Homeಕರೋನಾ ತಲ್ಲಣ’ಮಿಷನ್ ಬಿಗಿನ್ ಎಗೈನ್’; ಮಹಾರಾಷ್ಟ್ರದಲ್ಲಿ ಜುಲೈ 31 ರವರೆಗೆ ಲಾಕ್‌‌ಡೌನ್‌ ವಿಸ್ತರಣೆ

’ಮಿಷನ್ ಬಿಗಿನ್ ಎಗೈನ್’; ಮಹಾರಾಷ್ಟ್ರದಲ್ಲಿ ಜುಲೈ 31 ರವರೆಗೆ ಲಾಕ್‌‌ಡೌನ್‌ ವಿಸ್ತರಣೆ

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ವೈರಸ್ ಸಂಖ್ಯೆಯಲ್ಲಿ ಸ್ಥಿರ ಬೆಳವಣಿಗೆಯ ಮಧ್ಯೆ ಮಹಾರಾಷ್ಟ್ರ ಸರ್ಕಾರ ಜುಲೈ 31 ರವರೆಗೆ ಕರೋನವೈರಸ್ ಲಾಕ್‌ಡೌನ್ ವಿಸ್ತರಿಸಿದೆ. ’ಮಿಷನ್ ಬಿಗಿನ್ ಎಗೈನ್’ ಎಂದು ಕರೆಯುವ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಸರ್ಕಾರ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ನೆರೆಹೊರೆಯೊಳಗೆ ಅನಿವಾರ್ಯವಲ್ಲದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ಹೇಳಿದೆ.

“ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಮತ್ತು ವೈಯಕ್ತಿಕ ನೈರ್ಮಲ್ಯದ ಎಲ್ಲಾ ಅಗತ್ಯ ಕಡ್ಡಾಯ ಮುನ್ನೆಚ್ಚರಿಕೆಗಳೊಂದಿಗೆ ಶಾಪಿಂಗ್ ಸೇರಿದಂತೆ ಅನಿವಾರ್ಯವಲ್ಲದ ಚಟುವಟಿಕೆಗಳ ಉದ್ದೇಶಗಳಿಗಾಗಿ ಜನರ ಓಡಾಟವನ್ನು ಮುಂಬೈ ಸುತ್ತಲಿನ ಪ್ರದೇಶದ ಮಿತಿಯಲ್ಲಿ ನಿರ್ಬಂಧಿಸಲಾಗುವುದು” ಎಂದು ಹೇಳಲಾಗಿದೆ.

ಕಚೇರಿಗಳು ಮತ್ತು ತುರ್ತು ಪರಿಸ್ಥಿತಿಗಳಿಗೆ ಹಾಜರಾಗುವವರಿಗೆ ಮಾತ್ರ ಅನಿಯಂತ್ರಿತ ಚಲನೆಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

“ಕೆಲಸದ ಕಾರಣ ಮತ್ತು ವೈದ್ಯಕೀಯ ಕಾರಣವನ್ನು ಒಳಗೊಂಡಂತೆ ಮಾನವೀಯ ಅಗತ್ಯಗಳಿಗೆ ಹಾಜರಾಗಲು ಮಾತ್ರ ಅನಿಯಂತ್ರಿತ ಚಲನೆಯನ್ನು ಅನುಮತಿಸಲಾಗುವುದು ಎಂದು ನಿರ್ದೇಶಿಸಲಾಗಿದೆ”.

“ಎಲ್ಲಾ ಸರ್ಕಾರಿ ಕಚೇರಿಗಳು (ತುರ್ತು, ಆರೋಗ್ಯ ಮತ್ತು ವೈದ್ಯಕೀಯ, ಖಜಾನೆಗಳು, ವಿಪತ್ತು ನಿರ್ವಹಣೆ, ಪೊಲೀಸ್, ಎನ್ಐಸಿ, ಆಹಾರ ಮತ್ತು ನಾಗರಿಕ ಸರಬರಾಜು, ಎಫ್‌ಸಿಐ, ಎನ್ವೈಕೆ, ಮುನ್ಸಿಪಲ್ ಸರ್ವೀಸಸ್ ಹೊರತುಪಡಿಸಿ) 15% ಅಥವಾ 15 ವ್ಯಕ್ತಿಗಳೊಂದಿಗೆ ಕಾರ್ಯನಿರ್ವಹಿಸಬೇಕು” ಎಂದು ಅದು ಹೇಳಿದೆ .

ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಎಲ್ಲಾ ಖಾಸಗಿ ಕಚೇರಿಗಳು 10% ಶಕ್ತಿ ಅಥವಾ 10 ಜನರೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ.

ಕೊರೊನಾ ನಿಭಾಯಿಸುವಲ್ಲಿ ರಾಜ್ಯ ಪ್ರಗತಿಯಾಗುತ್ತಿರುವುರ ಹೊರತಾಗಿಯೂ, ಬಿಕ್ಕಟ್ಟು ಇನ್ನೂ ಮುಗಿದಿಲ್ಲ ಮತ್ತು ನಿಯಮಗಳನ್ನು ಅನುಸರಿಸಿ ಹಾಗೂ ಲಾಕ್ಡೌನ್ ಅನ್ನು ಮತ್ತೆ ವಿಧಿಸದಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ವಿನಂತಿ ಮಾಡಿದ್ದರು.


ಓದಿ: ವರವರ ರಾವ್‌ರನ್ನು ಆಸ್ಪತ್ರೆಗೆ ಸೇರಿಸಿ: 14 ಸಂಸದರಿಂದ ಮಹಾರಾಷ್ಟ್ರ ಸಿಎಂಗೆ ಪತ್ರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...