Homeಕರ್ನಾಟಕಮುರುಘಾ ಮಠದ ಅಧಿಕಾರಿಯ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಪತ್ರಕರ್ತನ ವಿರುದ್ಧ ಎಫ್‌ಐಆರ್!

ಮುರುಘಾ ಮಠದ ಅಧಿಕಾರಿಯ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಪತ್ರಕರ್ತನ ವಿರುದ್ಧ ಎಫ್‌ಐಆರ್!

ಅತ್ಯಾಚಾರ ಪ್ರಕರಣವೊಂದರಲ್ಲಿ ಮುರುಘಾ ಮಠದ ಅಧಿಕಾರಿಗಳ ವಿರುದ್ಧ ಮಹಿಳೆಯೊಬ್ಬರು ಎಫ್‌ಐಆರ್ ದಾಖಲಿಸಿದ್ದರು. ಈ ಕುರಿತು ತನಿಖಾ ವರದಿ ಮಾಡಿರುವ ಮಹಂತೇಶ್, ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದಾಖಲೆಗಳ ಸಮೇತ ಒದಗಿಸಿದ್ದರು.

- Advertisement -
- Advertisement -

ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿಯ ಭಾವಚಿತ್ರವನ್ನು ಸುದ್ದಿಯೊಂದರಲ್ಲಿ ಬಳಸಿದ್ದಕ್ಕಾಗಿ ಖ್ಯಾತ ಮತ್ತು ಸಂವೇದನಾಶೀಲ ಪತ್ರಕರ್ತ ಮತ್ತು ದಿ ಫೈಲ್‌ನ ಮುಖ್ಯಸ್ಥ ಜಿ ಮಹಂತೇಶ್ ವಿರುದ್ಧ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.

ಅತ್ಯಾಚಾರ ಪ್ರಕರಣವೊಂದರಲ್ಲಿ ಮುರುಘಾ ಮಠದ ಅಧಿಕಾರಿಯೊಬ್ಬರ ವಿರುದ್ಧ ಮಹಿಳೆಯೊಬ್ಬರು ಎಫ್‌ಐಆರ್ ದಾಖಲಿಸಿದ್ದರು. ಈ ಕುರಿತು ತನಿಖಾ ವರದಿ ಮಾಡಿರುವ ಮಹಂತೇಶ್, ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದಾಖಲೆಗಳ ಸಮೇತ ಒದಗಿಸಿದ್ದರು.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಮಹಂತೇಶ್, “ಈ ಪ್ರಕರಣದಲ್ಲಿ ಮುರುಘಾ ಶರಣರ ಭಾವಚಿತ್ರ ಬಳಸಿರುವುದಕ್ಕೆ ನಾನು ಸ್ಪಷ್ಟನೆ ನೀಡುತ್ತೇನೆ. ಈ ಅತ್ಯಾಚಾರ ಪ್ರಕರಣದಲ್ಲಿ ಮಠದ ಆಡಳಿತಾಧಿಕಾರಿ ಸೇರಿದಂತೆ ಇತರೆ 3 ಅಧಿಕಾರಿಗಳ ಹೆಸರಿದೆ. ಜೊತೆಗೆ ಈ ವಿಷಯ ಮುರುಘಾ ಶರಣರಿಗೆ ಗೊತ್ತಿದೆ ಎಂದು ಅತ್ಯಾಚಾರ ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾರೆ. ಒಂದು ಮಠದ ಉನ್ನತ ಅಧಿಕಾರಿ ಮಠಾಧೀಶರೇ ಆಗಿರುತ್ತಾರೆ. ಹಾಗಾಗಿ ಸಾಂಕೇತಿಕವಾಗಿ ಮುರುಘಾ ಶರಣರ ಭಾವಚಿತ್ರವನ್ನು ಬಳಸಿದ್ದೇನೆ. ಇಷ್ಟಕ್ಕೆ ಮಠದವರು ನನ್ನ ವಿರುದ್ಧ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ” ಎಂದು ಹೇಳಿದರು.

