Homeರಾಜಕೀಯಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

ಮಾಧ್ಯಮಗಳ ನಡವಳಿಕೆ : ಸಿದ್ದು ಥರಾ ಸುಮ್ಮನಿರಲ್ಲವೆಂಬ ಸಂದೇಶ ರವಾನಿಸಿದ ಕುಮಾರಸ್ವಾಮಿ

- Advertisement -
- Advertisement -

ಗಾಂಧಿಭವನದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೂ ಧೀಮಂತ ಪತ್ರಿಕೋದ್ಯಮ ನಡೆಸಿದ ಮೂವರು ಹಿರಿಯರೂ ಕೂತಿದ್ದಾಗ, ಮುಖ್ಯಮಂತ್ರಿಯೋರ್ವರು ಮಾಧ್ಯಮಗಳಿಗೆ ಮನವಿಯ ರೂಪದಲ್ಲಿ ಎಚ್ಚರಿಕೆ ಸಂದೇಶ ರವಾನಿಸುತ್ತಾರೆ; ಇಡೀ ಸಭೆ ಅದನ್ನು ಚಪ್ಪಾಳೆಯ ಮೂಲಕ ಅನುಮೋದಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ನೆರೆದಿದ್ದ ಟಿವಿ ಕ್ಯಾಮೆರಾಗಳ ಹಿಂದೆ ನಿಂತಿರುವವರೂ ಹೌದೆನ್ನುವಂತೆ ಮುಗುಳ್ನಗುತ್ತಾರೆ. ಇದು ನಮ್ಮ ಮಾಧ್ಯಮಗಳು ಯಾವ ಮಟ್ಟಕ್ಕೆ ಇಳಿದಿವೆ ಎಂಬುದನ್ನು ತೋರಿಸುವ ಒಂದು ನಿದರ್ಶನವಾಗಿದೆ. ಇಲ್ಲದಿದ್ದರೆ, ಮುಖ್ಯಮಂತ್ರಿಯ ಮಾತನ್ನು ಸ್ಥಳದಲ್ಲೇ ಖಂಡಿಸಬಲ್ಲ ದಿಟ್ಟತೆ ಇದ್ದ ಸ್ವಾತಂತ್ರ್ಯ ಹೋರಾಟಗಾರರು ಅಲ್ಲಿದ್ದರು. ಅವರಿಗೂ ಮಾಧ್ಯಮಗಳ ಕುರಿತು ಅದೇ ಅಭಿಪ್ರಾಯ ಇತ್ತು ಎಂಬುದು ಆ ಸಭೆಯಲ್ಲಿ ಸ್ಪಷ್ಟವಾಗಿ ಎದ್ದು ಕಂಡಿತು. ಜೂನ್ 11ರಂದು ಗಾಂಧಿ ಸ್ಮಾರಕ ಸಂಸ್ಥೆಯು ಮುಖ್ಯಮಂತ್ರಿಯವರನ್ನು ಕರೆದು ಅಭಿನಂದಿಸುವ ಕಾರ್ಯಕ್ರಮ ನಡೆಸಿತು. ಅಲ್ಲಿ ಕುಮಾರಸ್ವಾಮಿಯವರು ಆಡಿದ ಮಾತುಗಳನ್ನು ಯಥಾವತ್ತಾಗಿ ಮುಂದಿಟ್ಟರೆ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತದೆ.
‘ಇಲ್ಲಿ ಸೇರಿರುವ ಮಾಧ್ಯಮಗಳಿಗೂ ನಾನು ಒಂದು ಸಂದೇಶ ಕೊಡಬಯಸುತ್ತೇನೆ. ನಮ್ಮ ಸರ್ಕಾರ ತಪ್ಪು ಮಾಡಿದರೆ ಅದನ್ನು ಟೀಕೆ ಮಾಡಿ, ಕಟುವಾದ ಶಬ್ದಗಳಲ್ಲೇ ಅದನ್ನು ಹೇಳಿ ಪರವಾಗಿಲ್ಲ. ಆದರೆ, ನೀವು ಮಾಡುತ್ತಿರುವುದೇನು? ಅಸತ್ಯವನ್ನು ಹೇಳುತ್ತಿದ್ದೀರಿ. ಅದನ್ನು ಮಾಡಬೇಡಿ, ಜನರ ಪರವಾಗಿ ಕೆಲಸ ಮಾಡುವುದಕ್ಕೆ ಸಹಕಾರ ಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.
