Homeಮುಖಪುಟಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

- Advertisement -
- Advertisement -

ಜನವರಿ 30, ಮಹಾತ್ಮರ ದೇಹಾಂತ್ಯದ ಪುಣ್ಯಸ್ಮರಣೆಯ ದಿನ. ಅಂದು ಭಾರತ ಸಂವಿಧಾನ ಮೊತ್ತ ಮೊದಲ ವಾಕ್ಯ ‘ಭಾರತದ ಜನತೆಯಾದ ನಾವು’, ‘WE THE PEOPLE OF INDIA’ ಎಂಬುದನ್ನೇ ಧ್ಯೇಯವಾಕ್ಯವಾಗಿಟ್ಟುಕೊಂಡು, ಉಡುಪಿ ಜನಸಾಮಾನ್ಯರು ಒಂದು ಸಾರ್ವಜನಿಕ ಮೆರವಣಿಗೆ ಹಾಗೂ ಸಭೆಗಳನ್ನು ಸಂಘಟಿಸುವ ಮೂಲಕ ಹಂತಕನ ಗುಂಡೇಟಿಗೆ ಬಲಿಯಾದ ಮಹಾತ್ಮರು ಮತ್ತು ಭಾರತ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರಿಗೆ ತಮ್ಮ ಗೌರವ ಸಲ್ಲಿಸಬೇಕು ಎಂದು ತೀರ್ಮಾನಿಸಲಾಗಿದೆ.

ಗಾಂಧೀಜಿಯವರಿಗೆ ಗೌರವ ಸಲ್ಲಿಸುವುದು ಹೇಗೆ? ಬಾಬಾಸಾಹೇಬರನ್ನು ಕೃತಜ್ಞತಾಪೂರ್ವಕವಾಗಿ ನೆನೆಯುವುದು ಎಂದರೆ ಏನು? ಬಾಬಾ ಸಾಹೇಬರ ಅವಿರತ ಶ್ರಮದ ಫಲವಾಗಿ ರಚನೆಯಾದ ಭಾರತ ಸಂವಿಧಾನದ ಮೊದಲ ಪುಟದ ಮೇಲೆಯೇ ಚಲನಶೀಲತೆ ಮತ್ತು ಅಹಿಂಸೆಗಳ ಸಂಕೇತವಾದ ಅಶೋಕಚಕ್ರ ನಮ್ಮ ಗಮನ ಸೆಳೆಯುತ್ತದೆ. ಅಶೋಕಚಕ್ರದಡಿ “ಸತ್ಯಮೇವಜಯತೆ” ಎಂಬ ವಾಕ್ಯವಿದೆ. ಗಾಂಧೀಜಿ ಈ ಶಬ್ದವನ್ನು ಬೀಜಮಂತ್ರವಾಗಿ ಇರಿಸಿಕೊಂಡು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ತನ್ನ ಸತ್ಯಾಗ್ರಹ ಹೋರಾಟವನ್ನು ರೂಪಿಸಿದ್ದರು. ಗೆದ್ದವರು ಬರೆದದ್ದು ಮಾತ್ರ ಚರಿತ್ರೆ ಎಂದು ಗೆದ್ದವರು ಹಾಗೂ ಸೋತವರು. ಎಲ್ಲರೂ ನಂಬಿದ ಕಾಲಘಟ್ಟದಲ್ಲಿ ಗಾಂಧೀಜಿ ಇತಿಹಾಸ ಚಕ್ರವನ್ನೇ ಮುನ್ನಡೆಸಿದರು. ಸಾವಿರಾರು ವರ್ಷ ಭವ್ಯ ಸಾಂಸ್ಕೃತಿಕ ಚರಿತ್ರೆ ಹೊಂದಿರುವ ನಮ್ಮೀ ಭಾರತದ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ದೇಶದ ಎಲ್ಲ ಪ್ರಜೆಗಳೂ ಜಾತಿ, ಮತ, ಧರ್ಮಗಳ ಭೇದವನ್ನು ಲೆಕ್ಕಿಸದೆ ಹೆಣ್ಣು, ಗಂಡು ಎಂಬ ಲಿಂಗ ಅಸಮಾನತೆಯನ್ನು ಸಹ ತೊಡೆದು ಹಾಕಿ, ಭಾರತ ಒಂದು ಸ್ವತಂತ್ರ‍ ಸಮಾನ ಪ್ರಜಾಸತ್ತಾತ್ಮಕ ದೇಶ ಎಂದು ಬಾಬಾ ಸಾಹೇಬರು ಕಾರಣಪುರುಷರಾಗಿದ್ದ ಭಾರತದ ಸಂವಿಧಾನ ಪ್ರತಿಪಾದಿಸಿತು, ಇತಿಹಾಸ ಚಕ್ರ ಮತ್ತೆ ಮುನ್ನಡೆಯಿತು.

