Homeಮುಖಪುಟವಾಟ್ಸಾಪ್‌ಗೆ ಗುಡ್‌ಬೈ ಹೇಳಿ, ಸಿಗ್ನಲ್‌ಗೆ ಹೆಲೋ ಹೇಳಿ: ಏನಿದು ಸಿಗ್ನಲ್ ಆಪ್?

ವಾಟ್ಸಾಪ್‌ಗೆ ಗುಡ್‌ಬೈ ಹೇಳಿ, ಸಿಗ್ನಲ್‌ಗೆ ಹೆಲೋ ಹೇಳಿ: ಏನಿದು ಸಿಗ್ನಲ್ ಆಪ್?

ಈ ಅಪ್ಲಿಕೇಶನ್‌ನಲ್ಲಿನ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ. ಅಂದರೆ ಯಾವುದೇ ಮೂರನೇ ವ್ಯಕ್ತಿ ಮಾತ್ರವಲ್ಲ ಸ್ವತಃ ಸಿಗ್ನಲ್ ಸಹ ಅವುಗಳನ್ನು ನೋಡಲಾಗುವುದಿಲ್ಲ.

- Advertisement -
- Advertisement -

ವಾಟ್ಸಾಪ್ ತನ್ನ ಗೌಪ್ಯತಾ ನಿಯಮಗಳನ್ನು ಅಪ್‌ಡೇಟ್‌ ಮಾಡಿದ್ದು, ಬಳಕೆದಾರರ ಸಂದೇಶಗಳನ್ನು ಓದುವ ಮತ್ತು ಡೇಟಾ ಸಂಗ್ರಹಿಸುವುದಾಗಿ ಘೋಷಿಸಿಕೊಂಡಿದೆ. ಅಲ್ಲದೆ ಬಳಕೆದಾರರ ಡೇಟಾವನ್ನು ಫೇಸ್‌ಬುಕ್ ಸೇರಿದಂತೆ ಇತರ ಕಂಪನಿಗಳಿಗೆ ಮಾರುವುದಾಗಿ ಹೇಳಿದ್ದು ಎಲ್ಲರೂ ಈ ಷರತ್ತಿಗೆ ಒಪ್ಪಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ತ್ಯಜಿಸಿ, ಸಿಗ್ನಲ್ ಬಳಸಿ ಎಂಬ ಘೋಷಣೆ ಜನಪ್ರಿಯವಾಗಿದೆ. ಈ ಸಿಗ್ನಲ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರ ಇಲ್ಲಿದೆ.

ಸಿಗ್ನಲ್ ಆಪ್‌ನ ಘೋಷವಾಕ್ಯವೇ ಖಾಸಗಿತನಕ್ಕೆ ಹೆಲೋ ಹೇಳಿ ಎಂಬುದಾಗಿದೆ. ಇದರಲ್ಲಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಡೆಡ್ ಇದ್ದು ಯಾವುದೇ ಸಂದೇಶ-ಸಂಭಾಷಣೆಯನ್ನು ಬೇರೆಯವರು ತಿಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಿಗ್ನಲ್ ಆಪ್‌ ಅನ್ನು ಸ್ವತಂತ್ರ ಲಾಭರಹಿತ ಸಂಸ್ಥಯು ಅಭಿವೃದ್ದಿಪಡಿಸಿದೆ.

ಸಿಗ್ನಲ್ ಯಾರದು?

