Homeಕರ್ನಾಟಕಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?

ಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?

ಎಲ್ಲೆಲ್ಲೋ ಆಗುವ ಅನ್ಯಾಯ-ಅನಾಚಾರದ ಬಗ್ಗೆ ಸಹಾನುಭೂತಿಯ-ಮಾನವೀತೆಯ ವ್ಯಾಖ್ಯಾನ ಮಾಡುವ “ಖಾವಂದರು” ತಮ್ಮ ನರೆಮನೆಯಲ್ಲೇ ಆಗಿರುವ ದುರಂತದ ಬಗ್ಗೆ ಏಕೆ ದಿವ್ಯ ಮೌನದಲ್ಲಿದ್ದಾರೆ?

- Advertisement -
- Advertisement -

“ನಮ್ಮ ಅಭಿಮಾನಿಗಳು ಏನನ್ನು ಮಾಡಲಿಕ್ಕೂ ಸಿದ್ಧರಿದ್ಧಾರೆ…. ಆದರೆ ನಾವೇ ಬೇಡವೆಂದು ತಡೆದಿದ್ದೇವೆ….”- ಇದು ಧರ್ಮಸ್ಥಳ ದೇವಳದ “ಧರ್ಮ ದಂಡ”ಧಾರಿ- ಬಿಜೆಪಿ ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆ, ಅಮಾಯಕ ಹುಡುಗಿ ಸೌಜನ್ಯ ಗೌಡ ಅತ್ಯಾಚಾರ-ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ “ಪ್ರವಚನ”ದ ಒಂದು ಅಣಿಮುತ್ತು!

ಸತ್ಯ-ಧರ್ಮ-ನ್ಯಾಯದ ಧರ್ಮಸ್ಥಳ ಮಂಜುನಾಥ ದೇವರ ಅಪರಾವತಾರವೆಂದೇ ಅಪಾರ ಭಕ್ತಾದಿಗಳು ನಂಬಿರುವ “ಧರ್ಮಾಧಿಕಾರಿ” ವೀರೇಂದ್ರ ಹೆಗ್ಗಡೆ ಬಾಯಿಂದ ಕಳಪೆ ರಾಜಕೀಯ ಪುಢಾರಿ ಶೈಲಿಯಲ್ಲಿ ಮಾತುಗಳು ಹೊರಬರುತ್ತಿರುವುದು ಸಾಮಾಜಿಕ-ಧಾರ್ಮಿಕ-ರಾಜಕೀಯ ವಲಯದಲ್ಲಿ ಅನೇಕ ಅಚ್ಚರಿ-ಅನುಮಾನದ ಚರ್ಚೆಗಳನ್ನು ಹುಟ್ಟುಹಾಕಿಬಿಟ್ಟಿದೆ. ಬರ್ಬರ ಬಲಾತ್ಕಾರ ಮತ್ತು ಹತ್ಯೆಗೀಡಾಗಿದ್ದ ಅಮಾಯಕ ಹುಡುಗಿ ಸೌಜನ್ಯ ಗೌಡ ಪ್ರಕರಣದಲ್ಲಿ ಸಿಬಿಐ ಫಿಕ್ಸ್ ಮಾಡಿದ್ದ ಸಂತೋಷ್ ರಾವ್ ನಿರ್ದೋಷಿಯೆಂದು ತೀರ್ಪು ಬಂದ ಬಳಿಕ ಭುಗಿಲೆದ್ದಿರುವ ಮರುತನಿಖೆ ಒತ್ತಾಯದ ಆಕ್ರೋಶ, ಕೂಗು, ಪ್ರತಿಭಟನೆಗಳ ಹಿನ್ನಲೆಯಲ್ಲಿ ದೈವಾಂಶ ಸಂಭೂತ ಇಮೇಜಿನ ವೀರೇಂದ್ರ ಹಗ್ಗಡೆ ನಡೆ-ನುಡಿಗೆ ಮಹತ್ವ ಬಂದಿದೆ.

ಸುಮಾರು 11 ವರ್ಷದ ಹಿಂದೆ ಧರ್ಮಸ್ಥಳದ ಬಳಿಯ ಪಾಂಗಾಳದ ಒಕ್ಕಲಿಗ ಸಮುದಾಯದ ಹದಿನೇಳು ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಗೌಡ ಮೃತ ಶರೀರ ರೇಪ್-ಮರ್ಡರ್ ಆಗಿರುವ ಸ್ಥಿತಿಯಲ್ಲಿ ದೊರೆತಿತ್ತು. ಆರಂಭದಿಂದಲೂ ಈ ಅಮಾನುಷ ಪಾತಕದ ತನಿಖೆ ಅದ್ಯಾಕೋ ಪಾರದರ್ಶಕ-ಪ್ರಾಮಾಣಿಕವಾಗಿ ನಡೆಯುತ್ತಿಲ್ಲ; ತನಿಖಾಧಿಕಾರಿ ಪೊಲೀಸರ ಮತ್ತು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ವರ್ತನೆ “ಯಾರನ್ನೋ” ರಕ್ಷಿಸಲು ಹುನ್ನಾರದಲ್ಲಿ ತೊಡಗಿರುವಂತಿದೆ ಎಂಬ ಶಂಕೆ ಆರಂಭದಲ್ಲೇ ಸಾರ್ವಜನಿಕರಲ್ಲಿ ಹಟ್ಟುಹಾಕಿತ್ತು. ಧರ್ಮಸ್ಥಳದಲ್ಲಿ ಅಂಡಲೆಯುತ್ತಿದ್ದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಸಂತೋಷ್ ರಾವ್ ಎಂಬ ಯಾತ್ರಿಕನನ್ನು ಅತ್ಯಾಚಾರಿಯೆಂದು ಕೇಸುಹಾಕಿ 11 ವರ್ಷ ಯಮಯಾತನೆಕೊಟ್ಟು ಕಾಡಲಾಗಿತ್ತು. ಸೌಜನ್ಯಳನ್ನು ಹೆತ್ತವರೇ ಈತ ಆರೋಪಿಯಾಗಲು ಸಾಧ್ಯವಿಲ್ಲ; ನಮಗೆ ಧರ್ಮಸ್ಥಳದ ದೇಗುಲದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರಿವಾರದ ಮೂರ್ನಾಲ್ಕು ತರುಣರ ಮೇಲೆ ಅನುಮಾವಿದೆ ಎಂದು ಹೇಳಿದರೂ ಪೊಲೀಸರು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಿದ್ದರು. ಈಗ ಒಂದು ತಿಂಗಳ ಹಿಂದೆ ಸಿಬಿಐ ನ್ಯಾಯಾಲಯವೇ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಕೊಟ್ಟಿದೆ.

