Homeಮುಖಪುಟ‘ಇನ್ಮುಂದೆ ಕೈಗೆಟಕುವಂತಿಲ್ಲ’: ಐಟಿ ದಾಳಿ ಕುರಿತು ತಾಪ್ಸಿ ಪನ್ನು ಟ್ವೀಟ್

‘ಇನ್ಮುಂದೆ ಕೈಗೆಟಕುವಂತಿಲ್ಲ’: ಐಟಿ ದಾಳಿ ಕುರಿತು ತಾಪ್ಸಿ ಪನ್ನು ಟ್ವೀಟ್

- Advertisement -
- Advertisement -

‘ಅಪಾದಿತ’ ಪ್ಯಾರಿಸ್ ಬಂಗಲೆ ಕೀಗಳು, 5 ಕೋಟಿ ರೂ. ರಶೀದಿ, ಮತ್ತು “2013 ರ ದಾಳಿಯ ನೆನಪು” – ಇವುಗಳು- ಆದಾಯ ತೆರಿಗೆ (ಐಟಿ) ಇಲಾಖೆಯ ತಾಪ್ಸಿ ಪನ್ನುಗೆ ಸಂಬಂಧಿಸಿದ ಆಸ್ತಿಗಳ ಮೇಲಿನ ದಾಳಿಯ ಸಮಯದಲ್ಲಿ ಕಂಡುಬಂದಿವೆ ಎಂದು ತಾಪ್ಸಿ ಇಂದು ಮೂರು ಟ್ವೀಟ್‌ಗಳಲ್ಲಿ ಹೇಳಿದ್ದಾರೆ . ಕೊನೆಯ ಟ್ವೀಟ್‌ನ ಅಂತ್ಯದಲ್ಲಿ, ‘ನಾಟ್ ಸೋ ಸಾಸ್ತಿ ಎನಿಮೋರ್’’ (ಇನ್ಮುಂದೆ ಕೈಗೆಟಕುವಂತಿಲ್ಲ) ಎಂದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತೆರಿಗೆ ವಂಚನೆ ಆರೋಪದ ಮೇಲೆ ಬುಧವಾರ ನಡೆದ ಐಟಿ ದಾಳಿಗಳ ಮೂರು ದಿನಗಳ ನಂತರ ಅವರ ಪೋಸ್ಟ್ಗಳು ಕಾಣಿಸಿಕೊಂಡಿವೆ. ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರನ್ನೂ ಐ-ಟಿ ಇಲಾಖೆ ಆಕ್ರಮಿಸಿತ್ತು. ಇಬ್ಬರನ್ನೂ ಪುಣೆಯಲ್ಲಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಮತ್ತು ಪುಣೆಯ 30 ಸ್ಥಳಗಳಲ್ಲಿ ಹುಡುಕಾಟಗಳು ನಡೆದವು.
ತಾಪ್ಸಿ ಇಂದು ಪೋಸ್ಟ್ ಮಾಡಿದ ಮೊದಲ ಟ್ವೀಟ್‌ನಲ್ಲಿ, “ಮೂರು ದಿನಗಳ ತೀವ್ರವಾದ ಹುಡುಕಾಟ. ಮೂರು ವಿಷಯಗಳಲ್ಲಿ… ಮುಖ್ಯವಾಗಿ: ಪ್ಯಾರಿಸ್‌ನಲ್ಲಿ ನಾನು ಸ್ಪಷ್ಟವಾಗಿ ಹೊಂದಿರುವ ‘ಆಪಾದಿತ’ ಬಂಗಲೆಯ ಕೀಲಿಗಳು. ಏಕೆಂದರೆ ಬೇಸಿಗೆ ರಜಾದಿನಗಳು ಹತ್ತಿರದಲ್ಲಿವೆ.

ಅವರು ಅದನ್ನು ಇನ್ನೂ ಎರಡು ಟ್ವೀಟ್‌ಗಳೊಂದಿಗೆ ಅನುಸರಿಸಿದರು. 5 ಕೋಟಿ ರೂ. ರಸೀದಿಯ ಕುರಿತು ಆರೋಪಿಸಿದ್ದಾರೆ, ಈ ಮೊದಲು ಈ ಹಣವನ್ನು ನನಗೆ ನಿರಾಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅನುರಾಗ್ ಕಶ್ಯಪ್ ಮತ್ತು ತಾಪ್ಸೀ ಪನ್ನು ಅವರು ಸರ್ಕಾರದ ಬಗ್ಗೆ ಬಹಿರಂಗವಾಗಿ ಟೀಕಿಸುತ್ತ ಬಂದಿದ್ದಾರೆ. ಕೇಂದ್ರ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ, ತಾಪ್ಸಿ ಅವರು ಪಾಪ್ ತಾರೆ ರಿಹಾನ್ನಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಸರ್ಕಾರದ ಬಗ್ಗೆ ಸೆಲೆಬ್ರಿಟಿಗಳ ಒಗ್ಗಟ್ಟಿನ ಪ್ರದರ್ಶನವನ್ನು ಟೀಕಿಸಿದ್ದರು. ಕೇವಲ ಒಂದು ಟ್ವೀಟ್‌ನಿಂದಾಗಿ ನಿಮ್ಮ ಸಾರ್ವಭೌಮತೆಗೆ ಧಕ್ಕೆ ಬರುವುದಾದರೆ ನಿಮ್ಮ ಮೌಲ್ಯ ವ್ಯವಸ್ಥೆಯಲ್ಲೇ ಏನೋ ದೋಷವಿದೆ ಎಂದು ಬಿಸಿ ಮುಟ್ಟಿಸಿದ್ದರು.

ಪನ್ನು ಮತ್ತು ಕಶ್ಯಪ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲಿನ ದಾಳಿ ಹಲವಾರು ರಾಜಕೀಯ ವಲಯಗಳಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಉಂಟುಮಾಡಿತು. ಉದಾಹರಣೆಗೆ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಈ ಕ್ರಮವನ್ನು “ಅವರ ಧ್ವನಿಯನ್ನು ನಿಗ್ರಹಿಸುವ ಪ್ರಯತ್ನ” ಎಂದು ಕರೆದರು. ಆರ್‌ಜೆಡಿಯ ತೇಜಸ್ವಿ ಯಾದವ್, “ಈಗ ನಾಜಿ ಸರ್ಕಾರವು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ಕಲಾವಿದರನ್ನು ಬೆನ್ನಟ್ಟುತ್ತಿದೆ, ತಪ್ಪನ್ನು ತಪ್ಪು ಎಂದು ಕರೆಯದಂತೆ ಬೆದರಿಕೆ ಹಾಕುತ್ತಿದೆ’ ಎಂದಿದ್ದರು.


ಇದನ್ನೂ ಓದಿ: ‘ನಾಝಿ ಆಡಳಿತ ಬೇಟೆಯಾಡುತ್ತಿದೆ’ – ಕೇಂದ್ರದ ವಿರುದ್ದ ತೇಜಸ್ವಿ ಯಾದವ್‌ ತೀವ್ರ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...