Homeಅಂಕಣಗಳುಇಂದು ರಿಯಾ ಇರುವ ಜಾಗದಲ್ಲಿ ನಾಳೆ ನಾವು-ನೀವೂ ಇರಬಹುದು.. ಮರೆಯಬೇಡಿ

ಇಂದು ರಿಯಾ ಇರುವ ಜಾಗದಲ್ಲಿ ನಾಳೆ ನಾವು-ನೀವೂ ಇರಬಹುದು.. ಮರೆಯಬೇಡಿ

ಇದು ಬರಿ ಟಿವಿ ಟಿಆರ್‌ಪಿಗೋಸ್ಕರ, ಅಥವಾ ಯಾವುದೋ ರಾಜ್ಯದ ಚುನಾವಣೆ ತಂತ್ರ ಅಂತ ತಿಳಕೋಂಡ್ರ ನಮ್ಮ ತಪ್ಪು. ಎಲ್ಲ ದೊಡ್ಡ ಸುದ್ದಿಗಳ ಹಿಂದೆ ಮಹತ್ವದ ಸುದ್ದಿ ಅಡಗಿರುತ್ತದೆ ಎನ್ನುವ ಪತ್ರಿಕೋದ್ಯಮ ಗುರು ಬೆನ್ ಬ್ರಾಡ ಲಿ ಅವರ ಮಾತನ್ನ ನಾವು ಮರೆಯಬಾರದು.

- Advertisement -
- Advertisement -

`ಚಾಯ ಪೆ ಚರ್ಚಾ’ಗಿಂತಲೂ ಪ್ರಮುಖವಾದದ್ದು ಯಾವುದಾದರೂ ಐತಿ ಅಂದ್ರ ನಂಬತೀರಿ ಏನು? ಐತಿರೆಪೋ  ಐತಿ. `ಕಲೆ ಜೀವನದ ಮ್ಯಾಲೆ ಪ್ರಭಾವ ಬೀರುತ್ತದೋ ಅಥವಾ ಜೀವನ ಕಲೆ ಮ್ಯಾಲೆ ಪ್ರಭಾವ ಬೀರುತ್ತದೋ’ ಅನ್ನುವುದು ಮುಖ್ಯವಾದದ್ದು ಹಾಗೂ ಶತಮಾನಗಳಷ್ಟು ಹಳೆಯದು.

ಇದು ಈಗ ಯಾಕ ನೆನಪು ಆತಪ್ಪಾ ಅನ್ನಲಿಕ್ಕೆ ಎರಡು ಕಾರಣ ಅದಾವು.

ಫ್ರಾನ್ಸ್ ಕಾಫ್ಕ, photo courtesy: Wikipedia

ಇವತ್ತಿಗೆ ಒಂದು ನೂರು ವರ್ಷ ಫ್ರಾನ್ಸ್ ಕಾಫ್ಕ ಅನ್ನೋ ಜರ್ಮನ್ ಲೇಖಕ `ದ ಟ್ರಯಲ್’ ಅನ್ನೋ ಕಾದಂಬರಿ ಬರದ. ಅದರಾಗ ಜೋಸೆಫ್ ಅನ್ನುವ ಒಬ್ಬ ಬ್ಯಾಂಕ್ ನೌಕರನನ್ನ ಯಾವುದೋ ಹೆಸರಿಲ್ಲದ ವಿಚಾರಣಾ ಸಂಸ್ಥೆಯ ಹೆಸರಿಲ್ಲದ ಪೊಲೀಸರು, ಬಂಧಿಸತಾರ. ಅವನ ಮ್ಯಾಲೆ ಯಾವ ಆರೋಪವನ್ನೂ ಹೊರೆಸದೆ, ಯಾವ ಕಾನೂನಿನ ಕೆಳಗ ಅವನಿಗೆ ಬಂಧನ ಮಾಡ್ತೇವಿ ಅಂತ ಹೇಳದೇ, ವಿಳಾಸ ಇಲ್ಲದ ನ್ಯಾಯಾಲಯದಾಗ ಒಂದು ವರ್ಷ ವಿಚಾರಣೆ ನಡೆಸತಾರ.

