Homeಮುಖಪುಟ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

- Advertisement -
- Advertisement -

‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬ ನುಡಿಗಟ್ಟು ಕೆಳಸಮುದಾಯಗಳನ್ನು ನಿಕೃಷ್ಟವಾಗಿ ಕಂಡಿದೆ. ಭೂತಗಳು ಕೆಳಜಾತಿ ಆರಾಧ್ಯ ದೈವ. ಅಂತ ದೈವಗಳು ಕನಿಷ್ಟ, ಭಗವದ್ಗೀತೆ ಶ್ರೇಷ್ಟ ಎಂಬಂತೆ ಬಿಂಬಿಸಿಕೊಂಡು ಬಂದಿರುವುದನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಭೂತಗಳು ಬಹುಜನರ ರಕ್ಷಕರು. ಈ ಕಾರಣಕ್ಕಾಗಿಯೇ ಭೂತದ ಬಾಯಲ್ಲಿ ಭಗವದ್ಗೀತೆ ನುಡಿಗಟ್ಟು ಹುಟ್ಟಿಕೊಂಡಂತಿದೆ. ಸಹಜವಾಗಿಯೇ ಇಂತಹ ನುಡಿಗಟ್ಟನ್ನು ಎಲ್ಲರೂ ಅಪ್ರಜ್ಞಾಪೂರ್ವಕವಾಗಿ ಬಳಸುವುದು ರೂಢಿಯಲ್ಲಿದೆ. ಹಾಗಾಗಿಯೇ ನಾನು ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ ಎಂಬುದಾಗಿ ಹೇಳುತ್ತೇನೆ. ಕೊಲ್ಲುವ ಕ್ರೂರಿಗಳು ಬದಲಾಗುತ್ತಾರೆ. ಮಾನಸಿಕ ಕ್ರೂರಿಗಳು ನಿತ್ಯವೂ ಕೊಲ್ಲುತ್ತಾರೆ. ಮಾನಸಿಕ ಕ್ರೂರಿಗಳು ಬದಲಾಗುವುದಿಲ್ಲ. ಮಾನಸಿಕ ಕ್ರೌರ್ಯತ್ವ ಸತ್ತರೂ ಅದರ ಶನಿಸಂತಾನ ಹಾಗೆ ಉಳಿದುಹೋಗುತ್ತದೆ.

ಕರ್ಮಠವಾದಿ ಆರ್‌ಎಸ್‍ಎಸ್ ನೀತಿಗಳೇ ದ್ವಂದ್ವ. ಅದರ ಮುಖ್ಯಸ್ಥರು ಇದರಿಂದ ಹೊರತಲ್ಲ. ನುಡಿದಂತೆ ನಡೆಯದ, ನಡೆದಂತೆ ನುಡಿಯದ ಮನಸ್ಥಿತಿ ಅವರದ್ದು. ಅವರಲ್ಲಿ ನಡೆಗೂ ನುಡಿಗೂ ಸಾಮ್ಯತೆಯನ್ನು ಕಾಣಲು ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಸಂಸ್ಕೃತಿ ವಕ್ತಾರರಂತೆ ಕಂಡರೂ ಆಳದಲ್ಲಿ ಅವರು ಆಗಿಲ್ಲ. ‘ವಸುದೈವಂ ಕುಟುಂಬಕಂ’ ಎಂದು ಉಚ್ಚರಿಸಿದರೂ ಹಾಗೆ ನಡೆಯಲೊಲ್ಲರು. ವಿಭಜಕ ಪ್ರವೃತ್ತಿ, ಅರಾಜಕತೆ ಸೃಷ್ಟಿಸುವುದನ್ನೇ ವೃತ್ತಿ ಪ್ರವೃತ್ತಿಯಾಗಿಸಿಕೊಂಡಿರುವ ಆರ್‌ಎಸ್‍ಎಸ್ ಮುಖಂಡರಿಗೆ ಮಾನವೀಯತೆ ಪರಿಕಲ್ಪನೆಯೇ ಗೊತ್ತಿಲ್ಲ ಎಂದು ಹೇಳಬಹುದು.

