Homeಕರ್ನಾಟಕಡೇರಿ ಫಾರಂ, ಗೋಶಾಲೆಗಳಿಗೆ ಅನುಮತಿ ಕಡ್ಡಾಯ: ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ರೈತರ ಬದುಕಿಗೆ ಕೊಳ್ಳಿ!

ಡೇರಿ ಫಾರಂ, ಗೋಶಾಲೆಗಳಿಗೆ ಅನುಮತಿ ಕಡ್ಡಾಯ: ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ರೈತರ ಬದುಕಿಗೆ ಕೊಳ್ಳಿ!

ಬೃಹತ್ ಮಟ್ಟದಲ್ಲಿ ಪರಿಸರ ನಾಶ ಮಾಡುವ ಕಾರ್ಪೊರೇಟ್ ಕಂಪನಿಗಳಿಗೆ ಅನುಮತಿ ನೀಡುವ ಕೆಎಸ್‌ಪಿಸಿಬಿ ರೈತರ ಶೋಷಣೆಗೆ ಮುಂದಾಗಿರುವುದು ಖಂಡನೀಯ.

- Advertisement -
- Advertisement -

ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಹಸು ಮತ್ತು ದನಗಳನ್ನು ಸಾಕುವವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಅದು ಮಾರ್ಗಸೂಚಿ ಸಿದ್ಧಪಡಿಸಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. ಅದರಂತೆ ಡೇರಿ ಫಾರಂಗಳು ಮತ್ತು ಗೋಶಾಲೆಗಳು ಸೆಗಣಿ, ಗಂಜಲ ಸಹಿತ ಘನತ್ಯಾಜ್ಯ ನಿರ್ವಹಣೆಗೆ ಜಲ ಕಾಯ್ದೆ 1974 ಮತ್ತು ವಾಯುಸಂರಕ್ಷಣೆ ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಅನ್ವಯ ಡೇರಿ ಮತ್ತು ಗೋಶಾಲೆಗಳು ನಗರ, ಪಟ್ಟಣ, ಹಳ್ಳಿಗಳ ಸರಹದ್ದಿನಿಂದ ೨೦೦ ಮೀಟರ್ ದೂರದಲ್ಲಿರಬೇಕು, ಜಲಮೂಲಗಳಿಂದ ದೂರದಲ್ಲಿರಬೇಕು, ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳಿಂದ ದೂರದಲ್ಲಿರಬೇಕೆಂಬ ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ.

ಈ ಹೊಸ ಮಾರ್ಗಸೂಚಿಗಳು ಈಗಾಗಲೇ ಕೃಷಿಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ರೈತರ ಮೇಲೆ ಮತ್ತಷ್ಟು ಹೊರೆಯಾಗಲಿವೆ. ಈ ಕುರಿತು ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ ಸಾವಯವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಮಹೇಂದ್ರ ಕೆ.ಆರ್ ಅವರ ಅನಿಸಿಕೆ ಇಲ್ಲಿದೆ.

ರಾಜ್ಯದಲ್ಲಿ ಡೈರಿ ಉದ್ಯಮವು ಸ್ವಾವಲಂಬನೆಯ ಕಲ್ಪವೃಕ್ಷವಾಗಿ ಬೆಳೆದಿದೆ.. ಬಹುತೇಕ ಡೈರಿಗಳು ಮಹಿಳಾ ಸ್ವ ಸಹಾಯ ಸಹಕಾರ ಸಂಘಗಳಿಂದ ನಡೆಯುತ್ತಿವೆ. ಜಾನುವಾರು ಸಾಕಣೆ ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಡಗೊಳಿಸಿ ಎಲ್ಲರನ್ನು ಒಳಗೊಳ್ಳುವಂತೆ ಮಾಡಿದೆ.. ಸಾಮಾಜಿಕ ಸಹಬಾಳ್ವೆ ರೂಪಿಸುವಲ್ಲಿ ಡೈರಿ ಉದ್ಯಮದ ಮಾತ್ರ ಮಹತ್ವದ್ದು. ಜೊತೆಗೆ ಬರ, ನೆರೆ ಜೊತೆಗೆ ಸಮರ್ಪಕ ಬೆಲೆ ಸಿಗದೇ ಬಹಿಪಾಲು ನಷ್ಟವನ್ನೇ ಅನುಭವಿಸುವ ರೈತರಿಗೆ ದೈನಂದಿನ ಖರ್ಚು ಮತ್ತು ಮಕ್ಕಳ ವಿದ್ಯಾಭಾಸಕ್ಕೆ ಬಲ ತುಂಬುತ್ತಿರುವುದು ಕೂಡ ಇದೆ ಡೈರಿ ಉದ್ಯಮ.. ಭೂರಹಿತರು ಕೂಲಿ ಕಾರ್ಮಿಕರು ಕೂಡ ಜಾನುವಾರು ಸಾಕಣೆಯಿಂದ ತಮ್ಮ ಬದುಕು ಹಸನಾಗಿಸಿಕೊಂಡಿದ್ದಾರೆ..

