Homeಕರ್ನಾಟಕಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಬೇಕು – ‘ಉದ್ಯೋಗಕ್ಕಾಗಿ ಯುವಜನರು’ ಏನು ಹೇಳುತ್ತಾರೆ?

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಬೇಕು – ‘ಉದ್ಯೋಗಕ್ಕಾಗಿ ಯುವಜನರು’ ಏನು ಹೇಳುತ್ತಾರೆ?

- Advertisement -
- Advertisement -

ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗಾಗಿ ಎಂದು ಟ್ವಿಟ್ಟರ್ ಟ್ರೆಂಡಿಂಗ್ಗೆ ಕರೆ ಎನ್ನುವ ಈ ಸಂದೇಶಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tweetನ ಲಿಂಕ್:

ಹಲವು ಕನ್ನಡ ಹೋರಾಟಗಾರರು ಈ ಒಂದು ಪ್ರಚಾರಾಂದೋಲನಕ್ಕೆ ಕರೆ ಕೊಟ್ಟಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಕಾರ್ಯಕರ್ತರನ್ನು ನಾನುಗೌರಿ.ಕಾಂ ಮಾತಾಡಿಸಿತು. ಅವರೇನು ಹೇಳುತ್ತಾರೆ ಬನ್ನಿ ನೋಡೋಣ.

‘ನಮ್ಮ ದೇಶ ಮಾತ್ರವಲ್ಲದೇ ಇಡೀ ಪ್ರಪಂಚಾದ್ಯಂತ ಇಂದು ನಿರುದ್ಯೋಗ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಇಂತಹಸಂದರ್ಭದಲ್ಲಿ ದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆಯೇ ಇದೆ. ಆದರೆಕರ್ನಾಟಕದಲ್ಲಿರುವ ಬಹುಪಾಲು ಉದ್ಯೋಗಗಳು ಅಭದ್ರವಾದವುಗಳಾಗಿವೆ. ಯಾವುದೇ ಸೌಲಭ್ಯಗಳಿಲ್ಲದೆ, ಕಡಿಮೆಸಂಬಳಕ್ಕೆ ದುಡಿಸಿಕೊಳ್ಳುವುದಲ್ಲದೇ ಇದರ ವಿರುದ್ಧ ದನಿಯೆತ್ತಿದ್ದರೆ ಅವರು ಕೆಲಸ ಕಳೆದುಕೊಳ್ಳಬೇಕಾದ ಅತಂತ್ರಸ್ಥಿತಿಯಲ್ಲಿದ್ದಾರೆ.’ ಎಂದು ಮಾತು ಶುರು ಮಾಡಿದ ಉದ್ಯೋಗಕ್ಕಾಗಿ ಯುವಜನರು ಸಂಚಾಲಕರಾದ ಸರೋವರ್ ಬೆಂಕಿಕೆರೆ ಅದನ್ನು ವಿಸ್ತರಿಸಿದರು.

‘ಇಂತಹ ಸಂದರ್ಭದಲ್ಲಿಯೇ ಕರ್ನಾಟಕಕ್ಕೇ ಅದರಲ್ಲೂ ಬೆಂಗಳೂರಿಗೆ ಹೊರಗಿನಿಂದ ಉದ್ಯೋಗ ಅರಸಿ ಬರುತ್ತಿರುವವಸಂಖ್ಯೆ ಬಹಳ ಹೆಚ್ಚಾಗಿದೆ. ಮುಖ್ಯವಾಗಿ ಉತ್ತರಪ್ರದೇಶ, ಬಿಹಾರ, ಗುಜರಾತ್ ಸೇರಿದಂತೆ ಉತ್ತರ ಭಾರತದ ಜನರುಅತ್ಯಧಿಕ ಸಂಖ್ಯೆಯಲ್ಲಿ ಬೆಂಗಳೂರಿನತ್ತ ವಲಸೆ ಬರುತ್ತಿದ್ದಾರೆ. ಉದ್ಯೋಗ ಹುಡುಕುವವರ ಸಂಖ್ಯೆ ಹೆಚ್ಚಾದಷ್ಟು ಉದ್ಯೋಗಭದ್ರತೆ ಕಡಿಮೆಯಾಗುತ್ತಿದೆ.’