ಮಹಾಂತೇಶ್ ವಿರುದ್ಧ ದಾಖಲಾಗಿರುವ ಎಫ್‌ಐಆರ್

ಇನ್ನು ಈ ಪ್ರಕರಣ ದಾಖಲಾದ ನಂತರ, ಮುರುಘಾ ಶರಣರು ಪತ್ರಿಕಾ ಘೋಷ್ಠಿ ನಡೆಸಿ, “ಮುರುಘಾ ಮಠವನ್ನು ರಕ್ತಸಂಬಂಧಗಳಿಂದ ಮುಕ್ತಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಹಾಗಾಗಿ 10 ಅಧಿಕಾರಿಗಳಿಂದ ರಾಜೀನಾಮೆ ಪಡೆಯಲಾಗಿದೆ” ಎಂದು ಹೇಳಿದ್ದರು. ಈ ಏಕಮುಖ ಪತ್ರಿಕಾ ಗೋಷ್ಠಿಯಲ್ಲಿ ಶರಣರು ಬಹುತೇಕ ಗೊಂದಲಗಳನ್ನು ಉಳಿಸಿದ್ದಾರೆ ಎಂದು ಮತ್ತೊಂದು ವರದಿ ಮಾಡಿದ್ದೆ. ಜೊತೆಗೆ, ಇತ್ತೀಚೆಗೆ ಮಠದ ಆಸ್ತಿ ಮತ್ತು ಹಣ ದುರುಪಯೋಗ ಆಗಿದೆ ಎಂದು ಶರಣರಿಗೆ ಕೋರ್ಟ್ ನೋಟಿಸ್ ನೀಡಿತ್ತು. ಅದನ್ನೂ ವರದಿ ಮಾಡಿದ್ದೆ. ಇದಕ್ಕೆ ನೊಂದುಕೊಂಡ ಮಠ, ನನ್ನನ್ನು ನಿಗೂಢ ವ್ಯಕ್ತಿ ಎಂದು ಕರೆದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಮಹಂತೇಶ್ ವಿವರಿಸಿದರು.

 

ಮಠ ಹೊರಡಿಸಿರುವ ಪತ್ರಿಕಾ ಹೇಳಿಕೆ

ನಾನು ಮಾಡಿರುವ ಪ್ರತಿ ವರದಿಗೂ ದಾಖಲೆಗಳಿವೆ. ಹಾಗಾಗಿ ಮಠದ ಈ ಕ್ರಮದ ವಿರುದ್ಧ ದೆಹಲಿಯಲ್ಲಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಲಿಖಿತ ದೂರು ನೀಡಿದ್ದೇನೆ. ಬೆಂಗಳೂರಿನಲ್ಲಿರುವ ಪತ್ರಕರ್ತರ ಸಂಘಕ್ಕೂ ದೂರು ನೀಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: 1856ರಲ್ಲೇ ಸಮಾನತೆಯ ಪ್ರಶ್ನೆ ಎತ್ತಿದ್ದ ಧಾರವಾಡದ ಎರ್‍ಲೂ ಬಿನ್ ನಾರಾಯಣ್

ಘಟನೆಯ ಹಿನ್ನೆಲೆ ಏನು?

ವರದಿ- 1

ಫೆಬ್ರವರಿ 6ರಂದು ಮಹಂತೇಶ್, “ಅತ್ಯಾಚಾರ ಆರೋಪ; ಮುರುಘಾ ಶರಣರ ಸೋದರನಿಗೆ ಜಾಮೀನು ನೀಡಲು ಕೋರ್ಟ್ ನಕಾರ” ಎನ್ನುವ ವರದಿ ಮಾಡಿದ್ದರು. 32 ವರ್ಷದ ಉಪನ್ಯಾಸಕಿಯೊಬ್ಬರನ್ನು ಮುರುಘಾ ಶರಣರ ಪೂರ್ವಾಶ್ರಮದ ಖಾಸಾ ಸಹೋದರ ಮತ್ತು ಮಠದ ಸಿಇಒ (ಆಡಳಿತಾಧಿಕಾರಿ) ಎಂ.ಜಿ ದೊರೆಸ್ವಾಮಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ (ಈಗ ಈ ಎಫ್‌ಐಆರ್ ಅನ್ನು ಯಾರಿಗೂ ಕಾಣದಂತೆ ವೆಬ್‌ಸೈಟ್‌ನಿಂದ ಮರೆಮಾಚಲಾಗಿದೆ. ಇದು ಕಾನೂನು ಬಾಹಿರ). ಹಾಗಾಗಿ ದೊರೆಸ್ವಾಮಿಯವರು ಜಾಮೀನಿಗಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ ಎಂದು ಮಹಂತೇಶ್ ವರದಿ ಮಾಡಿದ್ದರು. ಇದರಲ್ಲಿ ಜಾಮೀನು ನಿರಾಕರಣೆ ಮಾಡಿರುವ ದಾಖಲೆ ಮತ್ತು ಸಂತ್ರಸ್ತ ಮಹಿಳೆ ನೀಡಿರುವ ದೂರಿನ ದಾಖಲೆಯನ್ನೂ ಒದಗಿಸಿದ್ದರು.