ಇತ್ತೀಚೆಗೆ ಮಂಗಳೂರಿನಲ್ಲಿ ವಿಪರೀತ ಮಳೆ ಬಂದ ಎರಡು ದಿನಗಳ ನಂತರ ಒಂದು ಕಡೆ ಶವ ಸಿಕ್ಕಿತು. ಆಗ ಕೆಲವು ಚಾನೆಲ್‍ಗಳು ಕೊಲೆ ಶಂಕೆ ಎಂದು ಸುದ್ದಿ ಮಾಡಿದವು. ಆ ವ್ಯಕ್ತಿಯ ಕುಟುಂಬದವರೇ, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ; ಎರಡು ದಿನಗಳ ಕೆಳಗೆ ಮನೆಯಿಂದ ಕಣ್ಮರೆಯಾಗಿದ್ದ. ನಮಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ. ಆದರೂ, ಅದನ್ನೊಂದು ಸೆನ್ಸೇಷನಲ್ ವಿಷಯ ಮಾಡೋಕೆ ನೀವು ಹೊರಟಿದ್ದೀರಿ. ಇದಕ್ಕೇ ಕಾಯುತ್ತಿರುವ ಹಿಂದೂ ಕಾರ್ಯಕರ್ತನ ಕೊಲೆ ಅಂತ ಬಿಜೆಪಿಯವರು ಕೂಗಾಡಲಿ ಅಂತ. ನಿಮ್ಮ ಉದ್ದೇಶ ಏನು? ನಿಮಗೆ ಟಿಆರ್‍ಪಿಯೇ ಮುಖ್ಯವಾ? ಬೆಂಕಿ ಬಿದ್ದರೂ ಪರವಾಗಿಲ್ವಾ? ಹಾಗಾಗಿಯೇ ನಾನು ಆ ಚಾನೆಲ್‍ನ ಮುಖ್ಯಸ್ಥರಿಗೆ ಮತ್ತು ವರದಿಗಾರನಿಗೆ ನೋಟೀಸ್ ಕೊಡಿ, ಕೊಲೆಯ ಕುರಿತು ಅವರಿಗೇನೋ ಮಾಹಿತಿ ಇರಬೇಕು ಅಂತ ಹೇಳಿದ್ದೇನೆ. ಈ ಥರ ನೀವು ನಡೆದುಕೋಬಾರದು ಎಂದು ನಾನು ಹೇಳಲು ಬಯಸ್ತೀನಿ.
ಇನ್ನೂ ಒಂದು ಸುದ್ದಿಯನ್ನು ನಾನು ಕೇಳಿದೆ. ದೇವೇಗೌಡರಿಗೆ ಸರ್ಕಾರದಲ್ಲಿ ಮೂಗು ತೂರಿಸಬೇಡಿ, ಮನೆಯಲ್ಲೇ ಕೂರಿ ಎಂದು ಕುಮಾರಸ್ವಾಮಿ ತಾಕೀತು ಅಂತ. ನೀವು ಏನು ತಿಳಿದುಕೊಂಡಿದ್ದೀರಿ? ದೇವೇಗೌಡರನ್ನು ಏನೆಂದುಕೊಂಡಿದ್ದೀರಿ? ಅವರು ಒಬ್ಬರು ನಾಡಿನ ಹಿರಿಯ ರಾಜಕಾರಣಿ. ನನ್ನ ತಂದೆ ಅಂತ ಮಾತ್ರ ಅಲ್ಲದೇ, ಅವರ ಅನುಭವದ ಅನುಕೂಲ ಪಡೆದುಕೊಳ್ಳಬೇಕು ಅಂತಾನಾದ್ರೂ ನನಗೆ ಇರಲ್ವಾ? ಈ ಥರಾ ಒಂದು ಸುದ್ದಿ ಮಾಡಬಹುದಾ?
