Homeಮುಖಪುಟಮುಸುಕುಧಾರಿಗಳು ನಮ್ಮವರು, ಆತ್ಮರಕ್ಷಣೆಗಾಗಿ ಸಶ್ತ್ರಗಳನ್ನು ಹೊಂದಿದ್ದರು : ಒಪ್ಪಿಕೊಂಡ ABVP ದೆಹಲಿ ಜಂಟಿ ಕಾರ್ಯದರ್ಶಿ!

ಮುಸುಕುಧಾರಿಗಳು ನಮ್ಮವರು, ಆತ್ಮರಕ್ಷಣೆಗಾಗಿ ಸಶ್ತ್ರಗಳನ್ನು ಹೊಂದಿದ್ದರು : ಒಪ್ಪಿಕೊಂಡ ABVP ದೆಹಲಿ ಜಂಟಿ ಕಾರ್ಯದರ್ಶಿ!

- Advertisement -
- Advertisement -

ಜೆಎನ್‌ಯು ಹಿಂಸಾಚಾರದಲ್ಲಿ ಮುಸುಕುಧಾರಿ ಕಾರ್ಯಕರ್ತರು ನಮ್ಮವರೇ ಆಗಿದ್ದು ‘ಆತ್ಮರಕ್ಷಣೆ’ಗಾಗಿ ಶಸ್ತ್ರಸಜ್ಜಿತರಾಗಿದ್ದರು ಎಂದು ಎಬಿವಿಪಿ ದೆಹಲಿ ಜಂಟಿ ಕಾರ್ಯದರ್ಶಿ ಅನಿಮಾ ಸೋಂಕರ್ ಒಪ್ಪಿಕೊಂಡಿದ್ದಾರೆ.

ಖಾಸಗಿ ಸುದ್ದಿವಾಹಿನಿ ಟೈಮ್ಸ್‌ ನೌ ಚರ್ಚೆಯಲ್ಲಿ, ಟಿವಿ ನಿರೂಪಕಿ ಫೋಟೊವೊಂದನ್ನು ತೋರಿಸಿ ಈ ಇಬ್ಬರು abvp ಕಾರ್ಯಕರ್ತರು ಲಾಠಿ ಏಕೆ ಹಿಡಿದಕೊಂಡಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು. ಆಗ ಉತ್ತರಿಸಿದ ಎಬಿವಿಪಿ ದೆಹಲಿ ಜಂಟಿ ಕಾರ್ಯದರ್ಶಿ ಅನಿಮಾ ಸೋಂಕರ್, ಅವರು ನಮ್ಮ ಕಾರ್ಯಕರ್ತರೆ ಆಗಿದ್ದು, ವಾಟ್ಸಾಪ್‌ಗಳಲ್ಲಿ ನಮ್ಮ ಮೇಲೆ ದಾಳಿ ನಡೆಯುತ್ತದೆ ಎಂದು ಭೀತ ಸೃಷ್ಟಿಸಲಾಗಿತ್ತು. ಅದಕ್ಕಾಗಿ ನಾವು ಜೆಎನ್‌ಯುನಲ್ಲಿರುವ ಎಬಿವಿಪಿ ಸದಸ್ಯರಿಗೆ ಸ್ವರಕ್ಷಣೆಗಾಗಿ ರಾಡ್‌ಗಳು, ಪೆಪ್ಪರ್ ಸ್ಪ್ರೇ ಮತ್ತು ಆಸಿಡ್ ಅನ್ನು ಜೊತೆಗಿಟ್ಟುಕೊಳ್ಳಿ ಎಂದು ಸೂಚಿಸಿದ್ದೆವು ಎಂದು ತಿಳಿಸಿದ್ದಾರೆ. ವಿಡಿಯೋ ನೋಡಿ

 

“ನಮ್ಮ ಎಲ್ಲಾ ವಾಟ್ಸಾಪ್ ಗುಂಪುಗಳಲ್ಲಿ ತುಂಬಾ ಭೀತಿ ಹರಡಿತ್ತು … ಆಗ ನಾವು ಆತ್ಮರಕ್ಷಣೆಗಾಗಿ ನೀವು ಎಲ್ಲಿಯಾದರೂ ಹೊರಗಡೆ ಹೋಗಬೇಕಾದರೆ ಗುಂಪುಗಳಾಗಿ ಹೋಗಿ, ಲಾಠಿ, ಕೋಲುಗಳನ್ನು ಜೊತೆಗಿಟ್ಟುಕೊಳ್ಳಿ, ನಿಮಗೆ ಏನಾದರೂ ಸಿಕ್ಕಿದರೆ ಅದು ಪೆಪ್ಪರ್ ಸ್ಪ್ರೇ, ಆಸಿಡ್ ನಂತದದು ಸಿಕ್ಕರೆ ಇಟ್ಟುಕೊಳ್ಳಿ ಎಂದು ಸೂಚಿಸಿದ್ದೆವು” ಎಂದು ಸೋಂಕರ್ ಹೇಳಿದ್ದಾರೆ.

ಇದನ್ನೂ ಓದಿ: JNU ನಲ್ಲಿ ಹಲ್ಲೆ ನಡೆಸಿದವರು ABVPಯೊಂದಿಗೆ ಸಂಬಂಧ ಹೊಂದಿದ್ದಾರೆ.. ಇಲ್ಲಿವೆ ನೋಡಿ ಸಾಕ್ಷ್ಯ…

ಜನವರಿ 5 ರ ಭಾನುವಾರ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದನ್ನು ಹೇಳಿದ್ದಾರೆ. ಆಗ ಭಾಗವಹಿಸಿಸಿದ್ದ ಇತರ ಪ್ಯಾನಲಿಸ್ಟ್‌ಗಳು ದಾಳಿಕೋರರು ಎಬಿವಿಪಿಯವರೆ ಎಂದು ರಾಷ್ಟ್ರೀಯ ಟಿವಿಯಲ್ಲಿಯೇ ಒಪ್ಪಿಕೊಂಡಿದ್ದಕ್ಕೆ ಥ್ಯಾಂಕ್ಸ್‌ ಸೋಂಕರ್‌ ಎಂದಿದ್ದಾರೆ.

ಆಗ ಕೂಡಲೇ ಮಾತು ಬದಲಿಸಿದ ಸೋಂಕೆರ ನಾನು ಆ ಅರ್ಥದಲ್ಲಿ ಹೇಳಲಿಲ್ಲ ಅವರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಿದ್ದಾರೆ ಎಂದಷ್ಟೇ ಹೇಳಿಕೆ ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೂರ್ಣ ಚರ್ಚೆ ಇಲ್ಲಿದೆ ನೋಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು...