Homeಮುಖಪುಟಅಸ್ಪೃಶ್ಯತಾ ನಿವಾರಣಾ ಸಂವಾದ ಸಭೆಯಲ್ಲಿ ಪೇಜಾವರ ಶ್ರೀ ಹೇಳಿದ್ದೇನು? - ಡಾ. ಬಿ.ಎಲ್. ವೇಣು

ಅಸ್ಪೃಶ್ಯತಾ ನಿವಾರಣಾ ಸಂವಾದ ಸಭೆಯಲ್ಲಿ ಪೇಜಾವರ ಶ್ರೀ ಹೇಳಿದ್ದೇನು? – ಡಾ. ಬಿ.ಎಲ್. ವೇಣು

ಬಸವ ಮಾದಾರಚನ್ನಯ್ಯ ಶರಣರು ಸದುದ್ವೇಶದಿಂದ ತಮ್ಮ ಮಾದಾರ ಪೀಠದಿಂದ ಏರ್ಪಡಿಸಿದ್ದ ಸಭೆಯು ಅರ್ಥಪೂರ್ಣವೆನ್ನಿಸಿದರೂ ಯಾವುದೇ ಸಮಸ್ಯೆಗೆ ಪರಿಹಾರ ಕಾಣದೆ ನೀರಸ ಮುಕ್ತಾಯ ಕಂಡಿತು.

- Advertisement -
- Advertisement -

ಚಿತ್ರದುರ್ಗದಲ್ಲಿ 2009 ಜನವರಿ 18 ರಂದು ನಡೆದ ‘ಅಸ್ಪೃಶ್ಯತಾ ನಿವಾರಣಾ ಸಂವಾದ’ ಕಾರ್ಯಕ್ರಮಕ್ಕೆಂದೇ ಅಸ್ಪೃಶ್ಯತೆಗೆ ಕಾರಣರಾದವರ ಪ್ರತಿನಿಧಿಯಂತಿಪ್ಪ ಶ್ರೀ ವಿಶ್ವೇಶತೀರ್ಥ ಪಾದಂಗಳವರನ್ನು ಕರೆಸಿ ಸಂವಾದ ಏರ್ಪಡಿಸಿದ್ದು ವಿಶೇಷ. ಆದರೆ ಅಲ್ಲೇನು ವಿಶೇಷ ವಿಷಯಗಳೇ ಪ್ರಸ್ತಾಪವಾಗಲಿಲ್ಲವೆಂದರೆ ಖಂಡಿತ ಕುಚೋದ್ಯವಲ್ಲ. ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಮೂರ್ತಿ ಮುರುಘ ಶರಣರೇನೋ ಅಸ್ಪೃಶ್ಯತೆ ತೊಲಗದ ಹೊರತುದೇಶ ಬಲಿಷ್ಠವಾಗದು, ದೇಶದ ಎಲ್ಲೆಡೆ ಕೆಡವುವ, ಭಾವನೆಗಳನ್ನು ಕೆರಳಿಸುವ ಕಾರ್ಯಗಳೇ ನಡೆಸಿವೆ. ಕಟ್ಟುವ ಕೆಲಸವಾಗುತ್ತಿಲ್ಲ. ಮೈಸೂರಿನಲ್ಲಿ ಮಡಿವಾಳರ ದೇವಸ್ಥಾನವನ್ನು ಕೆಡವಿದ ಬಗ್ಗೆಯೂ ಪ್ರಸ್ತಾಪಿಸುತ್ತಾ ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕರೆದೊಯ್ಯುವ ಅಗತ್ಯವಿದೆ. ಧರ್ಮವೆಂದರೆ ದಾಂಧಲೆ ಅಲ್ಲ. ಬಲಿಷ್ಠರು ದುರ್ಬಲರು ಎಂಬ ಭೇದ ಭಾವ ತೊಲಗಿ ಒಂದಾಗುವ ವಾತಾವರಣ ನಿರ್ಮಾಣವಾಗಬೇಕೆಂದು ಸಹಜವಾಗಿಯೇ ಪೇಜಾವವರಿಗೆ ಚುಚ್ಚುಮದ್ದು ನೀಡಿದರು.

