Homeಕರ್ನಾಟಕಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

- Advertisement -
- Advertisement -

ಇಂದು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಟ್ವಿಟ್ಟರ್ ಟ್ರೆಂಡಿಂಗ್ #KarnatakaJobsForKannadigas ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ಚರ್ಚಿಸಿದ್ದರು. ಬಹುತೇಕರು ಅದನ್ನು ಬೆಂಬಲಿಸಿದ್ದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ. ಕೆಲವರು ಇದು ಪ್ರಾಕ್ಟಿಕಲ್ ಅಲ್ಲ ಎಂದಿದ್ದಾರೆ. ಕನ್ನಡಿಗರಿಗೆ ಉದ್ಯೋಗ ನಷ್ಟ ಆಗುತ್ತಿರುವುದು ಎಲ್ಲಿ ಎಂಬ ಕುರಿತು ಉದಾಹರಣೆಗಳ ಮೂಲಕ ಚರ್ಚೆ ನಡೆದಿದೆ.

ಪತ್ರಕರ್ತರಾದ ನವೀನ್ ಸೂರಿಂಜೆ ಈ ರೀತಿ ಹೇಳುತ್ತಾರೆ.

ಕರಾವಳಿಯಲ್ಲಿ ಸ್ಥಾಪನೆಯಾದ ವಿಜಯಾ ಬ್ಯಾಂಕನ್ನು ಇನ್ನಿಲ್ಲದಂತೆ ಮಾಡಿದ ಬ್ಯಾಂಕ್ ವಿಲೀನ‌ ಪ್ರಕ್ರಿಯೆಯ ವಿರುದ್ದ ಮಾಡಿದ ಹೋರಾಟವೇನೋ ವ್ಯರ್ಥವಾಯ್ತು. ವಿಜಯಾ ಬ್ಯಾಂಕ್ ಇದ್ದಾಗಲೇ ಸ್ವಲ್ಪಅಸ್ಥೆ ವಹಿಸಿದ್ದರೆ ಬ್ಯಾಂಕ್ ಉಳಿಯುತ್ತಿತ್ತೇನೋ ! ಮೂಲ್ಕಿ ಸುಂದರರಾಮ ಶೆಟ್ಟರಿಂದ ವೈಭವದ ದಿನಗಳನ್ನು ಕಂಡ ವಿಜಯಾ ಬ್ಯಾಂಕಿನಲ್ಲಿ ಎಷ್ಟೊಂದು ಜನ ಪರಿಚಿತರು ಇದ್ದರು. ಮೂಲ್ಕಿಯವರೇಆಗಿದ್ದಕ್ಕೋ ಏನೋ… ನನ್ನಪ್ಪನ ಗೆಳೆಯರಲ್ಲಿ ಬಹುತೇಕರು ವಿಜಯಾ ಬ್ಯಾಂಕ್ ಸಿಬ್ಬಂದಿಗಳು. ನನ್ನ ತಲೆಮಾರಿನ ಯಾರೂ ಕೂಡಾ ನಾನು ವಿಜಯಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಂಡಿದ್ದನ್ನು ನಾನುಕೇಳಿಲ್ಲ. ಆಗಲೇ ನಮಗೆ ಅಪಾಯ ಅರಿವಾಗಬೇಕಿತ್ತು.
ನನ್ನೂರಲ್ಲಿ ಹುಟ್ಟಿದ ಬ್ಯಾಂಕ್ ನಲ್ಲಿ ನನ್ನೂರಿನ ಯುವಕರಿಗೆ ಕೆಲಸ ವಂಚಿಸಿ, ಪರ ಬಾಷಿಕರಿಗೆ ಉದ್ಯೋಗ ನೀಡಿದಾಗಲೇ ವಿಜಯಾ ಬ್ಯಾಂಕ್ ಅವನತಿ ಪರ್ವ ಪ್ರಾರಂಭವಾಗಿತ್ತು. ಇವತ್ತು ವಿಜಯಾ ಬ್ಯಾಂಕ್ಉದ್ಯೋಗಿಗಳೆಲ್ಲರೂ ಕನ್ನಡಿಗರಾಗಿದ್ದರೆ ವಿಲೀನ ಪ್ರಕ್ರಿಯೆಗೆ ಉದ್ಯೋಗಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು ?
ವಿಜಯಾ ಬ್ಯಾಂಕನ್ನೇನೋ ಕಳೆದುಕೊಂಡೆವು. ಕನ್ನಡಿಗರ ಉಳಿದ ಬ್ಯಾಂಕುಗಳನ್ನಾದರೂ ರಕ್ಷಿಸಬೇಕಿದೆ. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಪ್ರಾತಿನಿದ್ಯ ಸಿಗಬೇಕಿದೆ. ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆಗೆಅವಕಾಶ ನೀಡಬೇಕಿದೆ.
ಸದ್ಯ, ಕನ್ನಡಿಗರೆಲ್ಲರೂ ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಚಳುವಳಿಯಲ್ಲಿ ಭಾಗಿಯಾಗಬೇಕಿದೆ.

