Homeಕರ್ನಾಟಕನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

- Advertisement -
- Advertisement -

ನಾನು ನಿರ್ಮಾಪಕನಾಗಿದ್ದೆ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಮ್ಮ ತಂದೆಯವರು ನನಗೆ ವಿರೋಧ ವ್ಯಕ್ತಪಡಿಸಿದ್ದರು. ಅವರು ರೇವಣ್ಣನವರಿಗೆ ಮಾತ್ರ ಆಶರ್ವಾದ ಮಾಡಿದ್ದರು. ನನಗೆ ರಾಜಕಾರಣ ಬೇಡವೆಂದಿದ್ದರು. ಆಗ ನಾನು ಅವರ ಮಾತು ಕೇಳಬೇಕಿತ್ತು, ಕೇಳಿಲ್ಲ. ಆಗ ದೇವೆಗೌಡರು ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್ ನ ಚಂದ್ರಶೇಖರ್ ವಿರುದ್ಧ ನಾನು ಚುನಾವಣೆಗೆ ನಿಂತಿದ್ದು.. ಅಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಬೇಕಿತ್ತು.. ಆಗ ರಾಜಕಾರಣ ಪ್ರವೇಶಿಸಿದೆ.

ಒಂದು ಕಡೆ ದೇವೇಗೌಡರು ಮತ್ತು ಇನ್ನೊಂದು ಕಡೆ ಶಾಸಕರ ವಿಶ್ವಾಸ ನನ್ನ ಜೊತೆಗಿತ್ತು. ಆದರೆ 1999ರಲ್ಲಿ ರೇವಣ್ಣನವರು, ದೇವೇಗೌಡರು, ನಾನು ಸೋತಿದ್ದೇವು. ಅವತ್ತೇ ರಾಜಕಾರಣಕ್ಕೆ ಎಳ್ಳುನೀರು ಬಿಡಬೇಕಿತ್ತು. ಆದರೆ ಜನ.. ನನ್ನನ್ನು ನೋಡಲು ಬಂದಿದ್ದರು..  ಅವರು ನಮ್ಮ ಕೈಬಿಡಬೇಡಿ ಅಂದರು. ಹಾಗಾಗಿ ಮುಂದುವರೆದೆ. ಹಾಗಾಗಿ ಜನಗಳ ಮಧ್ಯಕ್ಕೆ ಹೋದೆ. 2004ರಲ್ಲಿ ಗೆದ್ದ.. ಅವತ್ತಿನ ರಾಜಕಾರಣ ನಿಮಗೆಲ್ಲ ಗೊತ್ತೆ ಇದೆ.

ವಿರೋಧ ಪಕ್ಷದ ನಾಯಕರಿಗೆ ಹೇಳುತ್ತೇನೆ. ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ.. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತಿದ್ದಾರೆ. ದೇಶದ ಸಂಸ್ಕೃತಿ ನಾಶ ಮಾಡಲಿಕ್ಕೆ ಈ ಸೋಷಿಯಲ್ ಮೀಡಿಯಾ ಆರಂಭವಾಗಿದೆ..

ನಾನು ತಪ್ಪು ಮಾಡಿದ್ದೇನೆ. ತಪ್ಪು ತಿದ್ದಿಕೊಂಡಿದ್ದೇನೆ.. ನನ್ನ ಜೀವನದಲ್ಲಿ ಆ ಅವಕಾಶವಿದೆ. ಆದರೆ ಬಿಜೆಪಿಯವರು ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಟ್ವಿಟ್ಟರ್ ನಲ್ಲಿ Session for Karnataka Trust Vote has begun But CM h.d kumaraswamy is resting at his Taj West end hotel His message is clear He will continue to loot & waste tax payers money to the very last second as CM ಅಂತ ಬರೆದಿದ್ದಾರೆ.

ನಾನು ತಾಜ್ ಹೋಟೆಲ್ ನಲ್ಲಿ ಭಾಷಣ ಪ್ರಿಪೇರ್ ಮಾಡ್ತಾ ಕೂತಿದ್ದೆ. ಹೌದು ಸ್ವಲ್ಪ ಪ್ರಯತ್ನ ಪಟ್ಟೆ.. ಏನಾದರೂ ಕೊನೆ ಹಂತದಲ್ಲಿ ವಿಶ್ವಾಸಮತ ಗೆಲ್ಲಲ್ಲಿಕ್ಕೆ, ಸದನ ಗೆಲ್ಲಿಸುತ್ತೆ ಅಂತ.. ಪ್ರಯತ್ನ ಮಾಡಿದೆ. ನಾನು ಕದ್ದು ಮುಚ್ಚಿ ಮಾತಾಡೋಲ್ಲ.. ಶಾಸಕರು ಕಣ್ಣೀರು ಹಾಕಿದ್ದಾರೆ.. ಅವರಿಗಾಗಿ ಅದಕ್ಕೋಸ್ಕರ ತಡವಾಯ್ತು.. ಈ ರಾಜ್ಯ ಲೂಟಿ ಮಾಡಲಿಕ್ಕಲ್ಲ..

ಆದರೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತೀರಿ. ನನ್ನ ಯೋಗ್ಯತೆಯ ಬಗ್ಗೆ ಮಾತಾಡುತ್ತೀರಿ. ಯೋಗ್ಯತೆಗೆ ತಕ್ಕ ಜವಾಬ್ದಾರಿ ನೀಡುತ್ತೇವೆ.. ಎಚ್ ವಿಶ್ವನಾಥ ರವರು ಸಾರ ಮಹೇಶ್ ಬಗ್ಗೆ ಬಳಸಿರುವ ಪದಬಳಕೆ.. ಬಹಳ ಕೆಟ್ಟ ರೀತಿಯ ಹೇಳಿಕೆ ಕೊಟ್ಟಿದ್ದಾರೆ..

ಇನ್ನು ವಾಟ್ಸಾಪ್ ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಅದನ್ನು ನೋಡಿದರೆ ಬಗ್ಗೆ ವಾಂತಿ ಬರುತ್ತೆ.. ಥೂ..

ಇವತ್ತಿನ ಮಾಧ್ಯಮಗಳಿಗೆ ಮನುಷ್ಯತ್ವ, ಮಾನವೀಯತೆ ಇದೆಯೇ.? ಪ್ರಿಂಟ್ ಮಾಧ್ಯಮಗಳು ಇನ್ನು ನಂಬಿಕೆ ಉಳಿಸಿಕೊಂಡಿವೆ. ಆದರೆ ಎಲೆಕ್ಟ್ರಾನಿಕ್ ಮೀಡಿಯಾಗಳು ನಮ್ಮ ದೇಶ ಯಾಕೆ ಹಾಳು ಮಾಡುತ್ತಿದ್ದೀರಿ.. ನಿಮಗೆ ಬ್ಯುಸಿನೆಸ್ ಮಾಡಬೇಕಾರೆ ಬೇರೆ ಉದ್ಯಮ ಮಾಡಿಕೊಳ್ಳಿ. ಇಲ್ಲಿ ಬಂದು ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ. ನಾನು ಜೆ.ಪಿ ನಗರಕ್ಕೆ ಹೋಗುವಾಗ ಕ್ಯಾಮರ ಇಟ್ಟುಕೊಂಡು ಬಂದಿದ್ದರು.. ಪ್ರೈವಸಿ ಎಲ್ಲಿದೆ?

ನಾನು ನಾಡಿನ ಮುಖ್ಯಮಂತ್ರಿ ಯಾಗಿದ್ದಾಗ ಒಂದು ಮಾಧ್ಯಮದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದೇವೆ.. ಕತ್ತಲೆ ಲೋಕದ ಕುಮಾರ .. ಎಂದು ವರದಿ ಮಾಡಿದ್ದರು. ಸ್ವಚ್ಛ ಭಾವನಾತ್ಮಕ ಜೀವನ ನನ್ನದು.. ಅದನ್ನು ನೋಡಿದಾಗ ಇಂತಹ ಸರ್ಟಿಫಿಕೇಟ್ ತಗೊಂಡು ಮುಖ್ಯಮಂತ್ರಿ ಆಗಬೇಕ ಅನ್ನಿಸಿತು. ಅಂದು ರಾತ್ರಿಯೆಲ್ಲ ಮಲಗಿಲ್ಲ .. ಅವತ್ತು ಎಡಗಾಲು ಸ್ವಾಧೀನ ಕಳೆದುಕೊಂಡು ಒಂದೂವರೆ ಗಂಟೆ ನೊಂದಿದ್ದೇನೆ..

ಇಂದು ನಾನು ಅತ್ಯಂತ ಸಂತೋಷವಾಗಿ ಈ ಸ್ಥಾನ ತ್ಯಜಿಸುತ್ತಿದ್ದೇನೆ. ನನಗೆ ಯಾವ ನೋವು ಇಲ್ಲ.  ಮತ್ತೊಮ್ಮೆ ವಚನ ಭ್ರಷ್ಟ.. ಎನ್ನುವ ಮಾಧ್ಯಮಗಳು ಪ್ರಶ್ನೆ ಹಾಕಿಕೊಳ್ಳಿ.

