Homeಕರ್ನಾಟಕಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆಯವರ ಆಯ್ಕೆ ಅತ್ಯಂತ ಪ್ರಶಸ್ತ

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆಯವರ ಆಯ್ಕೆ ಅತ್ಯಂತ ಪ್ರಶಸ್ತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಪೂರ್ಣಚಂದ್ರ ತೇಜಸ್ವಿಯವರನ್ನು ಬಿಟ್ಟರೆ ವಿಠಲ ಹೆಗ್ಡೆಯವರಿಗೆ ಮಾತ್ರ

- Advertisement -
- Advertisement -

ಶೃಂಗೇರಿಯಲ್ಲಿ ಜನವರಿ 10 ಮತ್ತು 11ರಂದು ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆಯವರ ಆಯ್ಕೆ ಅತ್ಯಂತ ಪ್ರಶಸ್ತವಾದುದು.
ವಿಠಲ ಹೆಗ್ಡೆಯವರು ಸಾಹಿತಿಯಾಗಿ ದೊಡ್ಡ ಹೆಸರೇನೂ ಮಾಡಿಲ್ಲ, ಹೆಚ್ಚು ಕೃತಿಗಳನ್ನೂ ಪ್ರಕಟಿಸಿಲ್ಲ, ನಿಜ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಪೂರ್ಣಚಂದ್ರ ತೇಜಸ್ವಿಯವರನ್ನು ಬಿಟ್ಟರೆ ವಿಠಲ ಹೆಗ್ಡೆಯವರಿಗೆ ಮಾತ್ರ ಎಂಬುದನ್ನು ಗಮನಿಸಿದರೆ ಅವರ ಸಾಹಿತ್ಯ ಕೃಷಿ ‘ಸಣ್ಣ’ದಾದರೂ ಅದರ ಮೌಲಿಕತೆ ಅರ್ಥವಾಗುತ್ತದೆ.

ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಹಾಸುಹೊಕ್ಕಾಗಿ ಬೆರೆತುಹೋಗಿದ್ದಾರೆ. ಪುಸ್ತಕಗಳನ್ನು ಬರೆದು ಪ್ರಕಟಿಸುವುದನ್ನೇ ಪ್ರಧಾನ ವೃತ್ತಿಯಾಗಿ ಅವರು ಮಾಡಿಕೊಂಡಿದ್ದಲ್ಲಿ, ಜಿಲ್ಲೆಯ ಹಾಗೂ ಶೃಂಗೇರಿ ಮತ್ತು ಆ ಪರಿಸರದ ಪ್ರಕೃತಿ, ಬದುಕು ಮತ್ತು ಇತಿಹಾಸದ ಕುರಿತು ಅವರು ಸಂಶೋಧನೆ ಮಾಡಿ ಹಾಕಿಟ್ಟುಕೊಂಡಿರುವ ಟಿಪ್ಪಣಿಗಳೆಲ್ಲ ಕೃತಿ ರೂಪಕ್ಕಿಳಿದಿದ್ದೇ ಆಗಿದ್ದಲ್ಲಿ ಕನಿಷ್ಠ ಅರ್ಧ ಡಜನ್ ಮೌಲಿಕ ಕೃತಿಗಳಿಗೆ ಸಾಕಾಗುತ್ತಿದ್ದವು ಎಂದು ನನ್ನ ನಂಬಿಕೆ.

ವಿಠಲ ಹೆಗ್ಡೆಯವರು ಮಲೆನಾಡಿಗಷ್ಟೇ ಸೀಮಿತರಾಗದೆ, ಕನ್ನಡ ನಾಡು-ನುಡಿ-ಜನಜೀವನ-ಕೃಷಿ-ಪ್ರಕೃತಿ ಸಂಪತ್ತು-ಚಳವಳಿ-ಇತಿಹಾಸ … ಈ ಎಲ್ಲ ರಂಗಗಳಲ್ಲೂ ನಿರಂತರ ಕ್ರಿಯಾಶೀಲವಾಗಿರುವ ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ಜನಜನಿತರಾಗಿದ್ದಾರೆ.