ಆದರೆ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಅವೈಜ್ಞಾನಿಕ ಕಾನೂನು ಹೇರಿ ಸರ್ಕಾರ ಈ ಸ್ವಾವಲಂಬಿ ಜನರ ಬದುಕಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಹೊರಟಿದೆ. ವ್ಯವಸಾಯದ ಜೊತೆಗೆ ಹಸು ಎಮ್ಮೆ ಕೋಳಿ ಕುರಿ ಮೇಕೆ ಇನ್ನಿತರ ಜಾನುವಾರು ಸಾಕಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದ ರೈತರ ಜೀವನಕ್ಕೆ ಅಂಕುಶ ಹಾಕಿ ಜನ ಸಾಮಾನ್ಯರಿಗೆ ಕಿರುಕುಳ ನೀಡಲು ಹೊರಟಿದೆ..

ಗೋಶಾಲೆ ಮತ್ತು ಡೈರಿಪಾರಂ ನಿಯಂತ್ರಿಸಲು ಸಾಧುವಲ್ಲದ ಅವೈಜ್ಞಾನಿಕ ಕಾನೂನು ರೂಪಿಸಿದೆ. ಆ ಕಾನೂನಿನ ಅನ್ವಯ ದನ ಜಾನುವಾರುಗಳನ್ನು ಸಾಕಾಣಿಕೆ ಮಾಡಬೇಕೆನ್ನುವ ಮಂದಿ ಸರ್ಕಾರದ ಕಠಿಣ ನಿಬಂಧನೆಗಳನ್ನ ಪೂರೈಸಲೇಬೇಕು. ಇದೆಲ್ಲ ಪೂರೈಸಲು ಹೊರಟರೆ ಜನರು ಡೈರಿ ಕಸುಬಿನಿಂದ ವಿಮುಖರಾಗುವ ಸಾಧ್ಯತೆಯೇ ಹೆಚ್ಚು.

ಇನ್ನು ಜಾನುವಾರುಗಳಿಂದ ಉಂಟಾಗುವ ಎಲ್ಲ ರೀತಿಯ ಘನ ದ್ರವ ತ್ಯಾಜ್ಯಗಳು ಸಾವಯವ ಸಂಯುಕ್ತಗಳಿಂದ ಪರಿಸರಕ್ಕೆ ಮಾರಕವೆನಿಸುವ ಹಾನಿಯಾಗುವುದಿಲ್ಲ. ಇವೆಲ್ಲ ವಿಘಟನೆ ಆಗುವ ಸಂಯುಕ್ತಗಳು. ಇನ್ನು ರಾಸುಗಳ ಗೊಬ್ಬರ ಮತ್ತು ಗಂಜಲವನ್ನ ಸಾವಯವ ವ್ಯವಸಾಯಕ್ಕೆ ಗೊಬ್ಬರದ ಮೂಲವನ್ನಾಗಿ ಬಳಸಬಹುದು ಮತ್ತು ಇವು ಪರಿಸರಕ್ಕೆ ಪೂರಕವಾದದ್ದು. ಇನ್ನು ಇಂತಹ ಗೊಬ್ಬರಗಳಿಂದ ಬೆಳೆದ ಬೆಳೆ, ಇನ್ನಿತರ ಮೂಲದಲ್ಲಿ ಬೆಳೆದ ಬೆಳೆಗಿಂತ ಹೆಚ್ಚಿನ ಗುಣಮಟ್ಟ ಹೊಂದಿರುತ್ತವೆ. ಇಷ್ಟೆಲ್ಲ ಅನುಕೂಲತೆ ಇದ್ದರು ಇದನ್ನ ನಿಯಂತ್ರಣ ಮಾಡಲು ಸರ್ಕಾರವೇ ಮುಂದಾಗಿರೋದು ಸಂಪೂರ್ಣ ಜನವಿರೋಧಿ ನಡವಳಿಕೆ.

