Homeಮುಖಪುಟಮೋದಿ ದೇವರ ಅವತಾರ: ಉತ್ತರ ಪ್ರದೇಶದ ಸಚಿವೆ ವಿವಾದಾತ್ಮಕ ಹೇಳಿಕೆ

ಮೋದಿ ದೇವರ ಅವತಾರ: ಉತ್ತರ ಪ್ರದೇಶದ ಸಚಿವೆ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಉತ್ತರ ಪ್ರದೇಶದ ಸಚಿವರಾದ ಗುಲಾಬ್ ದೇವಿ ಅವರು ಅಕ್ಟೋಬರ್ 26ರಂದು ಸಂಭಾಲ್‌ನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. “ಪ್ರಧಾನಿ ಮೋದಿಯವರು ದೇವರ ಅವತಾರ. ಅವರು ಇಚ್ಛಿಸಿದರೆ ತಮ್ಮ ಜೀವನಪೂರ್ತಿ ಪ್ರಧಾನಿಯಾಗಿರಬಹುದು” ಎಂದಿದ್ದಾರೆ ಗುಲಾಬ್‌ ದೇವಿ.

“ಪ್ರಧಾನಿ ನರೇಂದ್ರ ಮೋದಿಯವರನ್ನು ಭೂಮಿಯ ಮೇಲಿನ ದೇವರ ಅವತಾರ ಎಂದು ಕರೆದಿರುವ ಬಗ್ಗೆ ಕ್ಷಮೆಯಾಚಿಸುವುದಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.

‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಜೊತೆ ಮಾತನಾಡಿರುವ ಅವರು, “ಜನರ ಮನೆಗಳಿಗೆ ನೀರು ತಲುಪಬೇಕು ಎಂದು ಅವರು (ಮೋದಿ) ಬಯಸಿದರೆ, ನೀರು ತಲುಪಲು ಪ್ರಾರಂಭಿಸುತ್ತದೆ. ಬಡವರಿಗೆ ಮನೆ ಸಿಗಬೇಕು ಎಂದು ಅವರು ಬಯಸಿದಾಗ, ಮನೆಗಳ ನಿರ್ಮಾಣ ಆರಂಭವಾಗುತ್ತದೆ. ಜನರು ಗ್ಯಾಸ್ ಸಂಪರ್ಕವನ್ನು ಪಡೆಯಬೇಕು ಎಂದು ಅವರು ಬಯಸಿದಾಗ, ಸಂಪರ್ಕಗಳು ಪ್ರಾರಂಭವಾಗುತ್ತವೆ. ಶೌಚಾಲಯಗಳು ನಿರ್ಮಾಣವಾಗುತ್ತವೆ. ಇದು ಮೋದಿಯವರನ್ನು ದೇವರ ಅವತಾರವನ್ನಾಗಿ ಮಾಡಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಲಾಬ್ ದೇವಿ ಅವರು ಅಕ್ಟೋಬರ್ 26‘ರಂದು ಸಂಭಾಲ್‌ನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅವರು ಮೋದಿಯನ್ನು ದೇವರಿಗೆ ಸಮೀಕರಿಸುವ ಹೇಳಿಕೆಯನ್ನು ಅಂದು ನೀಡಿದರು. “ಮೋದಿ ಬಯಸಿದರೆ ತಮ್ಮ ಜೀವಿತಾವಧಿಯವರೆಗೆ ಪ್ರಧಾನಿಯಾಗಿರುತ್ತಾರೆ” ಎಂದಿದ್ದರು.

ಸಚಿವೆಯ ಹೇಳಿಕೆಗೆ ಸಮಾಜ ಪಕ್ಷದ ಸಂಸದ ಶಫಿಕೂರ್ ರೆಹಮಾನ್ ಬಾರ್ಕ್ ಪ್ರತಿಕ್ರಿಯಿಸಿ, “ಪಿಎಂ ನಿಜಕ್ಕೂ ದೇವರ ಅವತಾರವಾಗಿದ್ದರೆ, ಅವರು ರಾಜಕೀಯದಲ್ಲಿ ಏನು ಮಾಡುತ್ತಿದ್ದರು?” ಎಂದು ಕೇಳಿದ್ದಾರೆ. “ಮೋದಿ ಅವರು ರಾಜೀನಾಮೆ ನೀಡಬೇಕು. ಗುಲಾಬ್ ದೇವಿ ಅವರು ಕುತಂತ್ರದ ಮಿತಿಯನ್ನು ದಾಟಿದ್ದಾರೆ” ಎಂದು ಅವರು ಟೀಕಿಸಿದ್ದಾರೆ.

