Homeಚಳವಳಿರಂಗಾಯಣದ ರಂಗೋತ್ಸವ : ಪಿ.ಲಂಕೇಶರಿಗೆ ರಂಗನಮನ - 2019

ರಂಗಾಯಣದ ರಂಗೋತ್ಸವ : ಪಿ.ಲಂಕೇಶರಿಗೆ ರಂಗನಮನ – 2019

- Advertisement -
- Advertisement -

ಪಿ.ಲಂಕೇಶ್ ರವರು ಹಲವು ತಲೆಮಾರುಗಳನ್ನು ಪ್ರಭಾವಿಸಿದ ಭಾರತದ ಅಪ್ಪಟ ಜೀವನಪ್ರೀತಿಯ ಮನುಷ್ಯರಾಗಿದ್ದವರು. ತಮ್ಮ ಎಲ್ಲಾ ರೀತಿಯ ಬರಹಗಳಿಂದ ಅಸಂಖ್ಯಾತ ಓದುಗರನ್ನು ಪ್ರೇರಿಪಿಸಿದ ಮಹಾನ್ ಚೇತನ ಅವರದು. ಕನ್ನಡ ಸಾಹಿತ್ಯ ಲೋಕವಂತೂ ಅವರನ್ನು ಮರೆಯುವ ಮಾತೇ ಇಲ್ಲ. ಗೌರಿ ಲಂಕೇಶ್ ರವರು ಬದುಕಿದ್ದಾಗ ಪ್ರತಿ ವರ್ಷ ಪಿ.ಲಂಕೇಶ್ ರವರ ಜನ್ಮದಿನವಾದ ಮಾರ್ಚ್ 08 ರಂದು ರಾಜ್ಯದ ಯಾವುದಾದರೊಂದು ಜಿಲ್ಲೆಯಲ್ಲಿ ಅತ್ಯುತ್ತಮ ಸಾಹಿತ್ಯಕ-ರಾಜಕೀಯ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಈಗಲೂ ಲಂಕೇಶ್ ರವರ ಸ್ಫೂರ್ತಿ, ಪ್ರಭಾವದ ನೆನಪಿನಲ್ಲಿ ಈ ರೀತಿಯ ಹಲವು ಕಾರ್ಯಕ್ರಮಗಳನ್ನು ಲಂಕೇಶ್ ರವರ ಶಿಷ್ಯಬಳಗ ರಾಜ್ಯದ್ಯಂತ ಹಮ್ಮಿಕೊಳ್ಳುತ್ತಿವೆ.

ಅದೇ ರೀತಿ ಈ ವರ್ಷ ಶಿವಮೊಗ್ಗ ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ‘ರಂಗಾಯಣದ ರಂಗೋತ್ಸವ-ಪಿ.ಲಂಕೇಶರಿಗೆ ರಂಗನಮನ-2019’ ರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರ್ನಾಟಕದ, ಕನ್ನಡದ ಸಾಕ್ಷಿ ಪ್ರಜೆಯಾಗಿದ್ದ ಕನ್ನಡ ರಂಗಭೂಮಿಗೆ ತಮ್ಮದೇ ಆದ ರೀತಿಯ ಕಾಣಿಕೆ ಸಲ್ಲಿಸಿದ ಪಿ.ಲಂಕೇಶರಿಗೆ, ಸಮಕಾಲೀನವು ವಿಭಿನ್ನವು ಆದ ರಂಗಾಯಣದ ಮೂರು ನಾಟಕಗಳು ಸೇರಿ ಒಟ್ಟು ಐದು ನಾಟಕ ಪ್ರದರ್ಶನಗಳನ್ನು ಅರ್ಪಿಸುವ ಮೂಲಕ ಲಂಕೇಶರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ.

