Homeಮುಖಪುಟನುಡಿ ನಮನ | ಮಾನವೀಯ ಕತೆಗಳನ್ನು ಕಟ್ಟಿಕೊಟ್ಟ ನಿರ್ದೇಶಕ 'ಕಿಮ್‌ ಕಿ ಡುಕ್‌'

ನುಡಿ ನಮನ | ಮಾನವೀಯ ಕತೆಗಳನ್ನು ಕಟ್ಟಿಕೊಟ್ಟ ನಿರ್ದೇಶಕ ‘ಕಿಮ್‌ ಕಿ ಡುಕ್‌’

ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿ ನನ್ನನ್ನು ಸದಾ ಕಾಡಿದೆ. ನನ್ನ ಸಿನಿಮಾಗಳಲ್ಲಿ ಶಬ್ದವಿರುತ್ತದೆ. ಅದೇ ಕಾರಣಕ್ಕೊ ಏನೊ, ಡುಕ್‌ ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿಯೇ ಒಂದು ದೊಡ್ಡ ಸಾಧನೆ.

- Advertisement -
- Advertisement -

ನಿನ್ನೆ ನಿಧನರಾದ ದಕ್ಷಿಣ ಕೋರಿಯಾದ ಪ್ರಸಿದ್ಧ ನಿರ್ದೇಶಕ ’ಕಿಮ್‌ ಕಿ ಡುಕ್’‌ ಅವರಿಂದ ಪ್ರಭಾವಿತರಾಗದ ನಿರ್ದೇಶಕರಿಲ್ಲ. ಕನ್ನಡದ ಹೊಸ ತಲೆಮಾರಿನ ನಿರ್ದೇಶಕ ಬಿ ಎಂ ಗಿರಿರಾಜ್‌, ಕಿಮ್‌ ಕಿ ಡುಕ್‌ ಅವರ ಸಿನಿಮಾ ಕಟ್ಟುವ ಬಗೆಯನ್ನು ಮತ್ತು ಅವರ ಮೇಲೆ ಆದ ಪ್ರಭಾವವನ್ನು ನೆನಪಿಸಿಕೊಂಡಿದ್ದಾರೆ.

ನಾನು ಕಿಮ್‌ ಕಿ ಡುಕ್‌ ಸಿನಿಮಾ ಮೊದಲು ನೋಡಿದ್ದು ಅಸೋಸಿಯೇಟ್‌ ಆಗಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ. ಸ್ನೇಹಿತರೊಬ್ಬರು ‘ಬ್ರೆತ್‌’ ಎಂಬ ಸಿನಿಮಾ ಬಗ್ಗೆ ಹೇಳಿದ್ದರು. ಅದನ್ನು ಹುಡುಕಿಕೊಂಡು ಬಂದು ನೋಡಿದೆ. ಅದೊಂದು ಫ್ಯಾಸಿನೇಟಿಂಗ್‌ ಸಿನಿಮಾ ಆಗಿತ್ತು. ಚಿತ್ರಕತೆ ತುಂಬಾ ವಿಚಿತ್ರವಾಗಿತ್ತು. ಮರಣದಂಡನೆಗೆ ಶಿಕ್ಷೆಯಾದ ವ್ಯಕ್ತಿಯ ಸುತ್ತ ಹೆಣೆದ ಕತೆ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ವಿಭಿನ್ನ ವಿರೋಧ: ಪವನ್ ಕುಮಾರ್ ನಿರ್ದೇಶನದ ’ಏನ್ ಮಾಡೋದು..?’ ಕಿರುಚಿತ್ರ ವೈರಲ್!