ಹಾಲೀ ಕೇಂದ್ರ ಸರಕಾರ ಇದೀಗ ಜಾರಿಗೊಳಿಸಲು ಹೊರಟಿರುವ ‘ಪೌರತ್ವ (ತಿದ್ದುಪಡಿ) ಕಾಯ್ದೆ’ ಭಾರತ ಸಂವಿಧಾನದ ಮೂಲಭೂತ ಆಶಯಗಳಿಗೆ ದ್ರೋಹ ಬಗೆದಿದೆ. ಈ ಕಾಯ್ದೆ ಪ್ರಕಾರ ನಮ್ಮ ನೆರೆಯ ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ಪ್ರಜೆಗಳಿಗೆ ಮಾತ್ರ ಭಾರತದ ಪೌರರಾಗುವ ಅವಕಾಶವಿದೆ. ಹಾಗಿದ್ದರೆ, ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಭಾರತದಲ್ಲಿ ನೆಲೆಸಿರುವ ಮ್ಯಾನ್ಮಾರ್‍ನ ರೋಹಿಂಗ್ಯಮುಸ್ಲಿಮರ ಪಾಡೇನು? ಶ್ರೀಲಂಕಾದ ಅಂತರ್ಯುದ್ಧದಿಂದಾಗಿ ನಿರಾಶ್ರಿತರಾದ ತಮಿಳು ಮೂಲದ ಮುಸ್ಲಿಮ್ ಸಮುದಾಯಕ್ಕೆ ಯಾರು ಉತ್ತರದಾಯಿಗಳು?

ಸಾರಾಸಗಟಾಗಿ ಮುಸ್ಲಿಮ್ ಸಮುದಾಯಕ್ಕೆ ಒಂದು ಮನೋಧರ್ಮ ಒಂದು ಸಂಸ್ಕೃತಿ, ಒಂದು ಭಾಷೆಗಳನ್ನು ಆರೋಪಿಸುವ ಈ ಮನಃಸ್ಥಿತಿ, ಜಾಗತಿಕ ಮುಸ್ಲಿಮ್ ಸಮುದಾಯದಲ್ಲಿ ಪ್ರವಾದಿ ಅಲ್ಲಾಹುವಿನಲ್ಲಿ ನಂಬಿಕೆ ಹೊರತಾಗಿ ಬೇರೆ ಯಾವ ಬಗೆಯ ಸಮಾನತೆ ಇದೆ ಎಂಬ ಕುರಿತು ಯೋಚಿಸಬೇಕು. ದೇಶ, ಪ್ರಾಂತ್ಯ, ಭಾಷೆ, ಸಂಸ್ಕತಿ, ಆಚಾರ, ವಿಚಾರ, ಆಹಾರ, ಉಡುಪು ತೊಡಪು ಬದುಕಿನ ಈ ಎಲ್ಲ ಮೂಲಭೂತ ವಿವರಗಳಲ್ಲೂ ದೇಶದಿಂದ ದೇಶಕ್ಕೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಮುಸ್ಲಿಮ್ ಸಮುದಾಯದ ಒಳಗೇನೆ ಇರುವ ಅಪಾರ ವ್ಯತ್ಯಾಸ ಕಣ್ಣಿದ್ದವನಿಗೆ ಕಾಣಿಸುತ್ತದೆ. ನಮ್ಮ ರಾಜ್ಯದ ಮುಸ್ಲಿಮ್ ಧರ್ಮೀಯರಲ್ಲೇ ಎಷ್ಟು ವೈವಿಧ್ಯತೆಯಿದೆ! ಗುಲ್ಬರ್ಗ, ರಾಯಚೂರು, ಬಿಜಾಪುರಗಳಲ್ಲಿನ ಮುಸ್ಲಿಮರು ಮತ್ತು ಉಡುಪಿ ಮಂಗಳೂರುಗಳ ಮುಸ್ಲಿಮರ ನಡುವೆ ಎಷ್ಟು ವ್ಯತ್ಯಾಸಗಳಿವೆ!

