Homeರಾಜಕೀಯನಮ್ಮ ಸಿಎಮ್ಮು ಸಮಯದ ಬೊಂಬೆಯಂತಲ್ಲಾ....!

ನಮ್ಮ ಸಿಎಮ್ಮು ಸಮಯದ ಬೊಂಬೆಯಂತಲ್ಲಾ….!

- Advertisement -
- Advertisement -

ಆಡಿದ ಮಾತೆಲ್ಲವೂ ತಪ್ಪಾಗುವಂತೆ ಕಂಡಾಗ ಮೌನವಾಗಿರುವುದು ಲೇಸು. ಇಂತಹ ಸೂಕ್ಷ್ಮಗಳನ್ನು ಅರಿಯದ ಕುಮಾರಣ್ಣ ಮಾತನಾಡುತ್ತಲೆ ಆಡಿದ ಮಾತಿನ ಕೋಟೆಯೊಳಗೆ ಬಂದಿಯಾಗುತ್ತಿದ್ದಾರಂತಲ್ಲಾ, ಜವಾಬ್ದಾರಿ ಹೊತ್ತವರಿಂದ ಒಳ್ಳೆ ಮಾತುಗಳು ಬರಬೇಕಾದರೆ ಓದಿನ ಹಿನ್ನೆಲೆ ಇರಬೇಕಾಗುತ್ತದೆ. ಇಲ್ಲ ಅನುಭವದ ದ್ರವ್ಯ ಇರಬೇಕಾಗುತ್ತದೆ, ಇವೆರಡೂ ಇರದವರು ಕುಮಾರಣ್ಣನಂತಿರುತ್ತಾರೆ ಉದಾಹರಣೆಗೆ ಪ್ರತ್ಯೇಕತೆಯ ಕೂಗಿನಿಂದ ವಿಚಲಿತಗೊಂಡ ಕುಮಾರಣ್ಣ “ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಿ” ಎಂದುಬಿಟ್ಟಿದ್ದಾರೆ, ಇದರಿಂದ ಅನಾವರಣಗೊಂಡಿದ್ದೇನೆಂದರೆ ಅಂತೂ ಪ್ರತ್ಯೇಕತೆ ನಿಮ್ಮ ಮನಸ್ಸಿನಲ್ಲಿದೆ. ಹಣಕಾಸಿನ ಖಜಾನೆ ಬೆಂಗಳೂರಾಗಿರುವುದರಿಂದ ಅದು ನಿಮ್ಮಲಿಲ್ಲ ಇತ್ಯಾದಿ ಎಂಬಂತೆ ಅವರ ಮಾತು ಹಲವು ಚರ್ಚೆ ಹುಟ್ಟುಹಾಕುತ್ತಿವೆ. ಅಂತೂ ಸರಿಯಾಗಿ ಕನ್ನಡ ಮಾತನಾಡಲು ಬಾರದ ರಾಮುಲು ಎಂಬ ವ್ಯಕ್ತಿಗೆ ಉತ್ತರಕೊಡಲು ಹೋಗಿ ಸಿಕ್ಕಿಕೊಂಡಿರುವ ಕುಮಾರಣ್ಣನನ್ನು ಉಳಿಸಲು ಹೋದ ಧÀೃತರಾಷ್ಟ್ರರು ಎಂದಿನಂತೆ ಜಾತಿ ಲೆಕ್ಕಾಚಾರ ತೆಗೆದು ಲಿಂಗಾಯಿತ ಮುಖ್ಯಮಂತ್ರಿಗಳ ಅವಧಿಯ ಕೆಲಸಗಳನ್ನು ಎಣಿಸಿ ಎಂದಿದ್ದಾರಂತೆ. ಆ ಕೆಲಸವೇನಾದರೂ ನಡೆದರೆ ದೇವೇಗೌಡರೆ ಸಿಕ್ಕಿಬೀಳುತ್ತಾರಂತಲ್ಲಾ ಏಕೆಂದರೆ ಇಡೀ ಕರ್ನಾಟಕವನ್ನು ಸಮಭಾವದಲ್ಲಿ ಕಂಡ ವಿರೇಂದ್ರಪಾಟೀಲರು ತಮ್ಮ ಸ್ವಂತ ಕ್ಷೇತ್ರಕ್ಕೆ ಏನೂ ಮಾಡಿಲ್ಲ ಏಕೆಂದರೆ ಅವರ ತಲೆಯಲ್ಲಿರುವುದು ಅಖಂಡ ಕರ್ನಾಟಕ. ಅದೇ ದೇವೇಗೌಡರ ತಲೆಯಲ್ಲಿರುವುದು ಹೊಳೆನರಸೀಪುರವಂತಲ್ಲಾ ಥೂತ್ತೇರಿ.