ಗುಲಾಬ್‌ ದೇವಿ, “ತಮ್ಮ ವೈಯಕ್ತಿಕ ನಂಬಿಕೆ ಏನೆಂಬುದರ ಬಗ್ಗೆ ಯಾರಿಗೂ ಸಮಸ್ಯೆಯಾಗಬಾರದು. ಪ್ರತಿಪಕ್ಷಗಳಿಗೆ ತನಗೆ ಅನಿಸಿದ್ದನ್ನು ಮಾತನಾಡಲು ಎಲ್ಲ ಹಕ್ಕಿದೆ. ಹಿಂದೂ ಧರ್ಮದಲ್ಲಿ ದೇವರನ್ನು ಮರಗಳಲ್ಲಿ, ಹಸುಗಳಲ್ಲಿ, ತಂದೆ-ತಾಯಿಗಳಲ್ಲಿ, ಗುರುಗಳಲ್ಲಿ ಕಾಣಲಾಗುತ್ತದೆ. ಹಾಗಾದರೆ ದೇಶದ ರಾಜನನ್ನು ದೇವರ ಪ್ರತಿನಿಧಿ (ಪ್ರತಿನಿಧಿ) ಎಂದು ನೋಡುವುದರಲ್ಲಿ ತಪ್ಪೇನು?” ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿಯವರು ಗುಲಾಬ್ ದೇವಿಯವರ ಮಾತುಗಳನ್ನು ಬೆಂಬಲಿಸಿ ಪ್ರತಿಕ್ರಿಯೆ ನೀಡಿದ್ದಾರೆ. “ನಾವು ಗೌರವಿಸುವ ವ್ಯಕ್ತಿಯನ್ನು ಈ ರೀತಿ ಕರೆಯುತ್ತೇವೆ. ನಾವು ಸಾರ್ವಜನಿಕರನ್ನು ದೇವರೆಂದು ಸಹ ಉಲ್ಲೇಖಿಸುತ್ತೇವೆ. ಅದೇ ರೀತಿ ಸಚಿವರು ಪ್ರಧಾನಿಯ ಬಗ್ಗೆ ತಮ್ಮ ವೈಯಕ್ತಿಕ ಗೌರವವನ್ನು ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದ್ದಾರೆ.

67 ವರ್ಷದ ಗುಲಾಬ್ ದೇವಿ ಅವರು ಸಂಭಾಲ್‌ನ ಚಂದೌಸಿ ಅಸೆಂಬ್ಲಿ ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿರುವ ಐವರು ಮಹಿಳಾ ಸಚಿವರಲ್ಲಿ ಇವರು ಹಿರಿಯವರಾಗಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ರಾಜಕೀಯ ವಿಜ್ಞಾನ ಉಪನ್ಯಾಸಕಿಯಾಗಿದ್ದ ಗುಲಾಬ್ ದೇವಿಯವರು, ದಲಿತ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಅಪ್ಪು ಬಗ್ಗೆ ಹಗುರವಾಗಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆಯೇ?

ಆದಿತ್ಯನಾಥ್ ಅವರ ಅಧಿಕಾರದ ಮೊದಲ ಅವಧಿಯಲ್ಲಿ ಗುಲಾಬ್ ದೇವಿ ಅವರು ಸಮಾಜ ಕಲ್ಯಾಣ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಈಗ ಪ್ರೌಢ ಶಿಕ್ಷಣ ಇಲಾಖೆಯ ಸ್ವತಂತ್ರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಇಂಗ್ಲೆಡ್ ಮಾದರಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರನ್ನು ಭಾರತದ ಪ್ರಧಾನಿಯನ್ನಾಗಿ ಮಾಡಬೇಕೆಂದು ಪ್ರತಿಪಕ್ಷಗಳ ನಾಯಕರು ಹೇಳಿದ್ದರು. ಈ ಕುರಿತು ಕೆಲವು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ ಗುಲಾಬ್‌ ದೇವಿಯವರು, “ಮೋದಿಜಿ ದೇವರ ಅವತಾರ” ಎಂದು ಬಣ್ಣಿಸಿದ್ದರು.

“ಭಾರತೀಯ ಮೂಲದ ಹಿಂದೂವಾಗಿರುವ ರಿಷಿ ಸುನಕ್ ಇಂಗ್ಲೆಡ್‌ನಲ್ಲಿ ಪ್ರಧಾನಿಯಾಗಿದ್ದಾರೆ. ಆ ದೇಶದ ನಡೆಯಿಂದ ಭಾರತ ಪಾಠ ಕಲಿಯಬೇಕು. ಅಲ್ಪಸಂಖ್ಯಾತ ಸಮುದಾಯದ ಜನರು ದೇಶವನ್ನು ಮುನ್ನಡೆಸಲು ಅವಕಾಶ ನೀಡಬೇಕು” ಎಂದು ಹೇಳಿದವರಲ್ಲಿ ಎಸ್‌ಪಿ ಸಂಸದರಾದ ಬಾರ್ಕ್ ಕೂಡ ಒಬ್ಬರಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಮೋದಿ ದೇವರ ಅವತಾರವಲ್ಲಾ… ದೆವ್ವದ ಅವತಾರ… ಈ ದೇಶಕ್ಕೆ ಹಿಡಿದ ಕೊಳ್ಳಿ ದೆವ್ವ ಅದು

  2. ಗೋಧ್ರಾದಲ್ಲಿ ತಾನು ರಾಕ್ಷಸನ ಅವತಾರ ಎಂದು ಈತನೇ ಸಾಬೀತು ಮಾಡಿದ್ದಾನೆ ಪಾಪ !!!😢😢😢😢😢

LEAVE A REPLY

Please enter your comment!
Please enter your name here

- Advertisment -

Must Read

ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ್

0
ಸುದ್ದಿ ವಾಹಿನಿಗಳು ಮತ್ತು ಮುದ್ರಣ ಮಾಧ್ಯಮಗಳು ತನ್ನ ವಿರುದ್ದ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಮಾಜಿ ಉಪ ಮುಖ್ಯ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪುತ್ರ...