Homeಎಚ್.ಎಸ್.ದೊರೆಸ್ವಾಮಿಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

ಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

- Advertisement -
- Advertisement -

ಕರ್ನಾಟಕಕ್ಕೊಂದು ಸವಾಲು ಎದುರಾಗಿದೆ- ಇದನ್ನು ಎಲ್ಲರೂ ಗಮನಿಸಬೇಕು. ಕಾಂಗ್ರೆಸ್ಸು ಒಡೆದ ಮನೆಯಾಗಿದೆ. ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕೋಲಾರದ ಮುನಿಯಪ್ಪನವರ ನಾಯಕತ್ವ ಕೋಲಾರಕ್ಕೆ ಸೀಮಿತವಾಗಿತ್ತು. ಈಗ ಅದೂ ಇಲ್ಲವಾಗಿದೆ. ಅಲ್ಲೂ ಅವರಿಗೆ ಎದುರಾಳಿಗಳು ಹುಟ್ಟಿಕೊಂಡು ಅವರ ವರ್ಚಸ್ಸು ಕಡಿಮೆಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ಮತ್ತು ದೊಡ್ಡ ನಾಯಕರಾದರೂ, ಅವರ ಪ್ರಭಾವ ಹೈದರಾಬಾದ್ ಕರ್ನಾಟಕಕ್ಕೆ ಸೀಮಿತವಾಗಿತ್ತು. ಅವರು ನಾಯಕತ್ವ ವಿಸ್ತಾರಗೊಳಿಸುವ ಸಾಮಥ್ರ್ಯ ಹೊಂದಿದ್ದಾರೆ. ಎಚ್.ಕೆ.ಪಾಟೀಲರು ಉತ್ತರ ಕರ್ನಾಟಕದ ಎತ್ತರಕ್ಕೆ ಬೆಳೆದ ನಾಯಕರು. ಸಾರ್ವಜನಿಕ ಜೀವನವನ್ನು ಚೊಕ್ಕವಾಗಿ ಇಟ್ಟುಕೊಂಡಿದ್ದಾರೆ. ಸಹಕಾರಿಗಳು, ಸಾಮಾಜಿಕ ಕಳಕಳಿಯುಳ್ಳ ಉತ್ತಮ ಸಮಾಜ ಸೇವಕರು. ಅವರ ಬಗ್ಗೆ ಅಪಾರವಾದ ಗೌರವ ಇದೆ. ರಾಜಕೀಯದಲ್ಲಿ ಅವರಿನ್ನೂ ದೊಡ್ಡ ಹೆಜ್ಜೆಗಳನ್ನು ಹಾಕಿಲ್ಲ. ಪಾರ್ಲಿಮೆಂಟ್ ಚುನಾವಣೆ ಸಮಯದಲ್ಲಿ ಚುನಾವಣೆ ನಡೆಸುವ ದೊಡ್ಡ ಜವಾಬ್ದಾರಿಯನ್ನು ಪಾಟೀಲರಿಗೆ ವಹಿಸಲಾಗಿತ್ತು. ಅದನ್ನು ನಿಭಾಯಿಸುವುದರಲ್ಲಿ ಅವರು ಫಲಕಾರಿಯಾಗಿಲ್ಲ.

ಪರಮೇಶ್ವರರು ಬುದ್ಧಿವಂತರು, ರಾಜಕೀಯ ಬಲ್ಲವರು. ಅವರು ತಮ್ಮ ತಂದೆಯವರ ಮೂಸೆಯಲ್ಲಿ ಬೆಳೆದವರು. ಆದರೆ ಅವರಿಗೆ Dashing ಸ್ವಭಾವ ಇಲ್ಲ. ಸಂಘಟನೆ ಮಾಡುವ ಅನುಭವವಿಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 3-4 ಸಾರಿ ಕಾಂಗ್ರೆಸ್ ಜಯಗಳಿಸಿರುವುದು ನಿಜ. ಅದು ಅವರ ಅದೃಷ್ಟ ಎಂದು ಹೇಳಬಹುದೇ ಹೊರತು ಅವರ ರಾಜಕೀಯ ಕೌಶಲದಿಂದ ಆದ ಗೆಲುವು ಎಂದು ಹೇಳಲು ಪುರಾವೆಗಳಿಲ್ಲ.