ಇಷ್ಟೆಲ್ಲ ಹೇಳಲು ಕಾರಣವಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಆಡಿರುವ ಮಾತುಗಳು ಸುಳ್ಳಿಗೆ ಹಿಡಿದ ಕನ್ನಡಿಯಾಗಿವೆ. ‘ಗುಂಪು ಹತ್ಯೆ’ ಪಾಶ್ಚಿಮಾತ್ಯ ದೇಶದ ಪರಿಕಲ್ಪನೆ. ನಮ್ಮ ನೀತಿಶಾಸ್ತ್ರಗಳಲ್ಲಿ ಇಂತಹ ಗುಂಪುಹತ್ಯೆಗಳಿಗೆ ಅವಕಾಶವಿಲ್ಲ. ಆದರೆ ದೇಶವನ್ನು ಕೆಣಕಲು ಭಾರತೀಯ ಸಂದರ್ಭದಲ್ಲಿ ಇದನ್ನು ಬಳಸಬಾರದು. ಗುಂಪುಹತ್ಯೆ ಪ್ರತ್ಯೇಕ ಧಾರ್ಮಿಕ ಪಠ್ಯದಿಂದ ಬಂದಿದೆ. ಅದನ್ನು ಭಾರತೀಯರ ಮೇಲೆ ಹೇರಬಾರದು’ ಎಂದು ಹೇಳಿದ್ದಾರೆ. ಅಂದರೆ ದೇಶದಲ್ಲಿ ಗುಂಪು ಹತ್ಯೆ ನಡೆಯುತ್ತಿರುವಾಗ ಬಂದ ಇಂತಹ ಮಾತುಗಳು ಹಸಿ ಸುಳ್ಳನ್ನೇ ವಿಜೃಂಭಿಸಿದೆ.

ಬ್ರಾಹ್ಮಣರ ಮಾತನ್ನು ಕೇಳಿಯೇ ರಾಮ ವಾಲಿಯನ್ನು ಕೊಂದಿದ್ದು, ಶಂಭೂಕನನ್ನು ಹತ್ಯೆಗೈದಿದ್ದು. ರಾವಣನ ಮೇಲೆ ಯುದ್ದ ಸಾರಿದ್ದು, ಅಣ್ಣತಮ್ಮಂದಿರಲ್ಲಿ ದ್ವೇಷವನ್ನು ಹುಟ್ಟು ಹಾಕಿದ್ದು, ಧರ್ಮಕ್ಕೆ ಚ್ಯುತಿ ಬಂದಾಗಲೆಲ್ಲ ಕೃಷ್ಣ ಹತ್ತು ಅವತಾರಗಳನ್ನು ಎತ್ತಿದ್ದು, ಎಲ್ಲಿ ಭೂಸುರರಾದ ಬ್ರಾಹ್ಮಣರಿಗೆ ಅಡ್ಡಿಯಾದಾಗ ಮಾತ್ರ ಧರ್ಮಕ್ಕೆ ಚ್ಯುತಿ ಬಂತು. ಇಂತಹ ಸಂದರ್ಭಗಳಲ್ಲಿ ಬಹುಜನರ ನಂಬಿಕೆಗಳಿಗೆ ಬೆಲೆ ಕೊಡಲೇ ಇಲ್ಲ. ಇಂತಹದ್ದೇ ಮಾತುಗಳ ಮೋಹನ್ ಭಾಗವತ್ ಅವರಿಂದ ಬರುತ್ತವೆ. ಆರ್‌ಎಸ್‍ಎಸ್ ಹಿಡೆನ್ ಅಜೆಂಡಾಗಳಿಗೆ ಪ್ರತಿರೋಧ ಕೇಳಿಬಂದಾಗ ಇದು ನಮ್ಮದಲ್ಲ ಎಂಬ ಸಂಸ್ಕೃತಿ ಅವರಿಗೆ ನೆನಪಾಗುತ್ತದೆ. ದೇಶದಲ್ಲಿ ಮುಸ್ಲಿಮರು, ದಲಿತರು ಮತ್ತು ಕೆಳ ಜಾತಿಗಳ ಜನರ ಹತ್ಯೆಗಳಿಗೆ ಶ್ರೇಷ್ಟತೆಯ ಲಕ್ಷಣಗಳೇ ಕಾರಣವಾಗಿದ್ದರೂ ಅವನ್ನು ಸುತಾರಾಂ ಒಪ್ಪಲು ಭಾಗವತ್ ಸಿದ್ದರಿಲ್ಲ.