ಜಾನುವಾರುಗಳಿಂದ ಉತ್ಪಾದನೆ ಆಗುವ ಹಾಲು, ಹಾಲಿನ ಪದಾರ್ಥಗಳು ಗಂಭೀರವೆನಿಸುವ ಯಾವುದೇ ಹಾನಿಕಾರಕ ರಾಸಾಯನಿಕ ಹೊಂದಿಲ್ಲ. ನಗರ ಪ್ರದೇಶಗಳಲ್ಲಿ ರಾಸಾಯನಿಕ ಔಷಧ ಆಟೋಮೊಬೈಲ್ ಮತ್ತು ಇ ತ್ಯಾಜ್ಯಗಳಿಂದ ಉಂಟಾಗುವ ವಿಷಪೂರಿತ ರಾಸಾಯನಿಕಗಳಾದ ಮರ್ಕ್ಯೂರಿ, ಅರ್ಸೆನಿಕ್, ಸಲ್ಪರ್ ನಂತಹ ವಿಷಪೂರಿತ ವಸ್ತುಗಳ ಬಿಡುಗಡೆ ಮತ್ತು ಹೊರಸೂಸುವಿಕೆಯನ್ನ ಪರಿಮಿತಿ ಪರಿಶೀಲಿಸದ, ಪರಿಶೀಲನೆ ನಾಟಕವಾಡಿ, ಪರಿಸರಕ್ಕೆ ಎಂತಹುದೇ ಅಪಾಯಕಾರಿ ರಾಸಾಯನಿಕ ಹೊರಸೂಸಿ ಜನರ ಜೀವಕ್ಕೆ ಎರವಾದರು ಕಾರ್ಪೊರೇಟ್ ಕುಳಗಳಿಂದ ಅಮೇದ್ಯ ತಿಂದು ಆ ಕಂಪನಿಗಳಿಗೆ ನಿರಪೇಕ್ಷ ಪ್ರಮಾಣ ಪತ್ರ ನೀಡಿ ಜೀವ ವೈವಿದ್ಯತೆಗೆ ಧಕ್ಕೆ ಉಂಟಾಗಿ ಮಾನವನು ಸಹ ಅಸ್ತಮಾ, ಶ್ವಾಸಕೋಶಕ್ಕೆ ಸಂಬಂದಿಸಿದ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗುವ ಅವಕಾಶ ಇದ್ದರು ಕಣ್ಮುಚ್ಚಿ ಕುಳಿತಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ರೈತರ ವಿಚಾರದಲ್ಲಿ ಮಾತ್ರ ರಾಕ್ಷಸೀಯ ಪ್ರವೃತ್ತಿ ಮೆರೆದಿದೆ..

ಇದಕ್ಕೆ ಅನುಗುಣವಾಗಿ ಕಳೆದ ಬಾರಿ ಪಾಲ್ಗೊಳ್ಳಲು ಉದ್ದೇಶಿಸಿದ್ದ RCEP ಒಪ್ಪಂದದ ಕುರಿತಾಗಿ ಏಷ್ಯದ ಇನ್ನಿತರ ದೇಶಗಳಾದ ಜಪಾನ್, ಮಲೇಷ್ಯಾ, ಥಾಯ್ಲೆಂಡ್ ಸಿಂಗಾಪುರ ಚೀನಾ, ಮಾರಿಷಸ್, ಕೊರಿಯಾ ಇನ್ನಿತರ ರಾಷ್ಟ್ರಗಳು ಭಾರತದ ಭಾಗವಹಿಸುವಿಕೆ ಬಗ್ಗೆ ಇನ್ನು ಮುಕ್ತ ಮನಸ್ಸು ಹೊಂದಿರುವದಾಗಿ ಹೇಳಿವೆ. ಇದಕ್ಕೆ ಪೂರಕವೆಂಬಂತೆ ಸಿಂಗಾಪುರ ಸಚಿವರು ಭಾರತದ ಭಾಗವಹಿಸುವಿಕೆ ಸ್ವಾಗತ ಮಾಡುವುದಾಗಿ ಹೇಳಿದ್ದಾರೆ.
ಈ ಒಪ್ಪಂದಕ್ಕೆ ಸಹಿ ಹಾಕುವ ಭಾಗವಾಗಿ ಸರ್ಕಾರ ರೈತರಿಗೆ ಅಂಕುಶ ಹಾಕಲು ಹೊರಟಿದೆಯೆ ಅನ್ನುವ ಅನುಮಾನ ಬಾರದೆ ಇರದು.

ಕೈಯಲ್ಲಿ ಶರಣು ಕಂಕುಳಲ್ಲಿ ದೊಣ್ಣೆ ಎನ್ನುವಂತೆ ಗೋಹತ್ಯೆ ನಿಷೇಧ ,ಗೋರಕ್ಷಣೆ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುವ, ಅದರಿಂದಲೇ ಅಧಿಕಾರದ ಸುಖ ಅನುಭವಿಸುತ್ತಿರುವ ಮಾರ್ಜಾಲ ವೇಷದ ಬಂಡವಾಳಶಾಹಿ ಪ್ಯಾಸಿಸ್ಟ್ ಸರ್ಕಾರ ಜನಸಾಮಾನ್ಯರ ಮೇಲೆ ಗಧಾ ಪ್ರಹಾರ ನಡೆಸಲು ಹೊರಟಿದೆ..

ಪ್ರಜಾಪ್ರಭುತ್ವ ಬೊಕ್ಕ ಬೋರಲು ಬಿದ್ದು ಫ್ಯಾಸಿಸಂ ಮೆರೆಯುತ್ತಿರುವ ಕಾಲದಲ್ಲಿ, ಜನವಿರೋಧಿ ರಾಕ್ಷಸೀಯ ಪ್ರವೃತ್ತಿ ಹೊಂದಿರುವ ಪ್ಯಾಸಿಸ್ಟ್ ಆಡಳಿತ ಕೋನೆಗಾಣಿಸಲು ಬೃಹತ್ ಜನಾಂದೋಲನ ರೂಪುಗೊಂಡು ಇಂತಹ ನೀತಿಗಳನ್ನು ವಿರೋಧಿಸಬೇಕಾದದ್ದು ಸದ್ಯದ ತುರ್ತು ಅಗತ್ಯಗಳಲ್ಲೊಂದು.

  • ಡಾ. ಮಹೇಂದ್ರ ಕೆ.ಆರ್

(ತುಮಕೂರು ಜಿಲ್ಲೆಯ ಸಿರ ತಾಲೂಕಿನ ಗ್ರಾಮೀಣ ಪ್ರದೇಶದವರು, ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ ಸಾವಯವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.. ವನ್ಯಜೀವಿ ಪರಿಸರ, ಕಾಡುಮೇಡಿನ ಅಲೆದಾಟ, ಹೊಸತನದ ಹುಡುಕಾಟ, ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಉಪಕಸುಬುಗಳು,ಕತೆ ಕಾದಂಬರಿ, ಮೂಲವಿಜ್ಞಾನದ ಕುರಿತಂತೆ ಇವರಿಗೆ ಹೆಚ್ಚಿನ ಆಸಕ್ತಿ.)


ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಟ್ನಲ್ಲಿ ಸರ್ಕಾರ ರೈತರ ತಿಪ್ಪೆಗೂ ಕಂದಾಯ ಕಟ್ಟಿಸಿಕೊಳ್ಳುವ ಹಾಗಿದೆ. ಒಂದು, ಊರು ನಗರ, ಹೆದ್ದಾರಿ, ರೈಲ್ವೆ ಇದಕ್ಕೆಲ್ಲ ತಮ್ಮ ಜಮೀನು ಕೊಟ್ಟಿದ್ದೇ ರೈತರು. ಅವರು ಹಣವನ್ನು ಪಡೆದಿರಬಹದು ಕೆಲವು ಸಲ ದಾನವಾಗಿಯೂ ಕೊಟ್ಟಿರಬಹುದು.ಸರ್ಕಾರದ ಕೆಲಸಗಳಿಗೆ ಜಮೀನು ಕೊಡಲು ಇಷ್ಟವಿಲ್ಲದವರೂ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗದೆ ಬಿಟ್ಟು ಕೊಟ್ಟಿರಬಹುದು. ಹೀಗೆ ದೇಶದ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾಲು ರೈತರಿಂದಲೇ ಆಗಿರುವಾಗ ಕಾನೂನುಗಳು ರೈತರಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಒಬ್ಬ ಡಾಕ್ಟರ್, ಇಂಜಿನಿಯರ್, ಶಿಕ್ಷಕರು ಹೀಗೆ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇವರಿಗೆ ಪ್ರಿಯವಾದ ಕಂಪನಿಗಳು ಅವರು ತಮ್ಮ ತಮ್ಮ ದೇ ಒಂದೇ ಕೆಲಸ ಕೆಲಸ ಮಾಡಿಕೊಂಡು ಸಮೃದ್ದವಾಗಿರುತ್ತಾರೆ. ಆದರೆ ರೈತನಿಗೆ ಅವನು ಒಂದೇ ಕೆಲಸ ಅಂತಿಲ್ಲ ವ್ಯವಸಾಯದ ಜೊತೆಗೆ ಹಸು ಕೋಳಿ ಕುರಿ ಸಾಕಾಣಿಕೆ ಅದರ ಜೊತೆ ಕೂಲಿಕೆಲಸ ಎಲ್ಲಾ ಮಾಡಿದರೂ ಒಂದರಲ್ಲಿ ಆದಾಯ ಬಂದರೆ ಇನ್ನೊಂದರಲ್ಲಿ ನಷ್ಟ ಅನ್ನುವ ಸ್ಥಿತಿ. ಅದರಲ್ಲೂ ಸರ್ಕಾರ ಕೊಡುವ ಸವಲತ್ತುಗಳನ್ನು ಪಡೆಯಬೇಕೆಂದರೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಛೇರಿಗಳಿಗೆ ಅಲೆಯಬೇಕು. ಇನ್ನೂ ಸರ್ಕಾರ ಇಂತಹ ಕಾನೂನುಗಳನ್ನು ತಂದರೆ ರೈತ ಬೆಳೆ ಬೆಳೀಬೇಕೋ ಇಲ್ಲ ತನ್ನ ಕಸುಬಿಗೆ ಸರ್ಕಾರದ ಅನುಮತಿಯ ಮುದ್ರೆ ಪಡೆಯಲು ಅಧಿಕಾರಿಗಳ ಬಳಿ ಅಲೆಯಬೇಕೋ?. ಲಾಸೋ ಲಾಭವೋ ಪ್ರಾಮಾಣಿಕವಾಗಿ ದುಡಿಮೆಗೆ ಹೊಂದಿಕೊಂಡಿರುವ ರೈತನಿಗೆ ದುಡೀಲಿಕ್ಕಾದರೂ ಬಿಡಬೇಕು. ಸವಲತ್ತು ಹಾಗೂ ಕಾನೂನುಗಳ ಹೆಸರಿನಿಂದ ಅವನ ದುಡಿಮೆಗೆ ಕಲ್ಲು ಹಾಕಬಾರದು.

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...