Homeಮುಖಪುಟರಾಹುಲ್‍ಗಾಂಧಿಯ `ನ್ಯಾಯ್' ಸ್ವಾಗತಾರ್ಹ. ಆದರೆ, ಕೇಳಲೇಬೇಕಾದ ಪ್ರಶ್ನೆಗಳಿವೆ.....

ರಾಹುಲ್‍ಗಾಂಧಿಯ `ನ್ಯಾಯ್’ ಸ್ವಾಗತಾರ್ಹ. ಆದರೆ, ಕೇಳಲೇಬೇಕಾದ ಪ್ರಶ್ನೆಗಳಿವೆ…..

- Advertisement -
- Advertisement -

| ನ್ಯಾಯಪಥ ಸಂಪಾದಕೀಯ |

ಸೋಮವಾರ ಮಾರ್ಚ್ 25ನೇ ತಾರೀಖಿನಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ನ್ಯಾಯ’ ಎನ್ನುವ ಕನಿಷ್ಠ ಆದಾಯ ಯೋಜನೆಯನ್ನು ಘೋಷಿಸಿದರು. ಜನೆವರಿ ತಿಂಗಳಲ್ಲಿ ಮೊದಲ ಬಾರಿ ಇದರ ಬಗ್ಗೆ ಮಾತನಾಡಿದ್ದರೂ ಅನೇಕ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದ್ದವು. ಎರಡು ತಿಂಗಳ ನಂತರ ಮಾಡಿದ ಈ ಘೋಷಣೆಯ ನಂತರವೂ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.

ಏನಿದು ‘ನ್ಯಾಯ?’ ‘ನ್ಯೂನತಮ್ ಆದಾಯ್ ಯೋಜನಾ’ ಅಂದರೆ ಕನಿಷ್ಠ ಆದಾಯ ಯೋಜನೆ. ರಾಹುಲ್‍ಗಾಂಧಿ ಘೋಷಿಸಿದ ಪ್ರಕಾರ ಭಾರತದ ಆರ್ಥಿಕವಾಗಿ ಕೆಳಗಿರುವ 20% ಕುಟುಂಬಗಳಿಗೆ ಹಣಸಹಾಯ. ಯಾವುದೇ ಕುಟುಂಬವು ತಿಂಗಳಿಗೆ 12 ಸಾವಿರಕ್ಕಿಂತಲೂ ಕಡಿಮೆ ಆದಾಯ ಹೊಂದಿದ್ದಲ್ಲಿ ಆ ಕುಟುಂಬಕ್ಕೆ ಸರಕಾರದಿಂದ 12 ಸಾವಿರಕ್ಕಿಂತ ಎಷ್ಟು ಕಡಿಮೆ ಇದೆಯೋ, ಅಷ್ಟು ಹಣ ನೀಡಲಾಗುವುದು. ಈ 20% ಕುಟುಂಬಗಳ ಸರಾಸರಿ ಆದಾಯ 6,000/- ಆಗಿರುವುದರಿಂದ ಆ 20% ಅಂದರೆ 5 ಕೋಟಿ ಕುಟುಂಬಗಳಿಗೆ ಪ್ರತಿತಿಂಗಳು 6,000/ ಧನಸಹಾಯ. ಅಂದರೆ ಒಂದು ಕುಟುಂಬಕ್ಕೆ ಪ್ರತೀ ವರ್ಷ 72,000/-, ತಗಲುವ ಒಟ್ಟು ವೆಚ್ಚ 3.6 ಲಕ್ಷ ಕೋಟಿ ರೂಪಾಯಿಗಳು, ಅದು ಭಾರತದ ವಾರ್ಷಿಕ ಬಜೆಟ್‍ನ 13%, ಜಿಡಿಪಿಯ 2%.

ಈ ಘೋಷಣೆಯಿಂದ ಆದ ಮೊದಲ ಬದಲಾವಣೆ- ಎಲ್ಲಾ ಪಕ್ಷಗಳು ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಮಾತನಾಡಬೇಕಿರುವ ಅಸಲೀ ವಿಷಯಗಳ ಬಗ್ಗೆ ಮಾತನಾಡಲಾರಂಭಿಸಿವೆ. ಭಯೋತ್ಪಾದನೆ, ರಾಷ್ಟ್ರೀಯ ಸುರಕ್ಷತೆಯಂತಹ ಎಲ್ಲರ ಒಮ್ಮತವಿರುವ ವಿಷಯಗಳಲ್ಲಿ ಸುಖಾಸುಮ್ಮನೇ ಅರಚಾಡಿ, ಸುಳ್ಳು ಹೇಳಿ, ಅಸಲೀ ಸಮಸ್ಯೆಗಳನ್ನು ಮರೆಸಲು ಯತ್ನಿಸುತ್ತಿದ್ದರು. ಈ ಘೋಷಣೆಯಿಂದ ಅದು ಬದಲಾಗಿ, ರಾಹುಲ್ ಗಾಂಧಿ ಘೋಷಿಸಿರುವ ಯೋಜನೆಯ ಬಗ್ಗೆ, ಇಂತಹ ಯೋಜನೆಗಳ ಬಗ್ಗೆ ಈ ಸರಕಾರದ ಪ್ರದರ್ಶನದ ಬಗ್ಗೆ ಸೂಕ್ತ ಪ್ರಶ್ನೆಗಳನ್ನು ಎಲ್ಲರೂ ಎತ್ತಲಾರಂಭಿಸಿದ್ದಾರೆ.