ಆರ್‌ಎಸ್‍ಎಸ್ ಮೂಲ ಬೀಜವೇ ಒಡಕಿನದು. ಮುಸ್ಲಿಮರು, ಕಮ್ಯುನಿಸ್ಟರು ಮತ್ತು ಪ್ರಗತಿಪರರನ್ನು ಮುಗಿಸುವುದೇ ಹಿಂದುತ್ವದ ಉದ್ದೇಶ. ಅಖಂಡರಾಷ್ಟ್ರದ ಪರಿಕಲ್ಪನೆಯಲ್ಲಿ ಈ ಮೂರು ವರ್ಗದ ಜನ ಹಿಂದೂತ್ವದ ಅಡಿಯಾಳಾಗಿರಬೇಕು ಎಂಬುದೇ ಆಗಿದೆ. ಪಾಶ್ಚಿಮಾತ್ಯರನ್ನು ಅನುಕರಣೆ ಮಾಡಿ ನಮ್ಮ ಸಂಸ್ಕೃತಿ ಹಾಳಾಗಿದೆ ಎಂದು ಬಿಂಬಿಸುವುದರ ಭಾಗವೇ ಇದಾಗಿದೆ. ಇಂಗ್ಲೀಷ್ ಕಲಿಯದಿದ್ದರೆ, ಇಲ್ಲಿಗೆ ಆಧುನಿಕತೆ ಕಾಲಿಡದೇ ಇದ್ದರೆ ಮೂಲನಿವಾಸಿಗಳು ಹಿಂದೂತ್ವವಾದಿಗಳ ಗುಲಾಮರಾಗಬೇಕಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು.

ಇಲ್ಲಿಯೇ ಹುಟ್ಟಿದ ಬೌದ್ಧಧರ್ಮವನ್ನು ಸಹಿಸದ ಆರ್‌‌ಎಸ್‍ಎಸ್ ಅದರ ಮೂಲೋತ್ಪಾಟನೆಗೆ ಶಪಥ ಮಾಡಿತು. ಅದರ ಮುಂದುವರಿದ ರೂಪ ಮುಸ್ಲಿಮರು ಮತ್ತು ದಲಿತರ ಮೇಲಿನ ದಾಳಿಯಾಗಿದೆ. ಇದರಿಂದ ಬೇಸತ್ತ ದಲಿತರು ಅನಿವಾರ್ಯವಾಗಿ ಬೌದ್ಧ ಧಮ್ಮ ಅನುಸರಿಸುತ್ತಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ಗಾಂಧಿಯಂಥ ಮಹನೀಯರ ಮಾರ್ಗದಲ್ಲಿ ನಡೆಯುತ್ತಿರುವ ಮೂಲನಿವಾಸಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಹುದ್ದೆಗಳನ್ನು ಹಿಡಿದಿದ್ದಾರೆ. ಇದನ್ನು ಸಹಿಸಲು ಭಾಗವತ್‍ಗೆ ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ಮೋಹನ್ ಭಾಗವತ್ ದೇಶದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಲಿಷ್ಠ ಭಾರತವಾಗಲು ಬಿಡುತ್ತಿಲ್ಲ. ಗುಂಪು ಹತ್ಯೆಯಂತಹ ಗಲಭೆಗಳನ್ನು ಸೃಷ್ಟಿಸಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ’ ಎಂದು ಹಸೀ ಸುಳ್ಳು ಹೇಳುತ್ತಾರೆ.

