Homeಅಂಕಣಗಳುಇಂದು ರಿಯಾ ಇರುವ ಜಾಗದಲ್ಲಿ ನಾಳೆ ನಾವು-ನೀವೂ ಇರಬಹುದು.. ಮರೆಯಬೇಡಿ

ಇಂದು ರಿಯಾ ಇರುವ ಜಾಗದಲ್ಲಿ ನಾಳೆ ನಾವು-ನೀವೂ ಇರಬಹುದು.. ಮರೆಯಬೇಡಿ

ಇದು ಬರಿ ಟಿವಿ ಟಿಆರ್‌ಪಿಗೋಸ್ಕರ, ಅಥವಾ ಯಾವುದೋ ರಾಜ್ಯದ ಚುನಾವಣೆ ತಂತ್ರ ಅಂತ ತಿಳಕೋಂಡ್ರ ನಮ್ಮ ತಪ್ಪು. ಎಲ್ಲ ದೊಡ್ಡ ಸುದ್ದಿಗಳ ಹಿಂದೆ ಮಹತ್ವದ ಸುದ್ದಿ ಅಡಗಿರುತ್ತದೆ ಎನ್ನುವ ಪತ್ರಿಕೋದ್ಯಮ ಗುರು ಬೆನ್ ಬ್ರಾಡ ಲಿ ಅವರ ಮಾತನ್ನ ನಾವು ಮರೆಯಬಾರದು.

- Advertisement -
- Advertisement -

`ಚಾಯ ಪೆ ಚರ್ಚಾ’ಗಿಂತಲೂ ಪ್ರಮುಖವಾದದ್ದು ಯಾವುದಾದರೂ ಐತಿ ಅಂದ್ರ ನಂಬತೀರಿ ಏನು? ಐತಿರೆಪೋ  ಐತಿ. `ಕಲೆ ಜೀವನದ ಮ್ಯಾಲೆ ಪ್ರಭಾವ ಬೀರುತ್ತದೋ ಅಥವಾ ಜೀವನ ಕಲೆ ಮ್ಯಾಲೆ ಪ್ರಭಾವ ಬೀರುತ್ತದೋ’ ಅನ್ನುವುದು ಮುಖ್ಯವಾದದ್ದು ಹಾಗೂ ಶತಮಾನಗಳಷ್ಟು ಹಳೆಯದು.

ಇದು ಈಗ ಯಾಕ ನೆನಪು ಆತಪ್ಪಾ ಅನ್ನಲಿಕ್ಕೆ ಎರಡು ಕಾರಣ ಅದಾವು.

ಫ್ರಾನ್ಸ್ ಕಾಫ್ಕ, photo courtesy: Wikipedia

ಇವತ್ತಿಗೆ ಒಂದು ನೂರು ವರ್ಷ ಫ್ರಾನ್ಸ್ ಕಾಫ್ಕ ಅನ್ನೋ ಜರ್ಮನ್ ಲೇಖಕ `ದ ಟ್ರಯಲ್’ ಅನ್ನೋ ಕಾದಂಬರಿ ಬರದ. ಅದರಾಗ ಜೋಸೆಫ್ ಅನ್ನುವ ಒಬ್ಬ ಬ್ಯಾಂಕ್ ನೌಕರನನ್ನ ಯಾವುದೋ ಹೆಸರಿಲ್ಲದ ವಿಚಾರಣಾ ಸಂಸ್ಥೆಯ ಹೆಸರಿಲ್ಲದ ಪೊಲೀಸರು, ಬಂಧಿಸತಾರ. ಅವನ ಮ್ಯಾಲೆ ಯಾವ ಆರೋಪವನ್ನೂ ಹೊರೆಸದೆ, ಯಾವ ಕಾನೂನಿನ ಕೆಳಗ ಅವನಿಗೆ ಬಂಧನ ಮಾಡ್ತೇವಿ ಅಂತ ಹೇಳದೇ, ವಿಳಾಸ ಇಲ್ಲದ ನ್ಯಾಯಾಲಯದಾಗ ಒಂದು ವರ್ಷ ವಿಚಾರಣೆ ನಡೆಸತಾರ.