ಈ ಘೋಷಣೆಯಿಂದ ಆದ ಇನ್ನೊಂದು ಬದಲಾವಣೆ- ‘ಭಾರತದ ಬಡಜನರ’ ಮೇಲೆ ಮತ್ತೊಮ್ಮೆ ಗಮನ ಕೇಂದ್ರೀಕೃತವಾಗಿದೆ. ಮಧ್ಯಮ ಮತ್ತು ಉಚ್ಚ ವರ್ಗದ ಜನರಿಗೆ ಕಲ್ಯಾಣ ಯೋಜನೆಗಳ ಬಗ್ಗೆ ಅಸಮಾಧಾನ ಇರುವುದರಿಂದ, ಅವರನ್ನು ಮೆಚ್ಚಿಸಲು ನಮ್ಮ ರಾಜಕೀಯ ಪಕ್ಷಗಳು ಕಲ್ಯಾಣ ಯೋಜನೆಗಳನ್ನು ಘೋಷಿಸಲು ಹಿಂಜರಿಯುವುದು ವಾಸ್ತವ. 2004 ರಲ್ಲಿ ಕಾಂಗ್ರೆಸ್ ಪಕ್ಷವು ‘ಆಮ್‍ಆದ್ಮಿ’ ಯ ವಿಷಯವನ್ನು ತಂದಿದ್ದೂ ಇದೇ ಕಾರಣಕ್ಕೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆಗಳನ್ನು ಕೇಳಲೇಬೇಕಿದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದಕ್ಕಿಂತ ಮುಂಚೆ ಯಾವ ಕಾರಣಕ್ಕೂ ನಂಬಲೇಬಾರದು. ಕಳೆದ ಬಾರಿ ಮೋದಿ ಅವರು ಪ್ರತಿ ಖಾತೆಗೆ 15 ಲಕ್ಷದ ಮಾತುಗಳನ್ನಾಡಿದ್ದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಸೃಷ್ಟಿಯ ಬಗ್ಗೆ ಮಾತನಾಡಿದ್ದರು, ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಮಾತನಾಡಿದ್ದರು. ಆದರೆ ಯಾವುದೇ ಯೋಜನೆಗೆ ನೀಲನಕ್ಷೆಯನ್ನು ನೀಡಿರಲಿಲ್ಲ. ಈಗ ಆ ಭರವಸೆಗಳ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ತನಕ ಬೇತಾಳದಂತೆ ಬೆನ್ನಟ್ಟಬೇಕಿದೆ.