ಕೊನೆಗೆ ಒಂದು ದಿವಸ ಇನ್ನೊಂದು ಇಬ್ಬರು ಹೆಸರಿಲ್ಲದ ಪೊಲೀಸರು ಬಂದು ಅವನನ್ನು ಊರು ಹೊರಗಿನ ಕಲ್ಲು ಗಣಿಯೊಳಗ ಚಾಕು ಹಾಕಿ ಕೊಂದುಬಿಡ್ತಾರ. ನಾನು ನಾಯಿಯಂತೆ ಸತ್ತು ಹೋದೆ ಅಂತ ನಾಯಕ ಕೊನೆಯ ಮಾತು ಹೇಳಿ ಉಸಿರು ಬಿಡತಾನ.

ಇನ್ನ ಸುಮಾರು 75 ವರ್ಷದ ಹಿಂದೆ ಜಾರ್ಜ್ ಅರವೆಲ್ ಅವರು ಬರೆದ, `ಸಣ್ಣ ಕತೆಯಂತೆ ಕಾಣುವ ದಂತ ಕತೆ’ ಅಂತ ಕರೆಯಿಸಿಕೊಳ್ಳುವ ವಿಚಿತ್ರ ಹೆಸರಿನ ಕಾದಂಬರಿ `1984’. ಅದರಾಗ ಇರೋ ಮನುಷ್ಯ ಅತೀತ ಶಕ್ತಿ ಹೊಂದಿದ ಅಪ್ರತಿಮ ನಾಯಕ: ಹೆಸರು `ದೊಡ್ಡಣ್ಣ’ (ಬಿಗ್ ಬ್ರದರ್). ಈ ಮನುಷ್ಯನ ನೋಡಿದವರು ಯಾರೂ ಇಲ್ಲ. ಅವ ಅದಾನ ಇಲ್ಲೋ, ಅವ ಹೆಂಗ ಕಾಣತಾನು, ಹೆಂಗ ಮಾತು ಆಡತಾನು ಅನ್ನೋದು ಯಾರಿಗೂ ಗೊತ್ತಿಲ್ಲ.

ಆದರ ಅವನ ಶಕ್ತಿ ಅಪರಿಮಿತ. ಅವನು ಎಲ್ಲರ ಮ್ಯಾಲೆ, ಎಲ್ಲ ಕಾಲಕ್ಕೂ ಕಣ್ಣು ಇಟ್ಟಿರತಾನ. ಶತ್ರು ದೇಶಗಳ ಜೊತೆಗೆ ಯುದ್ಧ ಮಾಡೋ ಸೈನಿಕರಿಗಿಂತ ಜಾಸ್ತಿ ಅವನ ಹತ್ತರ ತನ್ನ ದೇಶದ ನಾಗರೀಕರ ಮ್ಯಾಲೆ ಕಣ್ಣು ಇಡಲಿಕ್ಕೆ ವಿಚಾರ ಪೊಲೀಸರು (ಥಿಂಕ್ ಪೋಲ್) ಅನ್ನೋ ವಿಚಕ್ಷಣ ದಳದವರು ಇದ್ದಾರ.

ಅವರು ಪ್ರತಿಯೊಬ್ಬರ ಮನಿಯೊಳಗ ಒಂದು ದ್ವಿಪಥ ಟಿವಿ ಸೆಟ್ ಕೂಡಿಸಿಬಿಟ್ಟರ. ನೀವು ಟಿವಿ ನೋಡುವಾಗ ಅದು ನಿಮ್ಮನ್ನ ನೋಡ್ತಾ ಇರತೇತಿ. ನಿಮ್ಮ ಮನಿಯೊಳಗ ಆಗೋ ಎಲ್ಲ ವಿಷಯನೂ ಅದು ಸಿ.ಸಿ.ಟಿವಿ ಗತೆ ರಿಕಾರ್ಡ್ ಮಾಡತೆತಿ.

ಥಿಂಕ್ ಪೋಲ್ ಸೈನಿಕರು, ನಾಗರೀಕರ ತಪ್ಪು ವಿಚಾರಗಳನ್ನ ಪತ್ತೆ ಹಚ್ಚತಾರ. ಅವರು ತಮ್ಮ ದೇಶದ ಜನರಿಗೆ ಅವರ ಮಾಡೋ ಕೆಲ್ಸಕ್ಕ ಅಲ್ಲ, ಅವರ ವಿಚಾರಗಳಿಗೆ ಶಿಕ್ಷೆ ಕೊಡತಾರ.