ಇನ್ನುಳಿದಂತೆ ಹಾಳೂರಿಗೆ ಉಳಿದವನೇ ಒಡೆಯ ಎಂಬ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಭಿನ್ನ. ಆಡಳಿತದ ಅನುಭವವುಳ್ಳವರು. ನಾಯಕತ್ವದ ಲಕ್ಷಣ ಉಳ್ಳವರು, ರಾಮಕೃಷ್ಣ ಹೆಗ್ಡೆ, ದೇವೇಗೌಡರ ಮೂಸೆಯಲ್ಲಿ ಬೆಳೆದು ಬಂದವರು. ಸ್ವಲ್ಪ ಮಟ್ಟಿಗೆ ಮೈನಾರಿಟಿಗಳಲ್ಲಿ ಮೈನಾರಿಟಿಗಳಾದ ದೇವರಾಜ ಅರಸರಂತೆ ಅಲ್ಪಸಂಖ್ಯಾತರ ಏಳ್ಗೆಯ ಬಗೆಗೆ ಗಮನ ಹರಿಸುವವರು. ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಹೆಚ್ಚಿನ ವರ್ಚಸ್ಸಿನ ವ್ಯಕ್ತಿ ಸಿದ್ದರಾಮಯ್ಯ. ಆದರೆ ಇವರು ಕೊನೆಯ ಪಕ್ಷ ರಾಮಕೃಷ್ಣ ಹೆಗ್ಡೆ, ದೇವರಾಜ ಅರಸರು, ದೇವೇಗೌಡರಷ್ಟು ದಕ್ಷ ಹೋರಾಟಗಾರರಲ್ಲ ಎಂಬುದು ಕಟುಸತ್ಯ. ಆದ್ದರಿಂದ ಸಿದ್ದರಾಮಯ್ಯ ಮೊದಲುಗೊಂಡು ಇತರ ನಾಯಕರು ತಮ್ಮ Ego ಬಿಟ್ಟು ಸಾಮೂಹಿಕ ನಾಯಕತ್ವ ವಹಿಸಿಕೊಂಡರೆ ಮಾತ್ರ ಕರ್ನಾಟಕ ಕಾಂಗ್ರೆಸ್‍ಗೆ ಭವಿಷ್ಯ ಇರುವುದು. ಇವರು ಸ್ಥಾನಮಾನಗಳನ್ನು ನ್ಯಾಯಯುತವಾಗಿ ಹಂಚಿಕೊಂಡು, ಒಟ್ಟಾಗಿ ನಿಂತು ಸಂಘರ್ಷಕ್ಕೆ ಇಳಿದರೆ ಮಾತ್ರ ಮೋದಿ ಮತ್ತು ಶಾರವರ onslaughtನ್ನು ಎದುರಿಸಲು ಸಾಧ್ಯವಾದೀತು.

ನನ್ನ ದೃಷ್ಟಿಯಲ್ಲಿ ಮೋದಿ ಈಗ ಕರ್ನಾಟಕವನ್ನು ಬಿಜೆಪಿ ವಶಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಅವರು ಲಿಂಗಾಯತ, ಒಕ್ಕಲಿಗರ ಎರಡು ರಾಜಕೀಯ ಬಲಗಳನ್ನು ಕರ್ನಾಟಕದಲ್ಲಿ ಗುರುತಿಸಿದ್ದಾರೆ. ಈ ಎರಡು ಬಣಗಳನ್ನು ಒಡೆದರೆ ತನ್ನ ಗುರಿ ಸಾಧನೆಯಾದೀತೆಂದು ನಂಬಿದ್ದಾರೆ. ಇಂಗ್ಲಿಷರ ಒಡೆದು ಆಳುವ ನೀತಿಯನ್ನು ಕರಗತ ಮಾಡಿಕೊಂಡಿರುವ ಶಾ ಮತ್ತು ಮೋದಿ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಈ ಪ್ರಯೋಗ ಮಾಡಲು ತೀರ್ಮಾನಿಸಿರುವಂತಿದೆ. ಯಡಿಯೂರಪ್ಪನವರನ್ನು ಬಹಳಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವರು ಬಿಡುವುದಿಲ್ಲ. ಅವರ ರಾಜೀನಾಮೆ ಪಡೆದು, ರಾಷ್ಟ್ರಾಧ್ಯಕ್ಷರ ಆಡಳಿತ ಹೇರಿ ಆರು ತಿಂಗಳೊಳಗೆ ಚುನಾವಣೆ ನಡೆಸುವ ನಿರ್ಧಾರ ಅವರದು. ಈ ಪ್ರಯೋಗಕ್ಕೆ ಇದು ಸಕಾಲ ಎಂಬುದು ಅವರ ಲೆಕ್ಕಾಚಾರ.