ಕಿಮ್‌ ಕಿ ಡುಕ್‌ ಅವರ ಸಿನಿಮಾ, ಚಿತ್ರಕತೆ, ಪಾತ್ರಗಳು ಒಂದು ಭಾವ ಸತ್ಯದ ಹುಡುಕಾಟದಲ್ಲಿರುತ್ತವೆ. ನಾವು ಎಲ್ಲವನ್ನು ನೈತಿಕತೆಯ ಚೌಕಟ್ಟಿನಲ್ಲಿ ನೊಡುತ್ತೇವೆ. ಸಮಾಜದಲ್ಲಿ ಇದು ಹೀಗಾಗಬಾರದು, ಇದು ಸರಿಯಲ್ಲ, ತಪ್ಪು ಎಂದೆಲ್ಲಾ ಹೇಳುತ್ತೇವೆ. ಆದರೆ ಕಿಮ್‌ ಕಿ ಡುಕ್‌ ಇದೆಲ್ಲವನ್ನು ಮೀರಿದ ಮಾನವೀಯ ಬೌದ್ಧ ದೃಷ್ಟಿಕೋನದಲ್ಲಿ ಜೀವನ ನೋಡುವುದನ್ನು ಕಾಣುತ್ತೇವೆ.

ಡುಕ್‌ ನಿರ್ದೇಶಿಸಿದ ಮತ್ತೊಂದು ಚಿತ್ರ 3-ಐರನ್‌, ನಾನು ನೋಡಿದ ವಿಶಿಷ್ಟವಾದ ಪ್ರೇಮಕತೆ. ಒಬ್ಬ ವ್ಯಕ್ತಿ ತಾನೊಬ್ಬನೇ ಇರುವಾಗ ಹೇಗೊ ಬದುಕಿಕೊಳ್ತಾನೆ. ಆದರೆ ಹತ್ತು ಜನರ ನಡುವೆ ಬದುಕುವುದು ಸವಾಲು. ಅಲ್ಲಿ ತನ್ನತನ, ವ್ಯಕ್ತಿ ವಿಶೇಷ ಎಂಬುದೇನಿರುತ್ತದೆ, ಅದು ಕಳೆದು ಹೋಗಿ ಬಿಡುವ ಸಾಧ್ಯತೆ ಇರುತ್ತದೆ. ಕಿಮ್‌ ಕಿ ಡುಕ್‌ ಅವರ ಎಲ್ಲ ಸಿನಿಮಾಗಳಲ್ಲಿ ಈ ಎಳೆ ಕಂಡು ಬರುತ್ತದೆ. ಒಂಟಿಯಾಗಿರುವವ, ಸಮಾಜದ ಭಾವವಾಗಿ ಎದುರಿಸುವ ಸಂಕಟಗಳನ್ನು ಧ್ವನಿಸುತ್ತಲೇ ಬಂದಿದ್ದಾರೆ. ಇದು ಸ್ವತಃ ಕಿಮ್‌ ಕಿ ಡುಕ್‌ ಅವರ ಆತಂರಿಕ ಸಂಘರ್ಷವೆನಿಸುತ್ತದೆ.

ವೃತ್ತಿ ಜೀವನದ ಒಂದು ಘಟ್ಟದಲ್ಲಿ ಅವರದ್ದೇ ಒಂದು ಸಾಕ್ಷ್ಯಚಿತ್ರ ಬಂದು. ಅದರಲ್ಲಿ ಸಿನಿಮಾ ಜೀವನದಲ್ಲಿ ತಮ್ಮ ಸಾಧನೆ ಶೂನ್ಯ ಎಂದು ಹೇಳಿಕೊಳ್ಳುತ್ತಾರೆ. ಮಾನಸಿಕ ಒತ್ತಡದಲ್ಲಿದ್ದ ಸಂಧರ್ಭವನ್ನು ಬಿಚ್ಚಿಡುವ ಈ ಸಾಕ್ಷ್ಯಚಿತ್ರದಲ್ಲಿ ದೂರದ ಬೆಟ್ಟದಲ್ಲಿ ಗುಡಿಸಲೊಂದರಲ್ಲಿ ಬದುಕಿದ್ದನ್ನು ಅದರಲ್ಲಿ ವಿವರಿಸಿದ್ದರು. ತಾನೇನೇ ಮಾಡುತ್ತಿದ್ದರೂ, ಅದು ತನ್ನ ಆಡಂಬರವಷ್ಟೇ. ನನ್ನ ಲೆಗಸಿಯಾಗಿ, ಸಿನಿಮಾಕ್ಕಿಂತ ಹತ್ತು ಶಿಷ್ಯರನ್ನು ಬೆಳೆಸಿ ಹೋಗಬೇಕಿತ್ತು. ಅವರೆಲ್ಲರೂ ತಮ್ಮನ್ನು ಮಾರಿಕೊಂಡರು ಎಂಬ ಬೇಸರವನ್ನು ವ್ಯಕ್ತಪಡಿಸಿದ್ದರು.