ಆ ದೇಶದಾಗ ನಾಗರಿಕ ಹಕ್ಕು ಅನ್ನುವವು ಯಾವುವೂ ಇಲ್ಲ. ದೊಡ್ಡಣ್ಣ ಹೇಳಿದ್ದ ಕಾನೂನು, ನ್ಯಾಯಾಧೀಶರು, ಪೋಲೀಸರು, ಅವನ ಮಾತು ಕೇಳೋರು.

ದಶಕಗಳ ಹಿಂದ ಬರೆದ ಈ ಕಾದಂಬರಿಗಳು ಈಗ ಮುನ್ನೆಲೆಗೆ ಬಂದಾವು.

ಸುಶಾಂತ ಸಿಂಗ್, photo courtesy: Businessworld

ಈಗ ಹಿಂದಿ ಚಲನಚಿತ್ರ ನಟ ಸುಶಾಂತ ಸಿಂಗ್ ಅವರ ಆತ್ಮಹತ್ಯೆ ಅನ್ನೋದು ಅವರ ಸಾವಿನ ಅನೇಕ ತಿಂಗಳ ನಂತರ ದೊಡ್ಡ ಸುದ್ದಿ ಆಗಿಬಿಟ್ಟದ. ಅವನ ಗೆಳತಿ ರಿಯಾ ಅನ್ನುವ ನಟಿ ಮಾಟಗಾತಿ, ಅಕಿ ಅವನಿಗೆ ನಶೆ ಪದಾರ್ಥದ ಚಟ ಹಚ್ಚಿಸಿದಳು ಅಂತ ಹೇಳಿ ಆರೋಪ ಮಾಡಿ ಆ ಹುಡುಗಿಯನ್ನ ವಿಲನ್ ಮಾಡಾಕ ಹತ್ತಿದಾರು. ಸರಕಾರದ ಪರವಾಗಿ ಇರೋ ಕಂಗನಾ ರಣಾವತ ಅನ್ನುವ ನಟಿ ಸರ್ವಾಂಗ ಶುದ್ಧ ಮಹಿಳೆ ಅಂತ ಬಿಂಬಿಸಿ ಟಿವಿಯವರು ಸುದ್ದಿ ಮಾಡ್ತಾ ಇದ್ದಾರ.

ಇದರಾಗ ಕಾಫ್ಕ ಹಾಗೂ ಅರವೆಲ್ ಅವರ ಇಬ್ಬರ ಕೃತಿಗಳ ಅಂಶಗಳೂ ಅದಾವು. ಇನ್ನೂ ಹೇಳಬೇಕ ಅಂದ್ರ ಇದರಾಗ ಮ್ಯಾಕಾರ್ಥಿವಾದದ ಛಾಯೆ ಐತಿ.

ಅಮೆರಿಕದ ರಾಜಕಾರಣಿ ಜೋಸೆಫ್ ಮ್ಯಾಕಾರ್ಥಿ ಅವರು 1950-55ರವರೆಗೆ ಒಂದು ದೊಡ್ಡ ಆಂದೋಲನ ನಡೆಸಿದರು. ಅದರ ಹಿಂದಿನ ಚಿಂತನೆಗೆ ಮ್ಯಾಕಾರ್ಥಿವಾದ ಅಂತ ಹೆಸರು. ಬಲಪಂಥೀಯರಾಗಿದ್ದ ಜೋಸೆಫ್, ಎಡಪಂಥೀಯರು ದೇಶದ್ರೋಹಿಗಳು ಅಂತ ಹೇಳಿ ಹಣೆಪಟ್ಟಿ ಕಟ್ಟಿ ಗುಲ್ಲು ಎಬ್ಬಿಸುವುದರಾಗ ಯಶಸ್ವಿ ಆದರು.