‘ಕಡಿಮೆ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವುದರಿಂದ ಕಂಪನಿಗಳು ಹೆಚ್ಚು ಲಾಭ ಮಾಡಲುಸಾಧ್ಯವಾಗುವುದಲ್ಲದೇ ಅವರು ಸಂಘ ಕಟ್ಟಿಕೊಂಡು ಹಕ್ಕು ಕೇಳುವಂತಿಲ್ಲ. ಒಂದು ವೇಳೆ ಯಾರಾದರೂ ನೌಕರರುಪ್ರತಿಭಟಿಸಲು ಮುಂದಾದರೆ ಅವರನ್ನು ಸುಲಭವಾಗಿ ಕೆಲಸದಿಂದ ವಜಾ ಮಾಡಬಹುದು. ಏಕೆಂದರೆ ಇನ್ನೂ ಕಡಿಮೆಸಂಬಳ ಕೊಟ್ಟರೂ ಸಹ ಕೆಲಸಕ್ಕೆ ಸೇರಲು ಹೊರಗಡೆ ದೊಡ್ಡ ದಂಡೇ ಕಾಯುತ್ತಿದೆಯಲ್ಲ?’

ಆದರೆ ‘ಉತ್ತರ ಭಾರತದ ಈ ಜನರು ವಲಸೆಯಿಂದ ಅವರಿಗೂ ನಮಗೂ ಇಬ್ಬರಿಗೂ ಅಪಾಯಗಳಿವೆ’ ಎನ್ನುತ್ತಾರೆ ಉದ್ಯೋಗಕ್ಕಾಗಿ ಯುವಜನರು ಕಾರ್ಯಕರ್ತ ಅನಿಲ್ ಕುಮಾರ್ ಚಿಕ್ಕದಾಳವಾಟ್ಟ. ‘ಬಹಳಷ್ಟು ಕಂಪನಿಗಳು ಬೇರೆರಾಜ್ಯದ ಜನರಿಗೆ ಮೊದಲ ಆದ್ಯತೆ ನೀಡುತ್ತಾರೆ. ಏಕೆಂದರೆ ಅವರು ಪರಕೀಯರಾದ್ದರಿಂದ ಒಗ್ಗಟ್ಟು ಇರುವುದಿಲ್ಲ, ಸಂಘಕಟ್ಟುವುದಿಲ್ಲ ಎಂಬುದಾಗಿದೆ. ಇದರಿಂದ ಅವರ ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೇ ಕಡಿಮೆ ಸಂಬಳಕ್ಕೆಜೀತ ಮಾಡಿಸಬಹದು. ಇಲ್ಲಿನ ಸ್ಥಳೀಯರಾದರೆ ಮೋಸ ಮಾಡಲು ಸಾಧ್ಯವಿಲ್ಲ, ಸುಲಭಕ್ಕೆ ಕೆಲಸದಿಂದ ತೆಗೆಯಲುಸಾಧ್ಯವಿಲ್ಲವೆಂಬ ಮನೋಭಾವ ಬಹಳಷ್ಟು ಕಂಪನಿಗಳದು’.