ಕೊನೆಗೆ ಒಂದು ದಿವಸ ಇನ್ನೊಂದು ಇಬ್ಬರು ಹೆಸರಿಲ್ಲದ ಪೊಲೀಸರು ಬಂದು ಅವನನ್ನು ಊರು ಹೊರಗಿನ ಕಲ್ಲು ಗಣಿಯೊಳಗ ಚಾಕು ಹಾಕಿ ಕೊಂದುಬಿಡ್ತಾರ. ನಾನು ನಾಯಿಯಂತೆ ಸತ್ತು ಹೋದೆ ಅಂತ ನಾಯಕ ಕೊನೆಯ ಮಾತು ಹೇಳಿ ಉಸಿರು ಬಿಡತಾನ.

ಇನ್ನ ಸುಮಾರು 75 ವರ್ಷದ ಹಿಂದೆ ಜಾರ್ಜ್ ಅರವೆಲ್ ಅವರು ಬರೆದ, `ಸಣ್ಣ ಕತೆಯಂತೆ ಕಾಣುವ ದಂತ ಕತೆ’ ಅಂತ ಕರೆಯಿಸಿಕೊಳ್ಳುವ ವಿಚಿತ್ರ ಹೆಸರಿನ ಕಾದಂಬರಿ `1984’. ಅದರಾಗ ಇರೋ ಮನುಷ್ಯ ಅತೀತ ಶಕ್ತಿ ಹೊಂದಿದ ಅಪ್ರತಿಮ ನಾಯಕ: ಹೆಸರು `ದೊಡ್ಡಣ್ಣ’ (ಬಿಗ್ ಬ್ರದರ್). ಈ ಮನುಷ್ಯನ ನೋಡಿದವರು ಯಾರೂ ಇಲ್ಲ. ಅವ ಅದಾನ ಇಲ್ಲೋ, ಅವ ಹೆಂಗ ಕಾಣತಾನು, ಹೆಂಗ ಮಾತು ಆಡತಾನು ಅನ್ನೋದು ಯಾರಿಗೂ ಗೊತ್ತಿಲ್ಲ.

ಆದರ ಅವನ ಶಕ್ತಿ ಅಪರಿಮಿತ. ಅವನು ಎಲ್ಲರ ಮ್ಯಾಲೆ, ಎಲ್ಲ ಕಾಲಕ್ಕೂ ಕಣ್ಣು ಇಟ್ಟಿರತಾನ. ಶತ್ರು ದೇಶಗಳ ಜೊತೆಗೆ ಯುದ್ಧ ಮಾಡೋ ಸೈನಿಕರಿಗಿಂತ ಜಾಸ್ತಿ ಅವನ ಹತ್ತರ ತನ್ನ ದೇಶದ ನಾಗರೀಕರ ಮ್ಯಾಲೆ ಕಣ್ಣು ಇಡಲಿಕ್ಕೆ ವಿಚಾರ ಪೊಲೀಸರು (ಥಿಂಕ್ ಪೋಲ್) ಅನ್ನೋ ವಿಚಕ್ಷಣ ದಳದವರು ಇದ್ದಾರ.

ಅವರು ಪ್ರತಿಯೊಬ್ಬರ ಮನಿಯೊಳಗ ಒಂದು ದ್ವಿಪಥ ಟಿವಿ ಸೆಟ್ ಕೂಡಿಸಿಬಿಟ್ಟರ. ನೀವು ಟಿವಿ ನೋಡುವಾಗ ಅದು ನಿಮ್ಮನ್ನ ನೋಡ್ತಾ ಇರತೇತಿ. ನಿಮ್ಮ ಮನಿಯೊಳಗ ಆಗೋ ಎಲ್ಲ ವಿಷಯನೂ ಅದು ಸಿ.ಸಿ.ಟಿವಿ ಗತೆ ರಿಕಾರ್ಡ್ ಮಾಡತೆತಿ.

ಥಿಂಕ್ ಪೋಲ್ ಸೈನಿಕರು, ನಾಗರೀಕರ ತಪ್ಪು ವಿಚಾರಗಳನ್ನ ಪತ್ತೆ ಹಚ್ಚತಾರ. ಅವರು ತಮ್ಮ ದೇಶದ ಜನರಿಗೆ ಅವರ ಮಾಡೋ ಕೆಲ್ಸಕ್ಕ ಅಲ್ಲ, ಅವರ ವಿಚಾರಗಳಿಗೆ ಶಿಕ್ಷೆ ಕೊಡತಾರ.

