Homeಮುಖಪುಟಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

ಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

- Advertisement -
- Advertisement -

ನಮಗೆ ಯಾವಾಗಲೋ ನೋಡಿದ ಯಾವ್ಯಾವುದೋ ಚಿತ್ರಗಳು ತಲೆಯಲ್ಲಿ ಉಳಿದುಬಿಡುತ್ತವೆ. ಆ ಚಿತ್ರಗಳನ್ನು ನಾವೇಕೆ ಮರೆಯಲಿಲ್ಲ ಎನ್ನುವುದಕ್ಕೆ ಕಾರಣಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಅನೇಕ ಸಲ ಎಂದೋ ನೋಡಿದ, ಎಂದೋ ಓದಿದ ನಾವು ಇಷ್ಟಪಡದ ಕಥೆಗಳು, ಚಿತ್ರಗಳೂ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಕರ್ನಾಟಕದ ಮೂಲೆಗಳಲ್ಲಿ, ಇಂಗ್ಲಿಷ್ ಗೊತ್ತಿಲ್ಲದೇ ಬೆಳೆದ ನಮ್ಮಂತವರಿಗೆ ಹಾಲಿವುಡ್ ಎನ್ನುವುದು ಗೊತ್ತಾಗಿದ್ದು ಕಾಲೇಜಿಗೆ ತಲುಪಿದ ಮೇಲೆಯೇ. ಸಿಕ್ಕಸಿಕ್ಕ ಸಿನೆಮಾಗಳನ್ನು ನೋಡುತ್ತಿದ್ದ ನಮಗೆ ಯಾವ ಚಿತ್ರ ಯಾವ ಕಾರಣಕ್ಕೆ ಇಷ್ಟವಾಗುತ್ತಿದೆ ಎನ್ನುವುದು ತಿಳಿಯುತ್ತಿರಲಿಲ್ಲ (ತಿಳಿಯಬೇಕು ಎನ್ನುವ ಯಾವ ನಿಯಮವೂ ಇಲ್ಲ). ಈ ಎರಡು ಚಿತ್ರಗಳು ನೋಡಿ ಎರಡು ದಶಕಗಳಾಗುತ್ತಿದ್ದರೂ ಸ್ಮೃತಿಪಟಲದಿಂದ ಒಂದಿಷ್ಟೂ ಮಾಸಿಲ್ಲ. ಈ ಎರಡು ಚಿತ್ರಗಳೂ ಹಾಲಿವುಡ್ ಅನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ಬಿಟ್ಟರೆ ಬೇರಾವ ಸಾಮ್ಯತೆಗಳೂ ಇಲ್ಲ.

ಟೆಕ್ಸಾಸ್‍ನ ಹೋಟೆಲ್ ಒಂದರಲ್ಲಿ ಪಾತ್ರ ತೊಳೆಯುವ ಕೆಲಸಕ್ಕಿದ್ದ ಒಬ್ಬ ಯುವಕ ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ನ್ಯೂಯಾರ್ಕ್‍ಗೆ ಬಂದಿಳಿಯುತ್ತಾನೆ. ಬಿಗ್ ಆ್ಯಪಲ್ ಎಂದು ಕರೆಯಲ್ಪಡುವ ದೊಡ್ಡ ನಗರ ನ್ಯೂ ಯಾರ್ಕ್‍ನಲ್ಲಿರುವ ಮಹಿಳೆಯರಿಗೆ ಸೆಕ್ಸ್ ಮಾಡಲು ಪುರುಷರೇ ಸಿಗುವುದಿಲ್ಲವೆಂದು, ತಾನೊಬ್ಬ ಒಳ್ಳೆಯ ಪ್ರೇಮಿಯಾಗಿದ್ದರಿಂದ ಒಬ್ಬ ಯಶಸ್ವೀ ಪುರುಷ ವೇಶ್ಯೆ ಆಗಬಹುದು ಎನ್ನುವ ಬಲವಾದ ನಂಬಿಕೆ ಜೋ ಬಕ್‍ನದು (ಜಾನ್ ವಾಯಿಟ್). ಟೆಕ್ಸಾಸ್‍ನಿಂದ ನ್ಯೂಯಾರ್ಕ್‍ವರೆಗಿನ ಪಯಣದಲ್ಲಿ ಕಾಣಿಸುವ ಎಲ್ಲಾ ಬಿಲ್‍ಬೋರ್ಡ್‍ಗಳು, ರೇಡಿಯೋದಲ್ಲಿ ಬರುವ ಜಾಹೀರಾತುಗಳೆಲ್ಲವೂ ಅವನ ನಂಬಿಕೆಯನ್ನು ಬಲಪಡಿಸುತ್ತಲೇ ಇರುತ್ತವೆ. ಜೇಬಿನಲ್ಲಿ ಒಂದಿಷ್ಟು ಕಾಸನ್ನು ಇಟ್ಟುಕೊಂಡು ಬಂದಿಳಿದು, ಒಂದು ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಾನೆ. ತಾನೊಬ್ಬ ಗಟ್ಟಿಗ, ಪ್ರೇಮಿ ಎಂದು ತೋರಿಸಿಕೊಳ್ಳಲು ಕೌಬಾಯ್‍ಗಳು ಹಾಕಿಕೊಳ್ಳುವ ಒಂದು ಜಾಕೆಟ್ ಮತ್ತು ಹ್ಯಾಟ್‍ಅನ್ನು ಸದಾಕಾಲ ಹಾಕಿಕೊಂಡಿರುತ್ತಾನೆ.

