Homeಮುಖಪುಟ2 ತಿಂಗಳ ಅವಧಿಯಲ್ಲಿ UAPAಯಡಿ 9 ಮುಸ್ಲಿಂ ಯುವಕರನ್ನು ಬಂಧಿಸಿದ ಉತ್ತರಪ್ರದೇಶದ ಎಟಿಎಸ್‌!

2 ತಿಂಗಳ ಅವಧಿಯಲ್ಲಿ UAPAಯಡಿ 9 ಮುಸ್ಲಿಂ ಯುವಕರನ್ನು ಬಂಧಿಸಿದ ಉತ್ತರಪ್ರದೇಶದ ಎಟಿಎಸ್‌!

- Advertisement -
- Advertisement -

“ಐಸಿಸ್ ಮಾಡ್ಯೂಲ್” ನೆಪದಲ್ಲಿ ಉತ್ತರಪ್ರದೇಶದ ಪೊಲೀಸರು ಮುಸ್ಲಿಂ ಯುವಕರ ಬಂಧನವನ್ನು ಮುಂದುವರಿಸಿದ್ದು, ಕಳೆದ ಎರಡು ತಿಂಗಳಲ್ಲಿ ರಾಜ್ಯದ ಒಳಗೆ ಮತ್ತು ಹೊರಗೆ ಭಯೋತ್ಪಾದನಾ ಆರೋಪದ ಮೇಲೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಹಾಲಿ ಮತ್ತು ಮಾಜಿ ಸೇರಿ 9 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

2023ರ ನ.23ರಂದು ಲಕ್ನೋದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ದಾಖಲಿಸಿದ ಎಫ್‌ಐಆರ್ ಬಳಿಕ ವಿದ್ಯಾರ್ಥಿಗಳ ಬಂಧನಗಳು ನಡೆದಿವೆ. ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121 ಎ ಮತ್ತು 122 ಜೊತೆಗೆ ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಯುಎಪಿಎಯ ಸೆಕ್ಷನ್ 13, 18, 18 ಬಿ ಮತ್ತು 38ನ್ನು ವಿಧಿಸಲಾಗಿದೆ.

ರಾಜ್ಯದ ವಿರುದ್ಧದ ಅಪರಾಧಕ್ಕೆ  ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು, ಭಯೋತ್ಪಾದಕ ಕೃತ್ಯವನ್ನು ಎಸಗಲು ಪ್ರಯತ್ನಿಸುವುದು, ಭಯೋತ್ಪಾದಕ ಕೃತ್ಯಗಳಿಗೆ ಜನರನ್ನು ನೇಮಿಸಿಕೊಳ್ಳವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರು ಉತ್ತರಪ್ರದೇಶದಲ್ಲಿ ಅಥವಾ ದೇಶದ ಇತರ ಭಾಗಗಳಲ್ಲಿ ದೊಡ್ಡ ಭಯೋತ್ಪಾದಕ ಕೃತ್ಯವನ್ನು ನಡೆಸಲು ಯೋಚಿಸಿಸಿದ್ದರು ಎಂದು ಉತ್ತರಪ್ರದೇಶದ ಎಟಿಎಸ್ ಆರೋಪಿಸಿದೆ.

