Homeಅಂತರಾಷ್ಟ್ರೀಯಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್'

ಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್’

- Advertisement -
- Advertisement -

ಆತನ ಹೆಸರು ಸಲ್ಮಾನ್ ಖಾನ್. ಇಲ್ಲ, ಈತ ಬಾಲಿವುಡ್ ನಟನಲ್ಲ. ಬದಲಾಗಿ ಖ್ಯಾತ ಉದ್ಯಮಿ ಬಿಲ್ ಗೇಟ್ಸ್‌ಗೆ ಮಾತ್ರವಲ್ಲದೆ ಆತನ ಮಕ್ಕಳಿಗೂ ತನ್ನ “ಶಾಲೆ”ಯಲ್ಲಿ ಪ್ರತಿನಿತ್ಯ ‘ಪಾಠ’ ಹೇಳಿಕೊಡುತ್ತಿರುವ ‘ಶಿಕ್ಷಕ’!

ಅದಕ್ಕಿಂತ ಮುಖ್ಯವಾಗಿ ಈ ಸಲ್ಮಾನ್ ಖಾನ್ ನಡೆಸುತ್ತಿರುವ ‘ಶಾಲೆ’ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಿಗೆಲ್ಲ ಪ್ರತಿನಿತ್ಯ ನೂರಾರು ಪಾಠಗಳನ್ನು ಬೋಧಿಸಲಾಗುತ್ತಿದೆ. ಆದರೂ ಈ ಶಾಲೆಯಲ್ಲಿ ಒಬ್ಬನೇ ಒಬ್ಬ ಅಧ್ಯಾಪಕನಿದ್ದಾನೆ. ಆತನೇ ಈ ಸಲ್ಮಾನ್ ಖಾನ್!

ಅಚ್ಚರಿ ಎನಿಸುತ್ತಿದೆಯೆ? ಬನ್ನಿ ಸಲ್ಮಾನ್ ಖಾನ್ ನಡೆಸುತ್ತಿರುವ ‘ವರ್‍ಚ್ಯು ಅಲ್’ ಶಾಲೆಗೆ. ಈ ಸಲ್ಮಾನ್ ಖಾನ್‍ನ ತಾಯಿ ಭಾರತದ ಕೊಲ್ಕತ್ತಾದವರು. ತಂದೆ ಬಾಂಗ್ಲಾದೇಶದವರು. ಅಮೆರಿಕದಲ್ಲಿ ಜನಿಸಿದ ಸಲ್ಮಾನ್ ಖಾನ್ ಅಲ್ಲೇ ವಿದ್ಯಾಭ್ಯಾಸ ಮಾಡಿ ದೊಡ್ಡ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದು ಅಂತಿಂತಹ ಕೆಲಸವಲ್ಲ. ಜನರ ಅತಿ ಆಸೆಯನ್ನೇ ಬಂಡವಾಳ ಮಾಡಿಕೊಂಡು ಅವರು ವಿವಿಧ ಕಂಪನಿಗಳ ಶೇರುಗಳಲ್ಲಿ ಹಣ ಹೂಡುವಂತೆ ಮಾಡುವ ಕೆಲಸ. ಅದಕ್ಕೆಂದು ಖಾನ್‍ಗೆ ಕೈತುಂಬ ಸಂಬಳ ಬರುತ್ತಿತ್ತು.