*******
ಕುಮಾರಣ್ಣನವರು ಅನಿಸಿದ್ದನ್ನ ಅಂದುಬಿಡುವುದರಲ್ಲಿ ನಿಸ್ಸೀಮರು. ಅದರಂತೆ ಮಾಧ್ಯಮದವರ ಮೇಲೆ ಮುಗಿಬಿದ್ದಿದ್ದಾರೆ. ಇದನ್ನು ವಿಶ್ಲೇಷಿಸುವುದಾದರೆ ಕೆಲವು ಮಾಧ್ಯಮದವರಿಗೆ ಅವರಿಗೆ ಬೇಕಿದ್ದ ಸರಕಾರ ಬರಲಿಲ್ಲ ಬಂದಿದ್ದರೆ ಇನ್ನೊಂದೆರಡು ಸೈಟು ಮತ್ತು ಕಾರು ಕೊಳ್ಳಬಹುದಿತ್ತು. ರೆಸಾರ್ಟುಗಳಲ್ಲಿ ಪಾರ್ಟಿ ಮಾಡುತ್ತ ತಾವೇ ಸರಕಾರ ನಡೆಸುವವರಂತೆ ಬಹುಬೆಲೆಯ ಮದÀ್ಯ ಸೇವಿಸುತ್ತ ಉಳಿದದ್ದನ್ನ ಮನೆಗೆ ತೆಗೆದುಕೊಂಡು ಹೋಗಬಹುದಿತ್ತು. ಈಗ ಅದಾವುದಕ್ಕು ಅವಕಾಶವಿಲ್ಲದೆ ಕೇವಲ ಕುಮಾರಣ್ಣನ ಆಪ್ತ ಪತ್ರಕರ್ತರು ಮಾತ್ರ ತಿಂದುಂಡು ತೇಗುತ್ತಿರುವುದನ್ನು ನೋಡಿ ಸುಮ್ಮನಿರಲಾದೀತೆ. ಅದಕ್ಕಾಗಿಯೇ ಕರ್ನಾಟಕದ ಭೂಪಟವನ್ನೇ ಅರ್ಧ ಮಾಡಿಕೊಂಡು ಕೆರೆಯುತ್ತ ಮಾತನಾಡುತ್ತ ಕುಮಾರಣ್ಣನನ್ನು ರೇಗಿಸಿದ್ದಾರಂತಲ್ಲಾ. ಕುಮಾರಣ್ಣನ ಬಗ್ಗೆ ಪತ್ರಿಕೆಗಳೇನು ಜನಸಾಮಾನ್ಯರಿಗೂ ಅನುಮಾನಗಳಿವೆ. ಪಾಪ ಆತ ಜನಾಭಿಪ್ರಾಯದ ಮುಖ್ಯಮಂತ್ರಿಯಲ್ಲ ಗತಿಗೆಟ್ಟ ಕಾಂಗ್ರೆಸ್ಸಿಗರು ತಲೆಕೆಟ್ಟ ಬಿಜೆಪಿಗಳಿಗೆ ಹೆದರಿ ಮತಿಗೆಟ್ಟ ದಳದವರೊಂದಿಗೆ ಕೂಡಿಕೆ ಮಾಡಿಕೊಂಡರು. ಇದರಿಂದ ಇನ್ನ ತಲೆಕೆಟ್ಟಂತಾದ ಬಿಜೆಪಿಗಳು ರಾಜ್ಯವನ್ನೇ ಹೊಡೆದು ಹಾಕುವ ಹೀನಕೃತ್ಯಕ್ಕೆ ಕೈಹಾಕಿದೆ. ಈ ಹಿಂದೆ ಮಸೀದಿಯನ್ನೆ ಹೊಡೆದು ಹಾಕಿದ ಇತಿಹಾಸ ಹೊಂದಿರುವ ಬಿಜೆಪಿಗಳಿಗೆ ಯಾವುದೂ ಅಸಾಧ್ಯವಲ್ಲ. ಆದರೇನು ತನ್ನ ಮನೆತನ ಯಾವಾಗಲೂ ಅಧಿಕಾರದಲ್ಲಿರಬೇಕೆಂಬ ಕನಸು ಕಾಣುತ್ತ ಅದಕ್ಕಾಗಿ ಮಾರಿ ಬೆಲೆ ಹೆಣೆಯುತ್ತ ಕುಳಿತ ದೇವೇಗೌಡರ ಮನದಲ್ಲಿ ಕರ್ನಾಟಕ ಇಬ್ಭಾಗವಾಗುವುದು ಬೇಕಿಲ್ಲ ಎಂದು ಹೇಗೆ ಹೇಳುವುದು ಥೂತ್ತೇರಿ.
