Homeಕರ್ನಾಟಕನಟಿ ಅಮೂಲ್ಯಾ ಗರ್ಭಿಣಿಯಾಗಿದ್ದು ‘ರಾಜ್ಯಕ್ಕೆ ಶುಭಸುದ್ದಿ’ ಎಂದ BTV; ಆಕ್ರೋಶ-ಟ್ರೋಲ್

ನಟಿ ಅಮೂಲ್ಯಾ ಗರ್ಭಿಣಿಯಾಗಿದ್ದು ‘ರಾಜ್ಯಕ್ಕೆ ಶುಭಸುದ್ದಿ’ ಎಂದ BTV; ಆಕ್ರೋಶ-ಟ್ರೋಲ್

- Advertisement -
- Advertisement -

ಕನ್ನಡ ಮಾಧ್ಯಮಗಳು ಸಿನಿಮಾ ನಟ-ನಟಿಯರ ಪ್ರತಿ ವಿಚಾರದಲ್ಲಿ ‘ಮಾಧ್ಯಮ ಕರ್ತವ್ಯ’ವನ್ನು ಮರೆತು ಕೆಟ್ಟದಾಗಿ ವರ್ತಿಸುತ್ತವೆ. ಜನಪ್ರಿಯ ನಟ-ನಟಿಯರ ಸಾವು, ಅಪಘಾತ, ಅನಾರೋಗ್ಯ, ಪ್ರೀತಿ-ಪ್ರಣಯ ಮತ್ತು ಅವರ ಖುಷಿಯ ಘಳಿಗೆಯನ್ನು ಭಾವನಾತ್ಮಕವಾಗಿ ವೀಕ್ಷಕರ ಮೇಲೆ ಹೇರಿ ಬಿಡುತ್ತದೆ. ಜೊತೆಗೆ ಬೇರೆ ಅಂತಹದ್ದೇ ಸುದ್ದಿಗಳು ಸಿಗುವವರೆಗೂ ಅವುಗಳ ಸುತ್ತ ಗಿರಕಿ ಹೊಡೆಯುತ್ತಲೆ ಇರುತ್ತವೆ.

ಈ ವೇಳೆ ಅವು ನಟ ನಟಿಯರ ಖುಷಿ-ದುಃಖಗಳಷ್ಟೇ ರಾಜ್ಯದ ಸಮಸ್ಯೆ ಎಂದು ಬಿಂಬಿಸಿ ಉಳಿದ ಬಹುಮುಖ್ಯವಾದ ಸುದ್ದಿಗಳನ್ನು ತೆರೆಮರೆಯಲ್ಲಿ ಹುದುಗಿಸಿ ಬಿಡುತ್ತದೆ. ಕನ್ನಡದ ಸುದ್ದಿ ವಾಹಿನಿ ಬಿಟಿವಿ ಕೂಡಾ ಗುರುವಾರ ಅದೇ ರೀತಿಯಲ್ಲಿ ವರ್ತಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ಹಲವಾರು ನೆಟ್ಟಿಗರು ಈ ಬಗ್ಗೆ ಬಿಟಿವಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಈ ಬಾರಿ ಕನ್ನಡದ ನಟಿ ಅಮೂಲ್ಯಾ ಅವರು ಗರ್ಭಿಣಿಯಾಗಿರುವುದನ್ನು ಬಿಟಿವಿ ‘ರಾಜ್ಯಕ್ಕೆ ಶುಭ ಸುದ್ದಿ’ ಎಂದು ವರದಿ ಮಾಡಿದೆ. ಅಮೂಲ್ಯಾ ಅವರು ಗರ್ಭಿಣಿ ಆಗಿರುವುದನ್ನು ‘ಮೆಘಾ ಬ್ರೇಕಿಂಗ್’ ಸುದ್ದಿ ಎಂದು ಉಲ್ಲೇಖಿಸಿರುವ ಬಿಟಿವಿ, “ಉಲ್ಲಾಸದ ಹೂಮಳೆ ಸುರಿಸುವ ಖುಷಿಖುಷಿಯ ಸುದ್ದಿ, ಸ್ಯಾಂಡಲ್‌ವುಡ್‌ ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್, ಇಡೀ ರಾಜ್ಯ ಖುಷಿ ಪಡುವ ಸುದ್ದಿ-ನಟಿ ಅಮೂಲ್ಯಾ ಪ್ರಗ್ನೆಂಟ್‌” ಎಂದು ಸ್ಕ್ರೀನ್‌ನಲ್ಲಿ ಬರೆದು ವೀಕ್ಷಕರಿಗೆ ಸುದ್ದಿಯನ್ನು ತಿಳಿಸಿದೆ.