ಆರು ವರ್ಷಗಳ ಹಿಂದೆ ಒಮ್ಮೆ ಏನಾಯಿತೆಂದರೆ, ಖಾನ್‍ನ ಚಿಕ್ಕಮ್ಮನ ಮಗಳಾದ ನಾಡಿಯಾ ಶಾಲೆಯಲ್ಲಿ ಗಣಿತದಲ್ಲಿ ಬೇರೆ ವಿದ್ಯಾರ್ಥಿಗಳಿಗಿಂತ ಹಿಂದೆ ಬಿದ್ದಿದ್ದಾಳೆ ಎಂದು ಖಾನ್‍ಗೆ ಗೊತ್ತಾಯಿತು. ಆದರೆ ಆಗ ಖಾನ್ ಅಮೆರಿಕದ ಪೂರ್ವ ಕಡಲತೀರದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರೆ, ನಾಡಿಯಾ ಪಶ್ಚಿಮ ಕಡಲತೀರದಲ್ಲಿರುವ ಮತ್ತೊಂದು ನಗರದಲ್ಲಿ ವಾಸಿಸುತ್ತಿದ್ದಳು. ಆದರೂ ಆಕೆಗೆ ಪ್ರತಿದಿನ ಫೋನ್ ಮೂಲಕವೇ ಗಣಿತದಲ್ಲಿ ಪಾಠ ಹೇಳಿಕೊಡಲು ಖಾನ್ ಪ್ರಾರಂಭಿಸಿದ. ಆದರೆ ಸ್ವಲ್ಪ ದಿನಗಳಲ್ಲೇ ಇದು ಕಷ್ಟವಾಗಲಾರಂಭಿಸಿತು. ಎರಡೂ ನಗರಗಳ ನಡುವೆ ನಾಲ್ಕು ಗಂಟೆಗಳ ವ್ಯತ್ಯಾಸ ಇತ್ತಲ್ಲದೆ, ಈತನ ಕೆಲಸದ ಸಮಯ-ನಾಡಿಯಾಳ ಶಾಲೆಯ ಸಮಯ ಇತ್ಯಾದಿಗಳು ನಿತ್ಯದ ಪಾಠಕ್ಕೆ ಅಡ್ಡಬರಲಾರಂಭಿಸಿದವು.

ಆಗ ಖಾನ್‍ಗೆ ಹೊಳೆದದ್ದೇ ಈ ವೀಡಿಯೋ ಪಾಠಕ್ರಮ. ನಾಡಿಯಾ ಎದುರಿಸುತ್ತಿದ್ದ ಗಣಿತದ ಸಮಸ್ಯೆಗೆ ಹೇಗೆ ಉತ್ತರವನ್ನು ಕಂಡುಹಿಡಿಯಬೇಕೆಂಬುದನ್ನು ಕುರಿತು ಖಾನ್ ಪುಟ್ಟ ವೀಡಿಯೋಗಳನ್ನು ತಯಾರಿಸಿ ಅವುಗಳನ್ನು ‘ಯೂಟ್ಯೂಬ್’ ಎಂಬ ವೆಬ್‍ಸೈಟಿನಲ್ಲಿ ಹಾಕಲಾರಂಭಿಸಿದ. ಅದರಿಂದಾಗಿ ನಾಡಿಯಾ ಯಾವಾಗ ಬೇಕಾದರೂ ಅವುಗಳನ್ನು ನೋಡಬಹುದಿತ್ತು ಮತ್ತು ಅಗತ್ಯವಿದ್ದರೆ ಹಳೆ ಪಾಠಗಳಿಗೂ ಮತ್ತೆ ಭೇಟಿ ನೀಡಬಹುದಿತ್ತು. ಇದರಿಂದಾಗಿ ನಾಡಿಯಾಳಿಗೆ ಎಷ್ಟು ಉಪಯೋಗವಾಯಿತೆಂದರೆ ಆಕೆ ಗಣಿತದಲ್ಲಿ ಉತ್ತಮ ಅಂಕಗಳನ್ನು ಪಡೆದಳು.

ಇದನ್ನೂ ಓದಿ: ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

ನಾಡಿಯಾಳ ನಂತರ ಆಕೆಯ ಸಹೋದರರಾದ ಆರ್ಮನ್ ಮತ್ತು ಆಲಿಗೂ ಖಾನ್ ಇದೇರೀತಿ ಪಾಠ ಮಾಡಲಾರಂಭಿಸಿದ. ಆದರೆ ಅಷ್ಟು ಹೊತ್ತಿಗೆ ಖಾನ್‍ನ ಇತರೆ ಸಂಬಂಧಿಕರ ಮಕ್ಕಳು ಮತ್ತು ಆ ಮಕ್ಕಳ ಸ್ನೇಹಿತರೂ ಈ ಪಾಠಗಳನ್ನು ನೋಡಿ ಕಲಿಯಲಾರಂಭಿಸಿದ್ದರು. ಇದಕ್ಕೆಲ್ಲ ಖಾನ್ ಬಳಸಿದ್ದು ತನ್ನ ಕಂಪ್ಯೂಟರ್ ಮತ್ತು ಅದಕ್ಕೆ ಅಳವಡಿಸಿದ್ದ 200 ಡಾಲರ್‌ಗಳ ಕ್ಯಾಮೆರಾ, 80 ಡಾಲರ್‌ಗಳ ಪ್ಯಾಡ್ ಮತ್ತು 20 ಡಾಲರ್‌ಗಳ ವೀಡಿಯೋ ರೆಕಾರ್ಡರ್ ಹಾಗೂ ಪುಕ್ಕಟೆ ಸಿಗುವ ಹಲವು ಸಾಫ್ಟ್‍ವೇರ್‌ಗಳನ್ನು.