ಅದರಲ್ಲಿ ಶ್ರೀ ಜಗದ್ಗುರು ಮುರುಘಾ ರಾಜೇಂದ್ರ ಮಠದ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ ಪರಮಶಿವಯ್ಯ, ಮಠದ ಕಾನೂನು ಸಲಹೆಗಾರರಾದ ಎನ್‌.ಗಂಗಾಧರ್ ಮತ್ತು ಸ್ಥಳೀಯ ಜಂಗಮ ಸಮಾಜದ ಅದ್ಯಕ್ಷ ಎಂ.ಟಿ ಮಲ್ಲಿಕಾರ್ಜುನ ಅವರ ಹೆಸರುಗಳು ಉಲ್ಲೇಖವಾಗಿದೆ. ಸಂತ್ರಸ್ತೆಗೆ ಜೀವ ಬೆದರಿಕೆ ನೀಡಿದ ಆರೋಪ ಈ ಮೂರು ಜನರ ಮೇಲಿದೆ ಎಂಬುದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಜೊತೆಗೆ ದೂರಿನ ಕೊನೆಯಲ್ಲಿ ಈ ಘಟನೆಯನ್ನು ಮುರುಘಾ ಶರಣರ ಗಮನಕ್ಕೂ ತಂದಿರುತ್ತೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಈ ವರದಿಯ ವಿರುದ್ಧ ಮಹಂತೇಶ್‌ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಕಾರಣ, ಇದರಲ್ಲಿ ಶರಣರ ಭಾವಚಿತ್ರ ಬಳಸಲಾಗಿದೆ ಎಂಬುದೇ ಆಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

ವರದಿ- 2

ಫೆಬ್ರವರಿ 16 ರಂದು, “ಸೋದರ ದೊರೆಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ; ಕಡೆಗೂ ಬಾಯ್ಬಿಟ್ಟ ಶರಣರು” ಎಂದು ಮತ್ತೊಂದು ವರದಿ ಮಾಡಿದ್ದರು. ಇದರಲ್ಲಿ, ಶರಣರು ಫೆ. 15 ರಂದು ಮಠದಲ್ಲಿ ನಡೆಸಿದ ತುರ್ತು ಪತ್ರಿಕಾ ಗೋಷ್ಠಿಯ ಬಗ್ಗೆ ಮಹಂತೇಶ್‌ ಬರೆದಿದ್ದಾರೆ. ಕೇವಲ 4 ನಿಮಿಷಗಳ ಪತ್ರಿಕಾ ಗೋಷ್ಠಿಯಲ್ಲಿ ಶರಣರು, “ಮಠವನ್ನು ರಕ್ತಸಂಬಂಧದಿಂದ ಮುಕ್ತಗೊಳಿಸಲು ನಿರ್ಣಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಗೌರವ ಮತ್ತು ಘನತೆಯನ್ನು ಕಾಪಾಡುವ ಸಲುವಾಗಿ 10 ಅಧಿಕಾರಿಗಳಿಂದ ರಾಜೀನಾಮೆ ಪಡೆಯಲಾಗಿದೆ” ಎಂದು ಹೇಳಿದ್ದರು.

ಮುಂದುವರಿದು, ಈ ಮಠ ಒಂದು ಐತಿಹಾಸಿಕ ಮಠವಾಗಿ ಬೆಳೆದು ನಿಂತಿದೆ. ಒಂದು ಸಂಸ್ಥೆ ಎಂದಮೇಲೆ ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿರುತ್ತಾರೆ. ಅವರಲ್ಲಿ ಭಿನ್ನತೆಯೂ ಇರುತ್ತದೆ. ಯಾರು ತಮ್ಮ ಮಿತಿಮೀರಿ ವರ್ತಿಸುತ್ತಾರೋ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಈಗಾಗಲೇ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಹೇಳಿದ ಶರಣರು ಪತ್ರಿಕಾಗೋ‍ಷ್ಠಿಯನ್ನು ಮುಗಿಸಿದ್ದರು ಎಂಬುದಾಗಿ ಮಹಂತೇಶ್ ವರದಿಯಲ್ಲಿ ಹೇಳಿದ್ದಾರೆ. ಶರಣರ ಪತ್ರಿಕಾ ಗೋಷ್ಠಿಯ ನಂತರವೂ ಕೇಳದೇ ಉಳಿದಿದ್ದ ಕೆಲವು ಪ್ರಶ್ನೆಗಳನ್ನೂ ಸಹ ಮಹಂತೇಶ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಶರಣರ ಕೌಟುಂಬಿಕ ವಿವರದಿಂದ ಹಿಡಿದು, ಪ್ರಸ್ತುತ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ಒದಗಿಸಿದ್ದಾರೆ. ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವರದಿ- 3