ಲಿಂಗಾಯತರಿಗೆ ಶಾಸನಸಭೆಗೆ ಸಾಕಷ್ಟು ಸೀಟು ಕೊಟ್ಟಿಲ್ಲ. ಮಂತ್ರಿ ಪದವಿ ಕೊಟ್ಟಿಲ್ಲ ಎಂದು ಹಲವು ಲಿಂಗಾಯತ ಮಠಗಳೂ ಡಿಮ್ಯಾಂಡಿಡುವುದು ಸರ್ವೇ ಸಾಮಾನ್ಯ ವಿಷಯ. ಇಷ್ಟರ ಮಟ್ಟಿಗೆ ಲಿಂಗಾಯತ ಮಠಗಳು ರಾಜಕೀಯಕ್ಕೆ ಕೈ ಹಾಕುವುದನ್ನು ಅನೇಕ ಸಾರಿ ಕಂಡಿದ್ದೇವೆ. ಈ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವೇದ್ಯವೇ ಸರಿ. ಅವರೆಡೆಗೆ ಲಿಂಗಾಯಿತ ಮಠಗಳಿಗೆ ಒಲವಿರುವುದು ಎಲ್ಲರಿಗೂ ತಿಳಿದ ವಿಚಾರ.

ಈಗ ಮೋದಿಯ strategy ಒಕ್ಕಲಿಗ ಲಿಂಗಾಯತರನ್ನು ಬೇರ್ಪಡಿಸುವುದೇ ಆಗಿದೆ. ಲಿಂಗಾಯತರನ್ನು ಒಲಿಸಿಕೊಳ್ಳಲು ಲಿಂಗಾಯತ ಮಠಗಳ ಸಹಾಯ ಪಡೆಯುವುದು, ಒಕ್ಕಲಿಗ ನಾಯಕರನ್ನು ಮೂಲೆ ಗುಂಪು ಮಾಡುವುದು ಮೋದಿ-ಶಾ ಲೆಕ್ಕಾಚಾರ. ಕರ್ನಾಟಕದಲ್ಲಿ ಇರುವ ಪ್ರಭಾವಶಾಲಿ ಜಾತಿಗಳು ಇವೆರಡೇ. ಇವರನ್ನು ಒಡೆದರೆ ನಮ್ಮ ಪತಾಕೆ ಹಾರಿಸಬಹುದು ಎಂಬುದು ಮೋದಿ ಅವರ ಅಂಬೋಣ.

ಕರ್ನಾಟಕದಲ್ಲಿ ಒಕ್ಕಲಿಗರನ್ನು ಒಂದುಗೂಡಿಸುವ ರಾಜಕೀಯ ಶಕ್ತಿಯಾಗಿದ್ದವರು ಎಂದರೆ ದೇವೇಗೌಡರು, ಕುಮಾರಸ್ವಾಮಿಯವರು. ಮನೆತನದ ರಾಜಕೀಯಕ್ಕೆ ಬದ್ಧ ದೇವೇಗೌಡರನ್ನೂ ಇದುವರೆಗೂ ಒಕ್ಕಲಿಗರು ಪ್ರಶ್ನಿಸಿದ್ದಿಲ್ಲ. ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದ 7 ಸ್ಥಾನಗಳಲ್ಲಿ 3ನ್ನು ದೇವೇಗೌಡರು ತಮ್ಮ ಮನೆಗೆ ಕೊಂಡೊಯ್ದರು. ಅವುಗಳಲ್ಲಿ ಒಂದನ್ನು ಗೆದ್ದು ಎರಡರಲ್ಲಿ ಸೋತರು. ಈಗ ಒಕ್ಕಲಿಗರು ದೇವೇಗೌಡರನ್ನು ಬಹಿರಂಗವಾಗಿ ಟೀಕೆ ಮಾಡಲು ಆರಂಭ ಮಾಡಿದ್ದಾರೆ. ಅವರ ವರ್ಚಸ್ಸು ಕುಗ್ಗುತ್ತಿದೆ. ಈ ಸುಸಂದರ್ಭವನ್ನು ಬಳಸಿಕೊಂಡು ಒಕ್ಕಲಿಗರ ಪ್ರಾಬಲ್ಯವನ್ನು ಕಡಿಮೆ ಮಾಡುವ ಹುನ್ನಾರ ಮಾಡಲೇಬೇಕೆಂದು ಮೋದಿ ತೀರ್ಮಾನಿಸಿದ್ದಾರೆ. ದೇವೇಗೌಡರಿಗೆ ಅದಕ್ಕಿಂತ ಮುಖ್ಯವಾಗಿ, ಒಕ್ಕಲಿಗ ಜನಾಂಗಕ್ಕೇ ಇದು ಒಂದು ಸವಾಲು.