ಹಿಂದೂಗಳೆಲ್ಲ ಒಂದು ಎಂದು ಹೇಳುತ್ತಲೇ ವರ್ಣಾಶ್ರಮ ವ್ಯವಸ್ಥೆಯನ್ನು ಮುಂದುವರಿಸುತ್ತಾ, ಜಾತಿ ಜಾತಿಗಳ ನಡುವೆ ದ್ವೇಷ ಹುಟ್ಟು ಹಾಕುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಆರ್‌ಎಸ್‍ಎಸ್ ಅಧಿಕಾರ ಹಿಡಿದು ಈ ದೇಶದ ಜನರನ್ನು ಗುಲಾಮರನ್ನಾಗಿಸಿಕೊಳ್ಳಲು ಸುಳ್ಳುಗಳ ಜಾಲವನ್ನು ಹೆಣೆಯುತ್ತಿದೆ. ಇದನ್ನು ನಂಬುತ್ತಿರುವ ಯುವ ಸಮೂಹ ಗುಂಪು ಹಲ್ಲೆ, ಗುಂಪು ಹತ್ಯೆಯಲ್ಲಿ ತೊಡಗಿದೆ. ಬಲಪಂಥೀಯ ಸಂಘಟನೆಗಳ ಜನರೇ ನೇರವಾಗಿ ಗುಂಪು ಹತ್ಯೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಹೀಗಾಗಿ ತಮ್ಮ ಮೇಲಿನ ಆರೋಪ ತೊಡೆದುಕೊಳ್ಳಲು ಆರ್‌ಎಸ್‍ಎಸ್ ಗುಂಪು ಹತ್ಯೆಗಳಿಗೆ ಪ್ರೇರಣೆ ಪಾಶ್ಚಿಮಾತ್ಯರದ್ದು ಎಂದು ಹೇಳುತ್ತಿದೆ. ಇದನ್ನು ಮೂರ್ಖರು ನಂಬುಬೇಕು ಅಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ತಲೆ ಮೇಲೆ ತೂಗುತ್ತಿದ್ದ ಕತ್ತಿ ಈಗ ಮೈಮೇಲೆ ಎರಗಿದೆ”: ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ ಸಾರಿದ ಸ್ಟಾಲಿನ್; ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದು, ಇದನ್ನು ದಕ್ಷಿಣ ರಾಜ್ಯಗಳ ವಿರುದ್ಧದ 'ಐತಿಹಾಸಿಕ ಅನ್ಯಾಯ' ಎಂದು ಕರೆದಿದ್ದಾರೆ ಮತ್ತು ಗುರುವಾರ...

ಶಿಕೋಪುರ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣ; ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ಹರಿಯಾಣದ ಶಿಕೋಪುರದಲ್ಲಿ ನಡೆದ ವಿವಾದಾತ್ಮಕ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಬುಧವಾರ ದೆಹಲಿ ನ್ಯಾಯಾಲಯವು ಪರಿಗಣಿಸಿದೆ....

ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ‌ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಭಿನ್ನತೆ ಸದ್ಯಕ್ಕೆ ಶಮನಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಕಾಂಗ್ರೆಸ್‌ನ ರಾಜ್ಯ ಮತ್ತು ಹೈಕಮಾಂಡ್‌ ನಾಯಕರ ನಡೆ ಗಾಯಕ್ಕೆ ಮುಲಾಮು...

‘ಆಳವಾದ ಅಪನಂಬಿಕೆ ರಾತ್ರೋರಾತ್ರಿ ಬಗೆಹರಿಯುವುದಿಲ್ಲ..’; ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಭರವಸೆ ವ್ಯಕ್ತಪಡಿಸಿದ ಜೆಡಿ ವ್ಯಾನ್ಸ್

ಅಮೆರಿಕ ಮತ್ತು ಇರಾನ್ ನಡುವೆ ಸಾಕಷ್ಟು ಅಪನಂಬಿಕೆ ಇದೆ, ಅದನ್ನು ರಾತ್ರೋರಾತ್ರಿ ಪರಿಹರಿಸಲು ಸಾಧ್ಯವಿಲ್ಲ ಎಂದು ಟೆಹ್ರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳ ಕುರಿತು ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್...