ಇದೇ ಮಾರ್ಚ್ 27 ರಿಂದ 31 ರವರೆಗೆ ನಡೆಯುವ ಈ ರಂಗನಮನ ಕಾರ್ಯಕ್ರಮದಲ್ಲಿ ಅರವಿಂದ ಮಾಲಗತ್ತಿಯವರ ಗೌರ್ಮೆಂಟ್ ಬ್ರಾಹ್ಮಣ, ಬಾದಲ್ ಸರ್ಕಾರ್ ರವರ ಮೆರವಣಿಗೆ, ಜಾಯ್ ಮೈಸ್ನಾಂ ರವರ ಇದಕ್ಕೆ ಕೊನೆ ಎಂದು? ವಾಮನ ರಾಯರವರ ಸಂದೇಹ ಸಾಮ್ರಾಜ್ಯ ಮತ್ತು ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ಪಾರ್ಶ್ವ ಸಂಗೀತ ನಾಟಕಗಳು ಪ್ರತಿದಿನ ಸಂಜೆ ಪ್ರದರ್ಶನಗೊಳ್ಳಲ್ಲಿವೆ. ಈ ರಂಗೋತ್ಸವ ನಡೆಯಲು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಡಾ. ಎಂ ಗಣೇಶ್ ರವರ ಶ್ರಮ ಎದ್ದು ಕಾಣುತ್ತಿದೆ.

“ಸಾಲದಲ್ಲಿ ಹುಟ್ಟಿ ಸಾಲದಲ್ಲೇ ಸಾಯುತ್ತಾನೆ” ಎಂಬ ಮಾತು ಈ ವಸುಧೆಯ ಮೇಲೆ ಭಾರತೀಯ ರೈತನಿಗಲ್ಲದೇ ಇನ್ನಾರಿಗೆ ಅನ್ವಯಿಸೀತು?  ರೈತರ ಅರಿವಿಗೆ ಬಾರದೆಯೇ ಅವರನ್ನಾವರಿಸುವ ಸಾಲದ ಸುಳಿ, ಅದರಿಂದ ಹೊರಬರಲಾರದೇ ಒದ್ದಾಡುತ್ತಿರುವಾಗಲೇ ಅವನೊಡನೆ ಕಣ್ಣಾಮುಚ್ಚಾಲೆಯಾಡುವ ಮಳೆ, ಮುನಿಸಿಕೊಳ್ಳುವ ಪ್ರಕೃತಿ, ನೀರಿನ ನೀರಿಕ್ಷೆಯಲ್ಲಿಯೇ ಮುರುಟುವ ಬೆಳೆಗಳು ಒಂದೇ ಎರಡೇ? ಅನ್ನಕ್ಕೂ ಗತಿಯಿಲ್ಲದೇ ತನ್ನ ಬದುಕನ್ನು ಕೊನೆಯಾಗಿಸಿಕೊಳ್ಳುತ್ತಾನೆ ರೈತ! .
ಈ ರೈತರ ಆತ್ಮಹತ್ಯೆಯಂತಹ ಕಠು ಸತ್ಯದ ಭೀಕರತೆಯನ್ನು ಉತ್ಕಟ ಭಾವಾಭಿನಯಗಳ ಅಸಂಗತ ಘಟನಾವಳಿಗಳ ಮೂಲಕ ತಮ್ಮ ಮುಂದೆ ಶಿವಮೊಗ್ಗ ರಂಗಾಯಣದ ಕಲಾವಿದರು ಅಭಿನಯಿಸಲಿದ್ದಾರೆ. ಮಾತುಗಳು ಮುಖ್ಯವಾಗದೆ ಬೌದ್ಧಿಕ ದೈಹಿಕ ಅಭಿನಯದಲ್ಲಿ ಪ್ರೇಕ್ಷಕನನ್ನು ಚಿಂತನೆಗೆ ಪ್ರಚೋದಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರಾದ ಮಣಿಪುರದ ಜಾಯ್ ಮೈಸ್ನಾಂ ರವರು.

ಈ ರೀತಿ ಸಮಾಜಮುಖಿ ಚಿಂತನೆಗಳುಳ್ಳ ನಾಟಕಗಳು ಪಿ.ಲಂಕೇಶ್ ರವರ ನೆನಪಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಆಶಾದಾಯಕ ಬೆಳವಣಿಗೆ. ಇಂತಹ ಪ್ರಯೋಗಗಳು ಹೆಚ್ಚಾಗಲಿ ಎಂಬುದು ನಮ್ಮ ಆಶಯ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...