾನೇಜರ್ ಆಗಿದ್ದ ವಿಠ್ಠಲ ರಾವ್ ರವೀಂದ್ರನಾಥರ ಉತ್ತಮ ಗೆಳೆಯರೂ ಹೌದು. ವಿಠ್ಠಲರಾವ್ ಅವರು ಆಸಕ್ತಿ ವಹಿಸಿ ಪ್ರಯತ್ನ ಮಾಡಿ ಕಾಫಿಲ್ಯಾಂಡ್ ಸಂಸ್ಥೆ ಮಾರಾಟವಾಗುವ ಸಂದರ್ಭದಲ್ಲಿ ಎನ್.ಕೆ,ಗಣಪಯ್ಯ ವಿಕಲಚೇತನ ಮಕ್ಕಳ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹದಿನೈದು ಲಕ್ಷ ರೂಪಾಯಿಗಳನ್ನು  ಕಾಫಿಲ್ಯಾಂಡ್ ಸಂಸ್ಥೆಯಿಂದ ಕೊಡಿಸಿದರು. ಅದರಿಂದಾಗಿ ಶಾಲೆಗೆ ಒಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತು.

ನಂತರ ಶಾಲೆಯ ಹೆಸರು ಮೊದಲಿನಂತೆ ಮುಂದುವರೆದರೂ ಸಂಸ್ಥೆಯ ಹೆಸರನ್ನು Coffee Lands -Rotary Academy for the Physically handicapped ಎಂದು ಕರೆಯಲಾಯಿತು.

ವಿಶೇಷ ಚೇತನ ಶಾಲೆ ಪ್ರಾಂಶುಪಾಲರು ಮತ್ತು ಅಧ್ಯಾಪಕರು

ಇಂದು ಈ ಶಾಲೆಯಲ್ಲಿ ಕಲಿತ ನೂರಾರು ಮಕ್ಕಳು ಸ್ವಂತ ಬದುಕು ಕಟ್ಟಿಕೊಂಡಿದ್ದಾರೆ. ಬೇರೆ ಉದ್ಯೋಗಗಳಲ್ಲಿ ಇದ್ದಾರೆ. ಇಂಜಿಯರಿಂಗ್ ಪದವಿಯನ್ನೂ ಗಳಿಸಿದ್ದಾರೆ. ಚಿತ್ರಕಲಾವಿದರಾಗಿದ್ದಾರೆ. ಕೆಲವರು ಅಲ್ಲೇ ಶಿಕ್ಷಕರಾಗಿಯೂ ದುಡಿಯುತ್ತಿದ್ದಾರೆ.

ಇಂದು ಈ ಶಾಲೆಯಲ್ಲಿ ಸುಸಜ್ಜಿತವಾದ ಹಾಸ್ಟೆಲ್, ಅಡುಗೆ ಮನೆ, ಭೋಜನ ಗೃಹ, ತರಗತಿ ಕೊಠಡಿಗಳು, ಸಭಾಂಗಣ, ಪ್ರಯೋಗಶಾಲೆ ಪಾಠೋಪಕರಣಗಳು ಮತ್ತು ಪೀಠೋಪಕರಣಗಳು, ಹೀಗೆ ಎಲ್ಲ ಸೌಕರ್ಯಗಳಿವೆ. ತರಭೇತಾದ ನುರಿತ ಶಿಕ್ಷಕರಿದ್ದಾರೆ.

ಸದ್ಯದಲ್ಲಿ 84 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಒಟ್ಟು 17 ಮಂದಿ ಸಿಬ್ಬಂದಿ ಇದ್ದಾರೆ. ಇವೆಲ್ಲವೂ ಕೂಡಿ ಇಂದು ಈ ಶಾಲೆ ರಾಜ್ಯದಲ್ಲಿಯೇ ಉತ್ತಮ ಶಾಲೆಗಳಲ್ಲಿ ಒಂದೆನಿಸಿದೆ.

ಸಕಲೇಶಪುರದಲ್ಲಿ ಒಮ್ಮೆ ಈ ಶಾಲೆಯ ಸಹಾಯಾರ್ಥ ಚಲನಚಿತ್ರ ಪ್ರದರ್ಶನವೊಂದು ನಡೆಯಿತು. ರವೀಂದ್ರನಾಥರ ಹಿರಿಯ ಮಗ ಎನ್.ಆರ್.ಸುಧೀರ್ ಇದರ ಪ್ರಾಯೋಜಕರಾಗಿದ್ದರು. ಅಂದು ಪ್ರದರ್ಶನಕ್ಕಾಗಿ ಈ ಶಾಲೆಯ ಮಕ್ಕಳಿಗೆ ನಮ್ಮ ರಂಗತಂಡದ ಕೆಲವರು ಸೇರಿ ಒಂದು ನಾಟಕವನ್ನು ಕಲಿಸಿದೆವು. ನಾಟಕವನ್ನು ನಾನು ಬರೆದಿದ್ದೆ. ನಾಟಕದ ಹೆಸರು “ಮಾತು ಬೆಳ್ಳಿ ಮೌನ ಬಂಗಾರ”. ಮಾತು ಬಾರದ ಮಕ್ಕಳು ಈ ನಾಟಕವನ್ನು ಅದ್ಭುತವಾಗಿ ನಟಿಸಿದರು.