ಸಂತೋಷ್ ರಾವ್ ನಿರ್ದೋಷಿಯಾದರೆ ಪಾತಕಿಗಳು ಯಾರು? ಲೋಕಲ್ ಪೊಲೀಸರ, ಸಿಓಡಿ-ಸಿಬಿಐನಂಥ ಉನ್ನತ ಪೊಲೀಸ್ ಏಜೆನ್ಸಿಗಳಿಂದಲೂ ಏಕೆ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗಗಿಲ್ಲ? ಸಿಒಡಿ ಮತ್ತು ಸಿಬಿಐ ಪೊಲೀಸರ ಕೈ ಕಟ್ಟಿಹಾಕಿದವರು ಯಾರು? ಸೌಜನ್ಯಳ ತಂದೆ ಚಂದಪ್ಪ ಗೌಡರು, ‘ಸಿಬಿಐ ನ್ಯಾಯಾಲಯದಲ್ಲಿ ಮಲ್ಲಿಕ್ ಜೈನ್, ಧೀರಜ್ ಕೆಲ್ಲ ಮತ್ತು ಉದಯ್ ಜೈನ್‌ರನ್ನು ವಿಚಾರಣೆಗೆ ಒಳಪಡಿಸಬೇಕು; ನನಗಿವರ ಮೇಲೆ ಅನುಮಾನವಿದೆ’ ಎಂದು ಹೇಳಿದರೂ ಸಿಬಿಐ ಉದಾಸೀನ ಮಾಡಿತು ಏಕೆ? ಈ ಶಂಕಿತರೆಲ್ಲ ಸಾಮಾಜಿಕ-ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ದೇವಮಾನವ ವರ್ಚಸ್ಸು ಹೊಂದಿರುವ ವೀರೇಂದ್ರ ಹೆಗ್ಗಡೆಗೆ ಒಂದಲ್ಲ ಒಂದು ರೀತಿಯಲ್ಲಿ ನಿಕಟವಾಗಿರುವ ಅವರ ಜೈನ ಪರಿವಾರದ ಕುಲಕಂಠೀರವರೆಂದೇ? ಎಂಬಿತ್ಯಾದಿ ಜಿಜ್ಞಾಸೆ ಸಿಬಿಐ ನ್ಯಾಯಾಲಯದ ತೀರ್ಪು ಬಂದ ಮರುಗಳಿಗೆಯಿಂದಲೆ ಸಹಜವಾಗಿಯೇ ಸಾರ್ವಜನಿಕರಲ್ಲಿ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸಂಸದ ವೀರೇಂದ್ರ ಹೆಗ್ಗಡೆ ಹಸ್ತಕ್ಷೇಪವನ್ನು ಅರೋಪಿಸಿಯೂ ಚರ್ಚೆಗಳು ಭುಗಿಲೆದ್ದವು.

ಆರಂಭದಿಂದಲೂ ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವ ಹೋರಾಟ ಕಟ್ಟಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯ್ತಂದೆ, ಪ್ರಾಸಿಕ್ಯೂಶನ್ ವಿರುದ್ದ ವಾದಿಸಿದ್ದ ವಕೀಲರುಗಳು, ಪ್ರಕರಣದ ಲೋಪ-ದೋಷ, ಸಿಬಿಐ-ಸಿಓಡಿ ಮತ್ತು ಲೋಕಲ್ ಪೊಲೀಸರು-ಮರಣೋತ್ತರ ಪರೀಕ್ಷೆ ಮಾಡಿದ್ದ ವೈದ್ಯರು ಅಡಿಗಡಿಗೆ ಸಾಕ್ಷ್ಯ ನಾಶಮಾಡಿದ ಪರಿ, ತನ್ಮೂಲಕ ತನಿಖೆಯ ನಾಟಕವಾಡಿ ಅಸಲಿ ಪಾಪಿಗಳು ಪಾರಾಗಲು ಅವಕಾಶ ಕಲ್ಪಿಸಿದ್ದನ್ನು ಮಾಧ್ಯಮದ ಮೂಲಕ ಜನರ ಮುಂದಿಟ್ಟರು. ವಿವಿಧ ಸಂಘಟನೆಗಳು ಪ್ರಕರಣದ ಮರು ತನಿಖೆ ಆಗಬೇಕೇಂದು ಬೀದಿಗಿಳಿದವು. ಸೌಜನ್ಯ ತಾಯ್ತಂದೆಯಂತೂ, ‘ಈಗಾಗಿರುವುದು ಪಕ್ಕಾ ನಕಲಿ ತನಿಖೆ; ತಕ್ಷಣ ಪ್ರಾಮಾಣಿಕ-ನಿಷ್ಠುರ ಮರುತನಿಖೆ ಆಗಬೇಕು’ ಎಂಬ ಬೇಡಿಕೆ ಮುಂದಿಟ್ಟರು. ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಬೆಳ್ತಂಗಡಿಯಲ್ಲಿ ಓಡಾಡಿ ಸೌಜನ್ಯಳಿ ಪ್ರಕರಣಕ್ಕೆ ನ್ಯಾಯ ಕೊಡಿಸುವ ಗಂಭೀರ ಪ್ರಯತ್ನಕ್ಕೆ ಶುರುವಿಟ್ಟುಕೊಂಡರು. ಮೈಸೂರಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ನಂತರ ಹೋರಾಟದ ಕಿಚ್ಚು ರಾಜ್ಯದಾದ್ಯಂತ ಹಬ್ಬುವ ಲಕ್ಷಣ ಕಾಣತೊಡಗಿದೆ.

