Homeಕರ್ನಾಟಕ17 ಶಾಸಕರ ಅನರ್ಹತೆ, ಡೆಮಾಕ್ರಸಿಗೆ ಘನತೆ. ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

17 ಶಾಸಕರ ಅನರ್ಹತೆ, ಡೆಮಾಕ್ರಸಿಗೆ ಘನತೆ. ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

- Advertisement -
- Advertisement -

17 > 105 ! ಮ್ಯಾಥ್ಸ್ ಆಫ್ ಡೆಮಾಕ್ರಸಿ!
17 ಶಾಸಕರ ಅನರ್ಹತೆ ಡೆಮಾಕ್ರಸಿಗೆ ಘನತೆ
ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

ರಾಜಕೀಯದಲ್ಲಿ ಒಂದು ಮಟ್ಟಿಗಿನ ನೈತಿಕತೆಯನ್ನು ಬಯಸುವ ರಾಜ್ಯದ ಜನರೆಲ್ಲ 17 ಶಾಸಕರ ಅನರ್ಹತೆಯ ಸಂಗತಿಯನ್ನು ಬೆಂಬಲಿಸಿದ್ದಾರೆ. ಅವರ ಆಶಯಕ್ಕೆ ಅನುಗುಣವಾಗಿಯೇ ಸ್ಪೀಕರ್ ಅವರ ನಿರ್ಧಾರವೂ ಬಂದಿದೆ ಅನಿಸುತ್ತಿದೆ ಎಂದು ದಿಟ್ಟವಾಗಿ ಹೇಳಲೂ ಆಗದ ಕಾಲದಲ್ಲಿ ನಾವಿದ್ದೇವೆ!

ಆದರೆ, ಒಬ್ಬ ಪ್ರಜೆಯಾಗಿ, ಮತದಾರನಾಗಿ ಹೇಳುವುದಾದರೆ ಹೊಣೆಗೇಡಿ 17 ಶಾಸಕರಿಗೆ ತಕ್ಕ ಶಾಸ್ತಿಯೇ ಆಗಿದೆ. ಹೀಗೆ ಪಾಠವು ದಿಟ್ಟವಾಗಿ ಹೇಳದೇ ಇದ್ದರೆ, ತಮ್ಮ ಮಿತಿಗಳಲ್ಲೇ ಅಂತಹ ಕ್ರಮಕ್ಕೆ ಮುಂದಾದ ಸ್ಪೀಕರ್‍ಗೆ ಅವಮಾನಿಸಿದಂತೆ.

2008ರಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್-ಎಲ್ಲವನ್ನೂ ಮಣ್ಣು ಮಾಡಿ ಅಧಿಕಾರ ಹಿಡಿಯಬಹುದು ಎಂದು ಹೊಸ ‘ಮಾದರಿ’ಯೊಂದನ್ನು ದೇಶದ ಮುಂದಿಟ್ಟ, ಆ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಅದನ್ನು ಎತ್ತಿ ಹಿಡಿಯುತ್ತಿದ್ದ ದೇಶದ ಉನ್ನತ ನ್ಯಾಯಾಲಯಗಳನ್ನೂ ಕಾಲಕಸ ಮಾಡಿದ ಕರ್ನಾಟಕ ರಾಜ್ಯದ ಬಿಜೆಪಿಯೀಗ ಅಂಥದ್ದೇ ‘ಮಾದರಿ’ಯ ಪ್ರಯೋಗದಲ್ಲಿ ಆರೂವರೆ ವರ್ಷಗಳ ನಂತರ ಅಧಿಕಾರ ಹಿಡಿದಿದೆ.

ಆದರೆ ಈ ಸಲ ಅಂತಹ ಅನೈತಿಕ ಪ್ರಯೋಗಕ್ಕೇ ಸವಾಲು ಎನಿಸುವಂತಹ ನೈತಿಕ ನಿರ್ಧಾರಗಳು ಹಲವು ಮೂಲಗಳಿಂದ ಹೊರಬಿದ್ದಿವೆ. ಮುಂದೆ ಈ ವಿಚಾರ ಸುಪ್ರೀಂ ಕೋರ್ಟಿಗೆ ಹೋಗಬಹುದು ಎಂಬ ಅರಿವಿದ್ದರೂ, ಸ್ಪೀಕರ್ ರಮೇಶಕುಮಾರ್ ಅವರು, ‘’ಅತೃಪ್ತ” ಎಂಬ ಹಣೆಪಟ್ಟಿ ಅಂಟಿಸಿಕೊಂಡು ಕ್ಷೇತ್ರ ಮತ್ತು ರಾಜ್ಯಗಳಿಂದ ಪಲಾಯನ ಮಾಡಿದ್ದ, ಸಾಂವಿಧಾನಿಕ ಮತ್ತು ಪ್ರಜಾತಾಂತ್ರಿಕ ಆಶಯಗಳನ್ನೇ ಗೇಲಿ ಮಾಡುವಂತೆ ಟಿವಿ ಚಾನೆಲ್ಲುಗಳಿಂದ ವಿಜೃಂಭಿಸಲ್ಪಡುತ್ತಿದ್ದ 17 ಹೊಣೆಗೇಡಿ ಶಾಸಕರನ್ನು ಅನರ್ಹಗೊಳಿಸುವ ಮೂಲಕ, ದೇಶದ ಎಲ್ಲೆಡೆ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿರುವ ಅಸಹ್ಯ ರಾಜಕಾರಣಕ್ಕೆ ಒಂದು ಏಟು ನೀಡಿದ್ದಾರೆ.