ಈ ಘೋಷಣೆ ಮತದಾರರನ್ನು ತನ್ನತ್ತ ಸೆಳೆಯಲು ಮಾಡಿದ ತಂತ್ರವೇ ಎನ್ನುವ ಪ್ರಶ್ನೆಯನ್ನು ಕೈಬಿಡುವ. ಉತ್ತರ ಎಲ್ಲರಿಗೂ ಗೊತ್ತು, ಆದರೆ ಭರವಸೆ ನೀಡಿದ ಭರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಈ ನೀತಿಗಳನ್ನು ಜಾರಿಗೊಳಿಸಿದಲ್ಲಿ ಲಾಭ ಆಗುವುದು ಬಡವರಿಗೆ. ಈ ಯೋಜನೆಯಿಂದ ಬಡವರು ಸೋಮಾರಿಗಳಾಗುವುದಿಲ್ಲವೇ ಎನ್ನುವ ಮೂರ್ಖ ಪ್ರಶ್ನೆಯನ್ನು ಕೈಬಿಡುವ. ತಮ್ಮ ಜೀವನಮಟ್ಟವನ್ನು ಹೆಚ್ಚಿಸಲು ಎಲ್ಲರೂ ದುಡಿಯುತ್ತಲೇ ಇರುತ್ತಾರೆ ಹಾಗೂ ಒಂದು ವೇಳೆ ಈ ಯೋಜನೆ ಅನ್ವಯವಾದರೆ ಅವರ ಪ್ರಯತ್ನಕ್ಕೆ ಚೈತನ್ಯ ಬರುವುದು ಸರಳ ಸತ್ಯ. ಸದ್ಯಕ್ಕೆ ಈಗಾಗಲೇ ಕೇಂದ್ರ ಸರಕಾರದ ಅನೇಕ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ, ಈ ಯೋಜನೆ ಜಾರಿಯಾದಲ್ಲಿ ಸದ್ಯಕ್ಕೆ ಜಾರಿಯಲ್ಲಿರುವ ಯೋಜನೆಗಳನ್ನು ಕೈಬಿಡಲಾಗುತ್ತದೆಯೇ ಅಥವಾ ಎಲ್ಲ ಕಲ್ಯಾಣ ಯೋಜನೆಗಳೊಂದಿಗೆ ಹೆಚ್ಚುವರಿಯಾಗಿ ಇದನ್ನು ಅನುಷ್ಠಾನಗೊಳಿಸಲಾಗುತ್ತದೆಯೇ ಎನ್ನುವುದನ್ನು ಸ್ಪಷ್ಟಪಡಿಸದೇ ಇರುವುದು ಅಪರಾಧವಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಎಲ್ಲರೂ ಕೇಳುತ್ತಿರುವ ಪ್ರಶ್ನೆ, ಈ ಯೋಜನೆಗೆ ಬೇಕಾಗಿರುವ 3.6 ಲಕ್ಷ ಕೋಟಿ ಬರುವುದು ಎಲ್ಲಿಂದ? ಇದು ವಿತ್ತೀಯ ಹೊರೆಯಾಗುವುದಿಲ್ಲವೇ? ಇದು ಕಷ್ಟಸಾಧ್ಯವಾದರೂ ಅಸಾಧ್ಯವಂತೂ ಅಲ್ಲ. ಹಾಗೂ 7ನೇ ವೇತನ ಆಯೋಗ ಸರಕಾರೀ ನೌಕರರ ವೇತನ ಹೆಚ್ಚಿಸಿ ವರ್ಷಕ್ಕೆ 1 ಲಕ್ಷ ಕೋಟಿಗಿಂತಲೂ ಹೊರೆಯಾದಾಗ ಈ ಪ್ರಶ್ನೆ ಏಕೆ ಏಳುವುದಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಪ್ರತಿ ವರ್ಷ ಮೂರು ಲಕ್ಷ ಕೋಟಿಗಿಂತಲೂ ಹೆಚ್ಚಿನ ಸಾಲವನ್ನು ಕಾರ್ಪೋರೇಟ್‍ಗಳಿಗೆ ಮನ್ನಾ ಮಾಡಿದಾಗ ಈ ಪ್ರಶ್ನೆ ಏಕೆ ಏಳುವುದಿಲ್ಲ? ಈ ಪ್ರಶ್ನೆಗಳು ಸರಿಯಾಗಿದ್ದರೂ ಈ ಪ್ರಶ್ನೆಗಳಿಂದ ದುಡ್ಡೆಲ್ಲಿಂದ ಬರುವುದು ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾರ್ಪೋರೇಟ್‍ಗಳಿಗೆ ನೀಡುವ ಸಾಲ ಮನ್ನಾ, ತೆರಿಗೆ ಮನ್ನಾದಂತಹ ಕೊಡುಗೆಗಳಿಗೆ ಕಡಿವಾಣ ಹಾಕುವ ಧೈರ್ಯವನ್ನು ಕಾಂಗ್ರೆಸ್ ಪಕ್ಷ ಪ್ರದರ್ಶಿಸುವುದೇ? ಹಾಗೂ ಈ ಯೋಜನೆಯ ಎಲ್ಲ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸುವುದೇ ಅಥವಾ ರಾಜ್ಯ ಸರಕಾರಗಳ ಮೇಲೆಯೂ ಹೊರೆ ಬೀಳುವುದೇ ಎನ್ನುವುದರ ಬಗ್ಗೆಯೂ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಹಾಗೂ ವೆಚ್ಚವನ್ನು ಭರಿಸಲು ಹೊಸ ತೆರಿಗೆಗಳನ್ನು ಪರಿಚಯಿಸಲಾಗುವುದೇ?