ಆ ದೇಶದಾಗ ನಾಗರಿಕ ಹಕ್ಕು ಅನ್ನುವವು ಯಾವುವೂ ಇಲ್ಲ. ದೊಡ್ಡಣ್ಣ ಹೇಳಿದ್ದ ಕಾನೂನು, ನ್ಯಾಯಾಧೀಶರು, ಪೋಲೀಸರು, ಅವನ ಮಾತು ಕೇಳೋರು.

ದಶಕಗಳ ಹಿಂದ ಬರೆದ ಈ ಕಾದಂಬರಿಗಳು ಈಗ ಮುನ್ನೆಲೆಗೆ ಬಂದಾವು.

ಸುಶಾಂತ ಸಿಂಗ್, photo courtesy: Businessworld

ಈಗ ಹಿಂದಿ ಚಲನಚಿತ್ರ ನಟ ಸುಶಾಂತ ಸಿಂಗ್ ಅವರ ಆತ್ಮಹತ್ಯೆ ಅನ್ನೋದು ಅವರ ಸಾವಿನ ಅನೇಕ ತಿಂಗಳ ನಂತರ ದೊಡ್ಡ ಸುದ್ದಿ ಆಗಿಬಿಟ್ಟದ. ಅವನ ಗೆಳತಿ ರಿಯಾ ಅನ್ನುವ ನಟಿ ಮಾಟಗಾತಿ, ಅಕಿ ಅವನಿಗೆ ನಶೆ ಪದಾರ್ಥದ ಚಟ ಹಚ್ಚಿಸಿದಳು ಅಂತ ಹೇಳಿ ಆರೋಪ ಮಾಡಿ ಆ ಹುಡುಗಿಯನ್ನ ವಿಲನ್ ಮಾಡಾಕ ಹತ್ತಿದಾರು. ಸರಕಾರದ ಪರವಾಗಿ ಇರೋ ಕಂಗನಾ ರಣಾವತ ಅನ್ನುವ ನಟಿ ಸರ್ವಾಂಗ ಶುದ್ಧ ಮಹಿಳೆ ಅಂತ ಬಿಂಬಿಸಿ ಟಿವಿಯವರು ಸುದ್ದಿ ಮಾಡ್ತಾ ಇದ್ದಾರ.

ಇದರಾಗ ಕಾಫ್ಕ ಹಾಗೂ ಅರವೆಲ್ ಅವರ ಇಬ್ಬರ ಕೃತಿಗಳ ಅಂಶಗಳೂ ಅದಾವು. ಇನ್ನೂ ಹೇಳಬೇಕ ಅಂದ್ರ ಇದರಾಗ ಮ್ಯಾಕಾರ್ಥಿವಾದದ ಛಾಯೆ ಐತಿ.

ಅಮೆರಿಕದ ರಾಜಕಾರಣಿ ಜೋಸೆಫ್ ಮ್ಯಾಕಾರ್ಥಿ ಅವರು 1950-55ರವರೆಗೆ ಒಂದು ದೊಡ್ಡ ಆಂದೋಲನ ನಡೆಸಿದರು. ಅದರ ಹಿಂದಿನ ಚಿಂತನೆಗೆ ಮ್ಯಾಕಾರ್ಥಿವಾದ ಅಂತ ಹೆಸರು. ಬಲಪಂಥೀಯರಾಗಿದ್ದ ಜೋಸೆಫ್, ಎಡಪಂಥೀಯರು ದೇಶದ್ರೋಹಿಗಳು ಅಂತ ಹೇಳಿ ಹಣೆಪಟ್ಟಿ ಕಟ್ಟಿ ಗುಲ್ಲು ಎಬ್ಬಿಸುವುದರಾಗ ಯಶಸ್ವಿ ಆದರು.

