ಒಕ್ಕೂಟ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ ಒಂಬತ್ತು ತಿಂಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳ ಸಿಂಘು ಗಡಿಯಲ್ಲಿ ರಾಷ್ಟ್ರೀಯ ಸಮಾವೇಶವನ್ನು ರೈತರು ಆಯೋಜಿಸಿದ್ದಾರೆ.
ರೈತರು, ಮಹಿಳೆಯರು, ಯುವಕರು ಮತ್ತು ಕಾರ್ಮಿಕರ ಸಂಘಟನೆಗಳ 1,500 ಪ್ರತಿನಿಧಿಗಳು ಭಾಗವಹಿಸುವ ಈ ಕಾರ್ಯಗಾರವು ಎರಡು ದಿನಗಳು ನಡೆಯಲಿದೆ. ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಚಳುವಳಿಯ ತೀವ್ರತೆ ಮತ್ತು ವಿಸ್ತರಣೆಯ ಗುರಿಯನ್ನು ಈ ಕಾರ್ಯಗಾರ ಹೊಂದಿದೆ.
ಸಮಾವೇಶದ ಭಾಗವಾಗಿ, ಉದ್ಘಾಟನಾ ಅಧಿವೇಶನ ಸೇರಿದಂತೆ ಮೂರು ಗೋಷ್ಠಿಗಳು ಗುರುವಾರ ನಡೆಯಲಿದೆ. ಕೈಗಾರಿಕಾ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಒಂದು ಗೋಷ್ಠಿ. ಕೃಷಿ ಕಾರ್ಮಿಕ, ಗ್ರಾಮೀಣ, ಬಡ ಮತ್ತು ಬುಡಕಟ್ಟು ಜನರ ಕುರಿತು ಮತ್ತೆರಡು ಗೋಷ್ಠಿಗಳು ನಡೆಯಲಿವೆ.
ಇದನ್ನೂ ಓದಿ: ಕೃಷಿ ಕಾಯ್ದೆ, ಎಂಎಸ್ಪಿ ಬೇಡಿಕೆ ಈಡೇರದಿದ್ದರೆ ಸೆ.8 ರಿಂದ ಪ್ರತಿಭಟನೆ: ಕೇಂದ್ರಕ್ಕೆ RSS ಅಂಗಸಂಸ್ಥೆ ಬಿಕೆಎಸ್ ಎಚ್ಚರಿಕೆ
The farmers have been protesting against the Farm laws at the Delhi borders since November 26 and today it marks 9 months. The Indian government has still not repealed the laws. Please keep supporting our farmers.#FarmersProtest#9MonthsOfFarmersProtest pic.twitter.com/ScN0zJASih
— BKU EKTA UGRAHAN (@Bkuektaugrahan) August 26, 2021
ಮೂರು ಕಾರ್ಪೊರೇಟ್ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಲ್ಲಾ ಬೆಳೆಗಳ ಎಂಎಸ್ಪಿಗೆ ಕಾನೂನು ಖಾತರಿ ಮಾಡುವುದು, 2021-ವಿದ್ಯುತ್ ಬಿಲ್ ರದ್ದು ಮತ್ತು ಎನ್ಸಿಆರ್ನಲ್ಲಿನ ವಾಯು ಗುಣಮಟ್ಟ ನಿರ್ವಹಣೆಯ ಆಯೋಗದ ಅಡಿಯಲ್ಲಿ ರೈತರ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಕುರಿತು ಸಮಾವೇಶದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.
ಗುರುವಾರ ಹೋರಾಟಕ್ಕೆ 9 ತಿಂಗಳು ತುಂಬಿದ ಹಿನ್ನೆಲೆ ಟ್ವಿಟರ್ನಲ್ಲಿ #9MonthsOfFarmersProtest ಮತ್ತು #FarmersProtest ಹ್ಯಾಶ್ಟ್ಯಾಗ್ ಟಾಪ್ ಒನ್ ಟ್ರೆಂಡಿಂಗ್ನಲ್ಲಿದೆ.
On 26th November 2020 #FarmersProtest has started in India for the Repeal of Black Laws and today on 26 August 2021 thousands of farmers are still on different borders of Delhi, capital city of India.#9MonthsOfFarmersProtest pic.twitter.com/q6aHRlk0rX
— ਅਮਨਦੀਪ ਕੌਰ? (@Amandeep_45) August 26, 2021
ಕಳೆದ ವರ್ಷ ನವೆಂಬರ್ ನಿಂದ ಮೂರು ವಿವಾದಿತ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ರದ್ದುಗೊಳಿಸುತ್ತದೆ. ಮತ್ತು ಕಾರ್ಪೋರೇಟರ್ಗಳಿಗೆ ಹೆಚ್ಚಿನ ಲಾಭ ನೀಡುತ್ತವೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.
ಈ ಕುರಿತು ರೈತರು ಮತ್ತು ಒಕ್ಕೂಟ ಸರ್ಕಾರದೊಂದಿಗೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಕಾನೂನುಗಳು ರದ್ದತಿಯೊಂದೆ ಮುಖ್ಯ ಎಂದಿರುವ ರೈತರು ಪಟ್ಟು ಹಿಡಿದು ಪ್ರತಿಭಟನ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಪ್ಪಂದಿರ ಹೊಲಗಳಲ್ಲಿನ ಪರಿಶ್ರಮ, ಒಲಿಂಪಿಕ್ಸ್ನಲ್ಲಿ ಮಕ್ಕಳ ಪ್ರತಿಫಲ