Homeಮುಖಪುಟಶೇ 60 ಕ್ಕಿಂತ ಹೆಚ್ಚು ಸಿಬ್ಬಂದಿಯ ವೇತನ ಕಡಿತಗೊಳಿಸಿದ ರಾಷ್ಟ್ರೀಯ ಜವಳಿ ನಿಗಮ

ಶೇ 60 ಕ್ಕಿಂತ ಹೆಚ್ಚು ಸಿಬ್ಬಂದಿಯ ವೇತನ ಕಡಿತಗೊಳಿಸಿದ ರಾಷ್ಟ್ರೀಯ ಜವಳಿ ನಿಗಮ

ರಾಷ್ಟ್ರೀಯ ಜವಳಿ ನಿಗಮದಲ್ಲಿ ಪಿಪಿಇ ಸೂಟ್ ತಯಾರಾದರೆ ಅದರ ವೆಚ್ಚ‌ ಕೇವಲ 90 ರೂ. ಆಗಿರುತ್ತದೆ. ರಿಲಾಯನ್ಸ್ ಇಂಡಸ್ಟ್ರಿಯ ಪಿಪಿಇ ಸೂಟ್‌ ಒಂದರ ಬೆಲೆ 650 ರೂ. ಆಗಿದೆ.

- Advertisement -
- Advertisement -

ಸ್ಮೃತಿ ಇರಾನಿ ನೇತೃತ್ವದ ಜವಳಿ ಸಚಿವಾಲಯದ ಅಡಿಯಲ್ಲಿ ಬರುವ, ರಾಷ್ಟ್ರೀಯ ಜವಳಿ ನಿಗಮ(NTC)ದ ನಿರ್ವಹಣೆ ಮತ್ತು ಗಿರಣಿ ಸಿಬ್ಬಂದಿಗೆ ಲಾಕ್‌ಡೌನ್ ಸಮಯದಲ್ಲಿ ಸಂಬಳವನ್ನು ಪಾವತಿಸಿಲ್ಲ ಎಂದು ತಳಿದು ಬಂದಿದೆ.

ಮಾರ್ಚ್‌ನಿಂದ ಗಿರಣಿ ಕಾರ್ಮಿಕರಿಗೆ ಅವರ ಸಂಬಳದ ಒಂದು ಭಾಗವನ್ನು ಮಾತ್ರ ನೀಡಲಾಗುತ್ತಿದ್ದು, ನಿರ್ವಹಣಾ ಸಿಬ್ಬಂದಿಗೆ ಜೂನ್ ತಿಂಗಳ ಸಂಬಳ ದೊರೆತಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿಗೆ, ಕಾರ್ಮಿಕ ಸಚಿವಾಲಯ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿಗೆ ಪತ್ರಗಳನ್ನು ಬರೆಯಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ಉದ್ಯೋಗದಾತರಿಗೆ ಪೂರ್ಣ ವೇತನ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದರೂ ಇಂತಹ ಪ್ರಮಾದ ನಡೆದಿದೆ.ಸಂಬಳ ಪಾವತಿಸಲು ವಾರ್ಷಿಕ ಬಜೆಟ್ ರೂ. 350 ಕೋಟಿ, ಅಂದರೆ ಮಾಸಿಕ 29.16 ಕೋಟಿ ಬೇಕಾಗುತ್ತದೆ. NTC ಯಲ್ಲಿ 300 ನಿರ್ವಹಣಾ ನೌಕರರು ಮತ್ತು 7,200 ಗಿರಣಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ ಮೊದಲ ಲಾಕ್‌ಡೌನ್‌ ಘೋಷಿಸಿದಾಗ, NTC ಯ ಕಾರ್ಮಿಕರಿಗೆ ಅವರ ಸಂಬಳದ 75% ಮಾತ್ರ ಸಿಕ್ಕಿದ್ದು, ಏಪ್ರಿಲ್ ನಲ್ಲಿ 60% ಮತ್ತು ಮೇ ತಿಂಗಳಲ್ಲಿ ಕೇವಲ 40% ಸಂಬಳವನ್ನು ಪಡೆದಿದ್ದಾರೆ ಎನ್ನಲಾಗಿದೆ.