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆಸ್ತಿಗೆ ತೆರಿಗೆ ವಿಧಿಸಲಾಗುತ್ತದೆ ಹಾಗೂ ವಾರಸುದಾರಿಕೆ ತೆರಿಗೆಯೂ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿದೆ. 100 ಕೋಟಿ ಆಸ್ತಿ ಹೊಂದಿದವರಿಗೆ ಈ ಎರಡೂ ತೆರಿಗೆಗಳನ್ನು ವಿಧಿಸುವುದು ತಪ್ಪಾಗಲಾರದು. ಆ ತೆರಿಗೆಯ ಹಣದಿಂದ ಈ ಯೋಜನೆಯ ವೆಚ್ಚವನ್ನು ಸುಲಭವಾಗಿ ಭರಿಸಬಹುದು. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಈ ಕ್ರಮವನ್ನು ಕೈಗೊಳ್ಳುವ ಧೈರ್ಯ ಮತ್ತು ಇಚ್ಛಾಶಕ್ತಿ ಇದೆಯೇ? ಇದ್ದರೆ ಅದನ್ನು ಬಹಿರಂಗಪಡಿಸಬಲ್ಲರೆ? ಇವ್ಯಾವ ಇರಾದೆಗಳೂ ಇಲ್ಲದೇ ಹಣ ಹೊಂದಿಸುವುದು ಹೇಗೆ ಎಂದು ಹೇಳದೇ ಹೋದರೆ ಇದನ್ನು ಇನ್ನೊಂದು ಚುನಾವಣಾ ‘ಜುಮ್ಲಾ’ ಎಂತಲೇ ಪರಿಗಣಿಸಬೇಕಾಗುತ್ತದೆ.

ನಿಜಕ್ಕೂ ಇಂತಹದೊಂದು ಯೋಜನೆಯು ಜಾರಿಗೆ ಬರುವುದಾದರೆ, ಅದು ಹಲವು ರೀತಿಯ ಸಕಾರಾತ್ಮಕ ಬೆಳವಣಿಗೆಗಳನ್ನು ತರಲಿದೆ. ದೇಶದ ಜನರಲ್ಲಿನ ಅತ್ಯಂತ ತಳದಲ್ಲಿರುವ ಶೇ.25ರಷ್ಟು ಜನರಿಗೆ ಒಂದಷ್ಟಾದರೂ ಘನತೆಯಿಂದ ಬದುಕುವ ಅವಕಾಶ ಕಲ್ಪಿಸುತ್ತದೆ. ಅಷ್ಟು ಬೃಹತ್ ಪ್ರಮಾಣದ ಜನರು ಮಾರುಕಟ್ಟೆಯಲ್ಲಿ ಇನ್ನಷ್ಟು ಸರಕುಗಳನ್ನು ಕೊಳ್ಳುವುದು, ಆರ್ಥಿಕತೆಗೆ ಲಾಭ ತಂದುಕೊಡುವುದೇ ಹೊರತು, ಅದು ಹೊರೆಯಾಗುವುದಿಲ್ಲ.

ವಿಶ್ವದ ಅನೇಕ ದೇಶಗಳಲ್ಲಿ ಬೇಸಿಕ್ ಯುನಿವರ್ಸಲ್ ಸ್ಕೀಮ್, ಸೋಷಿಯಲ್ ಸೆಕ್ಯುರಿಟಿ ಸ್ಕೀಮ್ ಮುಂತಾದ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ ಗಮನಿಸಬೇಕಾದದ್ದೇನೆಂದರೆ, ಎಲ್ಲ ದೇಶಗಳು ಎರಡನೇ ಮಹಾಯುದ್ಧದಲ್ಲಿ ಗೆದ್ದು ಸೋತು, ಬಸವಳಿದು, ಬಡತನ, ನಿರುದ್ಯೋಗದ ಸಮಸ್ಯೆಗಳನ್ನು ತಮ್ಮ ಸಮರ್ಥ ಆರ್ಥಿಕ ನೀತಿಗಳಿಂದ ಎದುರಿಸಿ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಬರುತ್ತವೆ. ಆ ಎಲ್ಲ ದೇಶಗಳು ಶಿಕ್ಷಣ, ಆರೋಗ್ಯಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಿ ತದನಂತರ ಇಂತಹ ಯೋಜನೆಗಳನ್ನು ತಂದಿದ್ದು. ಈ ಎಲ್ಲಾ ಪ್ರಶ್ನೆಗಳ ಮೇಲೆ ಚರ್ಚೆ ನಡೆಯಬೇಕಿದೆ. ಎಲ್ಲಾ ಪಕ್ಷಗಳು ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಉತ್ತರ ನೀಡುವಂತೆ ರಾಜಕೀಯ ಪಕ್ಷಗಳನ್ನು ಬೇತಾಳನಂತೆ ಕಾಡುವುದು ನಮ್ಮ ಮಾಧ್ಯಮಗಳ ಮತ್ತು ನಮ್ಮ ಇಂದಿನ ಕರ್ತವ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....