Homeಮುಖಪುಟ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

- Advertisement -
- Advertisement -

‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬ ನುಡಿಗಟ್ಟು ಕೆಳಸಮುದಾಯಗಳನ್ನು ನಿಕೃಷ್ಟವಾಗಿ ಕಂಡಿದೆ. ಭೂತಗಳು ಕೆಳಜಾತಿ ಆರಾಧ್ಯ ದೈವ. ಅಂತ ದೈವಗಳು ಕನಿಷ್ಟ, ಭಗವದ್ಗೀತೆ ಶ್ರೇಷ್ಟ ಎಂಬಂತೆ ಬಿಂಬಿಸಿಕೊಂಡು ಬಂದಿರುವುದನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಭೂತಗಳು ಬಹುಜನರ ರಕ್ಷಕರು. ಈ ಕಾರಣಕ್ಕಾಗಿಯೇ ಭೂತದ ಬಾಯಲ್ಲಿ ಭಗವದ್ಗೀತೆ ನುಡಿಗಟ್ಟು ಹುಟ್ಟಿಕೊಂಡಂತಿದೆ. ಸಹಜವಾಗಿಯೇ ಇಂತಹ ನುಡಿಗಟ್ಟನ್ನು ಎಲ್ಲರೂ ಅಪ್ರಜ್ಞಾಪೂರ್ವಕವಾಗಿ ಬಳಸುವುದು ರೂಢಿಯಲ್ಲಿದೆ. ಹಾಗಾಗಿಯೇ ನಾನು ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ ಎಂಬುದಾಗಿ ಹೇಳುತ್ತೇನೆ. ಕೊಲ್ಲುವ ಕ್ರೂರಿಗಳು ಬದಲಾಗುತ್ತಾರೆ. ಮಾನಸಿಕ ಕ್ರೂರಿಗಳು ನಿತ್ಯವೂ ಕೊಲ್ಲುತ್ತಾರೆ. ಮಾನಸಿಕ ಕ್ರೂರಿಗಳು ಬದಲಾಗುವುದಿಲ್ಲ. ಮಾನಸಿಕ ಕ್ರೌರ್ಯತ್ವ ಸತ್ತರೂ ಅದರ ಶನಿಸಂತಾನ ಹಾಗೆ ಉಳಿದುಹೋಗುತ್ತದೆ.

ಕರ್ಮಠವಾದಿ ಆರ್‌ಎಸ್‍ಎಸ್ ನೀತಿಗಳೇ ದ್ವಂದ್ವ. ಅದರ ಮುಖ್ಯಸ್ಥರು ಇದರಿಂದ ಹೊರತಲ್ಲ. ನುಡಿದಂತೆ ನಡೆಯದ, ನಡೆದಂತೆ ನುಡಿಯದ ಮನಸ್ಥಿತಿ ಅವರದ್ದು. ಅವರಲ್ಲಿ ನಡೆಗೂ ನುಡಿಗೂ ಸಾಮ್ಯತೆಯನ್ನು ಕಾಣಲು ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಸಂಸ್ಕೃತಿ ವಕ್ತಾರರಂತೆ ಕಂಡರೂ ಆಳದಲ್ಲಿ ಅವರು ಆಗಿಲ್ಲ. ‘ವಸುದೈವಂ ಕುಟುಂಬಕಂ’ ಎಂದು ಉಚ್ಚರಿಸಿದರೂ ಹಾಗೆ ನಡೆಯಲೊಲ್ಲರು. ವಿಭಜಕ ಪ್ರವೃತ್ತಿ, ಅರಾಜಕತೆ ಸೃಷ್ಟಿಸುವುದನ್ನೇ ವೃತ್ತಿ ಪ್ರವೃತ್ತಿಯಾಗಿಸಿಕೊಂಡಿರುವ ಆರ್‌ಎಸ್‍ಎಸ್ ಮುಖಂಡರಿಗೆ ಮಾನವೀಯತೆ ಪರಿಕಲ್ಪನೆಯೇ ಗೊತ್ತಿಲ್ಲ ಎಂದು ಹೇಳಬಹುದು.