“ಮಾರ್ಚ್‌‌‌ನಲ್ಲಿ ಕಾರ್ಮಿಕರಿಗೆ ಅವರು ಕೆಲಸ ಮಾಡಿದ ದಿನಗಳವರೆಗೆ ಮಾತ್ರ ಸಂಬಳ ನೀಡಲಾಗಿದೆ. ಗಿರಣಿ ಕೆಲಸಗಾರನ ಸರಾಸರಿ ವೇತನ ರೂ. 8,000 ಆಗಿದ್ದು, ಜೂನ್ ತಿಂಗಳಿಗೆ ನಮಗೆ ಹಣ ಪಾವತಿಸಲಾಗಿಲ್ಲ. ಈ ತಿಂಗಳು ನಮಗೆ ದೊರೆಯುವ ಮೊತ್ತದ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಕಾರ್ಮಿಕರು ತಿಂಗಳಿಗೆ 3,200 ಕ್ಕಿಂತ ಕಡಿಮೆ ಆದಾಯವನ್ನು ಹೇಗೆ ನಿರೀಕ್ಷಿಸಬಹುದು” ಎಂದು ಜವಳಿ ನೌಕರರ ಒಕ್ಕೂಟದ (ಐಎನ್‌ಟಿಯುಸಿ) ಪ್ರಧಾನ ಕಾರ್ಯದರ್ಶಿ ಫೂಲ್ ಸಿಂಗ್ ಯಾದವ್ ಹೇಳಿದ್ದಾರೆ. ವೇತನವನ್ನು ಪೂರ್ಣವಾಗಿ ಪಾವತಿಸಬೇಕೆಂದು ಕಾರ್ಮಿಕರು ತಮಿಳುನಾಡು ಮತ್ತು ಮುಂಬಯಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಿರ್ವಹಣಾ ಸಿಬ್ಬಂದಿಗಳಲ್ಲಿ ದೆಹಲಿಯಲ್ಲಿರುವವರಿಗೆ ಮಾತ್ರ ಪೂರ್ಣ ವೇತನ ಸಿಕ್ಕಿದೆ. ಉಳಿದವರೆಲ್ಲರಿಗೂ ಮೂಲ ವೇತನವನ್ನು ಮಾತ್ರ ನೀಡಲಾಯಿತು. ನಮ್ಮ ಸಂಬಳಕ್ಕೆ ಎರಡು ಅಂಶಗಳಿವೆ – ಮೂಲ ಮತ್ತು ಪ್ರಿಯ ಭತ್ಯೆಗಳು. ಇದು 2:3 ರ ಅನುಪಾತದಲ್ಲಿದೆ. ಉದಾಹರಣೆಗೆ, ವ್ಯಕ್ತಿಯ ಸಂಬಳವು 1 ಲಕ್ಷವಾಗಿದ್ದರೆ, 40,000 ರೂ. ಮೂಲವಾಗಿರುತ್ತದೆ. ಉಳಿದ 60,000 ಪ್ರಿಯ ಭತ್ಯೆಯಾಗಿದೆ. ದೆಹಲಿಯ ಹೊರಗಿನ ಹೆಚ್ಚಿನ ಸಿಬ್ಬಂದಿ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಇದು ಕಿರುಕುಳವಲ್ಲದೆ ಮತ್ತೇನಲ್ಲ. ಇಂದಿನಂತೆ, ನಮ್ಮಲ್ಲಿ ಯಾರಿಗೂ ಜೂನ್ ಸಂಬಳ ಸಿಕ್ಕಿಲ್ಲ” ಎಂದು ಹಿರಿಯ ನಿರ್ವಹಣಾ ತಂಡದಲ್ಲಿ ಕೆಲಸ ಮಾಡುವ ಕಸ್ತೂರಿ ರಾಜನ್ (ಹೆಸರನ್ನು ಬದಲಾಯಿಸಲಾಗಿದೆ) ಹೇಳಿದ್ದಾರೆ.