ಆದರೆ ಕೃಶಗೊಂಡ ಅವರ ದೇಹವಾಗಲಿ, ಧರ್ಮದ ಸುಕ್ಕುಗಳನ್ನು ಎತ್ತಿತೋರುವ ಅವರ ಚರ್ಮಕ್ಕಾಗಲಿ ಸನಾತನ ಧರ್ಮದಿಂದಾಗಿ ಪಾಚಿಗಟ್ಟಿದ ಮನಕ್ಕಾಗಲಿ ಶರಣರು ನೀಡಿದ ಚುಚ್ಚುಮದ್ದು ನಾಟಿದಂತೆ ತೋರಲಿಲ್ಲ. ಎಲ್ಲರೂ ನಿರೀಕ್ಷಿಸಿದಂತೆಯೇ ಉಲಿದ ಪೇಜಾವರರು; ದೇವಸ್ಥಾನ ಕಟ್ಟಲು ದಲಿತರು ಬೇಕು ದರ್ಶನಕ್ಕೆ ಬೇಡವೆಂದರೆ ಹೇಗೆ ಎಂದು ದಲಿತರ ಬಗ್ಗೆ ವಾತ್ಸಲ್ಯ ಸುರಿಸುತ್ತಾ, ಹೀಗೆಲ್ಲ ನಡೆದರೆ ನಾವು ಅವರನ್ನು ಜೊತೆಗಿರಿ ಎಂದಾದರೂ ಹೇಳಲಿಕ್ಕುಂಟೆ? ಎಂದೆಲ್ಲಾ ಮಮ್ಮಲ ಮರುಗಿದರು. “ಮನಃ ಪರಿವರ್ತನೆಯಾಗಬೇಕಾಗಿರೋದು ದಲಿತರದ್ದಲ್ಲ. ಶೋಷಣೆ ಮಾಡಿದ ಉಳಿದ ಸಮದಾಯದವರೂ (ಅರ್ಥಾತ್ ಬ್ರಾಹ್ಮಣೇತರರು) ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕೆಂದು” ಅಪ್ಪಣೆಗೈದ ಶ್ರೀಗಳು ಕರ್ಮಠ ಬ್ರಾಹ್ಮಣರ ತಾರತಮ್ಯ ವರ್ತನೆ ಕುರಿತು ತುಟಿ ಬಿಚ್ಚಲಿಲ್ಲ! ನಾವು ಕನಕನ ಕಿಂಡಿಯನ್ನು ನವಗ್ರಹ ಕಿಂಡಿ ಅಂದಿಲ್ಲ. ಕೆಡವಿದ್ದು ಕನಕ ಗೋಪುರವಲ್ಲವೆಂದು ಬಡಬಡಿಸುತ್ತಾ ದಲಿತರೊಬ್ಬರು ಈ ದೇಶದ ಪ್ರಧಾನಿಯಾಗಬೇಕೆಂದು ತಿಪ್ಪೆ ಸಾರಿಸಿದರೇ ವಿನಹ ಕರ್ನಾಟಕದಲ್ಲಿ ದಲಿತರಿನ್ನೂ ಮುಖ್ಯಮಂತ್ರಿ ಪಟ್ಟಕ್ಕೇ ಏರಿಲ್ಲ. ಆದಕಾರಣ ಇಲ್ಲಿಯ ದಲಿತ ರಾಜಕಾರಣಿಯನ್ನು ಬೆಂಬಲಿಸುತ್ತೇನೆ ಎಂಬ ದಿಟ್ಟ ನಿಲುವು ತೋರದೆ ಮೂಗಿಗೆ ತುಪ್ಪ ಸವರಿದರು. ಬೌದ್ಧ ಧರ್ಮವು ಹಿಂದೂ ಧರ್ಮದ ಭಾಗ. ಅದು ಈ ದೇಶದಲ್ಲೇ ಹುಟ್ಟಿದ ಕಾರಣ ಈ ರೀತಿ ಹೇಳಿಕೆ ನೀಡಿದೆ. ನನಗೆ ಬೌದ್ಧ ಧರ್ಮದ ಬಗ್ಗೆ ಗೌರವವಿದೆ ಇತ್ಯಾದಿ ಇತ್ಯಾದಿ ಹೇಳಿ ‘ಕನಫೆಸ್’ ಮಾಡಿಕೊಂಡರು.