ನೀವು ಸರ್ಕಾರ ನಡೆಸೋಕೆ ಸಹಕಾರ ಕೊಡದೇ ಇದ್ದರೆ, ನಾನೊಬ್ಬನೇ ಎಲ್ಲವನ್ನೂ ಮಾಡೋಕಾಗುತ್ತಾ? ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಪಲಾಯನವಾದಿಯಲ್ಲ. ಮಾಡಿಯೇ ಮಾಡ್ತೀನಿ. ಆದರೆ ಅದಕ್ಕೆ 15 ದಿನ ಸಮಯ ಕೊಡಿ ಎಂದಿದ್ದೀನಿ. ಇದನ್ನೇ ದೊಡ್ಡ ವಿಷಯ ಮಾಡ್ತೀರಲ್ವಾ? ಸುಮ್‍ಸುಮ್ನೆ 20 ಜನ ಶಾಸಕರ ಬಂಡಾಯ; ಅವರು ಹೊರಗೆ ಹೋಗ್ತಾರೆ ಅಂತ ಸುದ್ದಿ ಮಾಡ್ತೀರ. ಇಪ್ಪತ್ತೂ ಇಲ್ಲ, ಒಬ್ಬರೂ ಇಲ್ಲ. ಸಮ್ಮಿಶ್ರ ಸರ್ಕಾರ ನಡೆಸುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತೀವಿ. ಆದ್ರೆ ನಿಮ್ಮ ಉದ್ದೇಶವೇ ಅರ್ಥವಾಗ್ತಿಲ್ಲ. ನೀವ್ಯಾರೂ ಸತ್ಯ ಹರಿಶ್ಚಂದ್ರರಲ್ಲ, ಅದು ನನಗ್ಗೊತ್ತು.
ನೀವು ಎಂಥವರೆಂದ್ರೆ, ನೋಡೀ.. ನಾನಿನ್ನೂ ಜನತಾದರ್ಶನ ಅಧಿಕೃತವಾಗಿ ಶುರೂನೇ ಮಾಡಿಲ್ಲ. ಆದರೂ ಜನರು ಕುಮಾರಸ್ವಾಮಿ ಮನೆಗೆ ಹೋದ್ರೆ ಏನೋ ಕೆಲಸ ಆಗುತ್ತೆ ಅಂತ ಬರ್ತಾರೆ. ಅವತ್ತು ನಾವು ಬೆಂಗಳೂರಿನಲ್ಲಿ ಇರಲಿಲ್ಲ. ಜೆಪಿ ನಗರದ ಮನೆಗೆ ಪಾಪ ಕೆಲವರು ಹೋಗಿದ್ದಾರೆ. ಅಲ್ಲಿ ಸಿಎಂ ಇಲ್ಲಾ… ಕೃಷ್ಣಾಗೆ ಹೋಗಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಕುಮಾರಸ್ವಾಮಿಯವರೇ ಎರಡನೇ ದಿನಕ್ಕೇ ಮುಗಿದು ಹೋಯ್ತಾ ಜನತಾದರ್ಶನಾ ಅಂತ ಸುದ್ದಿ. ಭಾಳ ದೂರದಿಂದ ಒಬ್ಬರು ಹೆಣ್ಣು ಮಗಳು ಬಂದಿದ್ದಾರೆ, ಅವರ ಹತ್ರ ಪಾಪ ಬಸ್‍ಚಾರ್ಜ್‍ಗೆ ದುಡ್ಡಿಲ್ಲ. ಇದಕ್ಕೇನು ಮಾಡ್ತೀರಾ ಅಂತ ಟೀವಿಯಲ್ಲಿ ಕೇಳ್ತಿದ್ದಾರೆ. ನಾನು ಹೇಳೋದು, ಸ್ವಲ್ಪ ಮಾನವೀಯತೆಯಿಂದ ವರ್ತಿಸಿ. ಆ ವರದಿಗಾರ ತನ್ನ ಜೇಬಿನಿಂದ 50 ರೂ. ಕೊಟ್ಟು ಆಕೆಗೆ ಕಳಿಸಿ, ಆ ಮೇಲೆ ಆಕೆ ಹತ್ರ ದುಡ್ಡಿರ್ಲಿಲ್ಲ ಕೊಟ್ಟಿದೀನಿ ಕೊಡಿ ಅಂದಿದ್ರೆ ಕೊಡ್ತಿದ್ದೆ. ಅದನ್ನು ಬಿಟ್ಟು ಈ ಥರಾ ಸ್ಟೋರಿ ಮಾಡಿ ಟೀಕೆ ಮಾಡಿದ್ರೆ ಏನು ಮಾಡೋಕಾಗುತ್ತೆ?
