Homeಮುಖಪುಟಮರೆಯಲಾಗದ ಮಿನುಗುತಾರೆ ಕಲ್ಪನಾ ನಮ್ಮನಗಲಿದ ದಿನವಿಂದು

ಮರೆಯಲಾಗದ ಮಿನುಗುತಾರೆ ಕಲ್ಪನಾ ನಮ್ಮನಗಲಿದ ದಿನವಿಂದು

ಹಣ್ಣೆಲೆ ಚಿಗುರಿದಾಗ, ಮುಕ್ತಿ, ಶರಪಂಜರ, ಮಿನುಗುತಾರೆ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಕಲ್ಪನಾರವರು ಕಣ್ಮರೆಯಾಗಿ ಇಂದಿಗೆ 41 ವರ್ಷ. ಆ ನೆನಪಿನಲ್ಲಿ ಅವರ ಕುರಿತು ಒಂದಿಷ್ಟು...

- Advertisement -
- Advertisement -

ಅಪರೂಪದ ಪಾತ್ರಗಳ ಮೂಲಕ ಕನ್ನಡ ನಾಡಿನಾಚೆಗೂ ತಮ್ಮ ಛಾಪು ಮೂಡಿಸಿದ ಮೇರು ತಾರೆ ಕಲ್ಪನಾ. ಅವರು ನಮ್ಮನ್ನಗಲಿ ಈ ಹೊತ್ತಿಗೆ (ಮೇ 12) ನಲವತ್ತೊಂದು ವರ್ಷ.

***

“ನನ್ನ ಇದುವರೆಗಿನ ಈ ಚಿತ್ರರಂಗದ ಅನುಭವವನ್ನು ಯಾವುದಾದರೊಂದು ಶಿಲ್ಪದಲ್ಲಿ ಕಡೆಯಬೇಕೆಂಬ ಮಹದಾಸೆ ಇತ್ತು. ಆ ಯೋಗ್ಯತೆಯನ್ನು ಕಲ್ಪನಾಳಲ್ಲಿ ಗುರುತಿಸಿದೆ. ಆಕೆಗೆ ನನ್ನ ಶಕ್ತಿಯನ್ನು ಧಾರೆ ಎರೆದೆ. ಅವಳು ಅದನ್ನು ಪ್ರೀತಿ, ಭಕ್ತಿಯಿಂದ ಸ್ವೀಕರಿಸಿ ನನ್ನ ಕಲ್ಪನೆಯ ಶಿಲ್ಪವಾಗಿದ್ದಾಳೆ. ಅಲ್ಲದೆ ನನ್ನ ಬಗ್ಗೆ ಅತ್ಯಂತ ಕೃತಜ್ಞತಾ ಭಾವ ಇರಿಸಿದ್ದಾಳೆ’ ಎಂದು ಕಲ್ಪನಾ ಕುರಿತಾಗಿ ಹೇಳಿದ್ದರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಕನ್ನಡ ಚಿತ್ರರಂಗ ಕಂಡ ಪ್ರಮುಖ ನಾಯಕನಟಿ ಕಲ್ಪನಾ ಕಣ್ಮರೆಯಾಗಿ (1979, ಮೇ 12) ಇಂದಿಗೆ 41 ವರ್ಷಗಳು ಸಂದವು.

‘ಸಾಕುಮಗಳು’ (1963) ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಕಲ್ಪನಾ ಸುಮಾರು ಒಂದು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನಲ್ಲಿ ರಾರಾಜಿಸಿದರು. ಏಕಮೇವಾದ್ವಿತೀಯ ನಟಿ ಎನಿಸಿಕೊಂಡ ನಟಿ ’ಮಿನುಗುತಾರೆ’ಯಾಗಿದ್ದು ದುರಂತ ಪಾತ್ರಗಳ ಮೂಲಕವೇ. ನಿರ್ದೇಶಕ ಎಂ.ಆರ್.ವಿಠ್ಠಲ್ ತಮ್ಮ ’ಹಣ್ಣೆಲೆ ಚಿಗುರಿದಾಗ’ (1968) ಚಿತ್ರದ ’ಮಾಲತಿ’ ಪಾತ್ರಕ್ಕೆ ಕಲ್ಪನಾರನ್ನು ಆಯ್ಕೆ ಮಾಡಿಕೊಂಡಿದ್ದರು. ಕಲ್ಪನಾರ ಪ್ರತಿಭೆಯ ಬಗ್ಗೆ ಅರಿವಿದ್ದ ಅವರು ವಸ್ತ್ರಾಲಂಕಾರ, ವರ್ಣಾಲಂಕಾರದ ಬಗ್ಗೆ ಆಕೆಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದರು. ಚಿತ್ರ ಯಶಸ್ವಿಯಾಗಿ ಕಲ್ಪನಾರ ಪಾತ್ರನಿರ್ವಹಣೆ ಪ್ರಶಂಸೆಗೆ ಪ್ರಾಪ್ತವಾಯಿತು.