ಅವರು ಇಡೀ ದೇಶದ ಎಲ್ಲ ನೀತಿನಿರೂಪಣೆ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಚಲನಚಿತ್ರ ಉದ್ಯಮ, ಕಲೆ, ಸಾಹಿತ್ಯ, ಮುಂತಾದ ಕಡೆ ಬರೆ ಎಡಪಂಥೀಯರು ನುಸುಳಿಕೊಂಡುಬಿಟ್ಟಿದ್ದಾರೆ. ಅವರು ರಷಿಯ, ಚೈನಾ, ಕೊರಿಯಾದ ಪರ ಕೆಲಸ ಮಾಡತಾರ, ಅವರನ್ನ ಬಂಧಿಸಿ ಸೆರೆಮನೆಗೆ ತಳ್ಳಿ ಅಂತ ಹೋರಾಟ ನಡೆಸಿದರು.

ರಿಯಾ, photo courtesy: Sakshi Post

ಅಮೆರಿಕ ಸಂಸತ್ತು ಅಮೆರಿಕ ವಿರೋಧಿ ಚಟುವಟಿಕೆಗಳನ್ನ ಪತ್ತೆ ಹಚ್ಚಲಿಕ್ಕೆ ಒಂದು ಸಮಿತಿ ನೇಮಿಸಿ ಅದಕ್ಕ ಇವರನ್ನ ಅಧ್ಯಕ್ಷ ಮಾಡಿತು. ಅಂದಿನ ಕಾಲದ ಸುಮಾರು 20,000 ಸಾಹಿತಿ, ಕಲಾವಿದರು, ಚಿಂತಕರು, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಹಾಡುಗಾರರು, ಶಿಕ್ಷಕರು ಎಲ್ಲರನ್ನೂ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ಅವರು ತಮ್ಮ ಸ್ನೇಹಿತರ ಹೆಸರು ಬಿಟ್ಟುಕೊಡುವಂತೆ, ಅವರ ವಿರುದ್ಧ ಸುಳ್ಳು ಸಾಕ್ಷಿ ನುಡಿಯುವಂತೆ ಒತ್ತಡ ಹಾಕಲಾಯಿತು.

ಯಾರ ಮನಿಯೊಳಗ ನವ್ಯಕಲೆಯ ಚಿತ್ರ ಇರತದೋ, ಯಾರು ಬಿಳಿಯರು ಹಾಗೂ ಕರಿಯರ ಸ್ನೇಹ ಮಾಡತಾರೋ, ಯಾರು ಅಣು ಬಾಂಬಿನ ವಿರುದ್ಧ ದನಿ ಎತ್ತತಾರೋ, ಅವರೆಲ್ಲರನ್ನೂ ಕಮ್ಯುನಿಸ್ಟ್ ಅಂತ ಪರಿಗಣಿಸಿ ವಿಚಾರಣೆ ನಡೆಸುವುದು, ಜೈಲಿಗೆ ಹಾಕುವುದು ಮಾಮೂಲು ಆಗಿ ಹೋಯಿತು.

ಎಷ್ಟೋ ಜನರ ಕಾಯಂ ನೌಕರಿ ಕಳೆದು, ಅವರನ್ನ ಜೈಲಿಗೆ ಅಟ್ಟಲಾಯಿತು. ರೋಮನ್ ಹಾಲಿಡೇ ಅಂತ ಮನಮೋಹಕ ಚಿತ್ರದ ಕತೆ ಬರೆದ ಡಾಲಟನ ಟ್ರಂಬೋ ಅನ್ನುವ ಲೇಖಕ ಬೇರೆಯವರ ಹೆಸರಿನಲ್ಲಿ ಕತೆ ಬರೆದ. ಅವನಿಗೆ ಆಸ್ಕರ್ ಪ್ರಶಸ್ತಿ ಬಂದರೂ ಅಲ್ಲಿಗೆ ಹೋಗಿ ಅದನ್ನ ಸ್ವೀಕರಿಸಲಿಕ್ಕೆ ಆಗಲಿಲ್ಲ.