ಆಗ ಸಭೆಯಲ್ಲಿದ್ದ ಯುವ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ‘ಇಷ್ಟೆಲ್ಲಾ ದಲಿತರಲ್ಲಿ ಆಪ್ತತೆ ತೋರುವ ನೀವು ಅವರು ಕರೆದರೇಕೆ ಭೋಜನಕ್ಕೆ ಹೋಗಲಿಲ್ಲ? ಅಂತ ಪ್ರಶ್ನಿಸಿದರು. ಅವರನ್ನು ನಾನು ಚರ್ಚೆಗೆ ಕರೆದೆ. ಆ ಜನ ಬರಲಿಲ್ಲ ವಿಳಾಸವನ್ನೂ ಕೊಟ್ಟಿರಲಿಲ್ಲ. ಅಷ್ಟೇ ಅಲ್ಲ ನಾವು ಬ್ರಾಹ್ಮಣರೊಡನೆಯೂ ಕೂತು ಉಟ ಮಾಡುವುದಿಲ್ಲ. ಮದ್ಯ ಮಾಂಸ ಸೇವಿಸುವ ಜನರೊಂದಿಗೆ ಹೇಗೆ ಉಟ ಮಾಡಲು ಸಾಧ್ಯ? ನಮಗೆ ಊಟದಲ್ಲಿ ಕಟ್ಟುಪಾಡುಗಳಿವೆ. ಹಾಗಾಗಿ ಯಾರೊಡನೆಯೂ ಪಂಕ್ತಿ ಭೋಜನ ಮಾಡೋದಿಲ್ಲವೆಂಬ ಭಂಡ ಸಮರ್ಥನೆಗಿಳಿದರು.

ಮಾಡನಾಯ್ಕನಹಳ್ಳಿ ರಂಗಪ್ಪ; ಬೌದ್ಧ ಧರ್ಮದವರ ಮೇಲೆ ಶಂಕರಾಚಾರ್ಯ ಹಲ್ಲೆ ನಡೆಸಿದರು. ಸ್ತೂಪಗಳನ್ನು ಕೆಡವಿ ಕಗ್ಗೊಲೆ ಮಾಡಿಸಿದರು ಅದಕ್ಕೇನು ಹೇಳುತ್ತೀರಿ? ಎಂದು ಉದ್ವೇಗಗೊಂಡರು. ಆಗ ಪೇಜಾವರ ಶ್ರೀಗಳು; ನೋಡಿ ಈ ಕುರಿತು ನಮಗೆ ಸ್ಪಷ್ಟ, ಮಾಹಿತಿಯಲ್ಲ. ನಮಗೂ ಶಂಕರಾಚಾರ್ಯರಿಗೂ ಸಂಬಂಧವಿಲ್ಲ. ನಾವು ಮಧ್ವ ಅನುಯಾಯಿಗಳು. ಹಾಗೆಲ್ಲಾ ನಡೆದಿದ್ದರೆ ಅದನ್ನು ಇತಿಹಾಸ ತಜ್ಞರೊಡನೆ ಚರ್ಚಿಸೋಣವಂತೆ ಎಂದು ತಡಬಡಾಯಿಸಿದರು. ನಾಶವಾಗಬೇಕಾಗಿರೋದು ಅಸ್ಪೃಶ್ಯತೆಯಲ್ಲ ಸ್ವಾಮಿ ಜಾತಿಯತೆ ಎಂದು ಶಿವಣ್ಣ ದನಿ ಏರಿಸಿದಾಗ, “ಅದು ನನ್ನೊಬ್ಬನಿಂದ ಅಸಾಧ್ಯ. ಎಲ್ಲಾ ಮಠಾಧೀಶರೂ ಒಟ್ಟಾಗಬೇಕು ಸರ್ವರೂ ದಲಿತಕೇರಿಗೆ ಹೋಗಿ ಊಟ ಮಾಡಬೇಕು” ಎಂಬ ಫರ್ಮಾನು ಹೊರಡಿಸಿದರು ಪೇಜಾವರ, ಇಷ್ಟೆಲ್ಲಾ ಔದಾರ್ಯ ಪ್ರದರ್ಶಿಸುವ ಶ್ರೀಗಳು ಬ್ರಾಹ್ಮಣ ಯತಿಗಳಿಗಿರುವಂತೆಯೇ ಇತರರಿಗೂ ಊಟದಲ್ಲಿ ಕಟ್ಟುಪಾಡುಗಳೇನಾದರೂ ಉಂಟೆ ಎಂದು ಪಕ್ಕದಲ್ಲೇ ಇದ್ದ ಬ್ರಾಹ್ಮಣೇತರ ಸ್ವಾಮಿಗಳನ್ನು ವಿಚಾರಿಸುವ ಗೊಡವೆಗೇ ಹೋಗದಿದ್ದದು ‘ಜಾತಿಯ ಅಹಂ’ ಅವರಿಗೆಷ್ಟಿದೆ ಎಂಬುದರ ದ್ಯೋತಕವೆನಿಸಿತು. ಯಾರು ಏನೇ ಪ್ರಶ್ನೆಗಳು ಕೇಳಿದರೂ ಒಂದಿನಿತೂ ವಿಚಲಿತರಾಗದ ಅವರಲ್ಲಿ ಎಲ್ಲದಕ್ಕೂ ಸಿದ್ಧ ಉತ್ತರ, ಹಾರಿಕೆ ಉತ್ತರಗಳಿದ್ದವು.