ಕೇಂದ್ರ ಸರಕಾರ ತನ್ನ ಪೌರತ್ವ (ತಿದ್ದುಪಡಿ) ಕಾಯ್ದೆಯ ಮುಖಾಂತರ, ಮುಸ್ಲಿಮ್ ಸಮುದಾಯದ ಈ ವೈವಿಧ್ಯಮಯ ಸಂಸ್ಕೃತಿಯನ್ನೂ ಅಲ್ಲಗಳೆಯುತ್ತಿದೆ. ಒಂದು ಸಮುದಾಯದ ಸಂಸ್ಕೃತಿಯನ್ನು ಅಲ್ಲಗಳೆಯುವುದು ಎಂದರೆ ಆ ಸಮುದಾಯಕ್ಕೆ ಸೇರಿದ ಜನರ ಇರಸ್ತಿಕೆಯನ್ನೇ ಕೊನೆಗೊಳಿಸಿದಂತೆ. ಈ ಮಾತಿಗೆ ಒಂದು ಉದಾಹರಣೆ ಕೊಡುವುದಾದರೆ ದೇಶದ ಹಾಲೀ ಪ್ರಧಾನಿ ಗುಜರಾತ್‍ನ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2002 ರಲ್ಲಿ ಸಂಭವಿಸಿದ ಮುಸ್ಲಿಂ ನರಹತ್ಯೆ ಆ ಕುರಿತು ಅವರು ಈವರೆಗೂ ದೇಶದ ಪ್ರಜೆಗಳಲ್ಲಿ ಕ್ಷಮೆ ಕೋರಿಲ್ಲ. ಅವರಿಗೆ ಆ ಕರಾಳಕೃತ್ಯದ ಬಗ್ಗೆ ವ್ಯಥೆಯೂ ಇಲ್ಲ 2002 ಕ್ಕಿಂತ ಮೊದಲು 1992 ರಲ್ಲಿ ಹಾಲೀ ಪ್ರಧಾನಿಯವರು ಮಹಾನ್ ನೇತಾರರಾಗಿರುವ ಬಿ.ಜೆ.ಪಿ ಪಕ್ಕದ ಕಾಲಾಳುಗಳೇ ಉತ್ತರ ಪ್ರದೇಶದ ಫೈಜಾಬಾದ್ ನಗರದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ ಧ್ವಂಸ ಮಾಡಿದರು. ಅದೇದಿನ ಸಂಜೆ ಮುಂಬೈಯಲ್ಲಿ ಪ್ರಾರಂಭವಾದ ಭೀಕರ ಕೋಮುಹಿಂಸಾಚಾರ ತಿಂಗಳುಗಟ್ಟಲೆ ಮುಂದುವರಿದು ಹತ್ತಿರತ್ತಿರ 1000 ಜನ ಮುಸ್ಲಿಮರು ಅದರಲ್ಲಿ ಪ್ರಾಣ ಕಳೆದುಕೊಂಡರು. ಹಾಗಿರುತ್ತ ಬಿ.ಜೆ.ಪಿ ಮತ್ತು ದೇಶದ ಹಾಲೀ ಪ್ರಧಾನಿಯವರಂತಹ ಜನನಾಯಕರಿಂದ ಪೌರತ್ವ ತಿದ್ದುಪಡಿ ಕಾಯ್ದೆಗಿಂತ ಉತ್ತಮವಾದ ಏನನ್ನೂ ತಾನೇ ನಿರೀಕ್ಷಿಸಲು ಸಾಧ್ಯ? ಈ ಜನ ನಾಯಕರಿಗೆ ದೇಶದ ಮುಸ್ಲಿಮರು, ಪ್ರಜೆಗಳು ಹಾಗಿರಲಿ, ಕನಿಷ್ಠ ಮನುಷ್ಯರೂ ಅಲ್ಲ!