ಜೋಸೆಫ್ ಮ್ಯಾಕಾರ್ಥಿ, photo courtesy: Alpha History

ಇದನ್ನು ಅಲ್ಲಿನ ಎರಡು ಪ್ರಮುಖ ಪಕ್ಷಗಳಾದ ಡೆಮೋಕ್ರಾಟ್ ಹಾಗೂ ರಿಪಬ್ಲಿಕನ್ ಬಣಗಳ ನಾಯಕರು ಜೋಸೆಫ್ ಅವರನ್ನು ಬೆಂಬಲಿಸಿದರು. ಇಷ್ಟು ದೊಡ್ಡ ಅನ್ಯಾಯ ನಡೆಯುತ್ತಾ ಇದ್ದರೂ ಸಹ ಅಲ್ಲಿನ ನ್ಯಾಯಾಲಯಗಳು ಆರೋಪಿಗಳಿಗೆ ನ್ಯಾಯ ಒದಗಿಸಿಕೊಡಲಿಲ್ಲ. ಎಲ್ಲರೂ ಅಲ್ಲಿನ ಆಳುವ ಪಕ್ಷದ ಕೀಲುಗೊಂಬೆಯಂತೆ ನಡೆದುಕೊಂಡರು.

ಇದು ಯಾಕ ಅಂತ ಕೆಲವರು ವಿಶ್ಲೇಷಣೆ ಮಾಡಿದ್ದಾರ. ಟ್ರಂಬೊ ಅವರ ಪ್ರಕಾರ ಹಾಲಿವುಡ್ ಉದ್ಯಮ ಅಥವಾ ಚಿತ್ರಕಲೆ ಅಥವಾ ವಿಶ್ವವಿದ್ಯಾಲಯಗಳು ಜನಸಾಮನ್ಯರ ಚಿಂತನಕ್ರಮದ ಮ್ಯಾಲೆ ಪ್ರಭಾವ ಬೀರತಾವ. ಅದಕ್ಕ ಅವುಗಳ ಮೇಲೆ ಬಲಪಂಥೀಯ, ಅಥವಾ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯ ಪ್ರಭಾವ ಇರಬೇಕೆ ಹೊರತು ಎಡಪಂಥೀಯರ ಪ್ರಭಾವ ಇರಬಾರದು ಅಂತ ಅಲ್ಲಿನ ರಾಜಕಾರಣಿಗಳು ಹಾಗೂ ಉದ್ಯಮಿಗಳು ನಿರ್ಧಾರ ಮಾಡಿದರು.

ಅದರಲ್ಲಿ ಅವರು ಸುಮಾರು ಯಶಸ್ಸುಗಳಿಸಿದರು. ಸೂಪರ್ ಹೀರೋಗಳ ಬಗ್ಗೆ ಮಾಡುವಷ್ಟು ಚಿತ್ರಗಳನ್ನು ಹಾಲಿವುಡ್‍ನವರು ಅಮೆರಿಕದ ಬಡವರ ಬಗ್ಗೆ, ಕರಿಯರ ಬಗ್ಗೆ, ಮಹಿಳೆಯರ ಸಮಸ್ಯೆಗಳ ಬಗ್ಗೆ, ಅಲ್ಪ ಸಂಖ್ಯಾತರ ಬಗ್ಗೆ ಮಾಡೋದಿಲ್ಲ.

ಅಲ್ಲಿನ ಸಿನಿಮಾದೊಳಗ ಖಳನಾಯಕರು ಬೇರೆ ಎಲ್ಲಿಯವರೇ ಆಗಿರಬಹುದು, ಆದರೆ ನಾಯಕರು ಅಮೆರಿಕಾದವರೇ ಮತ್ತ ಬಿಳಿಯರೇ ಆಗಿರತಾರ.

ಈ ಸುಶಾಂತ – ರಿಯಾ ವಿದ್ಯಮಾನ ಸಹಿತ ಅದೇ ರೀತಿ ನಡದದ. ಇದು ಬರೆ ಬಾಲಿವುಡ್ಡಿನ ಖಾನ್‍ಗಳ ಮುಂದಾಳತ್ವ ತಡೆಯಲಿಕ್ಕೆ ಅಲ್ಲ. ಅದು ಬರೆ ಬಿಹಾರ- ಪಶ್ಚಿಮ ಬಂಗಾಳದ ಚುನಾವಣೆ ಸಲುವಾಗಿ ಅಲ್ಲ. ಇದು ವಿಚಾರ ಮೂಲಗಳ ನಿಯಂತ್ರಣದ ಪ್ರಯತ್ನ.