ಅಲಿಘರ್ ಮುಸ್ಲಿಂ ವಿವಿಯ “ಐಸಿಸ್ ಮಾಡ್ಯೂಲ್” ಆರೋಪಿಸಿ ನವೆಂಬರ್ ಮೊದಲ ವಾರದಲ್ಲಿ ಈ ಕುರಿತ ಮೊದಲ ಬಂಧನ ನಡೆದಿದೆ. ಜನವರಿ 8, 2024ರಂದು ಎಟಿಎಸ್ ಅಮಾಸ್ ಅಹ್ಮದ್‌ನನ್ನು ಅಲಿಘರ್‌ನಲ್ಲಿ ಬಂಧಿಸಿತ್ತು. ಸಂಭಾಲ್‌ನ ಅಬ್ದುಲ್ ಸಮದ್ ಮಲಿಕ್ (25) ಸ್ಥಳೀಯ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ. ಅಹ್ಮದ್ 2022ರಲ್ಲಿ AMUನಿಂದ ಮನೋವಿಜ್ಞಾನದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದರು. ಸಮದ್ ಮಲಿಕ್ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಏಳು ಮಂದಿಯೊಂದಿಗೆ ಈ ಇಬ್ಬರು ವ್ಯಕ್ತಿಗಳು ಎಎಂಯುನಲ್ಲಿ ಐಸಿಸ್ ಮಾಡ್ಯೂಲ್‌ನ್ನು ಸಿದ್ಧಪಡಿಸುತ್ತಿದ್ದಾರೆ ಮತ್ತು ಅದಕ್ಕೆ ಇತರರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಯುಪಿ ಎಟಿಎಸ್ ಆರೋಪಿಸಿದೆ. ಬಂಧಿತರೆಲ್ಲರೂ ಐಸಿಸ್‌ಗೆ ನಿಷ್ಠೆಯ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 5 ರಂದು ಇಬ್ಬರು ಮಾಜಿ ಎಎಮ್‌ಯು ವಿದ್ಯಾರ್ಥಿಗಳಾದ ಅಬ್ದುಲ್ಲಾ ಅರ್ಸಲಾನ್ ಮತ್ತು ಮಾಜ್ ಬಿನ್ ತಾರಿಕ್ ಅವರನ್ನು ಬಂಧಿಸಲಾಗಿತ್ತು. ಎರಡು ದಿನಗಳ ನಂತರ ಯುಪಿ ಎಟಿಎಸ್ ಛತ್ತೀಸ್‌ಗಢದ ದುರ್ಗ್‌ನಿಂದ ಎಎಮ್‌ಯುನಿಂದ ಪಿಎಚ್‌ಡಿ ಪೂರ್ಣಗೊಳಿಸಿದ್ದ ವಜಿಹುದ್ದೀನ್ ಎಂಬ ಮೂರನೇ ವ್ಯಕ್ತಿಯನ್ನು ಬಂಧಿಸಿದೆ. ಕಳೆದ ನವೆಂಬರ್ 11ರಂದು ಎಟಿಎಸ್, ರಖೀಬ್ ಇಮಾಮ್,  ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್, ಮೊಹಮ್ಮದ್ ನಜೀಮ್ ಅವರನ್ನು ಬಂಧಿಸಿತ್ತು. ನೋಮನ್, ನಾಜಿಮ್ ಮತ್ತು ಸಿದ್ದಿಕಿ ಅವರನ್ನು ಅವರ ಹುಟ್ಟೂರಾದ ಸಂಭಾಲ್ ಜಿಲ್ಲೆಯಿಂದ ಬಂಧಿಸಲಾಗಿದ್ದು, ಇಮಾಮ್ ಅವರನ್ನು ಅಲಿಘರ್‌ನಲ್ಲಿ  ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳು ಹಿಂಸಾತ್ಮಕ ಜಿಹಾದ್ ಮೂಲಕ ಸರ್ಕಾರವನ್ನು ಉರುಳಿಸಲು ಮತ್ತು ಷರಿಯಾ ಕಾನೂನನ್ನು ಹೇರಲು ಯೋಜಿಸುತ್ತಿದ್ದರು ಎಂದು ಎಟಿಎಸ್ ಆರೋಪಿಸಿದೆ. ನಾಲ್ವರು ಐಸಿಸ್ ಸಾಹಿತ್ಯವನ್ನು ಸಮಾನ ಮನಸ್ಸಿನ ವ್ಯಕ್ತಿಗಳಿಗೆ ಹಂಚುತ್ತಿದ್ದರು, ರಹಸ್ಯ ಸಭೆಗಳನ್ನು ಸೇರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಯುವಕರೆಲ್ಲರೂ SAMU ಎಂಬ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘಟನೆ ಜೊತೆ ಸಂಬಂಧ ಹೊಂದಿದ್ದರು. ಈ ಸಂಘಟನೆ ಕ್ಯಾಂಪಸ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದು ವಿದ್ಯಾರ್ಥಿಗಳ ಸಂಘಟನೆಯಾಗಿದೆ. ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಆರಂಭಿಕ ಹಂತದಲ್ಲಿ ಸರಿಯಾದ ಪುರಾವೆಗಳಿಲ್ಲದೆ ದೊಡ್ಡ ಆರೋಪ ಹೊರಿಸುತ್ತಿರುವ ತನಿಖೆಯ ಬಗ್ಗೆ ಅನೇಕ ವಿದ್ಯಾರ್ಥಿಗಳು  ಮಾತನಾಡುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಆಲಿಗಢ್ ಮುಸ್ಲಿಂ ವಿವಿಯ ಅಧಿಕಾರಿಯೊಬ್ಬರು ಮಾತನಾಡುತ್ತಾ, ಪೊಲೀಸರ ನಿರೂಪಣೆಯು “ಆಧಾರರಹಿತ”, ಎಟಿಎಸ್ ಹೇಳಿರುವ ಆರೋಪಗಳು ಇನ್ನೂ ಸಾಬೀತಾಗಿಲ್ಲ, ಅಂತಹ ನಡವಳಿಕೆ ವಿರುದ್ಧ ವಿಶ್ವವಿದ್ಯಾಲಯವು “ಶೂನ್ಯ ಸಹಿಷ್ಣುತೆ” ನೀತಿಯನ್ನು ಹೊಂದಿದೆ. ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಮತ್ತು ವಿಶ್ವವಿದ್ಯಾನಿಲಯವು ತನಿಖೆಗೆ ಸಹಕರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯದ ಕೆಲವು ಮಾಜಿ ಮತ್ತು ಹಾಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿದಿದ್ದರೂ, ಯಾವುದೇ ಸಂಸ್ಥೆಗಳು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎಂದು AMUನ ವಾಸಿಂ ಅಲಿ ಹೇಳಿದ್ದಾರೆ. ಈ ಆರೋಪಗಳ ಕುರಿತ ಸತ್ಯ ಮತ್ತು ಅವುಗಳನ್ನು ಯಾವ ಆಧಾರದ ಮೇಲೆ ಮಾಡಲಾಗಿದೆ ಎಂದು ತನಿಖೆಯ ಮೂಲಕ ತಿಳಿಯಲಾಗುವುದು ಅಥವಾ ನ್ಯಾಯಾಲಯದಲ್ಲಿ ನಿರ್ಧರಿಸಲಾಗುವುದು ಎಂದು ಅಲಿ ಹೇಳಿದ್ದಾರೆ.