*******
ಮಾತಿನ ಬಲೆಯಲ್ಲಿ ಸಿಕ್ಕಿಕೊಂಡ ಕುಮಾರಣ್ಣನ ವರಸೆ ಹೊಸದೇನಲ್ಲ. ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಇಳಿದಾಗ ಜನಾಂಗದ ಸಭೆಯಲ್ಲಿ ಮಾತನಾಡುತ್ತ ನಾನು ಅಧಿಕಾರದಲ್ಲಿದ್ದಾಗ ನನ್ನ ಜನಕ್ಕೆ ಏನೂ ಮಾಡಲಾಗಲಿಲ್ಲ ಕ್ಷಮಿಸಿ ಎಂದಿದ್ದರು. ಕಳೆದ ಚುನಾವಣೆಯಲ್ಲಿ ಜಾತಿ ಪ್ರಸ್ತಾಪ ಮಾಡಿ ಜನಾಂಗವನ್ನು ಎತ್ತಿ ಕಟ್ಟಿದ್ದರು. ಉತ್ತರ ಕರ್ನಾಟಕದ ಜನರನ್ನ ಮರಳು ಮಾಡಲು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಆದರದು ವರ್ಕೌಟಾಗಲಿಲ್ಲ. ಈಗ ಬಜೆಟ್ಟಿನಲ್ಲೂ ಪ್ರಾದೇಶಿಕ ಅಸಮತೋಲನ ಎದ್ದುಕಂಡಿದೆ. ಜನ ತಮ್ಮ ನಾಯಕನಾದವನನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬ ತಿಳಿವಳಿಕೆಯಿಲ್ಲದ ಕುಮಾರಣ್ಣ ಈಗಾಗಲೇ ಆಡಿರುವ ಮಾತುಗಳಿಂದ ಖಚಿತ ಅಭಿಪ್ರಾಯವಿಲ್ಲದ ಪರಿಸ್ಥಿತಿಯ ಕೂಸೆಂಬುದನ್ನು ಸಾಬೀತು ಪಡಿಸಿದ್ದಾರೆ. ರಾಹುಲ್‍ಗಾಂಧಿ ಕೃಪೆಯಿಂದ ನಾನು ಮುಖ್ಯಮಂತ್ರಿಯಾದೆ ಎಂದಿದ್ದ ಕುಮಾರಣ್ಣ ಈಗಾಗಲೇ ಅಯ್ಯಪ್ಪನ ಕೃಪೆಯಿಂದ ಮುಖ್ಯಮಂತ್ರಿಯಾದೆ ಎಂದಿದ್ದಾರೆ. ಮದುವೆಯಾಗದೆ ಅಂಗೇ ಉಳಿದಿರುವ ರಾಹುಲ್‍ಗಾಂಧಿಯೇ ಅಯ್ಯಪ್ಪನಿಗೆ ಸಮಾನ ಎಂದುಕೊಂಡರೆ ತೊಂದರೆಯಿಲ್ಲ. ಆದರೆ ಸಮಯಕ್ಕೊಂದು ಮಾತು ಬದಲಿಸುವ ಕುಮಾರಣ್ಣನ ಎದುರು ಇನ್ನೊಂದೆರಡು ಸಮಸ್ಯೆಗಳಿವೆ, ಅವುಗಳ ಪೈಕಿ ಯಾರೊ ಲಂಬಾಣಿ ಸ್ವಾಮಿ ಮುಂದಿನ ಮುಖ್ಯಮಂತ್ರಿ ನೀವೇ ಅಂದಿದ್ದರಂತೆ. ಅಣ್ಣ ಇನ್ನು ಅಲ್ಲಿಗೆ ಹೋದಾಗ ಏನೇಳುತ್ತಾರೊ ಏನೋ ಥೂತ್ತೇರಿ.