ಎಂ.ಎಸ್.ಶ್ರೀ ಹರ್ಷ ಎನ್ನುವವರು ಇದಕ್ಕೆ ಸಹಮತ ಹೊಂದಿಲ್ಲ.

ಇದು ಪ್ರಾಕ್ಟಿಕಲ್ ಅಲ್ಲ. ಅಭಿವೃದ್ಧಿ ಆದ ಕಡೆ ವಲಸೆ ಆಗಿಯೇ ಆಗುತ್ತದೆ. ಇಂತಹ ಹೋರಾಟಗಳಿಂದ ಏನೂ ಪ್ರಯೋಜನವಿಲ್ಲ. ನನ್ನ ಮಾತಿನಲ್ಲಿ ನಂಬುಗೆ ಇಲ್ಲದಿದ್ದರೆ ಪ್ರಯತ್ನ ಮಾಡಿ ನೋಡಿ.

#ಅಭಿವೃದ್ಧಿ ಯ ವಿರುದ್ಧ ದನಿ ಎತ್ತದ ಇಂತಹ ಹೋರಾಟಗಳು ಕ್ಷಣಿಕ ಆರಾಮು ನೀಡುವ ಪೇನ್ ಕಿಲ್ಲರ್ ಗಳು ಅಷ್ಟೆ.

This is an #impractical movement ..

 

ಮಂಗಳೂರಿನ ಹೋರಾಟಗಾರ ಮುನೀರ್ ಕಾಟಿಪಳ್ಳ ಇದನ್ನು ಬೆಂಬಲಿಸುತ್ತಾರಾದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳುತ್ತಾರೆ.

ಉದ್ಯೋಗ ಸೃಷ್ಟಿಯ ಆಮಿಷವನ್ನು ಒಡ್ಡಿ ತುಳುನಾಡಿನ ಚಿನ್ನದಂತಹ ಭೂಮಿ, ನೇತ್ರಾವತಿಯ ಅಮೃತದಂತಹ ನೀರನ್ನು ಪಡೆದು ಸ್ಥಾಪನೆಯಾದ mrpl ಉದ್ಯೋಗ ಸೃಷ್ಟಿಸಿದ್ದು ಅಷ್ಟರಲ್ಲೇ ಇದೆ. ನಾಲ್ಕುಸಾವಿರ ಎಕರೆ ಭೂಮಿ, ಲಕ್ಷಾಂತರ ಕೋಟಿ ಹಣ ಹೂಡಿಯೂ ಸೃಷ್ಟಿಯಾಗಿರುವ ಉದ್ಯೋಗ ಎರಡು ಸಾವಿರಕ್ಕೂ ಕಡಿಮೆ. ಆ ಎರಡು ಸಾವಿರದಲ್ಲಿ ಕನ್ನಡಿಗರ ಸಂಖ್ಯೆ ಶೇಕಡಾ 25 ರಷ್ಟೂ ಇಲ್ಲ. ತುಳುವರನ್ನುಹುಡುಕಬೇಕಷ್ಟೆ. ಉದ್ಯೋಗ ಸಿಕ್ಕವರಲ್ಲಿ ಬಹುತೇಕರು ಭೂಮಿ ಕೊಟ್ಟ ಕಾರಣಕ್ಕೆ ಪ್ರತಿಯಾಗಿ ಪಡೆದುಕೊಂಡದ್ದೇ ಹೆಚ್ಚು. ಅಂತಹ mrpl ತಿಂಗಳ ಹಿಂದೆ 150 ಅಪ್ರೆಂಟಿಸ್ ಗಳನ್ನು ನೇಮಕಾತಿಮಾಡಿಕೊಂಡಿತು. ಆ 150 ರಲ್ಲಿ ತುಳುವರು ಬಿಡಿ, ಕನ್ನಡಿಗರು ಒಬ್ಬರೂ ಇಲ್ಲವಂತೆ. ಇದು ಅತ್ಯಂತ ಕಳವಳಕಾರಿ ಸಂಗತಿ.