ಈ ಹೊಸ ಅಪರಿಚಿತ ನಗರದಲ್ಲಿ ಗಮ್ ಅಗಿಯುತ್ತ, ರಸ್ತೆಗಳಲ್ಲಿ ಅಲೆಯುತ್ತ ಕಂಡಕಂಡ ಮಹಿಳೆಯರಿಗೆ ಮಾತನಾಡಿಸಲು ಪ್ರಯತ್ನಿಸುತ್ತಾನೆ. ಕನಸುಗಳು ಎಷ್ಟೇ ಪ್ರಬಲವಾಗಿದ್ದರೂ ಶಹರದ ವಾಸ್ತವ, ತನ್ನ ಕೆಲಸದಲ್ಲಿ ಮರೀಚಿಕೆಯಾದ ಯಶಸ್ಸು, ಬರಿದಾಗುತ್ತಿರುವ ಜೇಬು ಇವನನ್ನು ವಾಸ್ತವಕ್ಕೆ ಎಳೆಯುವ ಪ್ರಯತ್ನ ಮಾಡುತ್ತವೆ. ಆದರೆ ನಮ್ಮ ಹೀರೋನ ಭ್ರಮೆ ಅಷ್ಟು ಸುಲಭಕ್ಕೆ ಕರಗುವಷ್ಟು ಪೊಳ್ಳಾಗಿಲ್ಲ. ಆಗ ಅವನಿಗೆ ಸಿಗುವನು ರಿಕೊ/ರ್ಯಾಟ್ಸೋ (ಡಸ್ಟಿನ್ ಹಾಫ್‍ಮನ್). ರಿಕೋ ಸದಾ ಕೆಮ್ಮುತ್ತಿರುವ, ಕುಂಟುನಡೆಯುವ ಸಣ್ಣಪುಟ್ಟ ಕಳ್ಳತನ, ಜನರಿಗೆ ಟೋಪಿ ಹಾಕುವ ಕೆಲಸ ಮಾಡುವ ವ್ಯಕ್ತಿ. ಜೋ ಬಕ್‍ನನ್ನು ನೋಡಿದಕೂಡಲೇ, ಅವನ ಸ್ನೇಹ ಸಂಪಾದಿಸಿ, ಅವನು ಹೀಗೆಲ್ಲ ರಸ್ತೆಯಲ್ಲಿ ಹುಡುಕಾಟ ಮಾಡಬಾರದೆಂದೂ, ಅವನಿಗೆ ಒಬ್ಬ ಮ್ಯಾನೇಜರ್‍ನ ಅವಶ್ಯಕತೆ ಇದೆಯೆಂದು ನಂಬಿಸಿ, ಒಂದಿಷ್ಟು ದುಡ್ಡು ಕಿತ್ತುಕೊಂಡು ಕಳುಹಿಸುತ್ತಾನೆ. ತಾನು ಮೋಸ ಹೋದೆನೆಂದು ತಿಳಿಯಲು ಜೋಗೆ ಹೆಚ್ಚು ಸಮಯ ಹಿಡಿಯುವದಿಲ್ಲ.

ಜೋ ದುಡ್ಡು ಕಟ್ಟಿಲ್ಲವೆಂದು ಹೋಟೆಲ್‍ನಿಂದ ಹೊರದಬ್ಬಲ್ಪಟ್ಟು, ತಿನ್ನಲೂ ಕಾಸಿಲ್ಲದೇ ಅಲೆಯುತ್ತಿರುವಾಗ ಮತ್ತೆ ಸಿಗುವನು ರ್ಯಾಟ್ಸೋ. ಆಗ ಶುರುವಾಗುವುದು ಅವರಿಬ್ಬರ ಸೋಲು, ಗೆಲುವು, ನೋವು, ಹತಾಶೆಗಳ ಪಯಣ.

