Homeಮುಖಪುಟಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

ಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

- Advertisement -
- Advertisement -

ಇನ್ನೂ ಒಂದು ವರ್ಷ ಮುಗಿದಿಲ್ಲ; ಇದು ಮೂರನೇ ಆಘಾತ. ಮೊದಲಿಗೆ ರಂಗಾರೆಡ್ಡಿ, ಎರಡು ತಿಂಗಳ ಹಿಂದೆ ಹೆಚ್.ವಿ.ವೇಣುಗೋಪಾಲ್, ಇದೀಗ ಗಂಗಾಧರ ಮೂರ್ತಿ; 1971ರಲ್ಲಿ ನಾನು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕನ ಕೆಲಸಕ್ಕೆ ಸೇರಿದೆ. 1978 ಮತ್ತು ನಂತರ ಈ ಮೂವರು ನಮ್ಮ ಕಾಲೇಜಿನಲ್ಲಿ ಮೇಷ್ಟ್ರುಗಳಾದರು. 1992ರಲ್ಲಿ ನಾನು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿಗೆ ವರ್ಗವಾಗುವವರೆಗೆ ನಾವು ನಾಲ್ವರೂ ಮತ್ತು ಇತರ ಕೆಲವರು ಕಾಲೇಜಿನಲ್ಲಿ ಮತ್ತು ಹೊರಗಡೆ ಜತೆಗೇ ದುಡಿಯುತ್ತಿದ್ದೆವು. ರಂಗಾರೆಡ್ಡಿ ಕನ್ನಡ ಪಾಠ ಮಾಡಿದರೆ, ವೇಣುಗೋಪಾಲ್ ಸಂಸ್ಕೃತ, ಗಂಗಾಧರ ಮೂರ್ತಿಯವರು ಇಂಗ್ಲಿಷ್.

ವಯಸ್ಸಿನಲ್ಲಿ ನನಗಿಂತಲೂ ಮೂರು ವರ್ಷ ಹಿರಿಯರಾದ ಗಂಗಾಧರಮೂರ್ತಿ ಮೈಸೂರಿನಲ್ಲಿ ಅಂಚೆ ಇಲಾಖೆಯ ಆರ್.ಎಂ.ಎಸ್.ನಲ್ಲಿ ಗೆಳೆಯರಾದ ಸಿರಿಮನೆ ನಾಗರಾಜರ ಹಿರಿಯ ಸಹೋದ್ಯೋಗಿಯಾಗಿ ದುಡಿಯುತ್ತಾ, ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದು ನಮ್ಮ ಕಾಲೇಜಿಗೆ ಬಂದರು. ಆ ಹೊತ್ತಿಗಾಗಲೇ ಅವರು ಕಾರ್ಮಿಕ ಸಂಘಟನೆಯ ಭಾಗವಾಗಿದ್ದರು; ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರಲ್ಲದೆ, ಕರ್ನಾಟಕದ ಬೌದ್ಧಿಕ ವಲಯದಲ್ಲಿಯೂ ಹೆಸರು ಮಾಡಿದ್ದರು. ನಾನು ಆಂಧ್ರದಿಂದ ಬಂದು ಇನ್ನೂ ಕನ್ನಡದ ಮೇಲೆ ಸರಿಯಾದ ಹಿಡಿತ ಸಿಗದೆ ತೆಲುಗು-ಇಂಗ್ಲಿಷ್-ಕನ್ನಡಗಳ ನಡುವೆ ಹಾರಾಡುತ್ತಿದ್ದವನು; ಅವರಿಗೆ ಹೋಲಿಸಿದರೆ ಅನನುಭವಿ. ಆದರೆ ನನ್ನ ಚಿಂತನಾಕ್ರಮ, ವೈಚಾರಿಕ ನಿಲುವುಗಳು ಹಿಂದಿನಿಂದಲೂ ತೆಲುಗು, ಇಂಗ್ಲಿಷ್‌ನಲ್ಲಿನ ಪ್ರಗತಿಪರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿದ್ದರಿಂದ ನಾವಿಬ್ಬರೂ ಬಹುಬೇಗನೆ ಬೌದ್ಧಿಕವಾಗಿ ಒಂದೇ ಧಾರೆಯ ಭಾಗವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅವರಿಗಿಂತ ಸೇವಾನುಭವದಲ್ಲಿ ನಾನು ಹಿರಿಯ ಅಥವಾ ಹೋರಾಟದ ಅನುಭವದಲ್ಲಿ, ಸಾಹಿತ್ಯ ಲೋಕದಲ್ಲಿ ಅವರು ನನಗಿಂತ ಹಿರಿಯ, ಪ್ರಖ್ಯಾತ ಅನ್ನುವ ಯಾವ ರೀತಿಯ ಹಮ್ಮುಬಿಮ್ಮುಗಳು ನಮ್ಮನ್ನು ಕಾಡಲಿಲ್ಲವಾದ್ದರಿಂದ, ಕಾಲೇಜಿನ ನಮ್ಮ ವಿಭಾಗದಲ್ಲಾಗಲಿ ಹೊರಗಡೆಯ ಸಾಮಾಜಿಕ ಕಾರ್ಯಕ್ರಮಗಳಲ್ಲಾಗಲಿ ಜತೆಜತೆಯಾಗಿ ನಡೆದೆವು.