ಭಾರತ ಸಂವಿಧಾನದ ಪ್ರಾಥಮಿಕ ಪರಿಚಯವೂ ಇಲ್ಲದ ಈ ಬೇಜವಾಬ್ದಾರಿ ಜನಗಳ ಪಕ್ಷ ಬಿ.ಜೆ.ಪಿ, ಇಂದು ಮುಸ್ಲಿಮ್ ಸಮುದಾಯದ ತರುಣರ ಮೇಲೆ ಲವ್‍ಜೆಹಾದ್‍ನ ಹಸಿಹಸಿ ಸುಳ್ಳು ಆರೋಪ ಹೊರಿಸುತ್ತಿರುವುದು ಆ ಪಕ್ಷದ ಮುಸ್ಲಿಮ್ ದ್ವೇಷ ಮಾತ್ರವಲ್ಲ ಹಿಂದೂ ತರುಣಿಯರ ಬಗ್ಗೆ ಅವರಿಗೆ ಎಂತಹ ಕೀಳು ಅಭಿಪ್ರಾಯವಿದೆ ಎಂಬುದಕ್ಕೆ ಕೂಡ ಉದಾಹರಣೆಯಾಗಿದೆ. ಇದೇ ಬಿ.ಜೆ.ಪಿಯ ದ.ಕ ಜಿಲ್ಲೆಯ ಒಬ್ಬ ಪುಢಾರಿ ಕಲ್ಲಡ್ಕ ಪ್ರಭಾಕರ ಭಟ್ಟ, ಈಗ ಕನಕಪುರದ ಪ್ರಸ್ತಾಪಿತ ಯೇಸುಕ್ರಿಸ್ತನ ಪ್ರತಿಮೆ ಬಗ್ಗೆ ಬಾಯಿಗೆ ಬಂದದ್ದನ್ನೆಲ್ಲ ವದರುತ್ತಿದ್ದಾನೆ. ಆ ಪಕ್ಷ ಬರೇ ಬೇಜವಾಬ್ದಾರಿ ಜನಗಳ ಪಕ್ಷ ಮಾತ್ರವಲ್ಲ, ಮಹಾನೀಚರ ಪರ ಕೂಡ ಎಂಬ ಮಾತಿಗೆ ಈತ ನಡೆದಾಡುವ ಒಂದು ನಿದರ್ಶನವಾಗಿದ್ದಾನೆ. ಈತನಿಗೆ ಗಾಂಧೀಜಿ ಸದಾ ಹೇಳುತ್ತಿದ್ದ. ‘ಈಶ್ವರ ಅಲ್ಲಾ ತೇರೇನಾಮ್ ಸಬ್ ಕೋ ಸನ್ಮತಿ ದೇ ಭಗವಾನ್’ ಎಂಬ ಭಜನೆಯ ಸೊಲ್ಲನ್ನು ಯಾರಾದರೂ ನೆನಪಿಸಬೇಕು, ಆ ಮುಖಾಂತರವಾದ ಈತನಿಗೆ ‘ಸನ್ಮತಿ’ ದೊರೆಯಲಿ ಎಂದು ಪ್ರಾರ್ಥಿಸಬೇಕು. ಹಾಗೆಯೇ ಶಿಕ್ಷಣ ಸಂಸ್ಥೆಯೊಂದರ ಮಾಲಿಕನಾಗಿರುವ ಈ ಮೂರ್ಖನಿಗೆ ಗಾಂಧೀಜಿಯವರಿಗೆ ಬೈಬಲ್‍ನ ‘ಬೆಟ್ಟದ ಮೇಲಣ ಬೋಧನೆ’- SERMON ON THE MOUNT ಕೂಡ ತುಂಬ ಪ್ರಿಯವಾಗಿತ್ತು ಎಂಬುದನ್ನು ತಿಳಿಹೇಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...