ಮಾರ್ಚ್ ಅಂತ್ಯದಿಂದ ಗಿರಣಿಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಯಾದವ್ ಹೇಳಿದರು. “ಸರ್ಕಾರದ ಯೋಜನೆ ಏನು? ಅವರು ಗಿರಣಿಗಳನ್ನು ಸ್ವಚ್ಚ ಗೊಳಿಸಲು ಮತ್ತು ಉತ್ಪಾದನೆಗೆ ಯಾಕೆ ತೆರೆಯಲು ಸಾಧ್ಯವಿಲ್ಲ? ಗಿರಣಿಗಳು ಯಾವಾಗ ಮತ್ತೆ ತೆರೆಯುತ್ತವೆ ಎಂಬ ಬಗ್ಗೆ ಮೌನವಾಗಿದೆ. ನಮ್ಮಲ್ಲಿ ಹಲವರು ಮೇ ತಿಂಗಳಿನ ಪೂರ್ಣ ಸಂಬಳವನ್ನು ಕೋರಿ ಇಲ್ಲಿನ ಗಿರಣಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದರು” ಎಂದು ಯೂನಿಯನ್ ನಾಯಕ ಒತ್ತಿಹೇಳಿದ್ದಾರೆ.

ಹೇಗಾದರೂ, NTC ನಷ್ಟವನ್ನುಂಟು ಮಾಡುವ ವಲಯ ಎಂದು ತೋರಿಸಿ ಅಂತಿಮವಾಗಿ ಅದನ್ನು ಸ್ಥಗಿತಗೊಳಿಸಲು ನಡೆಸುತ್ತಿರುವ ಒಂದು ತಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಗಟ್ಟಿಯಾಗಿ ಧ್ವನಿಗಳು ಏಳುತ್ತಿರುವ ಸಮಯದಲ್ಲಿ NTC ವರ್ಷಕ್ಕೆ ರೂ 1,000 ಕೋಟಿ ಮೌಲ್ಯದ ನೂಲು ಮತ್ತು ರೂ 100 ಕೋಟಿ ಮೌಲ್ಯದ ಬಟ್ಟೆಯನ್ನು ಉತ್ಪಾದಿಸುತ್ತಿತ್ತು.

ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ)ಗಳನ್ನು ತಯಾರಿಸುವ ಪರಿಣತಿಯನ್ನು NTC ಹೊಂದಿದೆ. NTC ಪಿಪಿಇ ತಯಾರಿಸಬೇಕಾದರೆ ಪ್ರತಿ ಸೂಟ್‌ಗೆ ಕೇವಲ ರೂ 90 ವೆಚ್ಚವಾಗುತ್ತದೆ. ಉನ್ನತ ದರ್ಜೆಯ ಪಾಲಿಪ್ರೊಪಿಲೀನ್ ಎಂಬುದು ಪಿಪಿಇ ಕಿಟ್‌ಗಳನ್ನು ತಯಾರಿಸಲು ಬಳಸುವ ಬಟ್ಟೆಯನ್ನು ಉತ್ಪಾದಿಸಲು ಬಳಸುವ ಕಚ್ಚಾ ವಸ್ತುವಾಗಿದೆ. ಇದರ ಬೆಲೆ ಮೀಟರ್‌ಗೆ ರೂ 10 ಆಗಿದೆ ಹಾಗೂ ಪ್ರತೀ ಸೂಟ್‌ಗೆ 4.5 ಮೀಟರ್ ಸಾಕಷ್ಟಾಗುತ್ತದೆ. ಹಾಗಾಗಿ ಬಟ್ಟೆಗೆ ರೂ 40 ಕ್ಕೆ ವೆಚ್ಚವಾಗುತ್ತದೆ. ನಂತರ ಅದಕ್ಕೆ ಇತರ ವೆಚ್ಚಗಳನ್ನು ಸೇರಿಸಿದರೆ, ಪ್ರತಿಯೊಂದಕ್ಕೂ ರೂ 90 ಕ್ಕಿಂತ ಹೆಚ್ಚು ವೆಚ್ಚವಾಗುವುದಿಲ್ಲ” ಎಂದು ರಾಜನ್ ಹೇಳಿದರು.