ಅವರು ಇಡೀ ದೇಶದ ಎಲ್ಲ ನೀತಿನಿರೂಪಣೆ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಚಲನಚಿತ್ರ ಉದ್ಯಮ, ಕಲೆ, ಸಾಹಿತ್ಯ, ಮುಂತಾದ ಕಡೆ ಬರೆ ಎಡಪಂಥೀಯರು ನುಸುಳಿಕೊಂಡುಬಿಟ್ಟಿದ್ದಾರೆ. ಅವರು ರಷಿಯ, ಚೈನಾ, ಕೊರಿಯಾದ ಪರ ಕೆಲಸ ಮಾಡತಾರ, ಅವರನ್ನ ಬಂಧಿಸಿ ಸೆರೆಮನೆಗೆ ತಳ್ಳಿ ಅಂತ ಹೋರಾಟ ನಡೆಸಿದರು.

ರಿಯಾ, photo courtesy: Sakshi Post

ಅಮೆರಿಕ ಸಂಸತ್ತು ಅಮೆರಿಕ ವಿರೋಧಿ ಚಟುವಟಿಕೆಗಳನ್ನ ಪತ್ತೆ ಹಚ್ಚಲಿಕ್ಕೆ ಒಂದು ಸಮಿತಿ ನೇಮಿಸಿ ಅದಕ್ಕ ಇವರನ್ನ ಅಧ್ಯಕ್ಷ ಮಾಡಿತು. ಅಂದಿನ ಕಾಲದ ಸುಮಾರು 20,000 ಸಾಹಿತಿ, ಕಲಾವಿದರು, ಚಿಂತಕರು, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಹಾಡುಗಾರರು, ಶಿಕ್ಷಕರು ಎಲ್ಲರನ್ನೂ ಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ಅವರು ತಮ್ಮ ಸ್ನೇಹಿತರ ಹೆಸರು ಬಿಟ್ಟುಕೊಡುವಂತೆ, ಅವರ ವಿರುದ್ಧ ಸುಳ್ಳು ಸಾಕ್ಷಿ ನುಡಿಯುವಂತೆ ಒತ್ತಡ ಹಾಕಲಾಯಿತು.

ಯಾರ ಮನಿಯೊಳಗ ನವ್ಯಕಲೆಯ ಚಿತ್ರ ಇರತದೋ, ಯಾರು ಬಿಳಿಯರು ಹಾಗೂ ಕರಿಯರ ಸ್ನೇಹ ಮಾಡತಾರೋ, ಯಾರು ಅಣು ಬಾಂಬಿನ ವಿರುದ್ಧ ದನಿ ಎತ್ತತಾರೋ, ಅವರೆಲ್ಲರನ್ನೂ ಕಮ್ಯುನಿಸ್ಟ್ ಅಂತ ಪರಿಗಣಿಸಿ ವಿಚಾರಣೆ ನಡೆಸುವುದು, ಜೈಲಿಗೆ ಹಾಕುವುದು ಮಾಮೂಲು ಆಗಿ ಹೋಯಿತು.

ಎಷ್ಟೋ ಜನರ ಕಾಯಂ ನೌಕರಿ ಕಳೆದು, ಅವರನ್ನ ಜೈಲಿಗೆ ಅಟ್ಟಲಾಯಿತು. ರೋಮನ್ ಹಾಲಿಡೇ ಅಂತ ಮನಮೋಹಕ ಚಿತ್ರದ ಕತೆ ಬರೆದ ಡಾಲಟನ ಟ್ರಂಬೋ ಅನ್ನುವ ಲೇಖಕ ಬೇರೆಯವರ ಹೆಸರಿನಲ್ಲಿ ಕತೆ ಬರೆದ. ಅವನಿಗೆ ಆಸ್ಕರ್ ಪ್ರಶಸ್ತಿ ಬಂದರೂ ಅಲ್ಲಿಗೆ ಹೋಗಿ ಅದನ್ನ ಸ್ವೀಕರಿಸಲಿಕ್ಕೆ ಆಗಲಿಲ್ಲ.