ಅನಾಯಾಸವಾಗಿ ಕೋಟಿಕೋಟಿ ರೂ ಹರಿದು ಬರುವ ಧರ್ಮಸ್ಥಳ ದೇವಳದ ಉಸ್ತುವಾರಿ ಪರಿವಾರದ ಯಜಮಾನ ವೀರೇಂದ್ರ ಹೆಗ್ಗಡೆ ಸಹಜವಾಗಿಯೇ ಸಂಶಯದ ಕೇಂದ್ರಬಿಂದುವಾದರು. ಎಲ್ಲೆಲ್ಲೋ ಆಗುವ ಅನ್ಯಾಯ-ಅನಾಚಾರದ ಬಗ್ಗೆ ಸಹಾನುಭೂತಿಯ-ಮಾನವೀತೆಯ ವ್ಯಾಖ್ಯಾನ ಮಾಡುವ “ಖಾವಂದರು” ತಮ್ಮ ನರೆಮನೆಯಲ್ಲೇ ಆಗಿರುವ ದುರಂತದ ಬಗ್ಗೆ ಏಕೆ ದಿವ್ಯ ಮೌನದಲ್ಲಿದ್ದಾರೆ? ದೊಡ್ಡ ಜನಾಂದೋಲನವೇ ಸೌಜನ್ಯಳಿಗಾಗಿ ನಡೆಯುತ್ತಿದ್ದರೂ ಹೆಗ್ಗಡೆಯವರೇಕೆ ಭಾಗವಹಿಸುತ್ತಿಲ್ಲ? ಹೆಗ್ಗಡಯವರೇಕೆ ಇಂದಿಗೂ ಸೌಜನ್ಯಳ ಮನೆಗೆ ಹೋಗಿ ನಾಲ್ಕು ಸಾಂತ್ವನದ ಮಾತಾಡುವ ಮನಸ್ಸು ಮಾಡುತ್ತಿಲ್ಲ? ಸೌಜನ್ಯಳ ಹೆತ್ತವರ ಒಡಲ ಸಂಕಟವೇಕೆ ಹೆಗ್ಗಡೆಯವರಿಗೆ ಅರ್ಥವಾಗುತ್ತಿಲ್ಲ? ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರತೊಡಗಿತು.

ಈ ನಡುವೆ ಧರ್ಮಸ್ಥಳ ಸಂಸ್ಥಾನದಲ್ಲಿ ಭೂಮಿ, ಹೆಣ್ಣು, ಸಂಪತ್ತು ಮತ್ತು ಪಾಳೇಗಾರಿ ಪ್ರತಿಷ್ಠೆಗಾಗಿ ಅತ್ಯಾಚಾರ-ಅನಾಚಾರ-ದೌರ್ಜನ್ಯಗಳು ನಾಲ್ಕೈದು ದಶಕದಿಂದ ನಿರಂತರ-ನಿರಾತಂಕವಾಗಿ ನಡೆಯುತ್ತಿದೆ; ನೂರಾರು ಹೆಣ್ಣುಗಳ ಹೆಣ ನಿಶ್ಯಬ್ದವಾಗಿ ನೇತ್ರಾವತಿ ನದಿಯಲ್ಲಿ ತೇಲಿಹೋಗಿವೆ; ಸೌಜನ್ಯ ಸಾವಿನ ಪೂರ್ವದ 10 ವರ್ಷದಲ್ಲಿ ಧರ್ಮಸ್ಥಳದ ದೇವಸನ್ನಿಧಿಯಲ್ಲಿ 462 ಅಸಹಜ ಸಾವುಗಳಾಗಿವೆ ಎಂದು ಅಧಿಕೃತ ಪೊಲೀಸ್ ದಾಖಲೆಗಳೇ ಹೇಳುತ್ತವೆ. ಇದರಲ್ಲಿ 90ರಷ್ಟು ಹೆಣ್ಣುಮಕ್ಕಳಿದ್ದಾರೆ! ಇದರಲ್ಲಿ ಯಾತ್ರಿಕರು, ಸ್ಥಳೀಯರು ಸೇರಿದ್ದಾರೆ.