ಅದೇ ಸಮಯದಲ್ಲಿ ಅಂದರೆ ಎಂಭತ್ತರ ದಶಕದ ಪ್ರಾರಂಭದಲ್ಲಿ ರಂಗ ಸಂಘಟನೆ ಸಮುದಾಯ ಹಾಗೂ ದಲಿತ ಸಂಘರ್ಷ ಸಮಿತಿಗಳು ಗೌರಿಬಿದನೂರಿಗೂ ಕಾಲಿಟ್ಟವು. ಅವುಗಳ ನಡುವೆ ಹೆಚ್ಚು ಸಮಯದ ಅಂತರವಿರಲಿಲ್ಲ. ಈ ಎರಡೂ ಸಂಘಟನೆಗಳಲ್ಲಿ ನಾವೆಲ್ಲರೂ ಗುರುತಿಸಿಕೊಂಡದ್ದಾಯಿತು. ಗಂಗಾಧರಮೂರ್ತಿಯವರು ದಸಂಸದ ಆರಂಭದ ದಿನಗಳಲ್ಲಿಯೇ ಅದಕ್ಕೆ ಬುನಾದಿ ಹಾಕಿದವರಲ್ಲಿ ಒಬ್ಬರಾಗಿದ್ದವರಿಂದ ನಮಗೆ ವಿಶೇಷವಾದ ಮಾರ್ಗದರ್ಶನ ಸಿಗುವುದು ಸಾಧ್ಯವಾಯಿತು. ನಾವುಗಳು ಸಮುದಾಯದ ರಂಗಚಟುವಟಿಕೆಗಳ ಭಾಗವಾಗಿ ಕೆಲವು ವಿದ್ಯಾರ್ಥಿಗಳ ಜತೆಗೆ ತಂಡವನ್ನೂ ಕಟ್ಟಿಕೊಂಡು ತಾಲೂಕಿನ ಹಲವು ಹಳ್ಳಿಗಳಲ್ಲಿ ಬೀದಿನಾಟಕಗಳನ್ನು ಆಡುತ್ತಿದ್ದೆವು.

ಕೆಲವು ಬಾರಿ ಈ ಪ್ರಯತ್ನಗಳು ನಮ್ಮನ್ನೆಲ್ಲರನ್ನೂ ಅಪಾಯದ ಅಂಚಿಗೂ ತಳ್ಳಿದ್ದಿದೆ. ಅಂಥ ಸಂದರ್ಭಗಳಲ್ಲಿ ಎಲ್ಲರೂ ಸಮಾನವಾಗಿ ಸಮಸ್ಯೆಗಳನ್ನ ಮತ್ತು ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದುದುಂಟು. ಅಂತೂ ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕೆಂಬ ಉತ್ಸಾಹ ನಮ್ಮಲ್ಲಿ ತುಂಬಿತ್ತು, ನಮ್ಮೆಲ್ಲರ ಹಿರಿಯರಾದ ಬಿಜಿಎಂ ಅಲ್ಲಿ ನಮ್ಮ ದಾರಿದೀಪವಾಗಿದ್ದರು.

ದಸಂಸದ ಕಾರ್ಯಕಲಾಪಗಳ ಭಾಗವಾಗಿ ಹಳ್ಳಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಕರ್ತರಿಗಾಗಿ ವಿಶೇಷ ತರಗತಿಗಳು ನಮ್ಮ ಕಾರ್ಯಸೂಚಿಯಲ್ಲಿ ಸೇರಿದ್ದವು. ಊರಿನ ಕೆಲವು ಉತ್ಸಾಹಿ ತರುಣರು ಸಹಸದಸ್ಯರಾಗಿದ್ದ ’ವಿಚಾರ ವೇದಿಕೆ’ಯಡಿ ಪ್ರತಿ ತಿಂಗಳಿನಲ್ಲಿ ಒಂದೆರಡು ಬಾರಿ ಹೊರಗಿನಿಂದ ತಜ್ಞರನ್ನು ಕರೆಸಿ ಉಪನ್ಯಾಸಗಳು, ಚರ್ಚೆಗಳು ಏರ್ಪಡಿಸುತ್ತಿದ್ದ ಕಾಲವದು. ಬಿಜಿಎಂ ಅವರಿಗಿದ್ದ ಸಂಪರ್ಕಗಳಿಂದಾಗಿ ಇಂತ ಚಿಂತಕರನ್ನು, ಸಾಹಿತಿಗಳನ್ನು ಕರೆಸುವುದು ನಮಗೆ ಕಷ್ಟವಾಗಲಿಲ್ಲ.