ಜೋಸೆಫ್ ಮ್ಯಾಕಾರ್ಥಿ, photo courtesy: Alpha History

ಇದನ್ನು ಅಲ್ಲಿನ ಎರಡು ಪ್ರಮುಖ ಪಕ್ಷಗಳಾದ ಡೆಮೋಕ್ರಾಟ್ ಹಾಗೂ ರಿಪಬ್ಲಿಕನ್ ಬಣಗಳ ನಾಯಕರು ಜೋಸೆಫ್ ಅವರನ್ನು ಬೆಂಬಲಿಸಿದರು. ಇಷ್ಟು ದೊಡ್ಡ ಅನ್ಯಾಯ ನಡೆಯುತ್ತಾ ಇದ್ದರೂ ಸಹ ಅಲ್ಲಿನ ನ್ಯಾಯಾಲಯಗಳು ಆರೋಪಿಗಳಿಗೆ ನ್ಯಾಯ ಒದಗಿಸಿಕೊಡಲಿಲ್ಲ. ಎಲ್ಲರೂ ಅಲ್ಲಿನ ಆಳುವ ಪಕ್ಷದ ಕೀಲುಗೊಂಬೆಯಂತೆ ನಡೆದುಕೊಂಡರು.

ಇದು ಯಾಕ ಅಂತ ಕೆಲವರು ವಿಶ್ಲೇಷಣೆ ಮಾಡಿದ್ದಾರ. ಟ್ರಂಬೊ ಅವರ ಪ್ರಕಾರ ಹಾಲಿವುಡ್ ಉದ್ಯಮ ಅಥವಾ ಚಿತ್ರಕಲೆ ಅಥವಾ ವಿಶ್ವವಿದ್ಯಾಲಯಗಳು ಜನಸಾಮನ್ಯರ ಚಿಂತನಕ್ರಮದ ಮ್ಯಾಲೆ ಪ್ರಭಾವ ಬೀರತಾವ. ಅದಕ್ಕ ಅವುಗಳ ಮೇಲೆ ಬಲಪಂಥೀಯ, ಅಥವಾ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯ ಪ್ರಭಾವ ಇರಬೇಕೆ ಹೊರತು ಎಡಪಂಥೀಯರ ಪ್ರಭಾವ ಇರಬಾರದು ಅಂತ ಅಲ್ಲಿನ ರಾಜಕಾರಣಿಗಳು ಹಾಗೂ ಉದ್ಯಮಿಗಳು ನಿರ್ಧಾರ ಮಾಡಿದರು.

ಅದರಲ್ಲಿ ಅವರು ಸುಮಾರು ಯಶಸ್ಸುಗಳಿಸಿದರು. ಸೂಪರ್ ಹೀರೋಗಳ ಬಗ್ಗೆ ಮಾಡುವಷ್ಟು ಚಿತ್ರಗಳನ್ನು ಹಾಲಿವುಡ್‍ನವರು ಅಮೆರಿಕದ ಬಡವರ ಬಗ್ಗೆ, ಕರಿಯರ ಬಗ್ಗೆ, ಮಹಿಳೆಯರ ಸಮಸ್ಯೆಗಳ ಬಗ್ಗೆ, ಅಲ್ಪ ಸಂಖ್ಯಾತರ ಬಗ್ಗೆ ಮಾಡೋದಿಲ್ಲ.

ಅಲ್ಲಿನ ಸಿನಿಮಾದೊಳಗ ಖಳನಾಯಕರು ಬೇರೆ ಎಲ್ಲಿಯವರೇ ಆಗಿರಬಹುದು, ಆದರೆ ನಾಯಕರು ಅಮೆರಿಕಾದವರೇ ಮತ್ತ ಬಿಳಿಯರೇ ಆಗಿರತಾರ.

ಈ ಸುಶಾಂತ – ರಿಯಾ ವಿದ್ಯಮಾನ ಸಹಿತ ಅದೇ ರೀತಿ ನಡದದ. ಇದು ಬರೆ ಬಾಲಿವುಡ್ಡಿನ ಖಾನ್‍ಗಳ ಮುಂದಾಳತ್ವ ತಡೆಯಲಿಕ್ಕೆ ಅಲ್ಲ. ಅದು ಬರೆ ಬಿಹಾರ- ಪಶ್ಚಿಮ ಬಂಗಾಳದ ಚುನಾವಣೆ ಸಲುವಾಗಿ ಅಲ್ಲ. ಇದು ವಿಚಾರ ಮೂಲಗಳ ನಿಯಂತ್ರಣದ ಪ್ರಯತ್ನ.