ಚಿನ್ನದ ಗೊಂಬೆ ಚಿತ್ರದಲ್ಲಿ ಬಿ.ಜಯಾ, ಕಲ್ಪನ (ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ)

ಆದರೆ, ’ಸಂಪ್ರದಾಯಸ್ಥರ ಮನೆತದಲ್ಲಿನ ತರುಣ ವಿಧವೆ ಹಾಗೆ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂಬ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತು. ಈ ಟೀಕೆಯನ್ನು ಒಂದು ಸವಾಲಾಗಿ ಪರಿಗಣಿಸಿದ ಕಲ್ಪನಾ ಚಲನಚಿತ್ರ ಪತ್ರಿಕೆಯೊಂದಕ್ಕೆ ಸುದೀರ್ಘ ಲೇಖನವನ್ನೇ ಬರೆದರು. ಒಂದು ಪ್ರೌಢ ಪ್ರಬಂಧದಂತಿದ್ದ ಆ ಲೇಖನ ಕಲ್ಪನಾ ಅವರ ಅಧ್ಯಯನಶೀಲತೆ, ವಾದ-ವೈಖರಿ, ದಿಟ್ಟತನ ಮುಂತಾದವು ಟೀಕಾಕಾರರನ್ನು ಮೌನವಾಗಿಸಿತ್ತು. ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಆಸಕ್ತಿಯಿಂದ ಚಿತ್ರವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಖ್ಯಾತ ಹಿಂದಿ ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ, ’ನಾನು ನೋಡಿದ ಅತ್ಯುತ್ತಮ ಭಾರತೀಯ ಚಿತ್ರಗಳಲ್ಲಿ ಇದೂ ಒಂದು’ ಎಂದು ನುಡಿದಿದ್ದರು.

ವೇಶ್ಯೆಯೊಬ್ಬಳ ಮಗಳಾಗಿ ನಟಿಸಿದ ಕಲ್ಪನಾರ ’ಮುಕ್ತಿ’ ಚಿತ್ರವೂ ಅಪಾರ ಮನ್ನಣೆ ಪಡೆದುಕೊಂಡಿತು. ಲಂಡನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರದ ಬಗ್ಗೆ ಅಲ್ಲಿನ ಪತ್ರಿಕೆಗಳು ಹೃದಯಸ್ಪರ್ಶಿ ವಿಮರ್ಶೆ ಬರೆದಿದ್ದವು. ಅಮೆರಿಕಾದಲ್ಲಿ ವಿದ್ಯಾರ್ಥಿಗಳಿಗೆಂದೇ ವಿಶೇಷವಾಗಿ ಪ್ರದರ್ಶಿಸಿದ 23 ಭಾರತೀಯ ಚಿತ್ರಗಳಲ್ಲಿ ಈ ಚಿತ್ರವೂ ಇತ್ತು ಎನ್ನುವುದು ಮತ್ತೊಂದು ಹೆಗ್ಗಳಿಕೆ. ಎನ್.ಲಕ್ಷ್ಮೀನಾರಾಯಣ ಅವರಂತಹ ಉತ್ಕೃಷ್ಟ ನಿರ್ದೇಶಕರ ಮನಸ್ಸಿನಲ್ಲಿ ನಾಯಕಿ ಪಾತ್ರವೆಂದರೆ ಅದು ಕಲ್ಪನಾ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಬೀರಿದ ನಟಿಯಾಗಿದ್ದರು ಆಕೆ. ಲಕ್ಷ್ಮೀನಾರಾಯಣ ಅವರು ನಿರ್ದೇಶಿಸಿದ ಆರು ಚಿತ್ರಗಳಲ್ಲಿ ಮೂರು ಚಿತ್ರಗಳಲ್ಲಷ್ಟೇ ನಾಯಕಿ ಪಾತ್ರಗಳಿದ್ದುದು. ಈ ಮೂರೂ ಚಿತ್ರಗಳಿಗೆ ಕಲ್ಪನಾ ನಾಯಕಿಯಾಗಿದ್ದರು!

“ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ…’ ಎನ್ನುತ್ತಲೇ ಪ್ರೇಕ್ಷಕರನ್ನು ದಟ್ಟವಾಗಿ ಸೆರೆ ಹಿಡಿದ ಚಿತ್ರ ’ಶರಪಂಜರ’. ಈ ಚಿತ್ರದ ಮೊದಲ ಪ್ರತಿ ಮದರಾಸಿನಲ್ಲಿ ಪ್ರದರ್ಶಿತವಾದಾಗ ಅನೇಕ ಹಿಂದಿ, ತಮಿಳು, ತೆಲುಗು ಕಲಾವಿದರು ಹಾಗೂ ತಂತ್ರಜ್ಞರಿಂದ ಚಿತ್ರಮಂದಿರ ಭರ್ತಿಯಾಗಿತ್ತು. ಚಿತ್ರ ವೀಕ್ಷಿಸಿದ ಹಿಂದಿ ತಾರೆ ಶರ್ಮಿಳಾ ಟ್ಯಾಗೋರ್, ’ಕಲ್ಪನಾರ ಪಾತ್ರವನ್ನು ಅಷ್ಟೇ ಚೆನ್ನಾಗಿ ಮಾಡಲು ನನ್ನಿಂದ ಆದೀತೋ, ಇಲ್ಲವೋ?’ ಎಂದು ಉದ್ಘರಿಸಿದ್ದರು. ನೇರ, ನಿಷ್ಠುರ ವ್ಯಕ್ತಿತ್ವದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರು ಯಾರನ್ನೂ ಸುಮ್ಮನೆ ಹೊಗಳುವವರಲ್ಲ. ಅಂತಹ ಕಾರಂತರು, ’ಕೋಟಿ ಚೆನ್ನಯ’ ತುಳು ಚಿತ್ರದಲ್ಲಿನ ಕಲ್ಪನಾರ ಪಾತ್ರವನ್ನು ಮೆಚ್ಚಿಕೊಂಡು ಕಲ್ಪನಾರಿಗೊಂದು ಸುದೀರ್ಘ ಪತ್ರ ಬರೆದಿದ್ದರು. ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿಯೂ, ತಾವು ಅದರಲ್ಲಿ ಮುಖ್ಯ ಪಾತ್ರ ವಹಿಸಲು ಸಾಧ್ಯವೇ?’ ಎಂದು ಪತ್ರದಲ್ಲಿ ಬರೆದಿದ್ದರಂತೆ. ಕಾರಂತರ ಕರೆಗೆ ಮನ್ನಣೆ ನೀಡಿದ ಕಲ್ಪನಾ, ಅವರು ನಿರ್ದೇಶಿಸಿದ ಏಕೈಕ ವಾಕ್ಚಿತ್ರ ’ಮಲಯ ಮಕ್ಕಳು’ಗೆ ನಾಯಕಿಯಾದರು.

ಹೀಗೆ, ನಾಡಿನ ಹಾಗೂ ದೇಶ-ವಿದೇಶಗಳಲ್ಲಿಯೂ ತಮ್ಮ ಪಾತ್ರಗಳಿಗೆ ಮನ್ನಣೆ ಪಡೆದ ನಟಿ ಬದುಕಿಗೆ ವಿದಾಯ ಹೇಳಿದಾಗ ಅವರಿಗೆ ಮೂವತ್ತಾರು ವರ್ಷವಷ್ಟೆ. 1963ರಲ್ಲಿ ಚಿತ್ರಜಗತ್ತನ್ನು ಪ್ರವೇಶಿಸಿ 1978ರವರೆಗೆ ಹದಿನೈದು ವರ್ಷಗಳಲ್ಲಿ 51 ನಿರ್ದೇಶಕರ 78 ಚಿತ್ರಗಳಲ್ಲಿ ನಟಿಸಿದರು. ಈ ಪಟ್ಟಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು ಚಿತ್ರಗಳೂ ಸೇರಿವೆ. ಪಂಚಭಾಷೆಗಳಲ್ಲಿ ಅಭಿನಯಿಸಿದ ನಟಿ ಬೆಳ್ಳಿತೆರೆಯ ಧ್ರುವತಾರೆಯಾಗಿ ಮಿಂಚಿದರು.

***


ಇದನ್ನೂ ಓದಿ: ಸ್ಯಾಂಡಲ್‍ವುಡ್: ಅಬ್ಬರದ ಮಧ್ಯೆ ಕಣ್ಮರೆಯಾಗುತ್ತಿರುವ ‘ಅಮ್ಮ’ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...