ಈ ಚಿತ್ರ ಏಕೆ ಇಷ್ಟವಾಗುತ್ತೆ ಎಂದು ಅನೇಕ ಸಲ ಪ್ರಶ್ನೆ ಕೇಳಿದ್ದೇನೆ. ಅಲೆಕ್ಸಾಂಡರ್ ಪೇನ್ ಒಂದು ಮಾತು ಹೇಳುತ್ತಾರೆ, ‘ನಿರ್ದೇಶನವೆಂದರೆ 90% ಕಾಸ್ಟಿಂಗ್ ಹಾಗೂ ಬಾಕಿ 10% ಮಾತ್ರ ನಿರ್ದೇಶನ’. ಈ ಚಿತ್ರದಲ್ಲಿ ಕನಸುಗಣ್ಣುಗಳ ಮುಗ್ಧ ಜಾನ್ ವಾಯಿಟ್ ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಾನೆ. ಚಿತ್ರದಲ್ಲಿ ಬರುವ ಫ್ಲ್ಯಾಷ್‍ಬ್ಯಾಕ್, ಕನಸುಗಳು, ಪಾರ್ಟಿಯ ದೃಶ್ಯಗಳು, ಹಿಂಸೆ, ಲೈಂಗಿಕತೆಯ ಬಗ್ಗೆ ಟೀಕೆಗಳು ಬಂದಿವೆ. ಅವುಗಳು ಇಲ್ಲದಿದ್ದರೂ ಈ ಚಿತ್ರ ನಮಗೆ ಇಷ್ಟವಾಗುತ್ತಿತ್ತೇನೋ.

ನಮಗೆ ಈ ಚಿತ್ರ ನೆನಪಿನಲ್ಲುಳಿಯುವುದು ಪಾತ್ರಗಳ ಮುಗ್ಧತೆಯಿಂದ. ದೊಡ್ಡ ನಗರದಲ್ಲಿ ಮಿಸ್‍ಫಿಟ್ ಆಗಿರುವ ಇವರು, ನಿಜಜೀವನದಲ್ಲಿ ನಮಗೆ ಕಂಡರೆ ಬಹುಶಃ ಹೇಸಿಗೆ ಪಟ್ಟು ಮುಂದೆ ಹೋಗುತ್ತೇವೆ ಆದರೆ ಇಲ್ಲಿ ಅವರನ್ನೇ ಇಷ್ಟಪಡುತ್ತೇವೆ. ಇವರ ಮೂರ್ಖತೆ ಮುರ್ಖತೆಯಾಗಿ ಕಾಣಿಸದೇ ಮುಗ್ಧತೆಯಾಗಿ ಕಾಣಿಸುತ್ತದೆ. ಇವರ ಸತ್ಯವನ್ನು ನಾಗರಿಕ ಸಮಾಜವೇಕೆ ಅರ್ಥಮಾಡಿಕೊಳ್ಳುವುದಿಲ್ಲ ಎಂದು ದೂರುತ್ತೇವೆ. ತನ್ನನ್ನು ತಾನು ಒಪ್ಪಿಕೊಳ್ಳುವ ಕಥೆಯನ್ನು ಹೇಳುವ, ತನ್ನ ತಪ್ಪುಗಳನ್ನು ಕ್ಷಮಿಸುವ ಕಥೆಯಾಗಿ ನೆನಪಿನಲ್ಲಿ ಉಳಿಯುತ್ತದೆ ಜಾನ್ ಶ್ಲೆಲಿಂಜರ್ ಅವರ ನಿರ್ದೇಶನದ ಈ ಚಿತ್ರ ಮಿಡ್‍ನೈಟ್ ಕೌಬಾಯ್.