ಬಡವರ- ದಲಿತರ, ಅಲ್ಪ ಸಂಖ್ಯಾತರ, ಮಹಿಳೆಯರ, ಇತರ ಅವಕಾಶ ವಂಚಿತರ ಬಗ್ಗೆ ಚಲನಚಿತ್ರ, ಲೇಖನ, ಚಿತ್ರಕಲೆ, ನಾಟಕ, ಇತ್ಯಾದಿ ಬರಕೂಡದು, ಬಂದರೂ ಹೆಚ್ಚು ಸಂಖ್ಯೆಯ ಜನರನ್ನ ಮುಟ್ಟಬಾರದು. ಅನ್ನೋದು ಅವರ ವಿಚಾರ.

ಎಲ್ಲಾ ರೀತಿಯ ಕಲೆಗಳು, ಲೇಖನ, ಸಿನಿಮಾ, ಸಂಗೀತ, ನಾಟಕ ಅನ್ನುವುದು ಸಹಿತ ಆಳುವ ಪಕ್ಷದ ಆಣತಿಯಂತೆ ನಡೆಯಬೇಕು ಅನ್ನುವುದು ಅವರ ಅಭಿಪ್ರಾಯ.

ಬೆನ್ ಬ್ರಾಡ ಲಿ, photo courtesy: Wikipedia

ಇಂದು ರಿಯಾಳನ್ನು ದಸ್ತಗಿರಿ ಮಾಡಿದವರು ನಾಳೆ ಯಾರ ಮನೆಗೂ ಬರಬಹುದು. ಸಕಾರಣವಿಲ್ಲದೇ ದೇಶದ್ರೋಹಿ ಎಂಬೋ ಹಣೆಪಟ್ಟಿ ಕಟ್ಟುವ ಸೋಂಕುರೋಗ ಎಲ್ಲೆಡೆ ಹರಡಬಹುದು.

ಇದು ಬರಿ ಟಿವಿ ಟಿಆರ್‌ಪಿಗೋಸ್ಕರ, ಅಥವಾ ಯಾವುದೋ ರಾಜ್ಯದ ಚುನಾವಣೆ ತಂತ್ರ ಅಂತ ತಿಳಕೋಂಡ್ರ ನಮ್ಮ ತಪ್ಪು. ಎಲ್ಲ ದೊಡ್ಡ ಸುದ್ದಿಗಳ ಹಿಂದೆ ಮಹತ್ವದ ಸುದ್ದಿ ಅಡಗಿರುತ್ತದೆ ಎನ್ನುವ ಪತ್ರಿಕೋದ್ಯಮ ಗುರು ಬೆನ್ ಬ್ರಾಡ ಲಿ ಅವರ ಮಾತನ್ನ ನಾವು ಮರೆಯಬಾರದು.

ಮರೆತರೆ ಹೆಸರಿಲ್ಲದ ಪೊಲೀಸರು ಬಂದು ಜೋಸೆಫ್‍ನನ್ನು ವಿಳಾಸ ಇಲ್ಲದ ನ್ಯಾಯಾಲಯಕ್ಕೆ ಕರಕೊಂಡು ಹೋಗಿ ಯಾವುದೇ ಆರೋಪ ಮಾಡದೆ ವಿಚಾರಣೆ ನಡೆಸಬಹುದು. ಆ ಜೋಸೆಫ್ ನಮ್ಮಲ್ಲಿ ಯಾರಾದರೂ ಆಗಬಹುದು.

ಏನೋ ಎಜೆಂಡಾ ಇಟ್ಟುಕೊಂಡು ತಪ್ಪು ಮಾಡದ ಮುಗ್ಧರ ಮ್ಯಾಲೆ ಆರೋಪ ಹೊರಿಸಿ ಶಿಕ್ಷೆ ಕೊಡೋ ಜೋಸೆಫ್‍ಗಳು ಸಹ ಹುಟ್ಟಿಕೊಳ್ಳಬಹುದು. ಆ ಜೋಸೆಫ್ ಕೂಡ ನಮ್ಮಲ್ಲಿ ಯಾರಾದರೂ ಆಗಬಹುದು.


ಇದನ್ನೂ ಓದಿ: ಶಿರಾ ಉಪಚುನಾವಣೆ: ಪಕ್ಷಕ್ಕೆ ಸತ್ವಪರೀಕ್ಷೆಯಾಗಿದ್ದು, ಚುನಾವಣೆ ಗೆಲ್ಲಲೇಬೇಕು -ಎಚ್.ಡಿ.ಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...