ನ್ಯಾ. ಶರ್ಮಾ ಪೀಠದ ಮುಂದೆ ಅರವಿಂದ್ ಕೇಜ್ರಿವಾಲ್ ವಾದಿಸಿದ ವಿಡಿಯೋಗಳನ್ನು ತೆಗೆದುಹಾಕುವಂತೆ ಪೊಲೀಸರಿಗೆ ಸೂಚಿಸಿದ ದೆಹಲಿ ಹೈಕೋರ್ಟ್-ವರದಿ

ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ಅರವಿಂದ್ ಕೇಜ್ರಿವಾಲ್ ವಾದಿಸಿದ್ದಕ್ಕೆ ಸಂಬಂಧಿಸಿದ ಅನಧಿಕೃತ ವಿಡಿಯೋಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ ಎಂದು ಕಾನೂನು ಸುದ್ದಿ...

ತಮಿಳುನಾಡು ವಿಧಾನಸಭಾ ಚುನಾವಣೆ 2026| ದಕ್ಷಿಣ ರಾಜ್ಯಗಳು ‘ದೆಹಲಿ ತಂಡ’ವನ್ನು ಓಡಿಸಬೇಕು: ಉದಯನಿಧಿ ಸ್ಟಾಲಿನ್

ತಮಿಳುನಾಡು: ಮುಂಬರುವ ವಿಧಾನಸಭಾ ಚುನಾವಣೆಗಳು ತಮಿಳುನಾಡು ತಂಡ ಮತ್ತು ದೆಹಲಿ ತಂಡದ ನಡುವಿನ ಹೋರಾಟವಾಗಿದ್ದು, ದಕ್ಷಿಣ ರಾಜ್ಯವು ದೆಹಲಿಯನ್ನು "ಓಡಿಸಬೇಕು" ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಮತ್ತೊಮ್ಮೆ ಒತ್ತಾಯಿಸಿದ್ದಾರೆ. "ನಮ್ಮ ನಾಯಕ (ಎಂ.ಕೆ....

ಮರ್ಯಾದೆಗೇಡು ಹತ್ಯೆ: ಅನ್ಯಜಾತಿ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಗೆ ಸಂಬಂಧಿಕರಿಂದ ವಿಷಪ್ರಾಶನ

ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಮರ್ಯಾದೆಗೇಡು ಹತ್ಯೆಯ ಶಂಕಿತ ಪ್ರಕರಣದಲ್ಲಿ ಮಹಿಳೆಯನ್ನು ಆಕೆಯ ಕುಟುಂಬದವರೇ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ...

ನ್ಯಾ. ಶರ್ಮಾರ ಇಬ್ಬರು ಮಕ್ಕಳು ಕೇಂದ್ರ ಸರ್ಕಾರದ ವಕೀಲರು : ಹೊಸ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್, ವಿಚಾರಣೆಯಿಂದ ಹಿಂದೆ ಸರಿಯಲು ಆಗ್ರಹ

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ವಿರುದ್ಧ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ (ಏ.15) ಹೊಸ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದಾರೆ.  ಅಬಕಾರಿ ನೀತಿ...

ಉತ್ತರ ಪ್ರದೇಶ: ಅಂಬೇಡ್ಕರ್ ಜಯಂತಿಯಂದು ಪ್ರತಿಮೆ ಸ್ಥಾಪನೆಗೆ ವಿರೋಧ: ಲಖಿಂಪುರ ಖೇರಿಯಲ್ಲಿ ಭುಗಿಲೆದ್ದ ಘರ್ಷಣೆ 

ಸರ್ಕಾರಿ ಭೂಮಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದ ವಿವಾದವು ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾದ ನಂತರ ಮಂಗಳವಾರ ಸಂಜೆ ಮೈಲಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕೆಗಂಜ್...

‘ನಮಗೆ ಮುಸ್ಲಿಂ ಮತಗಳ ಅಗತ್ಯವಿಲ್ಲ..’; ಬಂಗಾಳ ಚುನಾವಣೆಗೆ ಮುನ್ನ ಬಿಜೆಪಿಯ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ

2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 27 ರಷ್ಟಿರುವ ಮತ್ತು ರಾಜ್ಯದಲ್ಲಿ ಸರ್ಕಾರವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮುಸ್ಲಿಂ ಸಮುದಾಯದ ಮತಗಳನ್ನು ಕೇಳುವ ಅಗತ್ಯವಿಲ್ಲ ಎಂದು ಬಂಗಾಳ...