ಅವರ ಕೃತಿಗಳ ವಿಷಯಕ್ಕೆ ಬಂದರೆ, ‘ಮಂಗನ ಬ್ಯಾಟೆ’, ‘ಅಡಿಕೆಯ ಮಾನ’ ಮತ್ತು ‘ಕಾಡು-ಕಿರುಕುಳ’ ಇವು ಅವರ ಪ್ರಕಟವಾಗಿರುವ ಮೂರೇ ಮೂರು ಕೃತಿಗಳು. ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ಮಲೆನಾಡಿನ ಈ ಭಾಗದ ಜನಜೀವನದಲ್ಲಿ ಗಮನಾರ್ಹ ಸಮೃದ್ಧಿಗೆ ಕಾರಣವಾಗಿದ್ದ ಅಡಿಕೆಯ ಬೆಲೆ ಇದ್ದಕ್ಕಿದ್ದಂತೆ ತಥಾಕಥಿತ ‘ಮಾರುಕಟ್ಟೆ’ ಅರ್ಥವ್ಯವಸ್ಥೆ ಮತ್ತು ‘ಮಾರುಕಟ್ಟೆ ರಾಜಕಾರಣ’ದಿಂದಾಗಿ ಯದ್ವಾತದ್ವಾ ಏರುಪೇರಾಗಿ ಅಡಿಕೆ ಸೀಮೆಯಾದ್ಯಂತ ಅತಂತ್ರ ಸೃಷ್ಟಿಸಿದ ಸಂದರ್ಭದಲ್ಲಿ ‘ಅಡಿಕೆಯ ಮಾನ’ ರಚಿತವಾಯಿತು. ‘ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರೂ ಬರೊಲ್ಲ’ ಎಂಬ ಗಾದೆಮಾತು ಈ ಶೀರ್ಷಿಕೆಗೆ ಪ್ರೇರಣೆ.

ಬಂಡವಾಳಶಾಹಿ ಹಿತಾಸಕ್ತಿಗಳೂ ಅಧಿಕಾರಶಾಹಿ ಮತ್ತು ರಾಜಕೀಯ ಶಕ್ತಿಗಳೂ ಒಟ್ಟಾಗಿ, ವಿವಿಧ ರೀತಿಗಳಲ್ಲಿ ಮಲೆನಾಡಿನ ಅಪಾರ ವನರಾಶಿಯನ್ನು ಒಳಗೊಂಡ ಅಮೂಲ್ಯ ಪರಿಸರ ಸಂಪತ್ತನ್ನು ಸೂರೆಗೈದು ಬರಿದಾಗಿಸುತ್ತಿದ್ದರೆ, ಅರಣ್ಯಾಧಿಕಾರಿಗಳು ಮತ್ತು ಕೆಲವು ಪಟ್ಟಭದ್ರ ‘ಪರಿಸರ’ ವೃತ್ತಿಪರರು ಸುಪ್ರೀಂ ಕೋರ್ಟಿನ ಸದಾಶಯವನ್ನು ದುರುಪಯೋಗ ಪಡಿಸಿಕೊಂಡು, ಈ ಪರಿಸರ ನಾಶಕ್ಕೆಲ್ಲ ಇಲ್ಲಿನ ರೈತಾಪಿಯೇ ಕಾರಣವೆಂಬಂತೆ ಬಿಂಬಿಸಿ, ರೈತಾಪಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಈ ಒಟ್ಟಾರೆ ವಿದ್ಯಮಾನವನ್ನು ವರ್ಣಿಸಿ ಬರೆದ ಪುಸ್ತಕ ‘ಕಾಡು-ಕಿರುಕುಳ’.