ಸಭೆಯಲ್ಲಿದ್ದ ನನ್ನನ್ನು (ಬಿ.ಎಲ್. ವೇಣು) ಮಾತನಾಡಿರೆಂದು ಶ್ರೀ ಶಿವಮೂರ್ತಿ ಶರಣರೇ ಸೂಚಿಸಿದರು. ಆಗ ನಾನು ಹೇಳಿದ್ದಿಷ್ಟು: “ಶ್ರೀಗಳು ಸಿದ್ದ ಉತ್ತರಗಳೊಡನೆ ಬಂದಿದ್ದಾರೆ. ಅವರನ್ನು ಊಟಕ್ಕೆ ಕರೆದವರೇನು ಬಾಡೂಟಕ್ಕೆ ಕರೆದಿರಲಿಲ್ಲ. ಅಲ್ಲೂ ಸಸ್ಯಾಹಾರದ ಭೋಜನ ಏರ್ಪಾಡಾಗಿತ್ತು. ವಿಚಾರಿಸಿದ್ದರೆ ಆಹ್ವಾನಿಸಿದವರ ವಿಳಾಸ ತಿಳಿಯುವುದೇನು ಕಷ್ಟವಾಗುತ್ತಿರಲಿಲ್ಲ. ಆದರೆ ಪೇಜಾವರರ ಮಾತಿನ ವರಸೆಯೇ ಬೇರೆಯಾಗಿದೆ. ನಮ್ಮ ಊಟದಲ್ಲಿ ಕಟ್ಟುಪಾಡುಗಳಿವೆ ಅಂತಾರೆ. ಶಂಕರಾಚಾರಿ ಬೌದ್ಧ ಧರ್ಮದವರ ಮೇಲೆ ಹಲ್ಲೆ ಮಾಡಿದನೆಂದರೆ ಅದನ್ನು ಇತಿಹಾಸಕಾರರೊಡನೆ ಚರ್ಚಿಸೋಣ ಅಂತಾರೆ! ಜಾತಿ ನಾಶ ಮಾಡಲು ನನ್ನೊಬ್ಬನಿಂದ ಸಾಧ್ಯವಾಗುವುದಿಲ್ಲ ಅಂತಾರೆ. ಒಟ್ಟಿನಲ್ಲಿ ಇವರ ಕೈಲಿ ಏನು ಮಾಡಲೂ ಸಾಧ್ಯವಿಲ್ಲ ಬಿಡಿ” ಎಂದು ಲೇವಡಿ ಮಾಡಿದೆ.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರೆಲ್ಲಾ ದಲಿತರನ್ನು ಮಾನವೀಯವಾಗಿ ನೆಡೆಸಿಕೊಂಡರು ಸಮಾನತೆಗಾಗಿ ಕ್ರಾಂತಿ ಮಾಡಿದರು. ಆದರೆ ಅರ‍್ಯಾರು ಕಾವಿ ತೊಟ್ಟವರಲ್ಲ, ಸನ್ಯಾಸಿಗಳೂ ಅಲ್ಲ. ಕಾವಿ ತೊಟ್ಟವರಿಂದ ಈ ದೇಶದಲ್ಲಿ ಕ್ರಾಂತಿಯಾಗುತ್ತದೆಂಬುದು ಬರೀ ಭ್ರಮೆಯಷ್ಟೇ. ಜಾತ್ಯತೀತ ಮಠಗಳೆಂದು ಹೇಳಿಕೊಳ್ಳುವ ಎಲ್ಲಾ ಮಠಗಳು ಜಾತಿ ಮಠಗಳೇ, ಇಲ್ಲಿ ಯಾರೂ ಜಗದ್ಗುರುಗಳಲ್ಲ ಎಲ್ಲಾ ಜಾತಿ ಗುರುಗಳು.

ಜಾತಿಗೊಬ್ಬ ಸ್ವಾಮಿಗಳನ್ನು ಮಾಡುತ್ತಾ ಹೋದರೆ ಜಾತಿನಾಶ ಅದ್ಹೇಗೆ ಸಾಧ್ಯ? ಇದ್ಯಾವ ಸೀಮೆ ಬಸವತತ್ವ ಎಂದು ಶರಣರನ್ನೂ ಕೆಣಕಿದೆ. ಜಾತಿಗೊಬ್ಬ ಮಠಾಧಿಪತಿಗಳೆಲ್ಲಾ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಸರಿಸಮನಾಗಿ ಕೂತಿರುವುದನ್ನು ಇಂದು ಕಾಣುವಂತಾಗಿದೆ. ಅಷ್ಟರಮಟ್ಟಿಗೆ ಶರಣರು ಯಶಸ್ವಿ ಅಂತ ವಿಶ್ಲೇಷಿಸಿದೆ. “ಅಲ್ರಿ, ನಾವೇಕೆ ಪೇಜಾವರರ ಜೊತೆ ಕೂತು ಊಟ ಮಾಡಬೇಕು? ಅವರೇಕೆ ದಲಿತಕೇರಿಗೆ ದಯಮಾಡಿಸಬೇಕು? ಅವರ ಮಠಗಳು ದೇವಸ್ಥಾನಗಳಿಗೆ ನಾವೇಕೆ ಹೋಗಬೇಕು. ಸುಖಾಸುಮ್ಮನೆ ನಾವು ಅವರನ್ನು (ಬ್ರಹ್ಮಣರನ್ನು) ದೊಡ್ಡವರನ್ನಾಗಿ ಮಾಡುತ್ತಿದ್ದೇವೆ. ನಮಗೆ ನಮ್ಮದೇ ಆದ ಆಚಾರ ವಿಚಾರ ಗುಡಿಗಳಿವೆ. ಬಹು ಮುಖ್ಯವಾಗಿ ನಮ್ಮವರು ಓದಿ ವಿದ್ಯಾವಂತರಾಗಬೇಕು. ದಲಿತನೊಬ್ಬ ಜಿಲ್ಲಾಧಿಕಾರಿಯಾಗಿ ಕೂತರೆ ಬ್ರಾಹ್ಮಣ ಗುಮಾಸ್ತ ಸಲಾಂ ಹೊಡೆದು ತಲೆಬಾಗಿ ನಿಲ್ಲುತ್ತಾನೆ. ಸಮಾನತೆಯನ್ನು ವಿದ್ಯೆ ಅಧಿಕಾರದಿಂದ ಪಡೆಯಬೇಕೆ ಹೊರತು ಮೇಲ್ಜಾತಿಯವರಿಂದ ಅಂಗಲಾಚುವ ಅಗತ್ಯವಿಲ್ಲ” ಎಂದು ಆವೇಶಕ್ಕೆ ಒಳಗಾಗದೆ ತಣ್ಣಗೆ ಹೇಳಿ ಮುಗಿಸಿದೆ.

