Homeಮುಖಪುಟಶೋಭಾ ಕರಂದ್ಲಾಚೆಗೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆಗೆ ಯತ್ನ: ಸ್ಥಳದಿಂದ ಕಾಲ್ಕಿತ್ತ ಸಂಸದೆ...

ಶೋಭಾ ಕರಂದ್ಲಾಚೆಗೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆಗೆ ಯತ್ನ: ಸ್ಥಳದಿಂದ ಕಾಲ್ಕಿತ್ತ ಸಂಸದೆ…

- Advertisement -
- Advertisement -

ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದು, ಕೂಡಲೇ ಸಂಸದೆ ಸ್ಥಳದಿಂದ ಕಾಲ್ಕಿತ್ತ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಬೆಲೆಏರಿಕೆಯ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಕೇಂದ್ರ ಸರ್ಕಾರ, ನರೇಂದ್ರ ಮೋದಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆ ಕೂಗುತ್ತಿದ್ದರು. ಕೆಲಸದ ನಿಮತ್ತ ಅಲ್ಲಿಗ ಬಂದಿದ್ದ ಸಂಸದೆ ಪ್ರತಿಭಟನಾಕಾರರ ಬಳಿ ಮಾತಾಡಲು ತೆರಳಿದಾಗ ಪ್ರತಿಭಟನಾಕಾರರು ಮಾತಾಡಲು ನಿರಾಕರಿಸಿ ಜೋರಾಗಿ ಘೋಷಣೆ ಕೂಗಿದ್ದಾರೆ

ಅಲ್ಲದೇ ಶೋಭಾ ಕರಂದ್ಲಾಚೆಯವರಿಗೆ ಧಿಕ್ಕಾರ ಕೂಗಿದ್ದಲ್ಲದೇ ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಸಂಸದೆಗೆ ಈರುಳ್ಳಿ ಹಾರ ಹಾಕಲು ಮುಂದಾಗಿದ್ದಾರೆ. ಆಗ ಮಧ್ರಪ್ರವೇಶಿಸಿದ ಬಿಜೆಪಿ ಮುಖಂಡರು ಮತ್ತು ಪೊಲೀಸರು ತಡೆ ಒಡ್ಡಿದರು. ಕೂಡಲೇ ಅಲ್ಲಿಂದ ಕಾಲ್ಕಿತ್ತ ಸಂಸದೆ ತನ್ನ ಕಾರಿನತ್ತ ತೆರಳಿದ್ದಾರೆ. ಹೋರಾಟಗಾರರು ಬಿಡದೇ ಅವರು ಕಾರಿನವರವರೆಗೆ ಹಿಂಬಾಲಿಸಿಕೊಂಡು ಬಂದು ಕಾರಿನೊಳಗೆ ಈರುಳ್ಳಿ ಹಾರ ತೂರಿದ್ದಾರೆ..

ಘಟನೆಯ ನಂತರ ಮಾತನಾಡಿದ ಸಂಸದ ಶೋಭಾ ಕರಂದ್ಲಾಜೆ ನಾಳೆ ಭಾರತ ಬಂದ್‌ಗೆ ಕರೆ ಕೊಟ್ಟಿರುವವರು ತುಕಡೆ ಗ್ಯಾಂಗ್‌ನವರು. ಅವರನ್ನು ಯಾರೂ ಬೆಂಬಲಿಸಬೇಡಿ. ಪೌರತ್ವ ಕಾಯ್ದೆಯಿಂದ ದೇಶಕ್ಕೆ ಒಳ್ಳೆಯದು ಆಗಲಿದೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...