 ಇದನ್ನೂ ಓದಿ:ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರ ಬಂಧನ: ರಾಹುಲ್ ಗಾಂಧಿ, ಮಾಧ್ಯಮ ಸಂಸ್ಥೆಗಳಿಂದ ಖಂಡನೆ

ಆದರೆ ಪ್ರಜ್ಞಾವಂತರು ಬಿಟಿವಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಟ್ರೋಲ್ ಕೂಡಾ ಮಾಡಲಾಗುತ್ತಿದೆ.

ಇರ್ಶಾದ್ ಯುಟಿ ಅವರು, ‘ಈ ಮಟ್ಟಕ್ಕೆ ನಮ್ಮ ಕನ್ನಡದ ಸುದ್ದಿಮಾಧ್ಯಮಗಳು ಇಳಿದಿರುವುದು ನಾಚಿಕೆಯಿಲ್ಲವೇ…???’

ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು, “ಕೇವಲ ಕರ್ನಾಟಕ ರಾಜ್ಯವಷ್ಟೇ ಅಲ್ಲದೆ ಇಡೀ ವಿಶ್ವದ ಕನ್ನಡಿಗರು ಖುಶಿಪಡಬೇಕಾದ ಸುದ್ದಿ ಇದು!. Btv ಕಂಜೂಸುಗಳು ಅಮೂಲ್ಯ ಬಸಿರಾಗಿರುವ ಖುಶಿಯ ಸುದ್ದಿಯನ್ನು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ!!” ಎಂದು ವ್ಯಂಗ್ಯವಾಡಿದ್ದಾರೆ.

“ಮಾನವನ ಜನ್ಮದಲ್ಲಿ ಹಿಂದೆಯೂ ಆಗಲಿಲ್ಲ ಮುಂದೆಯೂ ಆಗುವುದಿಲ್ಲ ಇಂದು ಇತಿಹಾಸ ಸೃಷ್ಟಿಸುವ ನಟಿ ಅಮೂಲ್ಯ ಅವರ ತಾಯಿತನ. ಬಿಟಿವಿ ಗೆ ಬೇರೆ ಸುದ್ದಿ ಸಿಕ್ಕಿಲ್ಲ”

ಪತ್ರಕರ್ತ ನಿಖಿಲ್ ಕೊಲ್ಪೆ, “ಬಿಟಿವಿಯ ಅತ್ಯಂತ ಮಹತ್ವದ ಸ್ಫೋಟಕ “ಪ್ರೆಗ್ನೆಂಟ್ ಸುದ್ದಿ”ಯ ಬಗ್ಗೆ ತನಿಖಾ ವರದಿ ಪ್ರಸಾರವಾಗಲಿ! ಈ ಅಧಿವೇಶನದಲ್ಲಿ ಗಂಭೀರ ಚರ್ಚೆಯಾಗಲಿ!” ಎಂದು ವ್ಯಂಗ್ಯವಾಡಿದ್ದಾರೆ.

“ಕರ್ನಾಟಕದ ಸುತ್ತಮುತ್ತಲಿನ ರಾಜ್ಯಗಳ ಪತ್ರಕರ್ತರು, ನಮ್ಮ ರಾಜ್ಯದ ಕೆಲ! ‘ಮೂರೂ ಬಿಟ್ಟ ಮಾಧ್ಯಮಗಳ’ ವರದಿಗಳನ್ನು ನೋಡಬೇಕು. ನಾವು ಅವರಿಗೆ ತಿಳಿಸಬೇಕು. ಇವರು ಮಾಡುವ ನಾಲಾಯಕ್ ವರದಿಗಳನ್ನು ನೋಡಿ ಆವರ ಚಾನಲ್‌ಗಳಲ್ಲಿ ಇವರಿಗೆ ಉಗಿಯಬೇಕು… ಮಲಯಾಳಿಗಳಿಗೆ ತಿಳಿದರೆ ಖಂಡಿತವಾಗಿಯೂ ಟ್ರೋಲ್ ಮಾಡಿ ಇವರನ್ನು ಬೆನ್ನಟ್ಟಿ ಕೊಲ್ಲುತ್ತಾರೆ”

ಇದನ್ನೂ ಓದಿ:ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

ಇದನ್ನೂ ಓದಿ:ಭಾರತ್ ಬಂದ್ ಕುರಿತು ವರದಿ; ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿ ಇಲ್ಲವೇ?

ಇದನ್ನೂ ಓದಿ:ಮೋದಿ ಮುಂದೆಯೆ ಭಾರತೀಯ ಮಾಧ್ಯಮಗಳ ಬಗ್ಗೆ ಬಿಡೆನ್ ವ್ಯಂಗ್ಯ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...