ಅನರ್ಹತೆ: ಮುಂದೇನು?
ಸದ್ಯ ಶೆಡ್ಯೂಲ್ 10ರ ತೀರಾ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಪರಿಗಣಿಸಿಯೇ ಸ್ಪೀಕರ್ ರಮೇಶಕುಮಾರ್ 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಸದ್ಯಕ್ಕೆ ಅವರು, ಈ ಸದನದ, 15ನೇ ಅಸೆಂಬ್ಲಿ ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸುಪ್ರೀಂ ಕೋರ್ಟು ಮೊರೆ ಹೋಗಿರುವ ಶಾಸಕರಿಗೆ ಅಲ್ಲೂ ನಿರಾಶೆ ಕಾದಂತಿದೆ. ಈ ಹಿಂದೆ, ಹೆಚ್ಚೂಕಡಿಮೆ ಇಂಥದ್ದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿನ 18 ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿತ್ತು. ಈ ಅಂತಿಮ ತೀರ್ಪು ಬರಲು ಒಂದು ವರ್ಷ ಹಿಡಿದಿತ್ತು!

ಅಸಲಿ ವಿಷಯ
ಈಗ ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಅದೀಗ ಪ್ರಜಾಸತ್ತಾತ್ಮಕ ವಿಷಯ ಎಂದು ಒಪ್ಪಿಕೊಳ್ಳಲು ಶುರು ಮಾಡಿಬಿಟ್ಟರೆ ಏನಾಗುತ್ತದೆ? ಇಲ್ಲೇನೂ ಆಗಲಿಕ್ಕಿಲ್ಲ. ಆದರೆ, ದೇಶದ ತುಂಬ ಹೀಗೇ ಪ್ರತಿಪಕ್ಷಗಳನ್ನೇ ನಾಶ ಮಾಡುವ ಅಜೆಂಡಾದೊಂದಿಗೆ ಒಂದು ದುಷ್ಟಶಕ್ತಿ ಹವಣಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಬೆಂಬಲವೂ ಇದೆ ಎಂಬುದೆಲ್ಲ ಗೊತ್ತಾದ ಮೇಲೂ, ‘ಕರ್ನಾಟಕದಲ್ಲಿ ಈಗ ವಿಶ್ವಾಸಮತ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದಿದೆ’ ಎಂದು ಒಪ್ಪಿಕೊಂಡರೆ ಅದು ಆತ್ಮವಂಚನೆಯೇ, ಅದೆಷ್ಟರ ಮಟ್ಟಿಗಿನ ಆತ್ಮವಂಚನೆ ಎಂದರೆ ಈ ದೇಶದಲ್ಲಿ ಇನ್ನೂ ಪರಿಪೂರ್ಣ ಪ್ರಜಾಪ್ರಭುತ್ವ ಜೀವಂತ ಇದೆ ಎಂದು ಹಲುಬುವ ಮನಸ್ಸುಗಳು ತಮಗೆ ತಾವೇ ದ್ರೋಹ ಬಗೆದುಕೊಂಡಂತೆ…

ಸುಪ್ರೀಂಕೋರ್ಟಿನಲ್ಲಿ 17 ‘ಅನರ್ಹ ಶಾಸಕರು’ ಅರ್ಜಿ ಸಲ್ಲಿಸುತ್ತಾರೆ. ಅಲ್ಲಿ ಗೆಲ್ಲುವುದೇ ಅವರಿಗೆ ಡೌಟು! ಆ ಕಾರಣಕ್ಕೇ ಈಗಾಗಲೇ ಕೆಲವು ಮನೆಹಾಳ ಅನರ್ಹರು ನಿವೃತ್ತಿ ಘೋಷಿಸಿದ್ದಾರೆ. ಇವರೆಲ್ಲ ತಮ್ಮ ಮಕ್ಕಳಿಗೆ ಅಥವಾ ಪತ್ನಿಗೆ ಸಚಿವ ಸ್ಥಾನ ಕೊಡಿ ಎಂದರೆ ಯಡಿಯೂರಪ್ಪ ಏನು ಮಾಡುತ್ತಾರೆ? ಕೊಡಲೇಬೇಕು ಅಲ್ಲವೇ? ಅಲ್ಲಿಗೇ ಮತ್ತೊಮ್ಮೆ ಮತ್ತೊಂದು ವಿಧದ ಆಪರೇಷನ್ ಕಮಲ ಶುರುವಾದಂತೆ!