ಇನ್ನೂ ಒಂದು ಸಾರಿ ಕೇಳ್ತಿದ್ದೀನಿ. ಸಹಕಾರ ಕೊಡಿ, ಜನರ ಪರವಾಗಿ ಕೆಲಸ ಮಾಡ್ತೀವಿ.’
ಕುಮಾರಸ್ವಾಮಿಯವರು ಮನವಿಯನ್ನೇ ಮಾಡಿದರು. ಆದರೆ, ಅದರಲ್ಲಿ ಒಂದು ಸಂದೇಶವೂ ಇತ್ತು. ಅದು ಎಚ್ಚರಿಕೆ. ಇದಕ್ಕೆ ಮುಂಚೆಯೇ ಒಂದು ಸಾರಿ ಹೇಳಿದ್ದರು. ‘ನಾನು ವಾಸ್ತವಾಂಶ ಏನು ಹೇಳ್ತೀನಿ ಅದನ್ನು ರಿಪೋರ್ಟ್ ಮಾಡಿ, ಟ್ವಿಸ್ಟ್ ಮಾಡಿ ಸುದ್ದಿ ಮಾಡಬೇಡಿ. ನಾನು ಏನೋ ಒಂದು ಹೇಳಿರೋದನ್ನು ನೀವು ಯಾಕೆ ತಿರುಚುತ್ತೀರಿ? ನಿಮಗೆ ನಿಮ್ಮಿಷ್ಟ ಬಂದಂತೆಯೇ ಹೇಳಬೇಕೆಂದಾದರೆ, ನಿಮ್ಮ ಸ್ಟೋರಿ ಮಾಡಿಕೊಳ್ಳಿ. ನನ್ನ ಮಾತನ್ನು ತಿರುಚಿ, ಮಿಸ್‍ಯೂಸ್ ಮಾಡಬೇಡಿ. ದಿನಕ್ಕೆ ಹತ್ತತ್ತು ಸಾರಿ ನೀವು ಮೈಕ್ ಹಿಡಿದುಕೊಂಡು ಬಂದರೆ ಏನು ಹೇಳೋದಿರುತ್ತೆ? ಏನಾದ್ರೂ ಪಾಲಿಸಿ ಡಿಸಿಷನ್ ತಗೊಂಡರೆ ಆಗ ಮಾತಾಡಬಹುದು. ಅದನ್ನು ಬಿಟ್ಟು ನೀವೇ ಎಲ್ಲಾ ಮಾಡ್ತೀರಿ. ಮಂತ್ರಿಗಳ್ಯಾರು ಅಂತಲೂ ತೀರ್ಮಾನಿಸ್ತೀರಿ. ಖಾತೇನೂ ನೀವೇ ಹಂಚ್ತೀರಿ. ಇಂಥದನ್ನೆಲ್ಲಾ ನಿಲ್ಲಿಸಿ.’
ಅತ್ಯಂತ ಪಕ್ಷಪಾತದಿಂದ ಸುದ್ದಿ ಮಾಡುವ, ಖಚಿತವಾಗಿ ಬಿಜೆಪಿ ಪರವಾಗಿ ನಿಂತಿರುವ ಕೆಲವು ಚಾನೆಲ್‍ಗಳು ಮತ್ತು ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದು, ಕುಮಾರಸ್ವಾಮಿಯವರನ್ನು ದುರ್ಬಲಗೊಳಿಸಲು ಹೋದರೆ ಮತ್ತೂ ಕೆಳಗೆ ಕುಸಿಯುತ್ತವೆ. ನೇರವಾಗಿ ಮಾತನಾಡುವ, ಜನಸಾಮಾನ್ಯರ ಲಾಜಿಕ್‍ಅನ್ನು ಸಹಜವಾಗಿ ಬಳಸುವ ಕುಮಾರಸ್ವಾಮಿಯವರ ಮಾತೇ ಜನರಿಗೆ ಹೆಚ್ಚು ಸರಿ ಎನಿಸುವ ಸಾಧ್ಯತೆ ಇದೆ. ಈಗಲಾದರೂ ಸದರಿ ಮಾಧ್ಯಮಗಳು ತಿದ್ದಿಕೊಂಡರೆ, ಪಾತಾಳ ಮುಟ್ಟಿರುವ ಪತ್ರಿಕೋದ್ಯಮದ ಘನತೆ ಸ್ವಲ್ಪ ಮಟ್ಟಿಗಾದರೂ ಉಳಿದುಕೊಂಡೀತು.
