Homeಕರ್ನಾಟಕಮೈಸೂರು ಗ್ಯಾಂಗ್ ರೇಪ್‌: ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ನಟ ಚೇತನ್

ಮೈಸೂರು ಗ್ಯಾಂಗ್ ರೇಪ್‌: ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ನಟ ಚೇತನ್

ಎರೆಡೆರೆಡು ಬಾರಿ ಮುಖ್ಯಮಂತ್ರಿಯಾಗಿ ಬೇಜವಾಬ್ದಾರಿಯಾಗಿ ‘ಪ್ರಜಾಪ್ರಭುತ್ವ ವಿರೋಧಿ ಸಲಹೆ’ ನೀಡಿದ್ದಾರೆ ಎಂದು ನಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರದ ವಿರುದ್ದ ರಾಜಕಾರಣಿಗಳು ತಮಗೆ ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಕನ್ನಡದ ಖ್ಯಾತ ಚಿತ್ರ ನಟ ಚೇತನ್ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮ್ಮ ಸಮಾಜದಲ್ಲಿ ಇರುವ ಸ್ತ್ರೀ ವಿರೋಧಿ ತತ್ವ(Sexism)ಗಳನ್ನು ಹೋಗಲಾಡಿಸಿ ಲಿಂಗ ಸಮಾನತೆಯ ರಾಜ್ಯವನ್ನು ನಿರ್ಮಿಸಲು ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ನ ಪುರುಷರು ಮತ್ತು ಮಹಿಳೆಯರು ಅಸಮರ್ಥರಾಗಿದ್ದಾರೆ ಎಂದು ರಾಜ್ಯಕ್ಕೆ ಬಂದ 16 ವರ್ಷಗಳ ನಂತರ ನಾನು ಅರಿತುಕೊಂಡೆ” ಎಂದು ಅವರು ಚೇತನ್‌ ಬೇಸರ ವ್ಯಕ್ತಪಡಿಸಿದ್ದಾರೆ.

“ಅಧಿಕಾರದಲ್ಲಿರುವ ಅನೇಕರು ಮಹಿಳೆಯರ ಮೇಲಿನ ಶೋಷಣೆಯನ್ನು ನಿರಾಕರಿಸುತ್ತಾರೆ, ಆದರೆ ಹೆಚ್ಚಿನವರು ಇದಕ್ಕೆ ಪರಿಹಾರವಾಗಿ ರಕ್ತಪಾತವನ್ನೇ ಪ್ರತಿಪಾದಿಸುತ್ತಾರೆ. ನಮ್ಮ ಶಾಸಕರು ಕಲಿಯಬೇಕು ಮತ್ತು ಕಲಿಸಿಕೊಳ್ಳಬೇಕು” ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣ: ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ 

ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಚೇತನ್‌ ಕುಮಾರ್‌, “ಕುಮಾರ ಸ್ವಾಮಿ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ‘ಮೈಸೂರು ಪ್ರಕರಣ’ದ ಆರೋಪಿಗಳನ್ನು ಆಂಧ್ರ ಮಾದರಿಯಲ್ಲಿ ನಡೆಸಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು.

2019 ರ ಹೈದರಾಬಾದ್ ಅತ್ಯಾಚಾರದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿದ್ದರು. “ಈ ಘಟನೆಯ ಮಾದರಿಯು ಇನ್ನಷ್ಟು ತಪ್ಪುಗಳಿಗೆ ಎಡೆ ಮಾಡಿಕೊಡುತ್ತದೆ. ಶಿಕ್ಷೆಯನ್ನು ನ್ಯಾಯಾಂಗ ನೀಡಬೇಕೆ ವಿನಃ ಪೊಲೀಸರು ಅಲ್ಲ. ಯಾವುದೆ ವಿಚಾರಣೆಯಿಲ್ಲದೆ ಆರೋಪಿಗಳನ್ನು ಸಾಯಿಸುವುದಾದರೆ ದೇಶದಲ್ಲಿ ಕೋರ್ಟ್‌ಗಳು ಯಾಕೆ? ಈ ಮಾದರಿಯನ್ನು ಬಳಸಿಕೊಂಡು ಅಮಾಯರನ್ನೂ ಕೊಲೆ ಮಾಡಬಹುದಲ್ಲವೆ” ಎಂದು ಹಲವಾರು ಜನರು ಹೇಳಿದ್ದರು. 2019 ರ ಹೈದರಾಬಾದ್ ಎನ್‌ಕೌಂಟರ್‌ ಅನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಲಾಗಿತ್ತು.

“ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿಯವರು ಎಂದಿನಂತೆ ಮತ್ತೊಮ್ಮೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮೈಸೂರು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ಕೆಯವರು 2019 ರ ಹೈದರಾಬಾದ್ ಅತ್ಯಾಚಾರದ ಆರೋಪಿತರ ಮೇಲೆ ನಡೆದಂತೆ ಪೋಲಿಸ್ ದೌರ್ಜನ್ಯದಂತ ಪ್ರಜಾಪ್ರಭುತ್ವ ವಿರೋಧಿ ಸಲಹೆಯನ್ನ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನಂತೆಯೆ ಜೆಡಿಎಸ್ ಕೂಡ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು, ಲಿಂಗಸಮಾನತೆಯ ನ್ಯಾಯ ಒದಗಿಸಲು ನಾಲಾಯಕ್ಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು

ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನೂ ಚೇತನ್ ವಿರೋಧಿಸಿದ್ದು, “ಯುವತಿದ್ದೇ ತಪ್ಪೆನ್ನುವ ಹಾಗೆ ಮಾತನಾಡಿರುವುದು ಕೇವಲ ಬಿಜೆಪಿಯೊಂದರ ಸಮಸ್ಯೆಯಲ್ಲ. 2015 ರಲ್ಲಿ, ಕಾಂಗ್ರೆಸ್‌‌ನ ಗೃಹ ಮಂತ್ರಿಯಾಗಿದ್ದ ಪರಮೇಶ್ವರ ಅವರು ಕೂಡ ಅತ್ಯಾಚಾರಕ್ಕೆ ಒಳಗಾದ ಯುವತಿಯು ರಾತ್ರಿ 9.30ರ ಹೊತ್ತಲ್ಲಿ ಆಕೆ ಬೆಂಗಳೂರಿನಲ್ಲಿ ಆಚೆ ಯಾಕಿದ್ದಳು ಎಂದು ಪ್ರಶ್ನೆ ಮಾಡಿದ್ದರು. ಅಧಿಕಾರದಲ್ಲಿರುವ ಅನೇಕ ಮಹಿಳೆಯರು ಕೂಡ ಇದೇ ರೀತಿಯ ಸ್ತ್ರೀ ಶೋಷಣೆಯನ್ನು ಪ್ರದರ್ಶಿಸುತ್ತಾರೆ. ಅಂತರ್ನಿರ್ಮಿತ ಸ್ತ್ರೀ ವಿರೋಧಿ ತತ್ವ(Sexism)ಗಳನ್ನು ಹೋಗಲಾಡಿಸಲು ಲಿಂಗ ಜಾಗೃತಿ ಅಭಿಯಾನಗಳು ಅತ್ಯಗತ್ಯ” ಎಂದು ಹೇಳಿದ್ದಾರೆ.

ಈ ಮಧ್ಯೆ ಮೈಸೂರು ವಿಶ್ವವಿದ್ಯಾಲಯ ಕೂಡಾ ಅತ್ಯಾಚಾರಕ್ಕೆ ಮಹಿಳೆಯರೇ ಕಾರಣ ಎಂಬಂತಹ ನಿಲುವನ್ನು ತೆಳೆದಿದ್ದು, ಸಂಜೆಯ ನಂತರ ವಿದ್ಯಾರ್ಥಿನಿಯರು ಏಕಾಂಗಿಯಾಗಿ ಇರಬಾರದು ಎಂಬಂತಹ ಸುತ್ತೋಲೆಯನ್ನು ಹೊರಡಿಸಿ ವಿವಾಕ್ಕೆ ಈಡಾಗಿದೆ.

“ಇತ್ತೀಚೆಗಿನ ಅತ್ಯಾಚಾರ ಘಟನೆಯ ಹಿನ್ನಲೆಯಲ್ಲಿ, ಇನ್ನು ಮುಂದೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ 6:30ರ ನಂತರ ಹೆಣ್ಣು ಮಕ್ಕಳು ಏಕಾಂಗಿಯಾಗಿ ತಿರುಗಾಡುವುದನ್ನು, ಕೂರುವುದನ್ನು ನಿಷೇಧಿಸಲಾಗಿದೆ” ಎಂದು ವಿಶ್ವವಿದ್ಯಾಲಯದ ಸುತ್ತೋಲೆ ಹೇಳಿದೆ. ಇದರ ವಿರುದ್ದ ಕೂಡಾ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಸಂಜೆ ವೇಳೆ ಹೆಣ್ಣು ಮಕ್ಕಳು ಹೊರಬರಬಾರದು: ಮೈಸೂರು ವಿ.ವಿ ಸುತ್ತೋಲೆಗೆ ತೀವ್ರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...