ಫೆಬ್ರವರಿ 24 ರಂದು, “ಹಣ-ಆಸ್ತಿ ದುರುಪಯೋಗ ಆರೋಪ; ಮುರುಘಾ ಶರಣರಿಗೆ ಹೈಕೋರ್ಟ್ ತುರ್ತು ನೋಟಿಸ್” ಎನ್ನುವ ಮತ್ತೊಂದು ವರದಿಯನ್ನು ಮಹಂತೇಶ್ ಮಾಡಿದ್ದರು. ಈ ವರದಿಯಲ್ಲಿ, “ಮಠದ ಆಸ್ತಿ-ಹಣವನ್ನು ಮಠಾಧೀಶರಾದ ಮುರುಘಾ ಶರಣರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರುದಾರರೊಬ್ಬರು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಶರಣರು ಮಠದ ಸಂಪ್ರದಾಯ ಹಾಗೂ ಧಾರ್ಮಿಕ ಕ್ರಿಯೆಗಳ ಅನೂಚಾನ ಪಾಲನೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು” ಎಂದು ಮಹಂತೇಶ್ ದಾಖಲೆ ಸಮೇತ ತಿಳಿಸಿದ್ದರು.

ಈ ಮೇಲಿನ ಮೂರೂ ವರದಿಗಳು ಮಠದ ಮತ್ತು ಶರಣರ ವಿರುದ್ಧ ಇರುವುದರಿಂದ ಮಹಂತೇಶ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹಲವರು ಖಂಡನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಹಂತೇಶ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಆದಿತ್ಯನಾಥ್ ಮತ್ತು ರಾಹುಲ್ ಗಾಂಧಿ ಇಬ್ಬರದೂ ಒಂದೇ ಭಾವನೆ: ಪಿಣರಾಯಿ ವಿಜಯನ್ ವಾಗ್ದಾಳಿ