ಅದುವರೆಗೂ ಎಲ್ಲರ ಪ್ರಶ್ನೆಗಳಿಗೆ ತೋಚಿದ ಉತ್ತರ ನೀಡಿದ ಪೇಜಾವರರು ಉತ್ತರಿಸದೆ ಕೈಲಿದ್ದ ಮೈಕ್ ಅನ್ನು ಶರಣರ ಕೈಗೆ ರವಾನಿಸಿದರು. ಶರಣರು ಅದನ್ನು ನಂಜಾವಧೊತರ ಕೈಗಿಟ್ಟರು. ಅವರು “ವೇಣು ಹೇಳಿದ್ದರಲ್ಲಿ ಅರ್ಥವಿದೆ. ವಿದ್ಯೆಯಿಂದ ಅಧಿಕಾರ, ಅಧಿಕಾರದಿಂದ ಸಮಾನತೆ ಸಿಗುತ್ತದೆ. ನಮ್ಮವರು ವಿದ್ಯಾವಂತರಾಗಬೇಕೆಂದು” ಚುಟುಕು ಉತ್ತರ ನೀಡಿದರು. ಇದರಿಂದ ಸಮಾಧಾನಗೊಳ್ಳದ ನೆರೆದ ಜನ (ದಲಿತರೇ ಹೆಚ್ಚಾಗಿದ್ದರು) ಚರ್ಚಿಸಲು ನಿಂತಾಗ ಸಭೆಯನ್ನು ನಿಯಂತ್ರಿಸಲು ಆಯೋಜಕರು ಪರದಾಡುವಂತಾಯಿತು.

ಅಲ್ಲಿನ ಸಭೆಯಲ್ಲಿ ಮೇಲ್ವರ್ಗದ ಸಾಹಿತಿಗಳಾಗಲಿ, ಬುದ್ಧಿಜೀವಿಗಳಾಗಲಿ ಕಾಣದಿದ್ದದು ಅನಿರೀಕ್ಷಿತವೆನ್ನಿಸಲಿಲ್ಲ. ಅಚ್ಚರಿಯನ್ನೂ ಉಂಟು ಮಾಡಲಿಲ್ಲ. ನೀರಾವರಿ ಹೋರಾಟಗಾರ ದಲಿತ ಮುಖಂಡ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್, ಪತ್ರಕರ್ತ ಅರುಣಕುಮಾರ್ ಮುಂತಾದವರ ಹರಿತ ಪ್ರಶ್ನೆಗಳಿಗೆ ಉತ್ತರ ಸಿಕ್ಕದೆ ಹೋದಾಗ ಸಭೆ ಗದ್ದಲದ ಗೂಡಾಯಿತು. ಗದ್ದಲ ನಡೆದಿರುವಾಗಲೇ ಸಭೆ ಬರಖಾಸ್ತ್ ಆಯಿತು.

ಬಸವ ಮಾದಾರಚನ್ನಯ್ಯ ಶರಣರು ಸದುದ್ವೇಶದಿಂದ ತಮ್ಮ ಮಾದಾರ ಪೀಠದಿಂದ ಏರ್ಪಡಿಸಿದ್ದ ಸಭೆಯು ಅರ್ಥಪೂರ್ಣವೆನ್ನಿಸಿದರೂ ಯಾವುದೇ ಸಮಸ್ಯೆಗೆ ಪರಿಹಾರ ಕಾಣದೆ ನೀರಸ ಮುಕ್ತಾಯ ಕಂಡಿತು.

(2009ರಲ್ಲಿ “ಮಾದಾರ ಪೀಠ ಏರ್ಪಡಿಸಿದ್ದ ಸಭೆಯ ವರದಿ – ಪತ್ರಿಕೆಯೊಂದರಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...