ಜಾಕ್ (ರಾಬರ್ಟ್ ಡಿ ನೀರೊ) ಒಬ್ಬ ಮಾಜಿ ಪೊಲೀಸ್, ಈಗ ಒಬ್ಬ ಬೌಂಟಿ ಹಂಟರ್, ಜಾಮೀನಿನ ಮೇಲೆ ಹೊರಗೆ ಬಂದು ತಪ್ಪಿಸಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸುವುದು ಇವನ ಕೆಲಸ. ಜಾನಾಥನ್ ಒಬ್ಬ ಅಕೌಂಟಂಟ್, ಜಾಮೀನಿನಲ್ಲಿ ಹೊರಬಂದು ತಪ್ಪಿಸಿಕೊಂಡಿದ್ದಾನೆ. ಈಗ ಅವನನ್ನು ಹಿಡಿದು ಒಪ್ಪಿಸಬೇಕಿದೆ. ಇದು ಮಾರ್ಟಿನ್ ಬ್ರೆಸ್ಟ್ ಅವರ ಮಿಡ್‍ನೈಟ್ ರನ್ ಚಿತ್ರ.

ಜಾನಾಥನ್ ಎಂಬ ಈ ಅಕೌಂಟಂಟ್ ಜಿಮಿ ಸೆರಾನೋ ಎನ್ನುವ ಮಾಫಿಯಾ ಡಾನ್‍ನ ದುಡ್ಡನ್ನೆ ಎಗರಿಸಿ ಚಾರಿಟಿಗೆ ಹಂಚಿದ್ದಾನೆ. ಹಾಗಾಗಿ ಆ ಡಾನ್ ಇವನನ್ನು ಹುಡುಕಿ ಮುಗಿಸಬೇಕಿದೆ. ಪೊಲೀಸರಿಗೂ ಇವನ ಹುಡುಕಾಟ, ಜಾನಾಥನ್‍ನ್ನು ಜಾಕ್ ತನ್ನ ವಶಕ್ಕೆ ತೆಗೆದುಕೊಂಡರೆ ಪೊಲೀಸರ ಕೆಲಸ ಕೆಡುತ್ತೆ ಹಾಗಾಗಿ ಜಾಕ್ ಮೇಲೆ ಕಣ್ಣಿಟ್ಟಿದ್ದಾರೆ. ಯಾರೇ ಬಂಧಿಸಿದರೂ ತನ್ನನ್ನು ಮುಗಿಸಿಬಿಡುವರು ಎಂದು ಜಾನಾಥನ್‍ಗೆ ತಿಳಿದಿದೆ ಹಾಗಾಗಿ ಅವನು ಈ ಮೂವರಿಂದಲೂ ಪಾರಾಗಬೇಕು. ಜಾಕ್‍ಗೆ ಜಾನಾಥನ್‍ನನ್ನು ಹುಡುಕುವುದು ಕಷ್ಟವಾಗಿಲ್ಲ, ಆದರೆ ಅವನನ್ನು ನ್ಯೂ ಯಾರ್ಕ್‍ನಿಂದ ಲಾಸ್ ಏಂಜೆಲ್ಸ್‍ಗೆ ತರಲೇಬೇಕಿದೆ, ಇಲ್ಲದಿದ್ದರೆ ಅವನಿಗೆ ದುಡ್ಡು ಸಿಗುವುದಿಲ್ಲ. ಈ ಪಯಣದಲ್ಲಿ ಅವರಿಬ್ಬರ ಸಂಬಂಧ. ಇಬ್ಬರೂ ಒಳ್ಳೆಯವರೆ ಆದರೆ ಸಂದರ್ಭ ಒಳ್ಳೆಯತನಕ್ಕೆ ಅನುವು ಮಾಡಿಕೊಡುವುದಿಲ್ಲ.

