ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದು, ಕೂಡಲೇ ಸಂಸದೆ ಸ್ಥಳದಿಂದ ಕಾಲ್ಕಿತ್ತ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಬೆಲೆಏರಿಕೆಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಕೇಂದ್ರ ಸರ್ಕಾರ, ನರೇಂದ್ರ ಮೋದಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆ ಕೂಗುತ್ತಿದ್ದರು. ಕೆಲಸದ ನಿಮತ್ತ ಅಲ್ಲಿಗ ಬಂದಿದ್ದ ಸಂಸದೆ ಪ್ರತಿಭಟನಾಕಾರರ ಬಳಿ ಮಾತಾಡಲು ತೆರಳಿದಾಗ ಪ್ರತಿಭಟನಾಕಾರರು ಮಾತಾಡಲು ನಿರಾಕರಿಸಿ ಜೋರಾಗಿ ಘೋಷಣೆ ಕೂಗಿದ್ದಾರೆ
ಅಲ್ಲದೇ ಶೋಭಾ ಕರಂದ್ಲಾಚೆಯವರಿಗೆ ಧಿಕ್ಕಾರ ಕೂಗಿದ್ದಲ್ಲದೇ ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಸಂಸದೆಗೆ ಈರುಳ್ಳಿ ಹಾರ ಹಾಕಲು ಮುಂದಾಗಿದ್ದಾರೆ. ಆಗ ಮಧ್ರಪ್ರವೇಶಿಸಿದ ಬಿಜೆಪಿ ಮುಖಂಡರು ಮತ್ತು ಪೊಲೀಸರು ತಡೆ ಒಡ್ಡಿದರು. ಕೂಡಲೇ ಅಲ್ಲಿಂದ ಕಾಲ್ಕಿತ್ತ ಸಂಸದೆ ತನ್ನ ಕಾರಿನತ್ತ ತೆರಳಿದ್ದಾರೆ. ಹೋರಾಟಗಾರರು ಬಿಡದೇ ಅವರು ಕಾರಿನವರವರೆಗೆ ಹಿಂಬಾಲಿಸಿಕೊಂಡು ಬಂದು ಕಾರಿನೊಳಗೆ ಈರುಳ್ಳಿ ಹಾರ ತೂರಿದ್ದಾರೆ..
ಘಟನೆಯ ನಂತರ ಮಾತನಾಡಿದ ಸಂಸದ ಶೋಭಾ ಕರಂದ್ಲಾಜೆ ನಾಳೆ ಭಾರತ ಬಂದ್ಗೆ ಕರೆ ಕೊಟ್ಟಿರುವವರು ತುಕಡೆ ಗ್ಯಾಂಗ್ನವರು. ಅವರನ್ನು ಯಾರೂ ಬೆಂಬಲಿಸಬೇಡಿ. ಪೌರತ್ವ ಕಾಯ್ದೆಯಿಂದ ದೇಶಕ್ಕೆ ಒಳ್ಳೆಯದು ಆಗಲಿದೆ ಎಂದಿದ್ದಾರೆ.