Homeಮುಖಪುಟಚೀನಾ ಮುಂದಿಟ್ಟ ಎರಡು ಹೆಜ್ಜೆಯಲ್ಲಿ ಒಂದು ಹೆಜ್ಜೆ ಹಿಂದಿಟ್ಟಿದೆ, ಅದು ಹಿನ್ನೆಡೆಯೋ? ಮುನ್ನೆಡೆಯೋ?; ಜಸ್ಟ್‌ ಆಸ್ಕಿಂಗ್

ಚೀನಾ ಮುಂದಿಟ್ಟ ಎರಡು ಹೆಜ್ಜೆಯಲ್ಲಿ ಒಂದು ಹೆಜ್ಜೆ ಹಿಂದಿಟ್ಟಿದೆ, ಅದು ಹಿನ್ನೆಡೆಯೋ? ಮುನ್ನೆಡೆಯೋ?; ಜಸ್ಟ್‌ ಆಸ್ಕಿಂಗ್

ಮೋದಿಯವರು ಲಡಾಖ್‌‌ಗೆ ಕೇವಲ ಭೇಟಿ ಕೊಟ್ಟ ಮಾತ್ರಕ್ಕೆ ಚೀನಿಯರು ಹೆದರಿ ಹಿಂದೆಸರಿದರು ಎಂಬ ಮೋದಿ ಭಕ್ತರ ಪ್ರಚಾರ ದೇಶ ದ್ರೋಹವಲ್ಲವೇ?

- Advertisement -
- Advertisement -

ಚೀನಾ ಸೈನಿಕರು ಈಗಲೂ ಭಾರತವು ತನ್ನದೆಂದು ಪ್ರತಿಪಾದಿಸುವ ಪ್ರದೇಶದಲ್ಲೇ ಇದ್ದಾರೆ… ಹಾಗಿದ್ದಲ್ಲಿ ಯಾರನ್ನು ಮರುಳು ಮಾಡುವ ಉದ್ದೇಶದಿಂದ ಮೋದಿ ಸರ್ಕಾರ, ಅದರ ಸಾಕುನಾಯಿ ಮಾಧ್ಯಮಗಳು ಮತ್ತು ಭಕ್ತರು ಗಡಿಯಲ್ಲೆಲ್ಲೂ ಕಾಣದ ಮೋದಿಯ ಗುಡುಗು-ಸಿಡಿಲು ಕಂಪನಗಳನ್ನೂ ಸೃಷ್ಟಿಸುತ್ತಿದ್ದಾರೆ?


ನಿನ್ನೆಯಿಂದ ಎಲ್ಲಾ ಮಾಧ್ಯಮಗಳು ಗಾಲ್ವಾನ್ ಪ್ರಾಂತ್ಯದಿಂದ ಚೀನಾ ಸೈನಿಕರು ಹಿಂದೆ ಸರಿಯುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳಾದ ಅಜಿತ್ ದೋವಲ್ ಹಾಗು ವಾಂಗ್ ಯೀ ಟೆಲಿಫೋನ್ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆಯಾಗಿವೆ ಎಂದು ಹೇಳಲಾಗುತ್ತಿದೆ.

ಈ ಸಮಯದಲ್ಲಿ ಎರಡು ಹೆಜ್ಜೆ ಮುಂದಿಟ್ಟಿದ್ದ ಚೀನಾ ಒಂದು ಹೆಜ್ಜೆ ಹಿಂದೆ ಸರಿದರೆ, ಅದು ಹಿನ್ನೆಡೆಯೋ? ಮುನ್ನೆಡೆಯೋ? ಎಂದು ಅವಲೋಕಿಸಬೇಕಾಗಿದೆ.

ಆದರೆ ಎರಡು ದೇಶಗಳ ಸರ್ಕಾರಗಳು ಈವರೆಗೆ ಯಾವ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಬದಲಿಗೆ ಭಾರತೀಯ ಮಾಧ್ಯಮಗಳು ಸೇನೆಯಲ್ಲಿನ ಅನಾಮಿಕ ಸರ್ಕಾರಿ “ಮೂಲಗಳನ್ನು” ಆಧರಿಸಿ ವರದಿ ಮಾಡಿವೆ. ಎಲ್ಲಾ ಮಾಧ್ಯಮಗಳಲ್ಲೂ ಈ ಸುದ್ದಿ ಏಕಕಾಲದಲ್ಲಿ ಪ್ರಕಟವಾಗಿರುವುದು ನೋಡಿದರೆ ಕೇಂದ್ರ ಸರ್ಕಾರ ಮತ್ತು ಸೇನೆಯು ಈ ಮೂಲಗಳಿಗೆ ಅನಾಮಿಕವಾಗಿ ಹೇಳಿಕೆ ನೀಡಲು ಅಧಿಕೃತ ಅನುಮತಿ ನೀಡಿರುವುದು ಸ್ಪಷ್ಟವಾಗಿದೆ. ಆದರೆ ಅಧಿಕೃತವಾದ ಹೇಳಿಕೆ ಏಕಿಲ್ಲ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.