ಈ ಅನ್ಯಾಯ, ತಾರತಮ್ಯ ಕೊನೆಯಾಗಲೇ ಬೇಕು. ನಮ್ಮ ನೆಲ, ಜಲವನ್ನು ಬಳಸಿ ಸ್ಥಾಪನೆಯಾಗುವ ಕೈಗಾರಿಕೆ, ಉದ್ದಿಮೆ, ವ್ಯವಹಾರಗಳು ಉದ್ಯೋಗವನ್ನು ಸೃಷ್ಟಿಸಬೇಕು, ಸ್ಥಳೀಯರಿಗೆ ಅದರಲ್ಲಿಆದ್ಯತೆಯಲ್ಲಿ ಉದ್ಯೋಗ ಸಿಗಲೇಬೇಕು. ಅದಿಲ್ಲದಿದ್ದರೆ ಎದ್ದು ಹೊರ ನಡೆಯಿರಿ ಅನ್ನಬೇಕು.

(ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಕೊಡಿ ಟ್ವಿಟ್ಟರ್, ಫೇಸ್ ಬುಕ್ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಆದರೆ ಇದು ಅಂದಾಭಿಮಾನವೋ, ಪರ ರಾಜ್ಯದವರ ಕುರಿತುಅಸಹನೆಯೋ ಆಗಬಾರದು. ಹೊರ ರಾಜ್ಯದವರೂ ಇರಲಿ. ಕನ್ನಡಿಗರಿಗೆ, ಸ್ಥಳೀಯರಿಗೆ ಆದ್ಯತೆಯಲ್ಲಿ ಅವಕಾಶ ಸಿಗಲಿ ಎಂಬುದು ನನ್ನ ನಿಲುವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಡೀದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಸರಕಾರದ ಆದ್ಯತೆ ಆಗಬೇಕು. ಗುತ್ತಿಗೆ, ಹೊರಗುತ್ತಿಗೆ ಪದ್ದತಿ ರದ್ದಾಗಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆಯ ಕಾನೂನುಗಳುಜಾರಿಯಾಗಬೇಕು. ಒಟ್ಟಾರೆ ಹೋರಾಟ ನಿರುದ್ಯೋಗ, ಅರೆ ಉದ್ಯೋಗದ ವಿರುದ್ದ, ಸ್ಥಳೀಯರಿಗೆ ಆದ್ಯತೆ ಎಂದಾಗಬೇಕು)

#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೆ_ಸಿಗಲಿ
#karnatakaJobsForKannadigas

 

ಪ್ರದೀಪ್ ತೊರೆನೂರು ಎನ್ನುವವರೂ ಸಹಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗ್ಳೂರಿನಲ್ಲಿ ಒಂದು ಸುತ್ತು ತಿರುಗಾಡುತ್ತಾ ನೋಡಿದರೆ ಹಲವಾರು ಉದ್ಯಮಗಳು ಹಾಗೂ ಕೆಲಸ ಮಾಡುವ ಜನ ಕನ್ನಡೇತರರು ಕಾಣಿಸುತ್ತಾರೆ … ಮತ್ತೊಂದೆಡೆ ಹಲವಾರು ಕನ್ನಡಿಗರು ಕೆಲಸ ಸಿಗದೆ ಒದ್ದಾಡುತ್ತಿದ್ದಾರೆ …

ಸ್ವತಂತ್ರ ನಂತರ ಕೇವಲ ಕೇಂದ್ರ ಸರ್ಕಾರ ಕಚೇರಿ ಹೆಚ್ ಎ ಎಲ್ , ಬೆಮ್‌ಲ್ , ಮುಂತಾದ ಕಡೆ ತಮ್ಮ ಬೇರು ಗಟ್ಟಿ ಮಾಡಿಕೊಂಡು ಅನ್ಯ ಭಾಷಿಕರು ಕರ್ನಾಟಕದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು , ಅದುಕ್ರಮೇಣ ಮಾಹಿತಿ ತಂತ್ರಜಾನ ಕಾರ್ಖಾನೆಗಳಲ್ಲಿ ಅನ್ಯ ರಾಜ್ಯದವರು ತಮ್ಮ ಹಿಡಿತ ಇಟ್ಟುಕೊಂಡು ಕನ್ನಡಿಗರು ಏನೇ ಓದಿ , ಒಳ್ಳೆಯ ಅನುಭವ ಇದ್ದರೂ ಅವರನ್ನು ಕಡೆಗಣಿಸಿದರು ..