ಇದೊಂದು ಪಕ್ಕಾ ಹಾಲಿವುಡ್ ಫಾರ್ಮುಲಾ ಸಿನೆಮಾ. ಇವುಗಳನ್ನು ‘ಬಡಿ’ (buddy) ಫಿಲ್ಮ್‍ಗಳು ಎನ್ನಲಾಗುತ್ತದೆ. ಇಬ್ಬರು ವ್ಯವಸ್ಥೆ ಮತ್ತು ತಮ್ಮತಮ್ಮ ಪರಿಸ್ಥಿತಿಗಳ ವಿರುದ್ಧ ಹೋರಾಡುವ ಕಥೆ ಹಾಗೂ ಇದೊಂದು ಕಾಮೆಡಿ. ಎಲ್ಲಾ ಪಾತ್ರಗಳಿಗೂ ಒಂದು ಉದ್ದೇಶವಿದೆ, ಕಥೆ ಲೀನಿಯರ್ ಆಗಿ, ಗಂಭೀರಗೊಂಡಂತೆ ಹೆಚ್ಚೆಚ್ಚು ಕಾಮೆಡಿಯಾಗತೊಡಗುತ್ತದೆ. ಸಂಘರ್ಷವೆನ್ನುವುದು ಗಟ್ಟಿಗೊಳ್ಳುತ್ತ ಕ್ಲೈಮ್ಯಾಕ್ಸ್ ತಲುಪುತ್ತದೆ. ಸಾಹಸದೃಶ್ಯಗಳು, ಚೇಸ್‍ಗಳು, ಚಾಪರ್ ಶಾಟ್‍ಗಳನ್ನು ಒಳಗೊಂಡ ಈ ಚಿತ್ರವನ್ನು ಫಾರ್ಮುಲಾ ಚಿತ್ರವೆಂದು ಕರೆದಲ್ಲಿ, ಫಾರ್ಮುಲಾ ಚಿತ್ರದ ಶ್ರೇಷ್ಠ ನಿದರ್ಶನ ಎನ್ನಬಹುದು. ಈ ಚಿತ್ರದ ವಿಶೇಷತೆಯೂ ಇದರ ಕಾಸ್ಟಿಂಗ್. ಬೌಂಟಿ ಹಂಟರ್ ಆಗಿರುವ ರಾಬರ್ಟ್ ಡಿ ನೀರೋ ಯಾವಾಗಲೂ ಗಂಭೀರವಾಗಿಯೇ ಇದ್ದಾನೆ; ಚಾಲ್ರ್ಸ್ ಗೋರ್ಡಿನ್ ಒಬ್ಬ ವೈಟ್‍ಕಾಲರ್ ಕೆಲಸದ ಸಂಭಾವಿತ ವ್ಯಕ್ತಿಯಾಗಿ ಶಾಂತವಾಗೇ ಇರುತ್ತಾನೆ. ಇವರು ಯಾವ ಸಂದರ್ಭದಲ್ಲೂ ಕಾಮೆಡಿ ಮಾಡುವ ಪ್ರಯತ್ನ ಮಾಡುವುದಿಲ್ಲ. ಅವರ ಪರಿಸ್ಥಿತಿಗಳೆ, ಅವರ ಸಂಕಷ್ಟಗಳೇ ಕಾಮೆಡಿಯಾಗಿ ಪರಿಣಮಿಸುತ್ತವೆ.

ಫಾರ್ಮುಲಾ ಚಿತ್ರವಾಗಿದ್ದು, ಹಾಲಿವುಡ್‍ನ ಸ್ಟ್ರಕ್ಚರ್‍ಗೆ ಬದ್ಧವಾಗಿದ್ದು, ಸ್ಟಾರ್‍ಗಳನ್ನು ಹಾಕಿಕೊಂಡರೂ ಈ ಚಿತ್ರ ಮಾನವೀಯತೆಗೆ ಬದ್ಧವಾಗಿದೆ. ಕಾಮೆಡಿ, ಥ್ರಿಲರ್, ಬಡಿ, ಚೇಸ್ ಸಿನೆಮಾ ಎಂಬ ಹಣೆಪಟ್ಟಿಯ ಅಡಿಯಲ್ಲಿ ಬಂದರೂ, ಪಾತ್ರಗಳು ಮಾನವೀಯತೆಯನ್ನು ಎತ್ತಿಹಿಡಿಯುತ್ತವೆ, ಅವರ ಸಮಸ್ಯೆಗಳಿಗೆ ಮಿಡಿಯುವಂತೆ ಮಾಡುತ್ತದೆ. ಜಾಕ್ ತನ್ನ ಮಾಜಿ ಹೆಂಡತಿಯನ್ನು ಭೇಟಿ ಮಾಡುವುದು, ತನ್ನ ಮಗಳನ್ನು ಅನೇಕ ವರ್ಷಗಳ ನಂತರ ನೋಡುವುದು, ಸೆಂಟಿಮೆಂಟಲ್ ಅಂಶಗಳನ್ನು ತುರುಕುವ ಸಲುವಾಗಿ ಸೇರಿಸಿಲ್ಲ. ತಾನು ಹೇಳಬೇಕಾದ ಕಥೆಗೆ ಬದ್ಧನಾಗಿ ಪ್ರಾಮಾಣಿಕವಾಗಿ ಹೇಳಿದ್ದರಿಂದಲೇ ಮೂಡಿಬಂದಿದ್ದು ಮಿಡ್‍ನೈಟ್ ರನ್ ಎನ್ನುವ ಮಾರ್ಟಿನ್ ಬ್ರೆಸ್ಟ್ ಅವರ ನಿರ್ದೇಶನದ ಅದ್ಭುತ ಚಿತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...