ನಿಮಗೆ ಗೊತ್ತಿರುವಂತೆ ವಾಟ್ಸಾಪ್‌ ಅನ್ನು ಫೇಸ್‌ಬುಕ್ ಕೊಂಡುಕೊಂಡಿದೆ. ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ, ಇದು ಐಫೋನ್, ಐಪ್ಯಾಡ್, ಆಂಡ್ರಾಯ್ಡ್, ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್‌ಗಳಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಅನ್ನು ಲಾಭರಹಿತ ಕಂಪನಿಗಳಾದ ಸಿಗ್ನಲ್ ಫೌಂಡೇಶನ್ ಮತ್ತು ಸಿಗ್ನಲ್ ಮೆಸೆಂಜರ್ ಎಲ್ಎಲ್ ಸಿ ಅಭಿವೃದ್ಧಿಪಡಿಸಿವೆ.  ಈ ಅಪ್ಲಿಕೇಶನ್ ಅನ್ನು ಅಮೆರಿಕದ ಕ್ರಿಪ್ಟೋಗ್ರಾಫರ್ ಮತ್ತು ಪ್ರಸ್ತುತ ಸಿಗ್ನಲ್ ಮೆಸೆಂಜರ್ ಸಿಇಒ ಮೋಕ್ಸಿ ಮಾರ್ಲಿನ್ಸ್‌ಪೈಕ್ ರಚಿಸಿದ್ದಾರೆ.

ಸಿಗ್ನಲ್ ಫೌಂಡೇಶನ್ ಅನ್ನು ವಾಟ್ಸಾಪ್ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮತ್ತು ಮಾರ್ಲಿನ್ಸ್‌ಪೈಕ್ ರಚಿಸಿದ್ದಾರೆ. 2017 ರಲ್ಲಿ ವಾಟ್ಸಾಪ್ ಅನ್ನು ತೊರೆದ ಬ್ರಿಯಾನ್ ಆಕ್ಟನ್, ಸಿಗ್ನಲ್ ಆಪ್‌ಗಾಗಿ ಸುಮಾರು 50 ಮಿಲಿಯನ್ ಹಣ ಹಾಕಿದ್ದಾರೆ.

ಸಿಗ್ನಲ್ ಬಳಸಲು ಹಣ ಪಾವತಿಸಬೇಕೇ?

ಸಿಗ್ನಲ್ ಬಳಕೆ ಸಂಪೂರ್ಣ ಉಚಿತವಾಗಿದೆ. ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳ ರೀತಿ ಸಿಗ್ನಲ್ ನಲ್ಲಿ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು, ತಮ್ಮ ಸ್ನೇಹಿತರೊಂದಿಗೆ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಲು, ಫೋಟೋಗಳು, ವೀಡಿಯೊಗಳು ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಇದು ಇತ್ತೀಚೆಗೆ ಡಿಸೆಂಬರ್ 2020 ರಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಪರಿಚಯಿಸಿದೆ. ಸಿಗ್ನಲ್‌ನಲ್ಲಿ ಗುಂಪುಗಳನ್ನು ಸಹ ರಚಿಸಬಹುದು. ಒಂದು ಗುಂಪು 150 ಸದಸ್ಯರಿಗೆ ಸೀಮಿತವಾಗಿದೆ.

ನಿಮಗೆಲ್ಲಾ ತಿಳಿದ ಹಾಗೆ ವಾಟ್ಸಾಪ್‌ನಲ್ಲಿ ಗುಂಪು ರಚಿಸಿದರೆ ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ಯಾರನ್ನು ಬೇಕಾದರೂ ಸೇರಿಸಬಹುದು (ಕೆಲವರು ಹೀಗೆ ಸೇರಿಸದಂತೆ ಸೆಟ್ಟಿಂಗ್ ಬದಲಿಸಿರುತ್ತಾರೆ). ಆದರೆ ಸಿಗ್ನಲ್‌ ನಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ. ಮೊದಲು ಗ್ರೂಪ್‌ಗೆ ನಿಮ್ಮನ್ನು ಸೇರಿಸಲಾಗುತ್ತದೆ ಎಂದು ಇನ್ವೈಟ್ ಕಳಿಸಲಾಗುತ್ತದೆ. ಅದನ್ನು ಸ್ವೀಕರಿಸಿದರೆ ಮಾತ್ರ ಗ್ರೂಪ್‌ಗೆ ಸೇರಿಸಲಾಗುತ್ತದೆ.