ಇವೇ ಮಾಧ್ಯಮಗಳು ಸತತವಾಗಿ 5 ವರ್ಷಗಳ ಕಾಲ ಸಿದ್ದರಾಮಯ್ಯ ವಿರೋಧಿ ಪ್ರಚಾರವನ್ನು ನಡೆಸಿದವು. ಡಿ.ಕೆ.ರವಿ ಪ್ರಕರಣವೂ ಸೇರಿದಂತೆ ಹಲವು ಸಾರಿ ಸುಳ್ಳು ಎಂದು ಗೊತ್ತಿದ್ದರೂ, ಒಂದೇ ಸಮನೆ ಅಪಪ್ರಚಾರಕ್ಕಿಳಿದವು. ನಂತರ ಬಿಜೆಪಿ ಸರ್ಕಾರದ ಅಧೀನದಲ್ಲಿದ್ದ ಸಿಬಿಐ ನಡೆಸಿದ ತನಿಖೆಯೂ ಅದನ್ನು ಆತ್ಮಹತ್ಯೆ ಎಂದು ವರದಿ ನೀಡಿದಾಗ, ಅದಕ್ಕೆ ಪ್ರಚಾರ ನೀಡಲಿಲ್ಲ. ಈ ಪ್ರಮಾಣದ ಏಕಪಕ್ಷೀಯತೆ ಸಾಧ್ಯವಾಗಿರುವುದು ಬಿಜೆಪಿ ಪರಿವಾರದ ಮತೀಯತೆಯನ್ನು ಮೈಗೂಡಿಸಿಕೊಂಡ ವರ್ಗವೇ ಇಲ್ಲೆಲ್ಲಾ ಹಿಡಿತ ಸಾಧಿಸಿರುವುದರಿಂದ. ಆದರೆ ಸಿದ್ದರಾಮಯ್ಯನವರು ಒಮ್ಮೆಯೂ ಮಾಧ್ಯಮಗಳಿಗೆ ಎಚ್ಚರಿಕೆ ನೀಡುವ ಅಥವಾ ಟೀಕೆ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಇದರಲ್ಲಿ ಒಟ್ಟಾರೆ ಮಾಧ್ಯಮ ಸ್ವಾತಂತ್ರ್ಯದ ಕುರಿತಂತೆ ಅವರ ನಿಲುವು ಒಂದು ಪಾತ್ರ ವಹಿಸಿದ್ದರೆ, ಜಾತಿಯೂ ಇನ್ನೊಂದು ಕಾರಣವಾಗಿದೆ. ಕುಮಾರಸ್ವಾಮಿಯವರ ಪರವಾಗಿ ಒಂದು ಬಲಾಢ್ಯವಾದ ಜಾತಿಯು ನಿಂತಿರುವುದರಿಂದ, ಮಾಧ್ಯಮಗಳನ್ನೂ ಎದುರಿಸಿ ನಿಲ್ಲಬಲ್ಲೆ ಎನ್ನುವ ಧೈರ್ಯ ಅವರಿಗಿದೆ. ಇದನ್ನು ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತ ಎನ್ನಬೇಕೋ, ಅದೇ ಜಾತಿಯ ಕಾರಣದಿಂದ ಮತಾಂಧ ಶಕ್ತಿಗಳ ಪರವಾಗಿ ನಿಂತಿರುವ ಮಾಧ್ಯಮಗಳಿಗೆ ಎಚ್ಚರಿಕೆ ಕೊಟ್ಟಿದ್ದಕ್ಕೆ ಸಂತಸ ಕೊಡಬೇಕೋ ತಿಳಿಯದ ವಿಪರ್ಯಾಸದ ಸ್ಥಿತಿಯಲ್ಲಿ ನಾವಿದ್ದೇವೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...