ಬಿಜೆಪಿ ಜೊತೆ 20 ತಿಂಗಳು ಇದ್ದೆ. ಅಧಿಕಾರ ಹಸ್ತಾಂತರವನ್ನು ಮಾಡಬೇಕೆಂದಿದ್ದೆ. ಈಶ್ವರಪ್ಪ ಜಗದೀಶ್ ಶೆಟ್ಟರ್ ಯಡಿಯೂರಪ್ಪರವರ ಒಪ್ಪಂದ ಮಾಡಿಕೊಂಡಿದೆ. ಆಗ ನನ್ನ ಗೆಳೆಯರಾದ ಬಾಲಕೃಷ್ಣ, ಚಲುವರಾಯಸ್ವಾಮಿ ಜೊತೆಗಿದ್ದರು. ಅಗ್ರಿಮೆಂಟ್ ಮಾಡಿಕೊಂಡರು. ದೇವೆಗೌಡರು ಮತ್ತು ಬಿಜೆಪಿ ಹೈಕಮಾಂಡ್ ಗಮನಕ್ಕೆ ಬಂದಿತ್ತು. ಆದರೆ ಆಗಲಿಲ್ಲ ಅಷ್ಟೇ..

ನಾನು ತಾಜ್ ವೆಸ್ಟೆಂಡ್ ನಲ್ಲಿಯೇ ಇರುತ್ತೇನೆ ಅಂತ ಆರೋಪ ಮಾಡುತ್ತೀರಿ. 2018ರ ಚುನಾವಣೆಯ ಫಲಿತಾಂಶದ ದಿನ. ಅಂದು ಅದೇ ಹೋಟೆಲ್ ನಲ್ಲಿ ಕುಳಿತು ಟಿ.ವಿ ನೋಡುತ್ತಿದ್ದೆ. ಅಂದು ರಾಜಕೀಯ ಬಿಡಬೇಕಿತ್ತು.. ಆದರೆ ಆಗ ಗುಲಾಂ ನಬಿ ಆಜಾದ್ ರವರು ದೂರವಾಣಿ ಕರೆ ಮಾಡಿ.. ನಿಮಗೆ ಬೆಂಬಲ ನೀಡುತ್ತೇವೆ, ಸಮ್ಮಿಶ್ರ ಸರ್ಕಾರ ಮಾಡೋಣ ಅಂದರು. ಹಾಗಾಗಿ ಆ ರೂಂ ಬಗ್ಗೆ ಪ್ರೀತಿ ಅಷ್ಟೇ.

ನಾನು ವಚನ ಭ್ರಷ್ಟ ಅಲ್ಲ.. ಒಂಭತ್ತು ದಿನದ ಮುಖ್ಯಮಂತ್ರಿ ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಬೇಕು. ಈ ನಾಡಿನ ಜನತೆಗೆ ತಿಳಿಸಬೇಕಿದೆ. ದೇವೇಗೌಡರು ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಸ್ವಲ್ಪ ದಿನದಲ್ಲಿಯೇ ಹೊರಬರುತ್ತೆ. ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ.. ಈ ಸರ್ಕಾರ ಇರುತ್ತೊ ಹೋಗುತ್ತೊ .. ಆದರೆ ನನ್ನ ಅಧಿಕಾರಿಗಳಿಗೆ ಹೃದಯತುಂಬಿದ ಧನ್ಯವಾದಗಳು

ಡೇ ಒಂದರಿಂದ ಮಾಧ್ಯಮಗಳು ತೊಂದರೆ ಕೊಟ್ಟಿವೆ. ಸುಭದ್ರ ಸರ್ಕಾರಗಲೇ ಕೆಲಸ ಮಾಡುವುದು ಕಷ್ಟ. ನಮ್ಮ ನಡವಳಿಕೆ ನೋಡಿ, ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ಇದು ಕೇವಲ ನನ್ನ ಸಾಧನೆ ಅಲ್ಲ.. ಅವರೆಲ್ಲರ ಪಾಲಿದೆ.