ಸಂದೇಶಗಳಿಗೆ ಪ್ರತ್ಯೇಕವಾಗಿ ಪ್ರತ್ಯುತ್ತರಿಸಲು, ನಿರ್ದಿಷ್ಟ ಸಂದೇಶಕ್ಕೆ ಎಮೋಜಿ ಆಧಾರಿತ ಪ್ರತಿಕ್ರಿಯೆಗಳನ್ನು ಕಳುಹಿಸಲು ಮತ್ತು ‘ಎಲ್ಲರಿಗೂ ಅಳಿಸು’ ಆಯ್ಕೆಯನ್ನು ಆರಿಸುವ ಮೂಲಕ ಚಾಟ್‌ನಿಂದ ನಿರ್ದಿಷ್ಟ ಸಂದೇಶವನ್ನು ಅಳಿಸಲು ಸಿಗ್ನಲ್ ನಿಮಗೆ ಅನುಮತಿಸುತ್ತದೆ. ವಾಟ್ಸಾಪ್ ಸೇರಿದಂತೆ ಇತರ ಮೆಸೇಂಜಿಗ್ ಅಪ್ಲಿಕೇಶನ್‌ಗಳಲ್ಲಿ ನಾವು ನೋಡಿದ ಎಲ್ಲಾ ವೈಶಿಷ್ಟ್ಯಗಳು ಇಲ್ಲಿವೆ.

ಆದರೆ ಸಿಗ್ನಲ್‌ನ ಗಮನವು ಸಂಪೂರ್ಣವಾಗಿ ಗೌಪ್ಯತೆಯ ಮೇಲಿದೆ. ಎಂಡ್‌ ಟು ಎಂಡ್‌ ಎನ್‌ಕ್ರಿಪ್ಡೆಡ್ ಮಾತ್ರವಲ್ಲದೆ ಡೇಟಾ ಸಂಗ್ರಹಣೆಯ ಮೇಲೂ ಇದು ವಿಶೇಷ ಕಾಳಜಿ ವಹಿಸಿದೆ.

ಲ್ಯಾಪ್‌ಟಾಪ್ ಅಥವಾ ಐಪ್ಯಾಡ್‌ನಲ್ಲಿ ನೀವು ಸಿಗ್ನಲ್ ಅನ್ನು ಬಳಸಬಹುದೇ?

ಹೌದು, ನಿಮ್ಮ ಐಪ್ಯಾಡ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಸಿಗ್ನಲ್ ಅನ್ನು ಬಳಸಬಹುದು, ಮತ್ತು ನಿಮ್ಮ ಫೋನ್‌ನಲ್ಲಿರುವ ಖಾತೆಯನ್ನು ಲಿಂಕ್ ಮಾಡಬಹುದು. ಆದರೆ ಇಲ್ಲಿ ಒಮ್ಮೆ ಲಿಂಕ್ ಮಾಡಿದರೆ ನಿಮ್ಮ ಹಿಂದಿನ ಚಾಟ್ ಹಿಸ್ಟರಿ ಲ್ಯಾಪ್‌ಟಾಪ್‌ ನಲ್ಲಿ ಗೋಚರಿಸುವುದಿಲ್ಲ. ಅಲ್ಲಿಂದ ಮುಂದಕ್ಕೆ ನಡೆಸುವ ಸಂಭಾಷಣೆಗಳು ಮಾತ್ರ ಗೋಚರಿಸುತ್ತವೆ. ಏಕೆಂದರೆ ಎಲ್ಲಾ ಹಿಸ್ಟರಿ ಆಯಾ ಪ್ರತ್ಯೇಕ ಸಾಧನಗಳಲ್ಲಿ ಸೇವ್ ಆಗುತ್ತದೆ.

ಸಿಗ್ನಲ್‌ನಲ್ಲಿ ನನ್ನ ಚಾಟ್‌ಗಳನ್ನು Google ಡ್ರೈವ್ ಅಥವಾ ಐಕ್ಲೌಡ್‌ಗೆ ಬ್ಯಾಕಪ್ ಮಾಡಬಹುದೇ?