‘ಒಟ್ಟಾರೆಯಾಗಿ ಲಾಭ, ಅತಿಹೆಚ್ಚಿನ ಲಾಭಕ್ಕಾಗಿ ಈ ಬಂಡವಾಳಶಾಹಿ ಕಂಪನಿಗಳು ಸರ್ಕಾರಗಳ ಬೆಂಬಲದೊಂದಿಗೆಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ನಿರುದ್ಯೋಗ, ಅರೆ ನಿರುದ್ಯೋಗ ಹೆಚ್ಚಳಗೊಳ್ಳಲು ಕಾರಣರಾಗುತ್ತಿದ್ದಾರೆ. ಇನ್ನುಸರ್ಕಾರಗಳು ಸಹ ಚುನಾವಣಾ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯ ಭರವಸೆಗಳನ್ನು ನೀಡುವುದು ಬಿಟ್ಟರೆನಿಜವಾಗಿಯೂ ಸುಭದ್ರ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸುತ್ತಿಲ್ಲ. ಇದರಿಂದ ನರಳುವವರು ಬಡವರು,ಹಿಂದುಳಿದವರು, ಮಹಿಳೆಯರು ಮತ್ತು ತಳಸಮುದಾಯದವರೇ ಆಗಿದ್ದಾರೆ’.

‘ಈ ಹಿನ್ನೆಲೆಯಲ್ಲಿ ತಮಿಳು ನಾಡಿನಲ್ಲಿ, ಅಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ತಮಿಳರಿಗೆ ಮೀಸಲಾಗಬೇಕೆಂದು ಆಗ್ರಹಿಸಿಹೋರಾಟ ಆರಂಭಿಸಿದ್ದಾರೆ. ಹಿಂದಿ ವಿರುದ್ಧದ ಹೋರಾಟ, ಏಕ ಸಂಸ್ಕøತಿಯ ವಿರುದ್ಧದ ಹೋರಾಟದಲ್ಲಿ ಮೊದಲಿಗರಾಗಿರುವ ದ್ರಾವಿಡರಿಂದ ಸ್ಫೂರ್ತಿ ಪಡೆದು ಕನ್ನಡ ನಾಡಿನಲ್ಲೂ ಇದನ್ನು ಪಸರಿಸಲು ಕನ್ನಡ ಅಭಿಮಾನಿಗಳುಮುಂದಾಗಿದ್ದಾರೆ. ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂಬುದು ಅವರ ಆಶಯ. ಇದಕ್ಕೆ ನಮ್ಮ ಬೆಂಬಲವೂ ಇದೆ, ಆದರೆ ಇದು ಸ್ಥಳೀಯರು ವರ್ಸಸ್ ಹೊರಗಿನವರು ಎಂಬ ಸಂಘರ್ಷಕ್ಕೆ ಕಾರಣವಾಗುವ ಬದಲು, ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಮಧ್ಯಪ್ರವೇಶಿಸಿದರು ಸರೋವರ್.

‘ಒಟ್ಟಾರೆ ಉದ್ಯೋಗಗಳ ಸಂಖ್ಯೆ ಹೆಚ್ಚಾದಲ್ಲಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಉದ್ಯೋಗಗಳುಸೃಷ್ಟಿಯಾಗುವುದರ ಬದಲಿಗೆ ಕಡಿತವಾಗುತ್ತಿರುವುದರಿಂದ ಈ ಸಮಸ್ಯೆ ದಿನೇ ದಿನೇ ಉಲ್ಭಣಗೊಳ್ಳುತ್ತಿದೆ. ಕೆಲವೊಮ್ಮೆಈ ಸಮಸ್ಯೆಗೆ ಸರ್ಕಾರವನ್ನು, ಅವರ ಆರ್ಥಿಕ ನೀತಿಗಳನ್ನು ಟೀಕಿಸುವುದರ ಬದಲು ಬೇರೆ ರಾಜ್ಯದ ವಲಸಿಗರನ್ನುದೂಷಿಸುವುದು ನಡೆದಿದೆ. ಇದು ಸರಿಯಾದುದ್ದಲ್ಲ. ಅವರು ಸಹ ಸರ್ಕಾರದ ನಿರ್ಲಕ್ಷ್ಯತನದ ಕಾರಣದಿಂದಾದ ಬಡವರೆಹೊರತು ಮತ್ಯಾರು ಅಲ್ಲ. ಒಟ್ಟಾರೆ ನಮ್ಮ ಪಾಲಿಸಿಗಳು ಬದಲಾಗದ ಹೊರತು ಪರಿಸ್ಥಿತಿ ಬದಲಾಗುವುದಿಲ್ಲ ಅನ್ನುವುದಕಟುವಾಸ್ತವವಾಗಿದೆ.

