ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿ ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಹಾಗೂ ಮುಂದಿನ ಎರಡು ವರ್ಷಗಳಲ್ಲಿ ಭಾರತಕ್ಕೆ ದೊಡ್ಡ ಅಪಾಯವೊಡ್ಡಲಿದೆ ಎಂದು ವರ್ಲ್ಡ್ ಇಕನಾಮಿಕ್ ಫೋರಂ ತನ್ನ ವರದಿಯಲ್ಲಿ ತಿಳಿಸಿದೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತಕ್ಕೆ ಇತರ ಪ್ರಮುಖ ಅಪಾಯಗಳೆಂದರೆ ಸಾಂಕ್ರಾಮಿಕ ರೋಗಗಳು, ಅಕ್ರಮ ಆರ್ಥಿಕ ಚಟುವಟಿಕೆ, ಅಸಮಾನತೆ ಮತ್ತು ಕಾರ್ಮಿಕರ ಕೊರತೆ ಎಂದು ಸಂಸ್ಥೆ ಹೇಳಿದೆ.
#Misinformation and #disinformation are the world’s biggest short-term risks, while extreme #weather and critical change to Earth systems are the greatest long-term concerns, according to our Global Risks Report 2024.
Read our Global Risks Report 2024, published with… pic.twitter.com/C8ySZzAxPb
— World Economic Forum (@wef) January 10, 2024
ಭಾರತ ಸೇರಿದಂತೆ ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆಗಳು ನಡೆಯಲಿರುವ ದೇಶಗಳಲ್ಲಿ ತಪ್ಪು ಮಾಹಿತಿಯು ಸರ್ಕಾರಗಳ ನ್ಯಾಯ ಸಮ್ಮತತೆಯನ್ನು ಗಂಭೀರವಾಗಿ ಅಸ್ಥಿರಗೊಳಿಸಬಹುದು ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ 18ನೇ ಲೋಕಸಭೆಗೆ ಮುಂದಿನ ಏಪ್ರಿಲ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ವರ್ಲ್ಡ್ ಇಕನಾಮಿಕ್ ಫೋರಂನ ‘ದಿ ಗ್ಲೋಬಲ್ ರಿಸ್ಕ್ಸ್ ರಿಪೋರ್ಟ್’ ಅನ್ನು ಶಿಕ್ಷಣ, ಉದ್ಯಮ, ಸರ್ಕಾರಿ ಕ್ಷೇತ್ರಗಳ 1500 ತಜ್ಞರ ಸಮೀಕ್ಷೆಯ ಆಧಾರದಲ್ಲಿ ಸಿದ್ಧಪಡಿಸಲಾಗಿದ್ದು ಮುಂದಿನ ಎರಡು ಮತ್ತು 10 ವರ್ಷಗಳ ಅವಧಿಯಲ್ಲಿ ಜಾಗತಿಕ ಆರ್ಥಿಕತೆಗಳು ಎದುರಿಸುವ ಅಪಾಯಗಳನ್ನು ಅಂದಾಜಿಸುವ ಯತ್ನವನ್ನು ಮಾಡಿದೆ.
The top 5 risks that are most likely to present a material crisis on a global scale in 2024.
Read our Global Risks Report 2024, published with @MarshMcLennan and @Zurich, for more information:https://t.co/5N0VFeDkBG#wef24 #risks24 pic.twitter.com/abikCSw0Xm
— World Economic Forum (@wef) January 10, 2024
ವರದಿಯು ಆರ್ಥಿಕ, ಪರಿಸರ, ಭೌಗೋಳಿಕ ರಾಜಕೀಯ, ಸಾಮಾಜಿಕ ಮತ್ತು ತಾಂತ್ರಿಕ ಹೀಗೆ ಐದು ವರ್ಗಗಳಾಗಿ ಜಾಗತಿಕ ಅಪಾಯಗಳನ್ನು ಉಲ್ಲೇಖಿಸಿದೆ. ‘ತಪ್ಪು ಮಾಹಿತಿ’ ಎಂಬುದು ತಾಂತ್ರಿಕ ಅಪಾಯಗಳ ಅಡಿಯಲ್ಲಿ ಒಂದು ಉಪ-ವರ್ಗವಾಗಿದೆ.
ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ ಆಗ ಅಲ್ಲಿನ ಸಿಎಂ ಆಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ತೋರಿಸುವ ಬಿಬಿಸಿ ಸಾಕ್ಷ್ಯಚಿತ್ರದ ಉದಾಹರಣೆಯನ್ನೂ ಈ ವರದಿ ಉಲ್ಲೇಖಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಸಾಕ್ಷ್ಯಚಿತ್ರದ ವಿಡಿಯೋವನ್ನು ಟ್ವಿಟರ್, ಯುಟ್ಯೂಬ್ನಿಂದ ಕಳೆದ ವರ್ಷದ ಜನವರಿಯಲ್ಲಿ ತೆಗೆದು ಹಾಕಲಾಗಿತ್ತು. ಪ್ರಜಾಪ್ರಭುತ್ವಗಳಲ್ಲೂ ಸಹ ನೈಜ ಅಥವಾ ಕಲ್ಪಿತ ವಿದೇಶಿ ಹಸ್ತಕ್ಷೇಪದ ಮೇಲಿನ ಕಾರ್ಯಾಚರಣೆಯು ಈಗಿರುವ ನಿಯಂತ್ರಣವನ್ನು ಬಲಪಡಿಸಲು ಬಳಸಬಹುದು ಎಂಬುದನ್ನು ವರದಿ ಎತ್ತಿ ತೋರಿಸಿದೆ.
ಇದನ್ನೂ ಓದಿ : 2 ತಿಂಗಳ ಅವಧಿಯಲ್ಲಿ UAPAಯಡಿ 9 ಮುಸ್ಲಿಂ ಯುವಕರನ್ನು ಬಂಧಿಸಿದ ಉತ್ತರಪ್ರದೇಶದ ಎಟಿಎಸ್!