ಈ ಸರ್ಕಾರ, ಮುಂದೇನಾಗುತ್ತೆ?
ಸರಳ ಪ್ರಶ್ನೆ. ಆರು ತಿಂಗಳು ಬೀಳಲ್ಲ. ಈಗಿನ ಕೇಂದ್ರದ ಬಲ ಮತ್ತು ಬಿಜೆಪಿಯ ಹಣಬಲ ನೋಡಿದರೆ ಬೀಳೋದೇ ಇಲ್ಲ. ಆದರೂ. ಇಲ್ಲಿ ವಿಪಕ್ಷಗಳು ಒಂದು ದೊಡ್ಡ ಹೋರಾಟಕ್ಕೆ ಅಣಿಯಾದರೆ ಸ್ವಲ್ಪ ವ್ಯತ್ಯಾಸ ಆಗಬಹುದಷ್ಟೇ. ಈ ಮೂರ್ಖರಲ್ಲಿ ಅಂತಹ ದೃಢತೆ ಇಲ್ಲವೇ ಇಲ್ಲ ಅಲ್ಲವೇ?

ಹಾಗಾಗಿ, ಈ ಸರ್ಕಾರವನ್ನು 2023ರವರೆಗೂ ಕರೆದೊಯ್ಯುವ ಜವಾಬ್ದಾರಿಯನ್ನು ಅಮಿತ್ ಶಾ ಹೊತ್ತಿದ್ದಾರೆ. ಗೋವಾದಲ್ಲಿ ಕೇವಲ 12 ಬಿಜೆಪಿ ಶಾಸಕರಿದ್ದೂ ಅಲ್ಲಿನ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ! ಇಲ್ಲೂ ಅದರ ಪ್ರಯೋಗ ಮುಂದುವರೆಯುತ್ತದೆ ಅಷ್ಟೇ!

ಮೀಡಿಯಾ: ಈಗ ವಿಪಕ್ಷ ವಿರುದ್ಧ!
ಇಲ್ಲಿ ಪ್ರಜಾಪ್ರಭುತ್ವ ಕೊಲ್ಲುವ ಕಾನೂನುಬಾಹಿರ ಕೆಲಸಗಳಿಗೆಲ್ಲ ಮಾನ್ಯತೆ ತಂದುಕೊಟ್ಟಿರುವುದೇ ಈ ಮೀಡಿಯಾ, ಅದರಲ್ಲೂ ದೃಶ್ಯ ಮೀಡಿಯಾ. ಇಲ್ಲಿವರೆಗೂ ಸರ್ಕಾರವನ್ನು ಟೀಕಿಸುತ್ತಿದ್ದ ಅವು ಇನ್ಮುಂದೆ ವಿಪಕ್ಷಗಳನ್ನು ಟೀಕಿಸಲು ಶುರು ಮಾಡಲಿವೆ!

ಇಲ್ಲಿವರೆಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ವಿಪರೀತ ಎನಿಸುವಷ್ಟು ಟೀಕೆ, ಅಪಪ್ರಚಾರ ಮಾಡತೊಡಗಿದ ಮಾಧ್ಯಮಗಳ ಕಾರ್ಯವನ್ನು ಮೆಚ್ಚೋಣ. ಮಾಧ್ಯಮ ಯಾವತ್ತಿಗೂ ವಿಪಕ್ಷ ಎಂಬ ಹಿನ್ನೆಲೆ ಇಟ್ಟುಕೊಂಡರೆ ಅದು ಸರಿಯೇ ಅನಿಸಬಹುದು. ಆದರೆ, ಈಗ ವಿಶ್ವಾಸಮತದ ಪ್ರಕ್ರಿಯೆ ಶುರು ಆದಾಗಿಂದ ಇವೆಲ್ಲ ಪುಟ್ಟಾಪೂರಾ ‘ಅತೃಪ್ತರ’ ಪರ ಬ್ಯಾಟಿಂಗ್ ಮಾಡಿದ್ದು ರಾಜ್ಯಕ್ಕೇ ಗೊತ್ತಿದೆ.

ಸುತ್ತು ಬಳಸಿ ಬೇಡವೇ ಬೇಡ, ರಾಜ್ಯದ ಬಹುಪಾಲು ದೃಶ್ಯ ಮಾಧ್ಯಮಗಳು ಬಿಜೆಪಿಗೆ ಮಾರಿಕೊಂಡಿವೆ. ಹೀಗಾಗಿ ಅವುಗಳ ಮುಂದಿನ ಟಾರ್ಗೆಟ್ ಆಡಳಿತ ಪಕ್ಷವಲ್ಲ, ವಿರೋಧ ಪಕ್ಷಗಳೇ. ಈ ಎರಡು ದಿನಗಳ ಅವುಗಳ ವರದಿ, ವಿಶ್ಲೇಷಣೆ ನೋಡಿದರೆ ಸಾಕು, ಇದೆಲ್ಲ ಅರ್ಥವಾಗುತ್ತದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...