ಆದ್ದರಿಂದಲೇ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಅಜಯ್ ಶುಕ್ಲಾ ಅವರು ಈ ಸುದ್ದಿಯ ಬಗ್ಗೆ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ :

ಈ ಸುದ್ದಿಯು ನಿಜವೇ ಆಗಿದ್ದಲ್ಲಿ ನಾನು
ಅ) ಸರ್ಕಾರದ ಅಧಿಕೃತ ಹೇಳಿಕೆಯನ್ನು ನೋಡಬಯಸುತ್ತೇನೆ. ಅನಾಮಿಕ ಮೂಲದ ಸುದ್ದಿಯನ್ನಲ್ಲ.
ಆ) ಚೀನಿಯರು ಹಿಂದಿರುಗುತ್ತಿರುವುದನ್ನು ಧೃಡಪಡಿಸುವ ಉಪಗ್ರಹ ಚಿತ್ರ ಹಾಗು
ಇ ) ಭಾರತೀಯ ಸೈನಿಕರು ಹಿಂದೆ ಸರಿದಿದ್ದು ಎಲ್ಲಿಗೆ ಎಂಬ ಪ್ರಶ್ನೆಗಳಿಗೆ ಉತ್ತರ ಬಯಸುತ್ತೇನೆ ಎಂದು ಕರ್ನಲ್ ಕೇಳಿದ್ದಾರೆ.

ಇದರ ಜೊತೆಗೆ ದೇಶ ಭಕ್ತಿಗೂ ಮೋದಿ ಭಕ್ತಿಗೂ ವ್ಯತ್ಯಾಸ ಗೊತ್ತಿರುವವರಿಗೂ ಹಾಗು ತಮ್ಮ ಬುದ್ಧಿಯನ್ನು ಮತ್ತು ಕಾಮನ್ ಸೆನ್ಸನ್ನು ಇತರರಿಗೆ ಒಪ್ಪಿಸದವರಿಗೂ ಇನ್ನು ಕೆಲವು ಪ್ರಶ್ನೆಗಳು ಮೂಡುವುದು ಸಹಜ.

ಅನಾಮಿಕ ಮೂಲದ ಹೇಳಿಕೆಯ ಪ್ರಕಾರ ಭಾರತ ಸೇನೆಯು ಕೂಡಾ ಗಾಲ್ವಾನ್ ಘರ್ಷಣೆ ನಡೆದ PP 14 ಪ್ರದೇಶದಿಂದ 1.8 ಕಿ.ಮೀ ಯಷ್ಟು ಹಿಂದೆ ಸರಿದಿದೆ.

ಇದರ ಅರ್ಥವೇನು?

ಈವರೆಗೆ ಮೋದಿ ಸರ್ಕಾರವು ಗಾಲ್ವಾನ್ ಘರ್ಷಣೆ ನಡೆದ ಪ್ರದೇಶವು ( PP 14 ) ವಿವಾದಾತೀತವಾಗಿ ಭಾರತ ಪ್ರದೇಶವಾಗಿದೆಯೆಂದು, ಚೀನಾ ಭಾರತದ ಸರಹದ್ದಿನೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಅಲ್ಲಿ ಘರ್ಷಣೆಯುಂಟಾಯಿತೆಂದು ಹೇಳಿಕೊಂಡು ಬಂದಿದೆ.

ಹಾಗಿದ್ದಲ್ಲಿ PP 14 ಪ್ರದೇಶದಿಂದ 1.8 ಕಿಮಿ ಭಾರತ ಮತ್ತು ಚೀನಾ ಎರಡು ಹಿಂದೆ ಸರಿದಿದೆ ಎಂದರೆ ಭಾರತವು ಕೂಡಾ ವಿವಾದೀತವಾಗಿ ತನ್ನ ಸುಪರ್ದಿನಲ್ಲಿದ್ದ ಪ್ರದೇಶವನ್ನು ಬಿಟ್ಟು ಹಿಂದೆ ಸರಿದಿದೆ ಎಂದಾಗಲಿಲ್ಲವೇ?

ಹಾಗಿದ್ದ ಮೇಲೆ ಮೋದಿಯವರು ಲಡಾಖ್‌‌ಗೆ ಕೇವಲ ಭೇಟಿ ಕೊಟ್ಟ ಮಾತ್ರಕ್ಕೆ ಚೀನಿಯರು ಹೆದರಿ ಹಿಂದೆಸರಿದರು ಎಂಬ ಮೋದಿ ಭಕ್ತರ ಪ್ರಚಾರ ದೇಶ ದ್ರೋಹವಲ್ಲವೇ?

ಗಾಲ್ವಾನ್ ಪ್ರದೇಶಕ್ಕಿಂತ ಇನ್ನು ತೀವ್ರವಾದ ಗಡಿ ವಿವಾದವಿರುವ ಪ್ರದೇಶ ಪಾಂಗಾಂಗ್ ಸರೋವರ ಪ್ರದೇಶ.

