ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ನಾಲ್ವರು ರೈತರು ಕೊಲೆಯಾಗಿ 100 ಗಂಟೆಯಾದರೂ ಆರೋಪಿಗಳ ಬಂಧನ ಮಾಡದಿರುವ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಲಖಿಂಪುರ್ ಖೇರಿ ಘಟನೆ ನಡೆದು 100 ಗಂಟೆಗೂ ಹೆಚ್ಚು ಸಮಯ ಕಳೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಒಂದು ಮಾತನ್ನಾದರೂ ಆಡಿದ್ದಾರೆಯೇ? ರೈತರ ವಿರುದ್ಧ ಅಪರಾಧ ಮಾಡುವವರಿಗೆ ಅಧಿಕಾರದ ಸಂಪೂರ್ಣ ರಕ್ಷಣೆ ಇದೆ ಎಂಬುದು ಇದರಿಂದ ಸ್ಪಷ್ಟಪಡಿಸುತ್ತದೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖವಾಣಿ ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
लखीमपुर खेरी की घटना हुए 100 घंटे से भी ज्यादा समय हो गया है।
पर क्या पप्रधानमंत्री @narendramodi या गृहमंत्री @AmitShah का अपराधियों के खिलाफ कोई बयान आया है?
यह स्पष्ट करता है कि किसानों के खिलाफ अपराध करने में सत्ता का पूरा संरक्षण है।#BJP_MassacredFarmers
— Kisan Ekta Morcha (@Kisanektamorcha) October 7, 2021
ಆರೋಪಿ ಆಶಿಶ್ ಮಿಶ್ರಾನನ್ನು ಇನ್ನೂ ಬಂಧಿಸಲಾಗಿಲ್ಲ. ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಿಲ್ಲ. ಆದರೆ ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿದೆ ಮತ್ತು ಸಂವಹನವನ್ನು ನಿರ್ಬಂಧಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆಗಾರ ಮತ್ತು ಮಂತ್ರಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ನೀಡಲಾಯಿತು, ಸಾಂತ್ವನ ನೀಡಿದವರನ್ನು ಬಂಧನದಲ್ಲಿಡಲಾಯಿತು ಎಂದು ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕಿಡಿಕಾರಿದ್ದಾರೆ.
ಸರ್ಕಾರವು ತನ್ನ ಮಂತ್ರಿಯನ್ನು ವಜಾ ಮಾಡದಿದ್ದರೆ ಮತ್ತು ಅವರ ಮಗನನ್ನು ಬಂಧಿಸದ ಹೊರತು ನರಮೇಧದ ಸಂತ್ರಸ್ತರಿಗೆ ಹೇಗೆ ನ್ಯಾಯ ಸಿಗುತ್ತದೆ? ಈ ಕೆಲಸ ಆಗಬೇಕೆಂದು ಸಂತ್ರಸ್ತ ರೈತರ ಕುಟುಂಬ ಒತ್ತಾಯಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
‘ಲಖಿಂಪುರ್ ಹತ್ಯಾಕಾಂಡ’ದಲ್ಲಿ ಹೊಸ ವಿಡಿಯೋ ಸಾಕ್ಷ್ಯಗಳ ಹೊರತಾಗಿಯೂ, ಬಿಜೆಪಿ ಸರ್ಕಾರ ಏನನ್ನೂ ಮಾಡುತ್ತಿಲ್ಲ. ಬಿಜೆಪಿಗೆ ಅಧಿಕಾರ ಅಹಂಕಾರದ ಪೊರೆ ಆವರಿಸಿದೆ. ದೆಹಲಿಯಿಂದ ಲಕ್ನೋದವರೆಗಿನ ಬಿಜೆಪಿ ಸರ್ಕಾರಗಳ ಈ ನಿಷ್ಕ್ರಿಯತೆಯು ಸ್ವತಃ ಅಪರಾಧವಾಗಿದೆ. ತುಂಬಾ ಮುಜುಗರ! ಅಸಹ್ಯಕರ !! ಬಿಜೆಪಿ ಮುಗಿಯಿತು ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
‘लखीमपुर हत्याकांड’ में नये वीडियो साक्ष्यों के बावजूद भी भाजपा सरकार को कुछ नज़र नहीं आ रहा है। भाजपा को सत्ता के दंभ का मोतियाबिंद हो गया है। भाजपा सरकार में दिल्ली से लेकर लखनऊ तक की ये निष्क्रियता स्वयं में आपराधिक है।
बेहद शर्मनाक!
घोर निंदनीय!!#भाजपा_ख़त्म
— Akhilesh Yadav (@yadavakhilesh) October 7, 2021
ಇದನ್ನೂ ಓದಿ: ಲಖಿಂಪುರ್ ಖೇರಿ: ಕೊನೆಗೂ ಸಂತ್ರಸ್ತ ಕುಟುಂಬವನ್ನು ಭೇಟಿಯಾದ ರಾಹುಲ್, ಪ್ರಿಯಾಂಕ ಗಾಂಧಿ