ಇಲ್ಲ, ವಾಟ್ಸಾಪ್‌ ನಂತೆ ಇದು ಸಾಧ್ಯವಿಲ್ಲ.

ಸಿಗ್ನಲ್‌ನಲ್ಲಿನ ಗೌಪ್ಯತೆ ವೈಶಿಷ್ಟ್ಯಗಳು ಯಾವುವು?

ಸಿಗ್ನಲ್ ಸಾಕಷ್ಟು ಗೌಪ್ಯತೆ-ಕೇಂದ್ರಿತ ವೈಶಿಷ್ಟ್ಯಗಳನ್ನು ಹೊಂದಿದೆ. ನಿಮ್ಮ ಐಪಿ ವಿಳಾಸವನ್ನು ಬಹಿರಂಗಪಡಿಸದೆ ನೀವು ಕರೆಗಳನ್ನು ಮಾಡಬಹುದು. ಆದರೆ ಕರೆ ಗುಣಮಟ್ಟ ಕಡಿಮೆಯಾಗುತ್ತದೆ.

ಇನ್ನು ನೀವು ಸಂದೇಶ ಓದಿದ್ದೀರೋ, ಇಲ್ಲವೋ? ಯಾವಾಗ ಓದಿದ್ದೀರಿ? ಇತ್ಯಾದಿ ಅಂಶಗಳನ್ನು ಸಿಗ್ನಲ್‌ನಲ್ಲಿ ಮರೆಮಾಚಬಹುದಾಗಿದೆ. ಅಲ್ಲದೆ ನೀವು ಆನ್‌ಲೈನ್‌ ನಲ್ಲಿ ಇದ್ದೀರೋ, ಇಲ್ಲವೋ ಎಂಬುದನ್ನು ಸಹ ಮರೆ ಮಾಚಬಹುದು.

ಸಿಗ್ನಲ್ ಯಾವ ಡೇಟಾವನ್ನು ಸಂಗ್ರಹಿಸುತ್ತದೆ?

ಸಿಗ್ನಲ್ ಸಂಗ್ರಹಿಸುವ ಏಕೈಕ ಡೇಟಾವೆಂದರೆ ‘ಸಂಪರ್ಕ ಮಾಹಿತಿ’ ಅದು ಫೋನ್ ಸಂಖ್ಯೆ. ಸಿಗ್ನಲ್‌ನ ಗೌಪ್ಯತೆ ನೀತಿಯ ಪ್ರಕಾರ, “ಯಾವುದೇ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಸಂಗ್ರಹಿಸಲು ಈ ಆಪ್ ವಿನ್ಯಾಸಗೊಳಿಸಲಾಗಿಲ್ಲ”. ಅಪ್ಲಿಕೇಶನ್‌ನಲ್ಲಿನ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ. ಅಂದರೆ ಯಾವುದೇ ಮೂರನೇ ವ್ಯಕ್ತಿ ಮಾತ್ರವಲ್ಲ ಸ್ವತಃ ಸಿಗ್ನಲ್ ಸಹ ಅವುಗಳನ್ನು ನೋಡಲಾಗುವುದಿಲ್ಲ.

ಸಿಗ್ನಲ್‌ನ ಗೌಪ್ಯತೆ ನೀತಿಯ ಪ್ರಕಾರ, ಸಿಗ್ನಲ್ ಖಾತೆಯನ್ನು ರಚಿಸಲು ಬಳಸುವ ಫೋನ್ ಸಂಖ್ಯೆ ಮಾತ್ರ ತಿಳಿದಿರುತ್ತದೆ. ಪ್ರೊಫೈಲ್ ಹೆಸರು ಮತ್ತು ಚಿತ್ರದಂತಹ ಖಾತೆಗೆ ಸೇರಿಸಲಾದ ಇತರ ಮಾಹಿತಿಯು ಸಹ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿದೆ ಎಂದು ಸಿಗ್ನಲ್ ಹೇಳುತ್ತದೆ.