ಆ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಒಕ್ಕಲಿಗ ಜನಾಂಗ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಜಾತಿವಾದಿಯಾಗಿಲ್ಲ. ಜಾತಿ ಪದ್ಧತಿ ರದ್ದಾಗಬೇಕೆನ್ನುವವನು ನಾನು. ಆದರೆ ಒಂದು ಬಣವನ್ನೇ ನಾಶ ಮಾಡುವುದಕ್ಕೆ ಅಥವಾ ನಿರ್ವೀಯರನ್ನಾಗಿ ಮಾಡುವುದಕ್ಕೆ ನಾನು ಕಡು ವಿರೋಧಿ. ಆದ್ದರಿಂದ ನನ್ನದು ಈ ನಿಲುವು.

ಒಕ್ಕಲಿಗರು ಮೈ ಕೊಡವಿಕೊಂಡು ಎದ್ದು ಮೋದಿಯವರ ಈ ಸವಾಲನ್ನು ಎದುರಿಸಲು ಸೆಡ್ಡು ಹೊಡೆಯಬೇಕು. ಕೂಡಲೇ ಒಕ್ಕಲಿಗ ನಾಯಕರು, ಲಿಂಗಾಯತ ಮಠಗಳ ಸಂಪರ್ಕ ಮಾಡಿ, ನಾವು ಹಿಂದಿನಂತೆಯೇ ಸಾಮರಸ್ಯದಿಂದ ಬಾಳುವ ಸಂಕಲ್ಪ ಮಾಡೋಣವೆಂದು ಪಕ್ಷ ಭೇದ ಮರೆತು ಮನವರಿಕೆ ಮಾಡಿಕೊಡಬೇಕು. ‘ಆಲಸ್ಯಂ ಅಮೃತಂ ವಿಷಂ’.

ಸಿದ್ದರಾಮಯ್ಯನವರಿಗೂ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೂ ಸಖ್ಯ ಕಡಿಮೆಯಾಗುತ್ತಿದೆ. ಇದು ಮುಂದುವರೆದರೆ ಕರ್ನಾಟಕ ಕಾಂಗ್ರೆಸ್ಸು ನೆಲ ಕಚ್ಚುವುದು ಹಾಗೂ ದೇವೇಗೌಡರ ವರ್ಚಸ್ಸು ಇಳಿಮುಖವಾಗುವ ಸಾಧ್ಯತೆಗಳಿವೆ. ಆ ಉಭಯರೂ ಈಗಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ಒಬ್ಬರಿಗೊಬ್ಬರು ಸ್ನೇಹಹಸ್ತ ನೀಡಬೇಕು. ಕಾಂಗ್ರೆಸ್ ಮತ್ತು ದೇವೇಗೌಡರ ಪಕ್ಷ ಎರಡೂ ತನ್ನ ಎಡವಟ್ಟುಗಳನ್ನು ಮನಗಂಡು, ಹೊಸ ಒಡಂಬಡಿಕೆ ಮಾಡಿಕೊಂಡು ಕೂಡಿ ಹೋರಾಡಬೇಕು. ನಿನ್ನದು ಎರಡು ಕಣ್ಣು ಹೋಗುವುದಾದರೆ, ನನ್ನದು ಒಂದು ಕಣ್ಣು ಹೋದರು ಸರಿ ಎಂದು ಸಿದ್ದರಾಮಯ್ಯ ಮೊದಲುಗೊಂಡು ಎಲ್ಲರೂ ತೀರ್ಮಾನಕ್ಕೆ ಬಂದಿದ್ದರೆ, ಮೋದಿಯವರ ಕೈಗೆ ಕರ್ನಾಟಕವನ್ನು ನೀವೇ ಕರೆದು ಒಪ್ಪಿಸಿದಂತೆ ಆಗುತ್ತದೆ. ಹೀಗೆ ನೀವಿಬ್ಬರು ಅವಿವೇಕಿಗಳಂತೆ ವರ್ತಿಸಿದರೆ, ಜನ ನಿಮ್ಮನ್ನು ಸುಮ್ಮನೆ ಬಿಡೊಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...