ವಿಚಾರವಾದಿ ನರೇಂದ್ರ ನಾಯಕ್ ಧರ್ಮಸ್ಥಳ ಸಂಸ್ಥಾನದ ದೌರ್ಜನ್ಯ-ಅನ್ಯಾಯದ ಬಗೆಗಿನ ಸಂವಾದದಲ್ಲಿ ಸುಮಾರು ಮೂರು ದಶಕದ ಹಿಂದೆ ನಡೆದ ಎರಡು ಮಹಿಳೆಯರ ಹತ್ಯೆ ಸಂಶಯದ ಕಥೆ-ವ್ಯಥೆ ಬಿಚ್ಚಿಟ್ಟಿದ್ದರು! ಧರ್ಮಸ್ಥಳ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಫರ್ಧಿಸದಂತೆ ಕಮ್ಯುನಿಸ್ಟ್ ಮುಂದಾಳಾಗಿದ್ದ ದೇವಾನಂದ ಎನ್ನುವವರಿಗೆ ದೇವಧೂತ ಪರಿವಾರ ತಾಕೀತು ಮಾಡಿತ್ತು. ನಾಸ್ತಿಕನಾದ ಈತ ಪಂಚಾಯ್ತಿ ಮೆಂಬರ್ ಆದರೆ ತೊಂದರೆ ಆಗುತ್ತದೆಂಬ ದೂ(ದು)ರಾಲೋಚನೆ ದೇವಮಾನವ ಪರಿವಾರದಾಗಿತ್ತು ಎಂಬ ಆರೋಪವಿದೆ. ಆ ಮಾರ್ಕ್ಸ್ ವಾದಿ ದೇವದೂತರ ಮಾತಿಗೆ ಸೊಪ್ಪು ಹಾಕಲಿಲ್ಲ. ಮರು ದಿನವೇ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಓದುತ್ತಿದ್ದ ಅವರ ಮಗಳು ಪದ್ಮಲತಾ ನಾಪತ್ತೆಯಾಗುತ್ತಾರೆ. ಸುಮಾರು ಒಂದು ತಿಂಗಳ ಬಳಿಕ ಕೈಗಳನ್ನು ಕಟ್ಟಿದ ಆಕೆಯ ಮೃತದೇಹ ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಗುತ್ತದೆ! ತಿಂಗಳಾನುಗಟ್ಟಲೆ ಅತ್ಯಾಚಾರ ನಡೆಸಿ ಕೊನೆಗೆ ಕೊಂದುಹಾಕಲಾಗಿದೆ ಎಂಬ ಮಾತು ಇವತ್ತಿಗೂ ಬೆಳ್ತಂಗಡಿ-ಉಜಿರೆ ಪರಿಸರದಲ್ಲಿ ಕೇಳಿಬರುತ್ತಿದೆ.