ನಂತರದ ದಿನಗಳಲ್ಲಿ ಈ ಶಾಲೆಯ ಶಿಕ್ಷಕರೊಬ್ಬರು ನಮ್ಮ ರಂಗ ತಂಡದಲ್ಲಿಯೂ ನಟಿಸಿದರು. ರಂಗಾಯಣದ ನಟ- ನಿರ್ದೇಶಕ ಹುಲುಗಪ್ಪ ಕಟ್ಟೀಮನಿಯವರ ನಿರ್ದೇಶನದ “ಅರಹಂತ” ನಾಟಕ. (ರಚನೆ: ರಂಗಾಯಣದವರೇ ಆದ ರಾಮನಾಥ ಅವರದು)

ರೋಟರಿ ಶಾಲೆ ಮತ್ತು ಬಯಲು ರಂಗ ಮಂದಿರ

ಈ ನಾಟಕ ಕರ್ನಾಟಕದಾದ್ಯಂತ ಹಲವು ಪ್ರದರ್ಶನಗಳನ್ನು ಕಂಡಿತು. ಇದೂ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಸಕಲೇಶಪುರದ ರೋಟರಿ ಸಂಸ್ಥೆ ನಮ್ಮೊಡನೆ, ರಂಗ ತರಭೇತಿಯಲ್ಲಿ, ರಂಗೋತ್ಸವಗಳಲ್ಲಿ ಭಾಗಿಯಾಗುತ್ತ  ಬಂದಿದೆ.

ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ನೀನಾಸಂ ತಿರುಗಾಟದ ನಾಟಕಗಳನ್ನು ಸಕಲೇಶಪುರದಲ್ಲಿ ಪ್ರದರ್ಶಿಸಲಾಗಿದೆ. ಕಿನ್ನರ ಮೇಳ ತುಮರಿ, ಜನಮನದಾಟ ಹೆಗ್ಗೋಡು ಮುಂತಾದ ರಂಗ ತಂಡಗಳ ಪ್ರದರ್ಶನವಲ್ಲದೆ ನಮ್ಮ ಜೈಕರ್ನಾಟಕ ಸಂಘವೂ ರೋಟರಿ ಶಾಲೆಯಲ್ಲಿ ರಂಗ ಪ್ರದರ್ಶನ ನೀಡಿದೆ. ರೋಟರಿ ಶಾಲೆಯ ಆವರಣದಲ್ಲಿ ಒಂದು ಬಯಲು ರಂಗ ಮಂದಿರವೂ ನಿರ್ಮಾಣವಾಗಿದೆ. ಈ ಎಲ್ಲ ಕೆಲಸಗಳಲ್ಲಿ ರೋಟರಿ ಸಂಸ್ಥೆಯ ಎನ್.ಎಂ.ಶಿವಪ್ರಸಾದ್, ಬಿಟ್ಟೇಶ್ವರ ಪ್ರಸನ್ನ, ಶಾಪ್ ಲಿಂಗರಾಜ್, ಡಾ.ಸುದರ್ಶನ್, ಎನ್.ಪಿ. ಮಲ್ಲೇಶ್ ಮುಂತಾದವರ ಕೊಡುಗೆ ದೊಡ್ಡದು.

ಈ ಹಿಂದೆ ಉಲ್ಲೇಖವಾಗಿರುವ, ದಾನಿಗಳಿಂದ ನಿರ್ಮಾಣವಾಗಿರುವ ಹಲವಾರು ಸಂಸ್ಥೆಗಳು ಮತ್ತು ಕಟ್ಟಡಗಳಲ್ಲದೆ ಮಂಜ್ರಾಬಾದ್ ವಲಯದಲ್ಲಿ ಇನ್ನೂ ಹಲವು ನಿರ್ಮಾಣಗಳು ಸಮಾಜಮುಖಿ ದಾನಿಗಳಿಂದ ಆಗಿವೆ. ಅವುಗಳಲ್ಲಿ ಸಕಲೇಶಪುರದ ಹಾಡ್ಯ ಸುಬ್ಬೇಗೌಡ ಪುರಭವನ, ಬಿ.ಎಸ್. ನಂಜಪ್ಪ- ರೋಟರಿ ಮಕ್ಕಳ ಗ್ರಂಥಾಲಯ, ನಂಜಮ್ಮ ಮಹಿಳಾ ಸಮಾಜ, ಬಾಳ್ಳುಪೇಟೆ ಸಿದ್ದಣ್ಣಯ್ಯ ಪ್ರೌಢಶಾಲೆ, ಎಸ್. ಆಲಪ್ಪ ಶೆಟ್ಟಿ ಸ್ಕೌಟ್ ಮತ್ತು ಗೈಡ್ ಕಟ್ಟಡ ಮುಂತಾದವು ಪ್ರಮುಖವಾದವು.

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು -31: ಕರ್ನಾಟಕ ಕಾಫಿ ಮತ್ತು ಗಣಪಯ್ಯನವರ ನಂಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...