ಭ್ರಷ್ಟತೆಯ ಬಗ್ಗೆ ಮಧ್ಯಮ ವರ್ಗದ ನಂಬಿಕೆಯನ್ನು ಜನಪ್ರಿಯ ಧಾಟಿಯಲ್ಲಿ ಹೇಳುವ ಆಕ್ಟ್ – 1978

ಈ ಸಾಕ್ಷ್ಯಚಿತ್ರ, ಸ್ವತಃ ಕಿಮ್‌ ಕಿ ಡುಕ್‌ ಕ್ಯಾಮೆರಾ ಎದುರು ಮಾತನಾಡುತ್ತಾ ಹೋಗಿದ್ದಷ್ಟೆ. ಅದನ್ನು ನೋಡಿದ ನನ್ನಂತಹ ಅನೇಕರಿಗೆ, ಆಯ್ತು ಇನ್ನು ಮೇಲೆ ಇವರು ಸಿನಿಮಾ ಮಾಡೋದಿಲ್ಲ ಅನ್ನಿಸಿತ್ತು. ಆದರೆ ಕಿಮ್‌ ಕಿ ಡುಕ್‌ ಮತ್ತೊಂದು ಹೊಸ ಸಿನಿಮಾದೊಂದಿಗೆ ಪ್ರತ್ಯಕ್ಷವಾಗಿದ್ದರು. ಸಿನಿಮಾ ಮಾಡುತ್ತಾ ಖಿನ್ನತೆ ಒಳಗಾಗಿದ್ದ ಡುಕ್‌, ಸಿನಿಮಾ ಮೂಲಕವೇ ಅದರಿಂದ ಹೊರಬರುವ ದಾರಿ ಕಂಡುಕೊಂಡರು. ಸಿನಿಮಾನೇ ಅವರಿಗೆ ಕಾಯಿಲೆ ಆಗಿತ್ತು, ಸಿನಿಮಾನೇ ಅವರಿಗೆ ಮದ್ದಾಯ್ತು. ಕ್ಯಾಪ್ರೊ ಹೇಳ್ತಾರಲ್ಲ, ‘ ಸಿನಿಮಾಕ್ಕೆ ಮದ್ದೆಂದರೆ, ಇನ್ನಷ್ಟು ಸಿನಿಮಾ ಮಾಡೋದು” ಹಾಗೆ.