ಪತ್ರಕರ್ತ ದಿನೇಶ್ ಕುಮಾರ್ ಅವರು, “ಪತ್ರಕರ್ತ ಜಿ.ಮಹಂತೇಶ್ ಅವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಕಳೆದ ಎರಡು ದಶಕಗಳಿಂದ ಮಹಂತೇಶ್ ಹಲವು ಪತ್ರಿಕೆ, ವಾಹಿನಿಗಳಲ್ಲಿ ಕೆಲಸ ಮಾಡಿದವರು. ‘ದಿ ಫೈಲ್’ ಎಂಬ ನ್ಯೂಸ್ ಪೋರ್ಟಲ್ ಮೂಲಕ ತನಿಖಾ ಪತ್ರಿಕೋದ್ಯಮದ ಹೊಸ ರೂಪವನ್ನು ಬಿಡಿಸಿಟ್ಟವರು. ಮಹಂತೇಶ್ ಏನನ್ನೇ ಬರೆದರೂ ದಾಖಲೆ ಇಟ್ಟುಕೊಂಡೇ, ಜವಾಬ್ದಾರಿಯುತವಾಗಿಯೇ, ಬರೆಯುತ್ತಾರೆ. ದಿ ಫೈಲ್ ಕೋವಿಡ್ ಕಾಲದ ನೂರೆಂಟು ಹಗರಣಗಳನ್ನು ಬಯಲಿಗೆಳೆದಿದ್ದನ್ನು ನಾವು ಗಮನಿಸಿದ್ದೇವೆ. ದಿ ಫೈಲ್ ವರದಿಗಳು ವಿಧಾನಮಂಡಲ ಅಧಿವೇಶದಲ್ಲೂ ಸದ್ದು ಮಾಡಿದವು. ಈಗ ಮುರುಘಾ ಮಠದ ಶರಣರ ಪೂರ್ವಾಶ್ರಮದ ಸೋದರ ಮತ್ತು ಮಠದ ಅಧಿಕಾರಿ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧದ ವರದಿಯಲ್ಲಿ ಶರಣರ ಫೊಟೋ ಬಳಸಿದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇದು ನ್ಯಾಯೋಚಿತವಲ್ಲ. ಶರಣರನ್ನು ಅಪಾರವಾಗಿ ಗೌರವಿಸುವ ನನ್ನಂಥವರಿಗೆ ಇದು ಆಘಾತಕಾರಿ ವಿಷಯ. ನಿಷ್ಠುರ ಪತ್ರಿಕಾವೃತ್ತಿ ನಡೆಸುವವರ ಮೇಲೆ ಪೊಲೀಸರ ಮೂಲಕ ಕೇಸು ದಾಖಲಿಸಿ ಅವರ ಧ್ವನಿ ಹತ್ತಿಕ್ಕುತ್ತ ಹೋದರೆ, ನಾವು ಸಮಾಜದ ಧ್ವನಿಯನ್ನೇ ಕಿತ್ತುಕೊಂಡಂತಾಗುತ್ತದೆ. ಈ ದುರಿತ ಕಾಲದಲ್ಲಿ ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಬಡವರ ಪರವಾಗಿ ಬಡಿದಾಡುವ ಒಂದೊಂದು ಧ್ವನಿಯೂ ಮುಖ್ಯ. ಯಾವುದನ್ನೂ ನಾವು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಶರಣರಿಗೆ ನಿಕಟವಾಗಿರುವವರು ಕೂಡಲೇ ಅವರೊಂದಿಗೆ ಮಾತನಾಡಿ ಇದನ್ನೆಲ್ಲ ನಿಲ್ಲಿಸಲು ಆಗ್ರಹಿಸಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯ ಮುಖಂಡರಾದ ರವಿಕೃಷ್ಣ ರೆಡ್ಡಿಯವರು, “ತಮ್ಮ (ಮುರುಘಾ ಮಠ) ಸಂಸ್ಥೆಯ ಮಾಜಿ ಸಿಬ್ಬಂದಿ ಮೂಲಕ ನೀಡಿರುವ ದೂರನ್ನು ಹಿಂಪಡೆಯಲು ತಾವು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಮಾಣಿಕ ಪತ್ರಕರ್ತರ ಧ್ವನಿ ಅಡಗಿಸುವ ಕೆಲಸ ತಮ್ಮ ಸಂಸ್ಥೆಯ ಯಾರಿಂದಲೂ ಆಗಲು ನ್ಯಾಯಪಕ್ಷಪಾತಿಗಳಾದ ತಾವು ಬಿಡಬಾರದು ಎಂದು ತಮ್ಮಲ್ಲಿ ವಿನಮ್ರತೆಯಿಂದ ಕೋರುತ್ತೇನೆ. ಶ್ರೀಮಠದ ಮತ್ತು ತಮ್ಮ ಜನಪರ ಕಾಳಜಿಯ ಬಗ್ಗೆ ಅಪಾರ ಗೌರವ ಇರುವ ನಮ್ಮಂತಹವರಿಗೆ ತಮ್ಮ ಸಂಸ್ಥೆಯ ಕೆಲವರ ಕೃತ್ಯಗಳಿಂದಾಗಿ ಟೀಕೆ, ಧರಣಿ, ಪ್ರತಿಭಟನೆ ಮಾಡಿ ನ್ಯಾಯ ಪಡೆದುಕೊಳ್ಳಬೇಕಾಗಿ ಬರುವಂತಹ ಪರಿಸ್ಥಿತಿ ಸೃಷ್ಟಿಸಬಾರದಾಗಿ ಕೈಮುಗಿದು ವಿನಂತಿಸುತ್ತೇನೆ” ಎಂದು ಎಫ್‌ಐಆರ್ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಜೊತೆಗೆ ಇನ್ನೂ ಹತ್ತಾರು ಜನ ಪತ್ರಕರ್ತ ಮಹಂತೇಶ್ ಪರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಹಂತೇಶ್ ಅವರ ಮೇಲೆ ಮಠ ತೆಗೆದುಕೊಂಡಿರುವ ಕ್ರಮಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಖಂಡನೆ

ಒಬ್ಬ ಪ್ರಾಮಾಣಿಕ ಪತ್ರಕರ್ತನ ದನಿಯನ್ನು ಅಡಗಿಸಲು ಪ್ರಯತ್ನಿಸುವುದು ನಿಜಕ್ಕೂ ಖಂಡನೀಯ. ಹಾಗಾಗಿ ಪ್ರಜ್ಞಾವಂತರು ಇದರ ವಿರುದ್ಧ ಮಾತನಾಡಲೇ ಬೇಕು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಸಾಂಕ್ರಾಮಿಕದಂತೆ ಹರಡುವುದರಲ್ಲಿ ಸಂದೇಹವಿಲ್ಲ.


ಇದನ್ನೂ ಓದಿ: ಏನಿವು ಮೂರು ಕೃಷಿ ಕಾಯಿದೆಗಳು – ಮರು ಓದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...