ಆದರೆ ಇದೇ ಸಂದರ್ಭದಲ್ಲಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ಈ ನಾಲ್ಕು ರಾಜ್ಯಗಳೇಉಳಿದೆಲ್ಲಾ ರಾಜ್ಯಗಳು ಕಟ್ಟುವಷ್ಟು ತೆರಿಗೆಯನ್ನು ಕಟ್ಟುತ್ತೇವೆ. ಆದರೆ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರುವ ಅನುದಾನದವಿಷಯದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಒಂದು ಒಕ್ಕೂಟ ವ್ಯವಸ್ಥೆಯಾಗಿ ಸರಿಯಾಗಿ ನಡೆಸಿಕೊಳ್ಳಬೇಕಾದಕೇಂದ್ರ ಸರ್ಕಾರವು ಉತ್ತರದ ರಾಜ್ಯಗಳ ಕಣ್ಣಿಗೆ ಬೆಣ್ಣೆ, ದಕ್ಷಿಣದ ರಾಜ್ಯಗಳ ಕಣ್ಣಿಗೆ ಸುಣ್ಣ ಎಂಬ ರೀತಿ ವರ್ತಿಸುತ್ತಿದೆ.ರೈತರ ಸಾಲಮನ್ನಾ, ಅಂತರಾಜ್ಯ ನದಿಗಳ ವಿವಾದ, ಹಿಂದಿ ಹೇರಿಕೆಯ ವಿಷಯದಲ್ಲಿ ಇದು ಸ್ಪಷ್ಟವಾಗಿದೆ.’

ಇಂತಹ ಸಂದರ್ಭದಲ್ಲಿ ತಮಿಳುನಾಡು ಇದೆಲ್ಲದರ ವಿರುದ್ಧ ದನಿಯೆತ್ತುತ್ತಿದೆ. ಕರ್ನಾಟಕವೂ ಕೈಜೋಡಿಸುತ್ತಿದೆ. ಇದರಜೊತೆಗೇನೆ ಸ್ಥಳೀಯರು ಎಂದರೇನು, ಕರ್ನಾಟಕದವರು ಬೇರೆ ರಾಜ್ಯಕ್ಕೆ ವಲಸೆ ಹೋಗುವುದಿಲ್ಲವೇ? ಎಂಬ ಪ್ರಶ್ನೆಯೂಎದುರಾಗಿದೆ. ಇದರಿಂದ ಉದ್ಯೋಗದ ಕುರಿತು, ಸ್ಥಳೀಯತೆಯ ಕುರಿತು ಚರ್ಚೆಗೆ ಒಳ್ಳೆಯ ಸಂದರ್ಭ ಬಂದಿದೆ. ಹಾಗಾಗಿಎಲ್ಲಾ ದೃಷ್ಟಿಕೋನಗಳಿಂದಲೂ ಆರೋಗ್ಯ ಚರ್ಚೆ ನಡೆಸಲು ನಾನುಗೌರಿ.ಕಾಂ ವೇದಿಕೆ ಒದಗಿಸುತ್ತದೆ. ಓದುಗರು ಸಹಬರೆಯಬೇಕೆಂದು ಕೋರುತ್ತೇವೆ.

ನಿಮ್ಮ ಬರಹಗಳನ್ನು 7353770202ಗೆ ವಾಟ್ಸಾಪ್ ಮೂಲಕ ಅಥವಾ [email protected] ಗೆ ಇ-ಮೇಲ್ ಮೂಲಕ ಕಳಿಸಬಹುದು.

ಇದನ್ನು ಓದಿ

ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಮೀಸಲಿರಲಿ ಪ್ರಚಾರಾಂದೋಲನದ ಕುರಿತು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...