ಸಿಗ್ನಲ್ ನಿಮ್ಮ ಸಂದೇಶಗಳನ್ನು ಅಥವಾ ನಿಮ್ಮ ಕರೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅದರ ಸರ್ವರ್‌ಗಳಲ್ಲಿ ಸಂಗ್ರಹಿಸುವುದಿಲ್ಲ. ಆದರೆ ಇದು “ತಾತ್ಕಾಲಿಕವಾಗಿ ಆಫ್‌ಲೈನ್‌ನಲ್ಲಿರುವ ಸಾಧನಗಳಿಗೆ ತಲುಪಿಸಲು ಅದರ ಸರ್ವರ್‌ಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಮಾತ್ರ ಇಟ್ಟಿರುತ್ತದೆ.” ಉದಾಹರಣೆ ಎಂದರೆ ಫೋನ್‌ನ ಬ್ಯಾಟರಿ ಖಾಲಿಯಾಗಿದ್ದರೆ ಅಥವಾ ಇಂಟರ್ನೆಟ್ ಸಂಪರ್ಕವನ್ನು ಕಳೆದುಕೊಂಡಿದ್ದರೆ ಬಳಕೆದಾರರ ಸಂದೇಶ ಇತಿಹಾಸವನ್ನು ಅವರ ಸ್ವಂತ ಸಾಧನದಲ್ಲಿ ಸಂಗ್ರಹಿಸಲಾಗಿದೆ ಎಂದು ಸಿಗ್ನಲ್ ಹೇಳುತ್ತದೆ.

ಕೆಲವು ಸೇವೆಗಳನ್ನು ಒದಗಿಸಲು ಮೂರನೇ ವ್ಯಕ್ತಿಗಳೊಂದಿಗೆ ಕೆಲವು ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಸಿಗ್ನಲ್ ಹೇಳುತ್ತದೆ. ಉದಾಹರಣೆಗೆ, ಪರಿಶೀಲನಾ ಕೋಡ್ ಅನ್ನು ಒದಗಿಸುವ ಮೂರನೇ ವ್ಯಕ್ತಿಯ ಸೇವೆಗಳು.

ಈ ಅಪ್ಲಿಕೇಶನ್ “ನಿಮ್ಮ ವೈಯಕ್ತಿಕ ಡೇಟಾ ಅಥವಾ ವಿಷಯವನ್ನು ಯಾವುದೇ ರೀತಿಯಲ್ಲಿ ಮಾನಿಟರ್ ಮಾಡುವುದಿಲ್ಲ, ಮಾರಾಟ ಮಾಡುವುದಿಲ್ಲ, ಬಾಡಿಗೆಗೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸುತ್ತದೆ.

ಸಿಗ್ನಲ್‌ನಲ್ಲಿ ಬುಸಿನೆಸ್ ಖಾತೆ ರಚಿಸಬಹುದೇ?

ಸಿಗ್ನಲ್ ಜನರ ನಡುವಿನ ನೇರ ಸಂಭಾಷಣೆಗೆ ಮೀಸಲಾತಿ ಆಪ್. ಇದು ಸಣ್ಣ, ಮಧ್ಯಮ, ದೊಡ್ಡ ಉದ್ಯಮಗಳಿಗೆ ಸೂಕ್ತವಾದುದ್ದಲ್ಲ. ಆದರೂ ನೀವು ಬುಸಿನೆಸ್ ಖಾತೆ ರಚಿಸಬಹುದು. ಜೊತೆಗೆ ಅದನ್ನು ರದ್ದುಪಡಿಸುವ ಅವಕಾಶ ನಿಮಗೆ ಇದ್ದೇ ಇರುತ್ತದೆ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌


ಇದನ್ನೂ ಓದಿ:ನಿಮ್ಮ ವೈಯಕ್ತಿಕ ಡೇಟಾ ಬಳಸಲು ಅನುಮತಿಸಿ, ಇಲ್ಲವೆ ಹೊರನಡೆಯಿರಿ: ವಾಟ್ಸಾಪ್ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...