ಇದೆಲ್ಲದರ ಜತೆಗೆ ಆ ಸಮಯದಲ್ಲಿ ಅಲ್ಲಿ ಕಾಲೂರಬಯಸುತ್ತಿದ್ದ ಆರ್‌ಎಸ್‌ಎಸ್‌ಅನ್ನು ಸಹ ಬೌದ್ಧಿಕನೆಲೆಯಲ್ಲಿ ವಿರೋಧಿಸುವಲ್ಲಿ ಬಿಜಿಎಂ ಅವರ ಹಿಂದಿನ ಅನುಭವ ನಮ್ಮ ನೆರವಿಗಿತ್ತು. ಕಾಲೇಜಿನ ಒಳಗೂ ಸಹ ಕೆಲವು ಸಮಸ್ಯೆಗಳು ತಲೆ ಎತ್ತಿದಾಗ ಅದನ್ನು ಸಮನಾಗಿ ಎದುರಿಸಿ ಆಡಳಿತದ ನಿಷ್ಠೂರವನ್ನು ಅನುಭವಿಸಬೇಕಾಯಿತು.

ದಸಂಸದ ಹೋರಾಟಗಳಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ನಡೆದ ನಾಗಸಂದ್ರ ಭೂ ಹೋರಾಟ ಅತಿ ಮುಖ್ಯವಾದದ್ದು. ನಾಗಸಂದ್ರವೆಂಬ ಹಳ್ಳಿಯ ಭೂಮಾಲಿಕರ ಹತ್ತಿರ ಜೀತಕ್ಕಿದ್ದು, ಕನಿಷ್ಠ ಕೂಲಿಗೆ ದುಡಿಯುವ ಆಳುಗಳಾಗಿಯೇ ಇದ್ದವರಲ್ಲಿ ಅತಿ ಹೆಚ್ಚು ಜನರು ದಲಿತರು. ಘನತೆ ತುಂಬಿದ ಬದುಕಿಗಾಗಿ ಅಲ್ಲಿನ ಸುತ್ತಮುತ್ತಲಿನ ಈಚಲ ವನವನ್ನು ಕಡಿದು ಕೃಷಿಗೆ ಯೋಗ್ಯವಾಗಿಸಿ ಆಕ್ರಮಿಸುವುದು ಚಳವಳಿಯ ಯೋಜನೆಯಾಗಿತ್ತು. ಆ ಮೂಲಕ ಅವರು ಜೀತದಾಳು ಸ್ಥಿತಿಯಿಂದಲೂ ಬಿಡುಗಡೆಯಾಗಬಹುದೆಂಬ ಆಶಯ ದಲಿತ ಚಳವಳಿಯದ್ದಾಗಿತ್ತು. ಇದಕ್ಕೆ ಬಿಜಿಎಂರವರೇ ಮುಖ್ಯಮಾರ್ಗದರ್ಶಕರಾಗಿದ್ದರು; ನಾವು ಅದರ ಭಾಗಿಗಳು; ಪೊಲೀಸರ ಲಾಠಿ ಏಟಿನ ರುಚಿ ನೋಡಿದವರು ಯುವಕಾರ್ಯಕರ್ತರು; ಈಚಲ ವನದ ಜಾಗದಲ್ಲಿ ಬೇಸಾಯದ ಭೂಮಿ ಸಿದ್ಧವಾಯಿತು. ಶಂಭೂಕ ನಗರವೆಂಬ ಕಾಲೋನಿ ನಿರ್ಮಾಣವಾಯಿತು. ತಕ್ಷಣದಲ್ಲಿ ಯಶಸ್ವಿಯಾದೆವು. ಆದರೆ ನಂತರದ ಬೆಳವಣಿಗೆಗಳು ಭ್ರಮನಿರಸನ ಮೂಡಿಸುವಂಥವು.