ಬಡವರ- ದಲಿತರ, ಅಲ್ಪ ಸಂಖ್ಯಾತರ, ಮಹಿಳೆಯರ, ಇತರ ಅವಕಾಶ ವಂಚಿತರ ಬಗ್ಗೆ ಚಲನಚಿತ್ರ, ಲೇಖನ, ಚಿತ್ರಕಲೆ, ನಾಟಕ, ಇತ್ಯಾದಿ ಬರಕೂಡದು, ಬಂದರೂ ಹೆಚ್ಚು ಸಂಖ್ಯೆಯ ಜನರನ್ನ ಮುಟ್ಟಬಾರದು. ಅನ್ನೋದು ಅವರ ವಿಚಾರ.

ಎಲ್ಲಾ ರೀತಿಯ ಕಲೆಗಳು, ಲೇಖನ, ಸಿನಿಮಾ, ಸಂಗೀತ, ನಾಟಕ ಅನ್ನುವುದು ಸಹಿತ ಆಳುವ ಪಕ್ಷದ ಆಣತಿಯಂತೆ ನಡೆಯಬೇಕು ಅನ್ನುವುದು ಅವರ ಅಭಿಪ್ರಾಯ.

ಬೆನ್ ಬ್ರಾಡ ಲಿ, photo courtesy: Wikipedia

ಇಂದು ರಿಯಾಳನ್ನು ದಸ್ತಗಿರಿ ಮಾಡಿದವರು ನಾಳೆ ಯಾರ ಮನೆಗೂ ಬರಬಹುದು. ಸಕಾರಣವಿಲ್ಲದೇ ದೇಶದ್ರೋಹಿ ಎಂಬೋ ಹಣೆಪಟ್ಟಿ ಕಟ್ಟುವ ಸೋಂಕುರೋಗ ಎಲ್ಲೆಡೆ ಹರಡಬಹುದು.

ಇದು ಬರಿ ಟಿವಿ ಟಿಆರ್‌ಪಿಗೋಸ್ಕರ, ಅಥವಾ ಯಾವುದೋ ರಾಜ್ಯದ ಚುನಾವಣೆ ತಂತ್ರ ಅಂತ ತಿಳಕೋಂಡ್ರ ನಮ್ಮ ತಪ್ಪು. ಎಲ್ಲ ದೊಡ್ಡ ಸುದ್ದಿಗಳ ಹಿಂದೆ ಮಹತ್ವದ ಸುದ್ದಿ ಅಡಗಿರುತ್ತದೆ ಎನ್ನುವ ಪತ್ರಿಕೋದ್ಯಮ ಗುರು ಬೆನ್ ಬ್ರಾಡ ಲಿ ಅವರ ಮಾತನ್ನ ನಾವು ಮರೆಯಬಾರದು.

ಮರೆತರೆ ಹೆಸರಿಲ್ಲದ ಪೊಲೀಸರು ಬಂದು ಜೋಸೆಫ್‍ನನ್ನು ವಿಳಾಸ ಇಲ್ಲದ ನ್ಯಾಯಾಲಯಕ್ಕೆ ಕರಕೊಂಡು ಹೋಗಿ ಯಾವುದೇ ಆರೋಪ ಮಾಡದೆ ವಿಚಾರಣೆ ನಡೆಸಬಹುದು. ಆ ಜೋಸೆಫ್ ನಮ್ಮಲ್ಲಿ ಯಾರಾದರೂ ಆಗಬಹುದು.

ಏನೋ ಎಜೆಂಡಾ ಇಟ್ಟುಕೊಂಡು ತಪ್ಪು ಮಾಡದ ಮುಗ್ಧರ ಮ್ಯಾಲೆ ಆರೋಪ ಹೊರಿಸಿ ಶಿಕ್ಷೆ ಕೊಡೋ ಜೋಸೆಫ್‍ಗಳು ಸಹ ಹುಟ್ಟಿಕೊಳ್ಳಬಹುದು. ಆ ಜೋಸೆಫ್ ಕೂಡ ನಮ್ಮಲ್ಲಿ ಯಾರಾದರೂ ಆಗಬಹುದು.


ಇದನ್ನೂ ಓದಿ: ಶಿರಾ ಉಪಚುನಾವಣೆ: ಪಕ್ಷಕ್ಕೆ ಸತ್ವಪರೀಕ್ಷೆಯಾಗಿದ್ದು, ಚುನಾವಣೆ ಗೆಲ್ಲಲೇಬೇಕು -ಎಚ್.ಡಿ.ಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...