Getty Images

ಇದನ್ನೂ ಓದಿ: ಬಾಲಿವುಡ್ ನಟಿ ರಿಚಾ ಚಾಡ್ಡಾಗೆ ಭಾರತರತ್ನ ಡಾ.ಅಂಬೇಡ್ಕರ್ ಪ್ರಶಸ್ತಿ

ಬುದ್ಧ ಸಮಾಜದ ಒಳಗೇ ಇದ್ದು, ಸಮಾಜದಲ್ಲಿ ಪರಿವರ್ತನೆಗೆ ಪ್ರಯತ್ನಿಸಿದ್ದು, ಕಿಮ್‌ ಕಿ ಡುಕ್‌ಗೂ ಮನವರಿಕೆ ಆಯ್ತು ಅನ್ನಿಸುತ್ತೆ. ಬುದ್ಧನ ಹಲವು ಚಿಂತನೆಗಳು ಅವರ ಸಿನಿಮಾಗಳಲ್ಲಿ ಕಾಣಿಸುತ್ತವೆ. ಸ್ಪ್ರಿಂಗ್‌, ಸಮ್ಮರ್‌, ಫಾಲ್‌, ವಿಂಟರ್‌ ಆಳ ಪದರಗಳ ಸಿನಿಮಾ ಅದು. ದೃಶ್ಯ ಸೌಂದರ್ಯದಲ್ಲೂ, ಭಾವ ಸೌಂದರ್ಯದಲ್ಲೂ ಹಲವು ವಿಚಾರಗಳನ್ನು ಹೇಳುತ್ತಾರೆ. ಮನುಷ್ಯನ ಕೆಲಸದಿಂದ ಏನೊ ಒಂದು ಕ್ರಿಯೆ ಘಟಿಸುತ್ತಲೇ ಇರುತ್ತದೆ. ಆದರೆ ಏನೂ ಆಗಲ್ಲ ಎಂದು ಭಾವಿಸಿಯೇ ಕೆಲಸ ಮಾಡುತ್ತಿರಬೇಕಾಗುತ್ತದೆ. ಈ ಬೌದ್ಧ ತತ್ವವನ್ನು ಡುಕ್‌ಗಿಂತ ಸೊಗಸಾಗಿ ಇನ್ನಾರು ಸೆರೆಹಿಡಿದಿಲ್ಲ.

ಅಚ್ಚರಿಯ ಸಂಗತಿಯೆಂದರೆ, ಇದು ಧಾರ್ಮಿಕವಲ್ಲದ ಚಿಂತನೆಯೂ ಹೌದು. ಬೌದ್ಧ ಅನುಯಾಯಿ ಆಗುವುದು ಸುಲಭ, ಬುದ್ಧನಾಗುವುದು ಕಷ್ಟ. ಈ ಚಿಂತನೆಗಳು ಡುಕ್‌ ಸಿನಿಮಾದಲ್ಲಿ ತುಂಬಾ ಸೊಗಸಾಗಿ, ಮಾನವೀಯವಾಗಿ ಪ್ರತಿಫಲಿಸುತ್ತವೆ. ಯಾವುದೇ ಸೃಜನಶೀಲ ಸೃಷ್ಟಿಯಲ್ಲಿ, ಸೃಷ್ಟಿ ಮಾಡುವವನು ತನ್ನ ನೈತಿಕತೆಯನ್ನು ಹೇರಿಬಿಡುತ್ತಾನೆ. ಆ ನೈತಿಕತೆ, ಆತನ ಅಹಂ. ಅದಕ್ಕೆ ಶ್ರೇಷ್ಠತೆಯ ಲೇಪ ಹಚ್ಚುತ್ತಿರುತ್ತೇವೆ. ಅದನ್ನು ಮೀರುವುದೇ ಸವಾಲು. ಡುಕ್‌ಗೆ ಮನುಷ್ಯನ ಮೇಲೆ ಅಪಾರವಾದ ಪ್ರೀತಿ ಇತ್ತು. ಆದರೆ ನಂಬಿಕೆ ಇರಲಿಲ್ಲ. ಈ ವೈರುಧ್ಯಗಳ ನಡುವೆ ಹೊಯ್ದಾಟ, ಖಿನ್ನತೆ ಅವರ ಸಿನಿಮಾಗಳಲ್ಲಿ ಕಾಣಿಸುತ್ತದೆ. ಆದರೆ ಅದರಲ್ಲೂ ಯಾವುದೊ ಸೌಂದರ್ಯ, ಸತ್ಯ ಹುಡುಕುವುದಕ್ಕೆ ಪ್ರಯತ್ನಿಸುತ್ತಾ ಇದ್ದರು.

ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿ ನನ್ನನ್ನು ಸದಾ ಕಾಡಿದೆ. ನನ್ನ ಸಿನಿಮಾಗಳಲ್ಲಿ ಶಬ್ದವಿರುತ್ತದೆ. ಅದೇ ಕಾರಣಕ್ಕೊ ಏನೊ, ಡುಕ್‌ ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿಯೇ ಒಂದು ದೊಡ್ಡ ಸಾಧನೆ. ಅಂತಹ ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ. ನಿಜಕ್ಕೂ ಕಿಮ್‌ ಕಿ ಡುಕ್‌ ಅವರನ್ನು ಮಿಸ್‌ ಮಾಡಿಕೊಳ್ಳುತ್ತೇನೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...