ಈ ದೊಡ್ಡ ಮಟ್ಟದ ಕಾರ್ಖನಗಳಲ್ಲಿ ಇದ್ದ ಅನ್ಯ ಭಾಷಿಕರ ಜನ ಇವತ್ತು ನನಗೆ ಆಟೋ ಗಳಲ್ಲಿ , ಮಾಲ್ ಗಳಲ್ಲಿ , ಚಿಕ್ಕ ಚಿಕ್ಕ ಉದ್ಯಮಗಳಲ್ಲಿ ನಿಧಾನವಾಗಿ ತಮ್ಮ ಬೇರು ಗಟ್ಟಿ ಮಾಡಿಕೊಳ್ಳುತಿರುವುದುಕನ್ನಡಿಗರಿಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುವ ಅವಕಾಶಗಳು ಕಡಿಮೆಯಾಗಳಿದ್ದು, ಬೆಂಗಳೂರು ನಿಧಾನವಾಗಿ ಅನ್ಯ ರಾಜ್ಯದವರ ತೆಕ್ಕೆಗೆ ಬೀಳುವುದು ಶತ ಸಿದ್ದ !

ಮೊದಲನೆಯದಾಗಿ ಕರ್ನಾಟಕ ಸರ್ಕಾರ ರಾಜ್ಯದ ಒಟ್ಟೂ ನಿರುದ್ಯೋಗಿಗಳ ಅಂಕಿ ಅಂಶ ಬಗ್ಗೆ ಜನರಿಗೆ ತಿಳಿಸಬೇಕು ! ಪ್ರತಿಯೊಂದು ಉದ್ಯಮದಲ್ಲಿ ಸ್ಥಳೀಯರು ಇರುವ ಅಂಕಿ ಅಂಶ ಬಯಲಾಗಬೇಕು ! ಇಂದು ಕಸದ ಕಾಂಟ್ರ್ಯಾಕ್ಟ್ ಗಳಿಂದ ಯಾವ ಯಾವ ಕಾಂಟ್ರ್ಯಾಕ್ಟ್ ಗಳು ಕನ್ನಡಿಗರಿಗೆ ಸಿಕ್ಕಿದೆ , ಅನ್ಯ ಭಾಷಿಕರಿಗೆ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಕರ್ನಾಟಕ ಸರ್ಕಾರ ಬಹಿರಂಗ ಪಡಿಸಲಿ

ಇಲ್ಲಿ ಅನ್ಯಭಾಷಿಕರ ಸಂಖ್ಯೆ ಆಯಾ ರಾಜ್ಯದ ಆಧಾರದ ಮೇಲೆ ವಿಂಗಡಣೆಯಾಗಿ ಆಯಾ ರಾಜ್ಯದ ಉದ್ಯೋಗ ಸೃಷ್ಟಿಸುವಲ್ಲಿ ಆಯಾ ರಾಜ್ಯದ ವೈಪಲ್ಯ ಎತ್ತಿ ತೋರಿಸಬೇಕು !

#Nation_First ಎಂದರೆ ನಮ್ಮ ಕೆಲಸ ಉದ್ಯಮ ಹಾಗೂ ಸ್ವಾಭಿಮವನ್ನು ಅನ್ಯ ರಾಜ್ಯದವರಿಗೆ ಕೊಟ್ಟು ನಾವು ಬಿಕಾರಿ ಯಾಗುವುದಲ್ಲ , ನಾವು ನಮ್ಮ ಹಕ್ಕನ್ನು ಪಡೆದು , ಸ್ಥಳೀಯರಾಗಿ ಕೆಲಸ ಪಡೆದು ,ಒಳ್ಳೆಯ ವ್ಯಾಪಾರ ವಹಿವಾಟು ಮಾಡಿ ಭಾರತ ದೇಶದ ಅಭಿವೃದ್ದಿಗಾಗಿ ಶ್ರಮಿಸುವುದು !

ಸ್ಥಳೀಯರಿಗೆ ಕೆಲ್ಸ ಸಿಕ್ಕ ಮೆಳ್ಳೆ ಉಳಿದ ಕೆಲಸಗಳು ಅನ್ಯ ರಾಜ್ಯದವರು ಪಡೆಯಬಹುದು !

ಇದು ಆಗದೆ ಇದ್ದಲ್ಲಿ ಕನ್ನಡಿಗರು ತಮ್ಮದೇ ನಾಡಿನಲ್ಲಿ ಕೆಲಸ ಇಲ್ಲದೆ ಪರದಾಡುವ ದಿನ ಬರುವುದು ಶತಸಿದ್ದ !

#KarnatakaJobsForKannadigas
#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೇ_ಸಿಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...