ಇದು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆ ಖಾನ್ ತನ್ನದೇ ಒಂದು ವೆಬ್‍ಸೈಟ್ ಶುರು ಮಾಡಿ ಅವುಗಳನ್ನೆಲ್ಲ ಅದರಲ್ಲಿ ಸೇರಿಸಲಾರಂಭಿಸಿದ. ಕಾಲಕ್ರಮೇಣ ಇದು ಎಷ್ಟು ದೊಡ್ಡದಾಯಿತು ಎಂದರೆ ಇದರಲ್ಲಿ ಪಾಠಗಳನ್ನು ಹೇಳಿಕೊಡುವುದಕ್ಕೆ ಆತನಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಾಲದಾಯಿತು. ಆಗ ಖಾನ್ ಯೋಚಿಸಿದ: “ನನಗೆ ಒಬ್ಬಳು ಸುಂದರ ಹೆಂಡತಿ ಇದ್ದಾಳೆ, ಇಬ್ಬರು ಮುದ್ದಿನ ಮಕ್ಕಳಿದ್ದಾರೆ, ವಾಸಿಸಲು ಒಂದು ಮನೆ ಇದೆ, ಎರಡು ಕಾರ್‌ಗಳಿವೆ, ಸಾಕಷ್ಟು ಉಳಿತಾಯವಿದೆ. ಇದಕ್ಕಿಂತ ಒಬ್ಬ ಮನುಷ್ಯನಿಗೆ ಜೀವನದಲ್ಲಿ ಇನ್ನೇನು ಬೇಕು? ನನಗೆ 80 ವರ್ಷ ವಯಸ್ಸಾದಾಗ ನನ್ನ ಹತ್ತಿರ ಎಷ್ಟು ದುಡ್ಡಿದೆ ಎಂಬುದಕ್ಕಿಂತ ನಾನು ಸಮಾಜಕ್ಕಾಗಿ ಏನನ್ನು ಮಾಡಿದೆ ಎಂಬುದು ಮುಖ್ಯವಾಗುತ್ತದೆ. ಈ ನನ್ನ ಪಾಠಗಳಿಂದ ಜನರಿಗೆ ಉಪಯೋಗವಾದರೆ ಅದಕ್ಕಿಂತ ಉತ್ತಮವಾದದ್ದೇನಿದೆ? ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷ ಎಲ್ಲದಕ್ಕಿಂತ ಮುಖ್ಯ” ಎಂದು ಖಾನ್ ನಿರ್ಧರಿಸಿದ.

ಆಗ ಖಾನ್ ವರ್ಷಕ್ಕೆ ಮಿಲಿಯನ್ ಡಾಲರ್ ಸಂಬಳ ನೀಡುತ್ತಿದ್ದ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ‘ಖಾನ್ ಅಕಾಡೆಮಿ’ಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ. ಈತ ತನ್ನ ಪಾಠಗಳಿಗೆ ಶುಲ್ಕವನ್ನು ವಿಧಿಸದೆ ಬಿಟ್ಟಿಯಾಗಿ ಹೇಳಿಕೊಡುತ್ತಿದ್ದರಿಂದ ನಿಧಾನವಾಗಿ ಆತನ ಉಳಿತಾಯದ ಹಣವೆಲ್ಲ ಕರಗಲಾರಂಭಿಸಿತು. ಆದರೂ ಈತನ ಅಕಾಡೆಮಿಯ ಜನಪ್ರಿಯತೆಯನ್ನು ಕಂಡು ಅದೆಷ್ಟೋ ಉದ್ಯಮಿಗಳು ಅದನ್ನು ಆತನಿಂದ ಖರೀದಿಸಲು ಮುಂದಾದರು. ಆದರೆ ಅದನ್ನು ಕೊಂಡವರು ತನ್ನಂತೆ ಪುಕ್ಕಟೆಯಾಗಿ ಪಾಠ ಹೇಳಿಕೊಡುವುದಿಲ್ಲ ಎಂದು ಗೊತ್ತಿದ್ದರಿಂದ ಖಾನ್ ಅದನ್ನು ಮಾರಲು ನಿರಾಕರಿಸಿದ್ದ.