“ಜೊತೆಗೆ ಕಿಟ್‌ಗಳನ್ನು ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಖರೀದಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ತನ್ನ ಜವಳಿ ಮತ್ತು ಬಟ್ಟೆಗಳ ತಯಾರಕ ಅಲೋಕ್ ಇಂಡಸ್ಟ್ರೀಸ್ ಅನ್ನು ಪಿಪಿಇ ತಯಾರಕರನ್ನಾಗಿ ಪರಿವರ್ತಿಸಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿ ಪಿಪಿಇ‌ಗೆ 650 ರೂ. ಬೆಲೆ ನಿಗದಿಪಡಿಸಿದೆ” ಎಂದು ರಾಜನ್ ಒತ್ತಿಹೇಳಿದರು,

“ಸರ್ಕಾರವು ಆರ್ಥಿಕತೆಯ ಬಗ್ಗೆ ಕಾಳಜಿ ವಹಿಸಿದ್ದರೆ, ಗಿರಣಿಗಳಲ್ಲಿ ಕೆಲಸ ಪ್ರಾರಂಭಿಸುತ್ತಿತ್ತು. ಕಾರ್ಮಿಕರು ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಬಹುದಿತ್ತು. ಉತ್ಪಾದನೆಯನ್ನು ಕೂಡ ಹೆಚ್ಚಿಸಬಹುದಿತ್ತು. ಆದರೆ, ಸರ್ಕಾರವು ಗಿರಣಿಗಳನ್ನು ಸ್ಥಗಿತಗೊಳಿಸಬೇಕೆಂದು ಬಯಸುತ್ತದೆ” ಎಂದು ಅವರು ಆರೋಪಿಸಿದ್ದಾರೆ.

“ಸರ್ಕಾರವು ಈ ಸಮಯದಲ್ಲಿ ತಮ್ಮ ಸಂಬಳವನ್ನು ನಿಲ್ಲಿಸುವ ಅಥವಾ ಕಡಿಮೆ ಮಾಡುವ ಬದಲು ಎಲ್ಲಾ ಸಿಬ್ಬಂದಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ನೀಡಬೇಕು” ಎಂದು ರಾಜನ್ ಆಗ್ರಹಿಸಿದ್ದಾರೆ.

ಮುಂಬೈ ಸೇರಿದಂತೆ ಭಾರತದಾದ್ಯಂತ NTC ಯು 80,000 ಕೋಟಿಗಿಂತ ಹೆಚ್ಚು ಬೆಲೆಬಾಳುವ ಭೂಮಿಯನ್ನು ಹೊಂದಿದೆ. ಸರ್ಕಾರವು ಸದ್ದಿಲ್ಲದೆ NTC ಯನ್ನು ಮುಚ್ಚಲು ಅನುಮತಿಸಿದರೆ, ಆ ಜಮೀನುಗಳನ್ನು ಲಾಭಕ್ಕಾಗಿ ಮಾರಾಟ ಮಾಡಬಹುದು. ಅದನ್ನೇ ಈ ಸರ್ಕಾರ ಮಾಡಲು ಬಯಸುತ್ತದೆ. NTC ಲಾಭದಾಯಕವಾಗುವುದು ಅಸಾಧ್ಯವಲ್ಲ, ಆದರೆ ಸಚಿವಾಲಯ ಅದನ್ನು ಬಯಸಬೇಕು. ಕಂಪನಿಯನ್ನು ಲಾಭದಾಯಕವಾಗಿಸಲು ಹಲವಾರು ಯೋಜನೆಗಳು ಇವೆ, ಆದರೆ ಅವರು ಕ್ರಮ ತೆಗೆದುಕೊಳ್ಳಲು ಬಯಸುವುದಿಲ್ಲ” ಎಂದು ರಾಜನ್ ವಿವರಿಸಿದ್ದಾರೆ.


ಇದನ್ನೂ ಓದಿ: ಶ್ರೀರಾಮುಲುರವರೆ, ನಿಮ್ಮ ಅಣ್ತಮ್ಮಂದಿರು ಜೈಲು ಸೇರಿದ್ದು ನೆನಪಿರಲಿ: ಸಿದ್ದರಾಮಯ್ಯ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...