ಅಲ್ಲಿ ಸರೋವರದ ಪೂರ್ವಭಾಗದ ಚೀನಾದ ಕಡೆ ಇರುವ ಫಿಂಗರ್ 8 ಎಂಬಲ್ಲಿಯವರೆಗೆ ಭಾರತ ತನ್ನ ಪ್ರದೇಶವೆಂದು ವಾದಿಸಿದರೆ, ಸರೋವರದ ಪಶ್ಚಿಮಕ್ಕೆ ಭಾರತದ ಕಡೆ ಇರುವ ಫಿಂಗರ್ 4 ರ ವರೆಗೆ ತನ್ನ ಪ್ರದೇಶವೆಂದು ಚೀನಾ ವಾದಿಸುತ್ತದೆ.

ಫಿಂಗರ್ 4 ಹಾಗೂ ಫಿಂಗರ್ 8 ರ ನಡುವೆ 8 ಕಿಮಿ ವ್ಯಾಪ್ತಿಯ ಪ್ರದೇಶವಿದ್ದು ಚೀನಾವು ಫಿಂಗರ್ 4 ರಿಂದ ಒಂದು ಕಿಮಿ ದೂರ ಮಾತ್ರ ಹಿಂದೆ ಸರಿದಿದೆ ಎಂದು ಭಾರತೀಯ ‌ಸೇನಾ ಮೂಲವು ತಿಳಿಸುತ್ತದೆ .

ಅಂದರೆ ಚೀನಾ ಸೈನಿಕರು ಈಗಲೂ ಭಾರತವು ತನ್ನದೆಂದು ಪ್ರತಿಪಾದಿಸುವ ಪ್ರದೇಶದಲ್ಲೇ ಇದ್ದಾರೆ…..

ಹಾಗಿದ್ದಲ್ಲಿ ಯಾರನ್ನು ಮರುಳು ಮಾಡುವ ಉದ್ದೇಶದಿಂದ ಮೋದಿ ಸರ್ಕಾರ, ಅದರ ಸಾಕುನಾಯಿ ಮಾಧ್ಯಮಗಳು ಮತ್ತು ಭಕ್ತರು ಗಡಿಯಲ್ಲೆಲ್ಲೂ ಕಾಣದ ಮೋದಿಯ ಗುಡುಗು-ಸಿಡಿಲು ಕಂಪನಗಳನ್ನೂ ಸೃಷ್ಟಿಸುತ್ತಿದ್ದಾರೆ?

ಒಂದು ದೀರ್ಘಕಾಲೀನ ಶಾಂತಿ ಮಾತುಕತೆಯ ಭಾಗವಾಗಿ ಈ ಬಗೆಯ ತಾತ್ಕಾಲಿಕ ಹಿಂದೆ ಸರಿಕೆಯಲ್ಲಿ ತಪ್ಪಿಲ್ಲ.

ಅದರಲ್ಲೂ ಭಾರತ ಮತ್ತು ಚೀನಾ ನಡುವೆ ಗಡಿ ಭಾಗಗಳು ನಿಖರವಾಗಿ ಗುರುತುಪಡಿಸಿಲ್ಲವಾದ್ದರಿಂದ ಇಂಥಾ ರಾಜತಾಂತ್ರಿಕ-ಸೈನಿಕ ಕ್ರಮಗಳಿಗೆ ಸರ್ಕಾರ ಮುಂದಾಗಬೇಕಾಗುತ್ತದೆ.

ಆದರೆ ಸತ್ಯಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ಕೊಟ್ಟು ಜನರಲ್ಲಿ ರಾಜಕೀಯ ದುರುದ್ದೇಶಗಳಿಗೆ ಹುಸಿ ಗೆಲುವಿನ ಉನ್ಮಾದವನ್ನು ಸೃಷ್ಟಿಸುವುದು ತಪ್ಪು. ಅಷ್ಟೇ…

ಎಲ್ಲಕ್ಕಿಂತ ಹೆಚ್ಚಾಗಿ ಈ ಗಾಲ್ವಾನ್ ಮತ್ತು ಹಿಂದಿನ ದೋಕ್ಲಾಮ್ ಘರ್ಷಣೆಗಳಿಂದ ಮೋದಿ ಸರ್ಕಾರ ಸಾಕಷ್ಟು ಪಾಠಗಳನ್ನು ಕಲಿಯಬೇಕಿದೆ.

ಈ ಭೂಭಾಗದಲ್ಲಿ ಅಮೇರಿಕ ಸಾಮ್ರಾಟನ ಸಾಮಂತನಾಗಿ ಕೆಲಸ ಮಾಡುವುದು ಅಮೇರಿಕಾದ ಹಿತಾಸಕ್ತಿಗಳಿಗೆ ಪೂರಕವೇ ಹೊರತು ಭಾರತದ ಹಿತಾಸಕ್ತಿಗೆ ಮಾರಕವೆಂಬುದನ್ನು ಈಗಲಾದರೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಲ್ಲವೇ?; ಜಸ್ಟ್ ಆಸ್ಕಿಂಗ್


ಓದಿ: ಅರುಣಾಚಲದ ಮೇಲೆ ಚೀನಾ ಕಣ್ಣು?; ಬಹುಜನ ಭಾರತ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...