ಅದೃಷ್ಟವಶಾತ್ ಅದೇಹೊತ್ತಿಗೆ ಈ ಖಾನ್ ಅಕಾಡೆಮಿ ಬಗ್ಗೆ ಬಿಲ್ ಗೇಟ್ಸ್‌ನ ಮಕ್ಕಳಿಗೂ ಗೊತ್ತಾಗಿ ಅವರೂ ಇಲ್ಲಿದ್ದ ಮಾಹಿತಿಯನ್ನು ಆಧರಿಸಿ ಕಲಿಯಲಾರಂಭಿಸಿದ್ದರು. ಒಮ್ಮೆ ಇದರ ಬಗ್ಗೆ ತಮ್ಮ ತಂದೆಗೂ ಹೇಳಿದರು. ಆತ ಕೂಡ ಇದನ್ನು ನೋಡಿ ಮೆಚ್ಚಿಕೊಂಡ. ಎಷ್ಟರಮಟ್ಟಿಗೆ ಅಂದರೆ ಖಾನ್ ಅಕಾಡೆಮಿಗೆ ಬಿಲ್ ಗೇಟ್ಸ್ ಫೌಂಡೇಷನ್‍ನಿಂದ ದೊಡ್ಡಮೊತ್ತದ ದೇಣಿಗೆಯನ್ನು ನೀಡಿದೆ. ಬಿಲ್ ಗೇಟ್ಸ್ ಅಲ್ಲದೆ ಗೂಗಲ್ ಸಂಸ್ಥೆಯವರೂ ಖಾನ್ ಅಕಾಡೆಮಿಯ ಸಾಧನೆಯನ್ನು ಮೆಚ್ಚಿ ಅದಕ್ಕೆ ದೊಡ್ಡ ಮೊತ್ತದ ಪ್ರಶಸ್ತಿಯನ್ನು ನೀಡಿದರಲ್ಲದೆ ಅವರೂ ದೇಣಿಗೆಯನ್ನು ನೀಡಿದರು. ಇವತ್ತು ಅದಷ್ಟೋ ಅಭಿಮಾನಿಗಳು ತಮ್ಮ ಶಕ್ತಾನುಸಾರ ಖಾನ್‍ನ ಈ ವಿದ್ಯಾಸಂಸ್ಥೆಗೆ ಹಣ ಸಹಾಯವನ್ನು ಮಾಡುತ್ತಿದ್ದಾರೆ.

ಇದರ ಬಗ್ಗೆ ಇಷ್ಟೆಲ್ಲ ಹೇಳಿದ್ದಕ್ಕೆ ಕಾರಣವಿದೆ. ನಮ್ಮ ಪತ್ರಿಕೆಯ ಓದುಗರಲ್ಲಿ ಬಹಳಷ್ಟು ಜನ ಶಾಲಾ ಅಧ್ಯಾಪಕರಿದ್ದಾರೆ. ಅವರೆಲ್ಲರೂ ಸಲ್ಮಾನ್ ಖಾನ್ ಅವರ khanacademy.org ಎಂಬ ವೆಬ್‍ಸೈಟಿಗೆ ಭೇಟಿ ನೀಡಿದರೆ ನಮ್ಮ ರಾಜ್ಯದ ಶಾಲಾಮಕ್ಕಳಿಗೆ ಇವತ್ತು ಕಷ್ಟದ ಸಬ್ಜೆಕ್ಟ್ ಆಗಿರುವ ಗಣಿತವನ್ನು ಇನ್ನೂ ಚೆನ್ನಾಗಿ ಹೇಳಿಕೊಟ್ಟು ಅವರೆಲ್ಲ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚು ಯಶಸ್ವಿಯಾಗುವಂತೆ ಮಾಡಬಹುದಾಗಿದೆ. ಓರ್ವ ಗುರುವಿನ ಕರ್ತವ್ಯ ಅದೇ ಅಲ್ಲವೇ?

 ಗೌರಿ ಲಂಕೇಶ್
13 ಜುಲೈ, 2011 (ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...