ಈ ಎಲ್ಲ ಚಟುವಟಿಕೆಗಳ ನಡುವೆಯೂ ನಮ್ಮನಮ್ಮ ಬೌದ್ಧಿಕ, ಶೈಕ್ಷಣಿಕ ಕಾರ್ಯಗಳೂ ಮುಂದುವರಿದವು. ಅವರ ಬರಹಗಳು, ಅನುವಾದಗಳು ಹೊರಬಂದವು. ಜತೆಗೆ, ನಾವೂ ಸಹ ಬರಹದಲ್ಲಿ ತೊಡಗಿಕೊಳ್ಳುವಂತಾಯಿತು. ನಾನು ಮತ್ತು ಗಂಗಾಧರ ಮೂರ್ತಿಯವರು ಮಿಲ್ಟನ್‌ನ ಮಹಾಕಾವ್ಯದಂಥ ಇಂಗ್ಲಿಷ್ ಅಭಿಜಾತ ಸಾಹಿತ್ಯದ ಮರು ಓದಿನಲ್ಲಿಯೂ ಒಂದಾಗುತ್ತಿದ್ದೆವು. ಆ ಸಮಯದಲ್ಲಿ ಕಾಲೇಜಿನ ಗ್ರಂಥಾಲಯಕ್ಕಾಗಿ ಯುಜಿಸಿಯಿಂದ ದೊಡ್ಡಮೊತ್ತದ ಅನುದಾನ ದೊರಕಿದ್ದರಿಂದ ಒಂದು ಒಳ್ಳೆಯ ಇಂಗ್ಲಿಷ್ ವಿಭಾಗವನ್ನೂ ಗ್ರಂಥಾಲಯದ ಭಾಗವಾಗಿಸುವುದರಲ್ಲಿಯೂ ಅವರ ಪಾತ್ರ ದೊಡ್ಡದು.

1992ರಲ್ಲಿ ಬೆಂಗಳೂರಿಗೆ ವರ್ಗವಾಗಿ ಮತ್ತೆ 2002ರಲ್ಲಿ ಅದೇ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಹಿಂದಿರುಗಿ ಒಂದು ವರ್ಷವಿದ್ದಾಗಲೂ ನಮ್ಮ ಸ್ನೇಹ ಹಿಂದಿನಂತೆಯೇ ಮುಂದುವರಿಯಿತು.

ಈ ಎಲ್ಲದರ ನಡುವೆ ಕೆಲವರ್ಷಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂದಿದ್ದೂ ನಮಗೆ ತಿಳಿದಿತ್ತು. ಅವರ ಸಂಗಾತಿ ಗೌರಮ್ಮನವರು ಅವರನ್ನು ಒಂದು ಮಗುವಿನಂತೆ ನೋಡಿಕೊಂಡಿದ್ದರಿಂದ ಕೊನೆಯವರೆಗೂ ತಮ್ಮ ಅನಾರೋಗ್ಯವನ್ನೂ ನಿಭಾಯಿಸುವುದು ಸಾಧ್ಯವಾಯಿತು. ತಮ್ಮ ಉಸಿರು ನಿಂತ ಮೇಲೂ ಇತರರಿಗೆ ಉಪಕಾರವಾಗಲೆಂಬ ಉದ್ದೇಶದಿಂದ ಬೆಂಗಳೂರು ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನವನ್ನಾಗಿ ಕೊಡುವ ಅವರ ಇಚ್ಛೆಯನ್ನು ಕುಟುಂಬದವರು ಪೂರೈಸಿದ್ದಾರೆ. ಅವರ ಕಣ್ಣುಗಳು ಮತ್ತು ಇತರ ಅಂಗಗಳು ಬೇರೆ ಯಾರಲ್ಲಿಯೋ ಮನೆ ಮಾಡಿರುತ್ತವೆ. ಅವರು ಮತ್ತೆ ಹುಟ್ಟಿಬರಬೇಕಾಗಿಲ್ಲ; ಆ ನಂಬಿಕೆಯೂ ಅವರಿಗಿರಲಿಲ್ಲ. ಅವರ ಆಶಯಗಳು, ಆದರ್ಶಗಳು ಇಂದಿನ ಪೀಳಿಗೆಯವರಿಗೆ ಅನುಕರಣೀಯವೆಂದು ಕಂಡರೆ ಅವರ ಜೀವನ ಸಾರ್ಥಕ.


ಇದನ್ನೂ ಓದಿ: ಮರುಓದು: ಪ್ರೊ.ಬಿ.ಗಂಗಾಧರ ಮೂರ್ತಿಯವರು ಅನುವಾದಿಸಿರುವ ‘ದೇಶವಿಭಜನೆಯ ವಾಸ್ತವ ಸತ್ಯಗಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...