ಇಷ್ಟೆಲ್ಲ ಹೇಳಲು ಕಾರಣವಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಆಡಿರುವ ಮಾತುಗಳು ಸುಳ್ಳಿಗೆ ಹಿಡಿದ ಕನ್ನಡಿಯಾಗಿವೆ. ‘ಗುಂಪು ಹತ್ಯೆ’ ಪಾಶ್ಚಿಮಾತ್ಯ ದೇಶದ ಪರಿಕಲ್ಪನೆ. ನಮ್ಮ ನೀತಿಶಾಸ್ತ್ರಗಳಲ್ಲಿ ಇಂತಹ ಗುಂಪುಹತ್ಯೆಗಳಿಗೆ ಅವಕಾಶವಿಲ್ಲ. ಆದರೆ ದೇಶವನ್ನು ಕೆಣಕಲು ಭಾರತೀಯ ಸಂದರ್ಭದಲ್ಲಿ ಇದನ್ನು ಬಳಸಬಾರದು. ಗುಂಪುಹತ್ಯೆ ಪ್ರತ್ಯೇಕ ಧಾರ್ಮಿಕ ಪಠ್ಯದಿಂದ ಬಂದಿದೆ. ಅದನ್ನು ಭಾರತೀಯರ ಮೇಲೆ ಹೇರಬಾರದು’ ಎಂದು ಹೇಳಿದ್ದಾರೆ. ಅಂದರೆ ದೇಶದಲ್ಲಿ ಗುಂಪು ಹತ್ಯೆ ನಡೆಯುತ್ತಿರುವಾಗ ಬಂದ ಇಂತಹ ಮಾತುಗಳು ಹಸಿ ಸುಳ್ಳನ್ನೇ ವಿಜೃಂಭಿಸಿದೆ.

ಬ್ರಾಹ್ಮಣರ ಮಾತನ್ನು ಕೇಳಿಯೇ ರಾಮ ವಾಲಿಯನ್ನು ಕೊಂದಿದ್ದು, ಶಂಭೂಕನನ್ನು ಹತ್ಯೆಗೈದಿದ್ದು. ರಾವಣನ ಮೇಲೆ ಯುದ್ದ ಸಾರಿದ್ದು, ಅಣ್ಣತಮ್ಮಂದಿರಲ್ಲಿ ದ್ವೇಷವನ್ನು ಹುಟ್ಟು ಹಾಕಿದ್ದು, ಧರ್ಮಕ್ಕೆ ಚ್ಯುತಿ ಬಂದಾಗಲೆಲ್ಲ ಕೃಷ್ಣ ಹತ್ತು ಅವತಾರಗಳನ್ನು ಎತ್ತಿದ್ದು, ಎಲ್ಲಿ ಭೂಸುರರಾದ ಬ್ರಾಹ್ಮಣರಿಗೆ ಅಡ್ಡಿಯಾದಾಗ ಮಾತ್ರ ಧರ್ಮಕ್ಕೆ ಚ್ಯುತಿ ಬಂತು. ಇಂತಹ ಸಂದರ್ಭಗಳಲ್ಲಿ ಬಹುಜನರ ನಂಬಿಕೆಗಳಿಗೆ ಬೆಲೆ ಕೊಡಲೇ ಇಲ್ಲ. ಇಂತಹದ್ದೇ ಮಾತುಗಳ ಮೋಹನ್ ಭಾಗವತ್ ಅವರಿಂದ ಬರುತ್ತವೆ. ಆರ್‌ಎಸ್‍ಎಸ್ ಹಿಡೆನ್ ಅಜೆಂಡಾಗಳಿಗೆ ಪ್ರತಿರೋಧ ಕೇಳಿಬಂದಾಗ ಇದು ನಮ್ಮದಲ್ಲ ಎಂಬ ಸಂಸ್ಕೃತಿ ಅವರಿಗೆ ನೆನಪಾಗುತ್ತದೆ. ದೇಶದಲ್ಲಿ ಮುಸ್ಲಿಮರು, ದಲಿತರು ಮತ್ತು ಕೆಳ ಜಾತಿಗಳ ಜನರ ಹತ್ಯೆಗಳಿಗೆ ಶ್ರೇಷ್ಟತೆಯ ಲಕ್ಷಣಗಳೇ ಕಾರಣವಾಗಿದ್ದರೂ ಅವನ್ನು ಸುತಾರಾಂ ಒಪ್ಪಲು ಭಾಗವತ್ ಸಿದ್ದರಿಲ್ಲ.

