Homeನ್ಯಾಯ ಪಥಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ - ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ – ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ಇವತ್ತು ಕೆಲವು ವಿಷಯಗಳನ್ನು ಪಾಯಿಂಟ್ ಶೀರ್ ಕಲಿಯೋಣು.

ಒಂದನೇ ಪಾಯಿಂಟು- ಸಂಖ್ಯೆ
ಕರ್ನಾಟಕ ರಾಜ್ಯದೊಳಗ 30 ಜಿಲ್ಲೆ ಅವ. 32 ಅಲ್ಲ. 34 ನೂ ಅಲ್ಲ. ಕೆಲವರು 34 ಏನು 43 ಮಾಡಬೇಕು ಅಂತ ಹೊಂಟಾರ. ಅದು ಬೇರೆ ವಿಷಯ.

ಎರಡನೇ ಪಾಯಿಂಟು-ಜಿಲ್ಲೆಗಳ ಪಟ್ಟಿ
ಕರ್ನಾಟಕದ ಜಿಲ್ಲೆಗಳ ಹೆಸರು ಈ ರೀತಿ ಇವೆ – ಬಾಗಲಕೋಟಿ, ಬೆಳಗಾವಿ, ವಿಜಯಪುರ (ಬಿಜಾಪುರ), ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ(ಕಾರವಾರ), ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಕಲಬುರ್ಗಿ (ಗುಲಬರ್ಗಾ), ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ (ಮಂಗಳೂರು), ಹಾಸನ, ಕೊಡಗು (ಕೂರ್ಗು, ಮಡಿಕೇರಿ, ಮರಕೇರಾ), ಮಂಡ್ಯ, ಮೈಸೂರು, ಉಡುಪಿ

ಮೂರನೇ ಪಾಯಿಂಟು – ಆ ಪದಾ ಈ ಪದಾ
‘ಜಿಲ್ಲೆ’ ಎನ್ನುವುದು ಕನ್ನಡ ಪದವಾಗಲು ಅದೇನು ಕಬ್ಬಿನ ಜಲ್ಲೆ ಅಲ್ಲ. ಅದು ಜಿಲಾಃ ಎನ್ನುವ ಪರ್ಶಿಯನ್ ಅಥವಾ ಪಾರ್ಸಿ ಪದದಿಂದ ಬಂದ ಶಬ್ದ.

ನಮಗೆ ಗೊತ್ತಿಲ್ಲದಂಗನ ನಮ್ಮ ಅರಮನೀ ಕಂಬದಾಗ ನರಸಿಂಹಸ್ವಾಮಿ ಹೆಂಗ ಅವತಾರ ಹೆಂಗ ಇರತಾನೋ, ಹಂಗ ನಮ್ಮ ಖನ್ನಡ ಬಾಸೆಯೊಳಗ ಅಸಂಖ್ಯ ಪರ್ಶಿಯನ್ ಅಥವಾ ಪಾರ್ಸಿ ಪದಾ ಅವ. ಹಂಗನ ಇದೂ ಒಂದು ಪಾರ್ಸಿ ಪದ. “ಗಂಡಸರ ಲುಂಗಿ, ಹೆಂಗಸರು ಲುಂಗಿ, ಲಂಗೋಟಿ ಇವು ಯಾವುವೂ ಕನ್ನಡದವಲ್ಲ. ಅವೆಲ್ಲವೂ ಪಾರ್ಸಿ ಅಂತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳ್ಯಾರಲ್ಲ, ಅದು ಖರೇನ. ಕನ್ನಡದ ಕಸ್ತೂರಿ ತೇಯುವಾಗ ಕೊರಡಿಗೆ ಅಂಟಿಕೊಂಡ ಗಂಧದ ವಾಸನಿಯ ಹಂಗ ಅವು ನಮ್ಮ ಭಾಷಾ ಸೇರಿಕೊಂಡು ಅದರ ಘಮಲು ಹೆಚ್ಚು ಆಗೇದ.

ನಮ್ಮ ಕಲ್ಪನಾ ಇಲ್ಲದಂಗ ಅವು ನಮ್ಮ ಮ್ಯಾಲೆ ಪ್ರಭಾವ ಬೀರ್ಯಾವು. ಬ್ಯಾರೆ ಎಲ್ಲಾ ಹೋಗಲಿ ಬಿಡಲಿ. ನಮ್ಮ ಜೀವನಾಧಾರ ಆಗಿರೋ `ನೀರು’ ಸಹಿತ ಫಾರ್ಸಿ. ಹೋಗಲಿ ಬಿಡ್ರಿ, ಅವು ಯಾವಾವು ಶಬ್ದಾ ಅನ್ನುವುದನ್ನು ಇನ್ನೊಮ್ಮೆ ನೋಡೋಣ.