ಸಾಲ ಮನ್ನಾ .. 25 ಸಾವಿರ ಕೋಟಿ ತೆಗೆದಿದ್ದೇವೆ.. ರೈತರಿಗೆ ಮೋಸ ಮಾಡಲಿಕ್ಕೆ ಹೋಗಿಲ್ಲ.. 2018ರಲ್ಲಿ ಸಿದ್ದರಾಮಯ್ಯ ನವರು ಫೇಬ್ರವರಿ ತಿಂಗಳ ಬಜೆಟ್ ಮಂಡನೆ ಮಾಡಿದ್ದರು. ನಂತರ ನಾನು ಅಧಿಕಾರಕ್ಕೆ ಬಂದರೂ ಅವರ ಯಾವುದೇ ಕಾರ್ಯಕ್ರಮ ಕಡಿತ ಮಾಡಿಲ್ಲ.. ಸಿದ್ದರಾಮಯ್ಯನವರು ಘೋಷಿಸಿದ್ದ ಸಾಲಮನ್ನಾದ 2700 ಕೋಟಿ ರೂ ನಾವು ತೀರಿಸಿದೆವು. ರೈತರಿಗೆ ನಮ್ಮಿಂದ ಮೋಸವಾಗಿಲ್ಲ.. ಟ್ರಾಕ್ಟರ್, ಮನೆ ಕಟ್ಟುವಾಗ ಸಾಲ ಮಾಡಿದರೆ ಅದಕ್ಕೂ ಕುಮಾರಸ್ವಾಮಿ ಕಾರಣ ಎಂದು ಈ ಮಾಧ್ಯಮಗಳು ಅರಚುತ್ತವೆ.

ಒಂದೇ ಒಂದು ಹಗರಣ ಇದ್ರೆ ನನ್ನ ಮುಂದೆ ತಂದುಕೊಡಿ. ಬರಿ ಚಪಲಕ್ಕೆ ಹೇಳಬೇಡಿ. ದಾಖಲೆಗಳ ಸಮೇತ ತಂದಿಡಿ. ನಾನು ಸರ್ಕಾರಿ ಕಾರು, ಬಂಗಲೆ, ಟಿ.ಎ ಡಿ.ಎ, ಪೆಟ್ರೋಲ್ ಖರ್ಚು ತಗೊಂಡಿಲ್ಲ.. ಜನರ ತೆರಿಗೆ ಹಣ ಖರ್ಚು ಮಾಡಬೇಕಾದರೆ ನನ್ನ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡು ಖರ್ಚು ಮಾಡುತ್ತೇನೆ.

ಪ್ರಧಾನ್ ಮಂತ್ರಿ ಸಮ್ಮಾನ್ ಯೋಜನೆಗೆ 35 ಲಕ್ಷ ರೈತರ ವಿವರಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದೇವೆ. ಆದರೆ ಹಣ 15 ಲಕ್ಷ ರೈತ ಕುಟುಂಬಗಳಿಗೆ ಮಾತ್ರ. 1500 ಕೋಟಿ ಮಾತ್ರ. ನಾನು ತಪ್ಪು ಮಾಡಿದ್ರೆ ಕಿವಿಹಿಂಡಿ ಬುದ್ದಿ ಹೇಳಿ. ಹಾಗೆಯೇ ಒಳ್ಳೇಯ ಕೆಲಸ ಮಾಡಿದರೆ ಮನಸ್ಸು ಬಿಚ್ಚು ಹೇಳಿ. ಬೋಪಯ್ಯ ಅಪ್ಪಚ್ಚು ರಂಜಾನ್ ಕೇಳಿ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಬಂದಾಗ ಯಾವ ರೀತಿ ಕೆಲಸ ಮಾಡಿದ್ದೀವಿ ಅಂತ. ಯಾವ ರೀತಿ ಕೆಲಸ ಮಾಡಿದ್ದೀನಿ ..

ಬಸವರಾಜ ಬೊಮ್ಮಾಯಿ ಜ್ಯೋತಿಷಿ ಯಾವಾಗ ಆದ್ರಿ? ಫೆಬ್ರವರಿ ನಲ್ಲೇ ನುಡಿದಿದ್ದರು.. ಈ ಸರ್ಕಾರ ಬೀಳುತ್ತೆ ಅಂತ. ನಾನು ಜ್ಯೋತಿಷಿ ಕೇಳಲ್ಲ.. ನಂಬೋಲ್ಲ. ರೇವಣ್ಣನ ಬಗ್ಗೆ ಮಾತಾಡುತ್ತಾರೆ.  ದಿನಾ ಟಿವಿಯೊಳಗೆ ನಿಂಬೆ ಹಣ್ಣಿನ ಚರ್ಚೆ ಮಾಡುತ್ತಾರೆ. ಆತ ಅಮಾಯಕ. ನನ್ನ ಪ್ರಕಾರ ಮುಗ್ಧ.

ನಾನು ಓಡಿ ಹೋಗೋಲ್ಲ. ವಿಶ್ವಾಸಮತಕ್ಕೆ ಹಾಕುತ್ತೇನೆ. ಗೆಲುವು ಸೋಲು ಎರಡನ್ನು ಸಮಭಾವದಿಂದ ಸ್ವೀಕರಿಸುತ್ತೇನೆ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...