ಉಜಿರೆಯಲ್ಲಿ ವೈದ್ಯರಾಗಿದ್ದ ಡಾ.ಹರಳೆ ಎಂಬವರ ಮಡದಿ ವೇದವಲ್ಲಿ ಧರ್ಮಸ್ಥಳ ಸಂಸ್ಥಾನದವರು ನಡೆಸುವ ಹೈಸ್ಕೂಲ್ ಒಂದರಲ್ಲಿ ಶಿಕ್ಷಕಿಯಾಗಿದ್ದರು. ಸೇವಾ ಜ್ಯೇಷ್ಠತೆಯಂತೆ ಅವರಿಗೆ ಮುಖ್ಯೋಪಾಧ್ಯಾಯಿನಿ ಹುದ್ದೆ ಸಿಗುವುದಿತ್ತು. ಅದನ್ನು ಬಿಟ್ಟುಕೊಡುವಂತೆ ಸಂಸ್ಥಾನದ ಮುಖ್ಯ ವ್ಯಕ್ತಿ ಒತ್ತಡ ಹಾಕುತ್ತಿದ್ದನಂತೆ; ತನಗೆ ಬೇಕಾದವರಿಗೆ ಆ ಹುದ್ದೆ ಕೊಡಿಸುವ ಹುನ್ನಾರ ಆತನದಾಗಿತ್ತು. ಆದರೆ ವೇದವಲ್ಲಿ ಅದಕ್ಕೊಪ್ಪಲಿಲ್ಲ. ವೇದವಲ್ಲಿಯನ್ನು ಅವರ ಮನೆಯಲ್ಲೇ ಪೆಟ್ರೋಲ್ ಸರಿದು ಸುಟ್ಟುಹಾಕಲಾಗಿತ್ತು. ಆ ಕೇಸ್ ಮಂಜುನಾಥ ಮತ್ತು ಅಣ್ಣಪ್ಪ ಅರಗಿಸಿಕೊಂಡರೆಂದು ಮಾನವತಾವಾದಿ ನರೇಂದ್ರ ನಾಯಕ್ ಹೇಳುತ್ತಾರೆ. ಈ ಮೂರ್ನಾಲ್ಕು ದಶಕದ ಹಿಂದಿನ ಕ್ರೌರ್ಯ ಕಥನಗಳು ಈಗ ಸೌಜನ್ಯ ಪ್ರಕರಣದೊಂದಿಗೆ ಥಳಕು ಹಾಕಿಕೊಂಡು ಚರ್ಚೆಗಳನ್ನು ಹುಟ್ಟುಹಾಕಿದೆ.

ಸೌಜನ್ಯ ಪ್ರಕರಣದ ನಿಷ್ಠುರ ತನಿಖೆಗಾಗಿ ರಾಜ್ಯದಾದ್ಯಂತ ಹೋರಾಟ ಭುಗಿಲೇಲುತ್ತಿರುವುದರಿಂದ ಸಂಸದ ವೀರೇಂದ್ರ ಹೆಗ್ಗಡೆ ಹತಾಶರಾಗಿದ್ದಾರೆಂದು ಹೋರಾಟಗಾರರು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳಿ ಪತ್ರ ಬರೆದಿರುವುದು ಈ ಹೆದರಿಕೆಯ ಭಾಗವಾಗಿಯೇ ನಡೆದಿರುವ ತಂತ್ರಗಾರಿಕೆಯೆಂದು ಹೋರಾಟಗಾರ ತಿಮರೋಡಿ ವ್ಯಾಖ್ಯಾನಿಸುತ್ತಾರೆ. ಒಟ್ಟಿನಲ್ಲಿ ಹೋರಾಟಗಾರರನ್ನು ಬೆದರಿಸುವ ಭಾಷೆ “ದೇವರ” ಬಾಯಿಂದ ಹೊರಬರುತ್ತಿರುವುದು ಸೌಜನ್ಯ ಕೇಸಿನ ಮರುತನಿಖೆಯ ಅನಿವಾರ್ಯತೆ ಹೆಚ್ಚಿಸಿಬಿಟ್ಟಿದೆ.

ಇದನ್ನೂ ಓದಿ: ವೀರೇಂದ್ರ ಹೆಗಡೆ ಬೆಂಬಲಿಗರಿಂದ ಸೌಜನ್ಯ ತಾಯಿ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. How many persons are convicted in such cases as a offenders in india..I think almost all cases are same..then why every one are focusing on this only.. what’s the agenda…

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...