ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲಿನ ದಾಳಿಯ ಜವಾಬ್ದಾರಿಯನ್ನು ಹಿಂದೂ ರಕ್ಷಾ ದಳ ಎಂಬ ಅಪರಿಚಿತ ಗುಂಪು ವಹಿಸಿಕೊಂಡಿದೆ. ಗುಂಪಿನ ನಾಯಕ ಪಿಂಕಿ ಚೌಧರಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
“ಜೆಎನ್ಯು ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ, ಇದನ್ನು ನಾವು ಸಹಿಸುವುದಿಲ್ಲ. ಜೆಎನ್ಯುನಲ್ಲಿ ನಡೆದ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಮತ್ತು ದಾಳಿ ಮಾಡಿದವರು ನಮ್ಮ ಕಾರ್ಯಕರ್ತರು ಎಂದು ಹೇಳಲು ಬಯಸುತ್ತೇವೆ” ಎಂದು ಚೌಧರಿ ವೀಡಿಯೊದಲ್ಲಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ವಿಡಿಯೋ ನೋಡಿ…
#Breaking | New twist to the JNU violence.
Sources: Delhi Police is investigating the claims of Hindu Raksha Dal chief Pinky Chaudhary on the JNU case.
Nikunj Garg with more details. Listen in. pic.twitter.com/zN3o3fS0us
— TIMES NOW (@TimesNow) January 7, 2020
ಚೌಧರಿಯವರ ಹೇಳಿಕೆ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಹಿಂಸಾಚಾರದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ವಿಡಿಯೋ ತುಣುಕುಗಳ ಆಧಾರದಲ್ಲಿ ಮುಖ ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭಾನುವಾರ ನಡೆದ ಹಿಂಸಾಚಾರದಲ್ಲಿ JNUSU ಅಧ್ಯಕ್ಷ ಐಶಾ ಘೋಷ್ ಸೇರಿದಂತೆ 34 ಜನ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಹಿಂಸಾಚಾರವನ್ನು ತಡೆಯಲು ಪೊಲೀಸರು ಏನೂ ಮಾಡಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದರು.
ದಾಳಿಯನ್ನು ಎಬಿವಿಪಿ ಕಾರ್ಯಕರ್ತರು ಮಾಡಿದ್ದಾರೆ ಎಂದು ವಿದ್ಯಾರ್ಥಿ ಸಂಘ ಆರೋಪಿಸಿತ್ತು. ಅದಕ್ಕೆ ಹಲವು ಫೋಟೊಗಳು, ವಿಡಿಯೋಗಳು ಮತ್ತು ವಾಟ್ಸಾಪ್ ಚಾಟ್ಗಳ ಸ್ಕ್ರೀನ್ ಶಾಟ್ಗಳಲ್ಲಿ ಸಾಕ್ಷಿಯಾಗಿ ತೋರಿಸಿತ್ತು. ಆದರೆ ಎಬಿವಿಪಿ ಅದನ್ನು ನಿರಾಕರಿಸಿ JNUSU ಮೇಲೆ ಆರೋಪ ಮಾಡಿತ್ತು.
ಇದನ್ನೂ ಓದಿ: ಮುಸುಕುಧಾರಿಗಳು ನಮ್ಮವರು, ಆತ್ಮರಕ್ಷಣೆಗಾಗಿ ಸಶ್ತ್ರಗಳನ್ನು ಹೊಂದಿದ್ದರು : ಒಪ್ಪಿಕೊಂಡ ABVP ದೆಹಲಿ ಜಂಟಿ ಕಾರ್ಯದರ್ಶಿ!
ಜೆಎನ್ಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರವನ್ನು ಖಂಡಿಸಿ ಸೋಮವಾರ ಭಾರತದಾದ್ಯಂತ ಪ್ರತಿಭಟನೆ ದಾಖಲಾಗಿದೆ. ಸಾವಿರಾರು ಪ್ರದೇಶಗಲ್ಲಿ ಹೋರಾಟ ನಡೆದರೆ ಮುಂಬೈನಲ್ಲಿ 1,000 ಕ್ಕೂ ಹೆಚ್ಚು ಜನರು ದಿನವೀಡಿ ಪ್ರತಿಭಟನೆ ನಡೆಸಿದ್ದಾರೆ. ಬಾಲಿವುಡ್ನ ಖ್ಯಾತನಾಮರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಸ್ವಂತ ತಲೆಗೆ ತೆಗೆದು ಕೊಂಡದ್ದು ,ABVP ಯನ್ನು ಬಚಾವು ಮಾಡಲು
ಸತ್ಯವನ್ನು ಜನರಿಗೆ ತಲುಪಿಸುವ ಹೊಣೆಗಾರಿಕೆ ಈ ಪತ್ರಿಕೆಯ ಮೂಲಾಧಾರ