ಹೆಗ್ಡೆಯವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ‘ಮಂಗನ ಬ್ಯಾಟೆ’ ಕೃತಿ ಕುವೆಂಪು ವಿವಿಯ ಮೊದಲ ವರ್ಷದ ಪದವಿ ಕನ್ನಡ ವಿಷಯಕ್ಕೊಂದು ಪಠ್ಯವಾಗಿಯೂ, ಇಂಗ್ಲಿಷ್ ವಿಷಯದಲ್ಲಿ ಒಂದು ಪೂರಕ ಓದಿನ ಕೃತಿಯಾಗಿಯೂ ನಿಗದಿಯಾಗಿದೆ. ಕುವೆಂಪು ಮತ್ತು ತೇಜಸ್ವಿಯವರ ನಂತರ ಮಲೆನಾಡಿನ ಬದುಕಿನ ಚಿತ್ರಣವನ್ನು ಇಷ್ಟು ಸೊಗಸಾಗಿ ಸಮಗ್ರವಾಗಿಯೂ ಪರಿಣಾಮಕಾರಿಯೂ ಆಗಿ ಕಟ್ಟಿಕೊಟ್ಟಿರುವ ಕೃತಿ ಇನ್ನೊಂದಿಲ್ಲ ಎಂದು ಯು.ಆರ್. ಅನಂತ ಮೂರ್ತಿಯವರು ಇದನ್ನು ಶ್ಲಾಘಿಸಿರುವುದು ಸುಮ್ಮನೇ ಅಲ್ಲ. ಮಲೆನಾಡಿನ ‘ಮುಖ್ಯಧಾರೆ’ ಜೀವನ ಚಿತ್ರಣದಿಂದ ಸ್ವಲ್ಪ ‘ಕೆಳ’ಕ್ಕಿಳಿದು ತಳಸಮುದಾಯಗಳ ಬದುಕಿನ ಚಿತ್ರಣವನ್ನು ತುಂಬ ಲವಲವಿಕೆಯ ಶೈಲಿಯಲ್ಲಿ ‘ಮಂಗನ ಬ್ಯಾಟೆ’ ಅತ್ಯಂತ ವಿವರವಾಗಿಯೂ ಆಪ್ತವಾಗಿಯೂ ಬಿಚ್ಚಿಟ್ಟಿದೆ.

ಹೆಗ್ಡೆಯವರ ಬದುಕು ಬರಹ ಹೋರಾಟಗಳ ಕುರಿತು ಬರೆಯಬಹುದಾದ್ದು ಬಹಳಷ್ಟಿದೆ. ಇಂದಿಗೂ ಶೃಂಗೇರಿ ತಾಲೂಕಿನಲ್ಲಿ ದಲಿತರು, ಆದಿವಾಸಿಗಳು ಮತ್ತು ಎಲ್ಲ ತಳ ಸಮುದಾಯಗಳ ಬಡಜನರು ತಮಗೆ ಅನ್ಯಾಯವಾದಾಗ ಮೊದಲು ಆಶ್ರಯಿಸುವುದೇ ವಿಠಲ ಹೆಗ್ಡೆಯವರನ್ನು. ಪತ್ರಕರ್ತರಾಗಿಯೂ ಅವರು ಒಳ್ಳೆಯ ಹೆಸರು ಮಾಡಿದ್ದಾರೆ. ಹೀಗೆ ಸಾಹಿತ್ಯಕ-ಸಾಮಾಜಿಕ-ಸಾಂಸ್ಕೃತಿಕ ರಂಗಗಳೆಲ್ಲದರಲ್ಲೂ ಕ್ರಿಯಾಶೀಲರಾದ ವ್ಯಕ್ತಿಯೊಬ್ಬರನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾಗೂ ಗೆಳೆಯ ಕಲ್ಕುಳಿ ವಿಠಲ ಹೆಗ್ಡೆಯವರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...