ನಾಲ್ಕನೆಯ ಪಾಯಿಂಟು – ಇತಿಹಾಸ
ಸಾವಿರಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯೇ ಭಾರತದಲ್ಲಿ ಆಡಳಿತದ ಕೇಂದ್ರವಾಗಿತ್ತು. ಸರಿ ಸುಮಾರು ಒಂದು ಸಾವಿರ ವರ್ಷದ ಹಿಂದೆ ಘುರಿಡ್ ರಾಜ ಮನೆತನದವರು ಭಾರತದ ಆಡಳಿತ ವನ್ನು ಕೈಗೆ ತೆಗೆದುಕೊಂಡಾಗ ಪ್ರತಿ ಪ್ರದೇಶಕ್ಕೊಬ್ಬ ಸರದಾರನನ್ನು ನೇಮಿಸಿದರು. ಇವರಲ್ಲಿ ಒಬ್ಬನಾದ ಕುತುಬ್ದೀನ ಐಬಕ್‍ನ ಅಧಿಕಾರಿಗಳು ಕೈಕೊಂಡ ಆಡಳಿತ ಸುಧಾರಣೆ ಅಂಗವಾಗಿ ಹುಟ್ಟಿದ್ದವೇ ಜಿಲಾಃ ಗಳು. ಇವುಗಳನ್ನು ನಂತರ ದೆಹಲಿ ಸುಲ್ತಾನರು, ದಖನ್ನಿನ ಬಹಮನಿಗಳು, ಮುಘಲರು, ಹಾಗೂ ಹೈದರಾಬಾದು ನಿಜಾಮರು ಆಡಳಿತ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡರು. ಹೈದರಾಬಾದಿನಲ್ಲಿ, `ನಿಜಾಮರು ಜಿಲ್ಲಾಗಳಿಂದ ರಾಜಧಾನಿಯವರೆಗೆ ಕೇಳಬೇಕಾದ್ದು ಸಂಗೀತದ ದನಿಯೊಂದೇ, ಷಿಕಾಯತ್ (ದೂರು) ಇಲ್ಲಿಗೆ ಬರಬೇಕಿಲ್ಲ. ಅಲ್ಲಲ್ಲಿಯೇ ಪರಿಹರಿಸಿಕೊಳ್ಳಬಹುದು’ ಎಂದು ಹೇಳುತ್ತಿದ್ದರು ಎಂಬ ಮಾತಿದೆ.

ಬ್ರಿಟಿಷರ ಕಾಲದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರಿಗಳನ್ನು ಜಿಲ್ಲೆಗಳಲ್ಲಿ ನೇಮಿಸಲಾಯಿತು. ಅವರಿಗೆ ಹೆಚ್ಚಿನ ಅಧಿಕಾರಗಳನ್ನು ಕೊಟ್ಟದಕ್ಕನ, ದೂರದ ಒಂಬತ್ತು ಸಾವಿರ ಕಿಲೋಮೀಟರು ದೂರದ ಲಂಡನ್ನಿನಿಂದ ಅವರಿಗೆ ಅಧಿಕಾರ ಚಲಾಯಿಸಲಿಕ್ಕೆ ಸಾಧ್ಯ ಆತು. ಸಿಂಗಾಪುರದ ಗಡಿಯಿಂದ ಆಫ್ಘಾನಿಸ್ತಾನದವರೆಗೂ ಹಬ್ಬಿದ್ದ ಅಂದಿನ ಭಾರತವನ್ನು ಆಳಲಿಕ್ಕೆ ಕೇವಲ ಎರಡು ಸಾವಿರ ಬಿಳಿಯ ಅಧಿಕಾರಿಗಳು ಇದ್ದರು. (ಸೇನೆ ಹಾಗೂ ಐಸಿಎಸ್ ಆಡಳಿತ ಸೇವೆ ಸೇರಿ).

ಐದನೆಯ ಪಾಯಿಂಟು- ಜಿಲ್ಲೆಯಲ್ಲಿ ಏನುಂಟು, ಏನಿಲ್ಲ?
ಜಿಲ್ಲೆ ಎನ್ನುವುದು ಒಂದು ಪ್ರದೇಶದ ಆಡಳಿತಾತ್ಮಕ ಮುಖ್ಯ ಕಚೇರಿಗಳನ್ನು ಹೊಂದಿರೋ ಊರು. ಅದರಾಗ ನಮ್ಮ ತೆರಿಗೆ ಹಣದಿಂದ ಕಟ್ಟಿದ ಇಟ್ಟಂಗಿ – ಸಿಮಿಂಟ್ ಕಟ್ಟಡಗಳಲ್ಲಿ ಇರುವ ಕಲ್ಲಿನ ಹೃದಯದ ಅಧಿಕಾರಿಗಳು ಕೂತಿರತಾರ. ಇವರು ಜನರ ಕೆಲಸ ಮಾಡೋಕಿಂತ ಜಾಸ್ತಿ ಜನರ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಪುಢಾರಿಗಳ ಕೆಲಸಾ ಮಾಡೋದ ಜಾಸ್ತಿ.

ಇಂತಿಪ್ಪ ಪುಢಾರಿಗಳು ಜನಾಸಕ್ತಿಗಾಗಿ ಹೆಚ್ಚಿನ ಜಿಲ್ಲೆ ಮಾಡಬೇಕು, ನಾನು ಇರೋ ಊರೇ ಜಿಲ್ಲೆ ಮುಖ್ಯ ಸ್ಥಾನ ಆಗಬೇಕು. ನಮ್ಮ ಮನಿ ಹಿಂದನ, ನಮ್ ಭಾವಮೈದುನನೇ ಜಿಲ್ಲಾಧಿಕಾರಿ ಆಗಬೇಕು ಅಂತ ಹೇಳಲಿಕ್ಕೆ ಹತ್ಯಾರಲ್ಲ, ಏನದರ ಮರ್ಮ? ಇದರ ಉತ್ತರ ಈ ಖೋಲಿಯೊಳಗ ಸಿಗೋದಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....