*******
ಕರ್ನಾಟಕ ಹಿಂದೆಂದೂ ಕಂಡರಿಯದ ಸಮಸ್ಯೆಗಳಿಂದ ತತ್ತರಿಸುತ್ತಿರುವಾಗ ಅಷ್ಟಮಠಗಳು ಕಾಮದಾಹದಿಂದ ತತ್ತರಿಸುತ್ತಿವೆಯಂತಲ್ಲಾ. ಸದರಿ ಸಮಸ್ಯೆಗೆ ಬಹಳ ಹಿಂದೆಯೇ ನಿಡುಮಾಮಿಡಿ ಸ್ವಾಮಿಗಳಾದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳವರು ವೀರ್ಯ ಕುರಿತ ಚಿಂತನೆ ನಡೆಸಿ ಮಠದ ಯತಿಗಳನ್ನಾಗಿ ಬಾಲಕರನ್ನು ನೇಮಿಸಬಾರದು, ಆತ ಪ್ರಾಪ್ತ ವಯಸ್ಸಿಗೆ ಬಂದನಂತರ ಲೈಂಗಿಕ ನಿಗ್ರಹದ ಶಕ್ತಿಗಳಿಸಿಕೊಂಡು ಪ್ರಾಯವನ್ನು ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿಕೊಂಡಿದ್ದರೆ ಅಂತಹವನನ್ನು ಸ್ವಾಮಿಯನ್ನಾಗಿ ಮಾಡಿ ಇಲ್ಲವಾದರೆ ಹಿಡ ಮಾಡಿ ಯತಿಯನ್ನಾಗಿಸಿ ಎಂಬ ಸತ್ಯಸಂಗತಿ ಒಳಗೊಂಡ ಸಲಹೆ ಕೊಟ್ಟಿದ್ದರಲ್ಲ! ನಿಡುಮಾಮಿಡಿಯವರು ಇಂತಹ ಹೇಳಿಕೆಯನ್ನ ಆಡಿಕೊಂಡಿದ್ದ ಅಷ್ಟಮಠದ ಯತಿಗಳು, ಹಿಡ ಮಾಡುವುದಾಗಲಿ, ಬೀಜ ಹಿಸುಕುವುದಾಗಲಿ ಇದೆಲ್ಲ ಅನೈಸರ್ಗಿಕ ಕ್ರಿಯೆ. ನೈಸರ್ಗಿಕ ಕ್ರಿಯೆ ಯಾವುದಪ್ಪ ಅಂದ್ರೇ, ಮಠದಷ್ಟಕ್ಕೇ ಮಠವಾಯ್ತು. ನಮ್ಮಷ್ಟಕ್ಕೆ ನಾವು ಆರೈಕೆಗಾಗಿ ಕರೆಸಿಕೊಂಡ ಹೆಣ್ಣುಮಗಳನ್ನೇ ಅಂಗಾತÀ ಮಲಗಿಸಿಕೊಂಡು, ಕೃಷ್ಣಪೂಜೆ ಮಾಡಿದರೆ ಅಂತಹ ಯಾವ ಅಪÀರಾಧವೂ ಅಲ್ಲ; ಅನಾದಿಕಾಲದಿಂದಲೂ ಅಷ್ಟಮಠಗಳ ಯತಿಗಳು ಮಾಡಿಕೊಂಡು ಬಂದಿರುವುದು ಇದನ್ನೇ ಎಂದು ಭಾವಿಸಿ, ಯಾವ ಎಗ್ಗೂ ಇಲ್ಲದೆ ರಾಘವೇಶ್ವರನನ್ನೆ ಮೀರಿಸಿದರಂತಲ್ಲಾ. ಇದನ್ನೆಲ್ಲಾ ಕೇಳಿದ ಸಿದ್ದನಗೌಡ ಪಾಟೀಲ ಎಂಬ ಕಮ್ಯುನಿಸ್ಟ್ ಲೈಂಗಿಕ ಪ್ರತಿಪಾದಕರು “ಅಷ್ಟಮಠದ ಯತಿಗಳನ್ನ ಹಿಡಿದು ಸಾಮೂಹಿಕ ಮದುವೆ ಮಾಡಿಬಿಡುವುದೇ ಲೇಸು” ಎಂದರಂತಲ್ಲ. ಈ ಸುದ್ದಿ ಕೇಳಿದ ಅಷ್ಟಮಠದ ಲೈಂಗಿಕ ತಜ್ಞರು ಈಗ ಆಗಿರುವ ಅನಾಹುತವೇನು? ಮದುವೆ ಅಷ್ಟೊಂದು ಅನಿವಾರ್ಯವೆ, ಎಂದವಂತಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...