ಆರ್‌ಎಸ್‍ಎಸ್ ಮೂಲ ಬೀಜವೇ ಒಡಕಿನದು. ಮುಸ್ಲಿಮರು, ಕಮ್ಯುನಿಸ್ಟರು ಮತ್ತು ಪ್ರಗತಿಪರರನ್ನು ಮುಗಿಸುವುದೇ ಹಿಂದುತ್ವದ ಉದ್ದೇಶ. ಅಖಂಡರಾಷ್ಟ್ರದ ಪರಿಕಲ್ಪನೆಯಲ್ಲಿ ಈ ಮೂರು ವರ್ಗದ ಜನ ಹಿಂದೂತ್ವದ ಅಡಿಯಾಳಾಗಿರಬೇಕು ಎಂಬುದೇ ಆಗಿದೆ. ಪಾಶ್ಚಿಮಾತ್ಯರನ್ನು ಅನುಕರಣೆ ಮಾಡಿ ನಮ್ಮ ಸಂಸ್ಕೃತಿ ಹಾಳಾಗಿದೆ ಎಂದು ಬಿಂಬಿಸುವುದರ ಭಾಗವೇ ಇದಾಗಿದೆ. ಇಂಗ್ಲೀಷ್ ಕಲಿಯದಿದ್ದರೆ, ಇಲ್ಲಿಗೆ ಆಧುನಿಕತೆ ಕಾಲಿಡದೇ ಇದ್ದರೆ ಮೂಲನಿವಾಸಿಗಳು ಹಿಂದೂತ್ವವಾದಿಗಳ ಗುಲಾಮರಾಗಬೇಕಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು.

ಇಲ್ಲಿಯೇ ಹುಟ್ಟಿದ ಬೌದ್ಧಧರ್ಮವನ್ನು ಸಹಿಸದ ಆರ್‌‌ಎಸ್‍ಎಸ್ ಅದರ ಮೂಲೋತ್ಪಾಟನೆಗೆ ಶಪಥ ಮಾಡಿತು. ಅದರ ಮುಂದುವರಿದ ರೂಪ ಮುಸ್ಲಿಮರು ಮತ್ತು ದಲಿತರ ಮೇಲಿನ ದಾಳಿಯಾಗಿದೆ. ಇದರಿಂದ ಬೇಸತ್ತ ದಲಿತರು ಅನಿವಾರ್ಯವಾಗಿ ಬೌದ್ಧ ಧಮ್ಮ ಅನುಸರಿಸುತ್ತಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ಗಾಂಧಿಯಂಥ ಮಹನೀಯರ ಮಾರ್ಗದಲ್ಲಿ ನಡೆಯುತ್ತಿರುವ ಮೂಲನಿವಾಸಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಹುದ್ದೆಗಳನ್ನು ಹಿಡಿದಿದ್ದಾರೆ. ಇದನ್ನು ಸಹಿಸಲು ಭಾಗವತ್‍ಗೆ ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ಮೋಹನ್ ಭಾಗವತ್ ದೇಶದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಲಿಷ್ಠ ಭಾರತವಾಗಲು ಬಿಡುತ್ತಿಲ್ಲ. ಗುಂಪು ಹತ್ಯೆಯಂತಹ ಗಲಭೆಗಳನ್ನು ಸೃಷ್ಟಿಸಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ’ ಎಂದು ಹಸೀ ಸುಳ್ಳು ಹೇಳುತ್ತಾರೆ.

ಹಿಂದೂಗಳೆಲ್ಲ ಒಂದು ಎಂದು ಹೇಳುತ್ತಲೇ ವರ್ಣಾಶ್ರಮ ವ್ಯವಸ್ಥೆಯನ್ನು ಮುಂದುವರಿಸುತ್ತಾ, ಜಾತಿ ಜಾತಿಗಳ ನಡುವೆ ದ್ವೇಷ ಹುಟ್ಟು ಹಾಕುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಆರ್‌ಎಸ್‍ಎಸ್ ಅಧಿಕಾರ ಹಿಡಿದು ಈ ದೇಶದ ಜನರನ್ನು ಗುಲಾಮರನ್ನಾಗಿಸಿಕೊಳ್ಳಲು ಸುಳ್ಳುಗಳ ಜಾಲವನ್ನು ಹೆಣೆಯುತ್ತಿದೆ. ಇದನ್ನು ನಂಬುತ್ತಿರುವ ಯುವ ಸಮೂಹ ಗುಂಪು ಹಲ್ಲೆ, ಗುಂಪು ಹತ್ಯೆಯಲ್ಲಿ ತೊಡಗಿದೆ. ಬಲಪಂಥೀಯ ಸಂಘಟನೆಗಳ ಜನರೇ ನೇರವಾಗಿ ಗುಂಪು ಹತ್ಯೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಹೀಗಾಗಿ ತಮ್ಮ ಮೇಲಿನ ಆರೋಪ ತೊಡೆದುಕೊಳ್ಳಲು ಆರ್‌ಎಸ್‍ಎಸ್ ಗುಂಪು ಹತ್ಯೆಗಳಿಗೆ ಪ್ರೇರಣೆ ಪಾಶ್ಚಿಮಾತ್ಯರದ್ದು ಎಂದು ಹೇಳುತ್ತಿದೆ. ಇದನ್ನು ಮೂರ್ಖರು ನಂಬುಬೇಕು ಅಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...