ಈ ಬಂಧನಗಳು ಮತ್ತು ಯುಪಿ ಪೊಲೀಸರು ಆಪಾದಿಸಿದ ಐಸಿಸ್ ಮಾಡ್ಯೂಲ್ ಜೊತೆ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಸಂಬಂಧ ಕಲ್ಪಿಸುವುದು ಎಎಂಯು ಮೇಲೆ ಆಳವಾಗಿ ಪರಿಣಾಮ ಬೀರುವುದಿಲ್ಲ ಎಂದು ಅಲಿ ಹೇಳಿದರು. ವಿಶ್ವವಿದ್ಯಾನಿಲಯದಲ್ಲಿ 25,000 ವಿದ್ಯಾರ್ಥಿಗಳಿದ್ದಾರೆ. ಪ್ರತಿ ವರ್ಷ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಈ ಪೈಕಿ 3-4 ವಿದ್ಯಾರ್ಥಿಗಳು, ಅವರಲ್ಲಿ ಹೆಚ್ಚಿನವರು ಮಾಜಿ ವಿದ್ಯಾರ್ಥಿಗಳು, ಅಂತಹ ಆರೋಪಗಳನ್ನು ಎದುರಿಸಿದರೆ, ಅದು ವಿಶ್ವವಿದ್ಯಾಲಯದ ಇಮೇಜ್ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಆಲಿಗಢ್ ಮುಸ್ಲಿಂ ವಿವಿಯ ವಾಸಿಂ ಅಲಿ ಹೇಳಿದ್ದಾರೆ.

ಇದನ್ನು ಓದಿ: ಮುಜಾಫರ್‌ನಗರ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ: ಯುಪಿ ಸರಕಾರಕ್ಕೆ ಸುಪ್ರೀಂಕೋರ್ಟ್‌ ತರಾಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...