Homeಮುಖಪುಟ‘ಕಮಲದ ಗುಂಡಿ ಒತ್ತಿ, ಮಮತಾ ತನ್ನ ಕುರ್ಚಿಯಿಂದ ಎರಡು ಅಡಿ ಹಾರಿ ಬೀಳುವ ಕರೆಂಟ್ ಹೊಡೆಯುತ್ತದೆ’-ನಿತಿನ್...

‘ಕಮಲದ ಗುಂಡಿ ಒತ್ತಿ, ಮಮತಾ ತನ್ನ ಕುರ್ಚಿಯಿಂದ ಎರಡು ಅಡಿ ಹಾರಿ ಬೀಳುವ ಕರೆಂಟ್ ಹೊಡೆಯುತ್ತದೆ’-ನಿತಿನ್ ಗಡ್ಕರಿ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಮತದಾನ ದಿನದಂದು ಮತದಾನ ಕೇಂದ್ರಕ್ಕೆ ತೆರಳಿ ಕಮಲದ ಗುಂಡಿಯನ್ನು ಒತ್ತಿ, ಈ ಸಮಯದಲ್ಲಿ ಎಂತಹ ಕರೆಂಟ್‌ ಹೊಡೆಯುತ್ತದೆ ಎಂದರೆ ಮಮತಾ ಕುರ್ಚಿಯಿಂದ ಎರಡು ಅಡಿ ಹಾರಿ ಬೀಳುತ್ತಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪಶ್ಚಿಮ ಬಂಗಾಳದ ಜೋಯ್‌ಪುರದಲ್ಲಿ ನಡೆದ ರ್‍ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಕ್ಷದ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಪರಿವರ್ತನೆ ಮೇ 2 ರಂದು ನಡೆಯಲಿದೆ. ಕಮಲ ಗೆಲ್ಲುತ್ತದೆ. ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಸಿಗಲಿದೆ. ಮೇ 3 ರಂದು ನಮ್ಮ ನಾಯಕ ಆಯ್ಕೆಯಾಗಲಿದ್ದಾರೆ. ಮೇ 4 ರಂದು ಬಿಜೆಪಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ: ಸಿದ್ದರಾಮಯ್ಯ

“ಮತದಾನದ ದಿನದಂದು ಬೆಳಿಗ್ಗೆ ಎದ್ದೇಳಿ. ನಿಮ್ಮ ದೇವರನ್ನು ನೆನಸಿಕೊಳ್ಳಿ. ಮತದಾನ ಕೇಂದ್ರಗಳಿಗೆ ಹೋಗಿ ಕಮಲದ ಗುಂಡಿಯನ್ನು ಒತ್ತಿ. ಈ ಸಮಯದಲ್ಲಿ ಎಂತಹ ಕೆಂಟ್ ಹೊಡೆಯುತ್ತದೆ ಎಂದರೆ ಮಮತಾ ಅವರು ತಮ್ಮ ಕುರ್ಚಿಯಿಂದ ಎರಡು ಅಡಿ ಮೇಲಕ್ಕೆ ಹಾರುತ್ತಾರೆ” ಎಂದು ಹೇಳಿದ್ದಾರೆ.

 

“ಅವರಿಗೆ ಈ ಕರೆಂಟ್ ಅನ್ನು ಹೊಡೆಸಿ, ನಂತರ ವಿಕಾಸದ ಬಲ್ಬ್‌ ಹೇಗೆ ಉರಿಯುತ್ತದೆ ಎಂದು ಕಾದುನೋಡಿ” ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಈಗಾಗಲೆ ಘೋಷಣೆಯಾಗಿದೆ. ಈ ರಾಜ್ಯಗಳಲ್ಲಿ ಕೇಂದ್ರದ ಆಡಳಿತರೂಢ ಪಕ್ಷವಾದ ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಭಾರಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ.

ಇದನ್ನೂ ಓದಿ: ಕೊರೊನಾ ವಾರಿಯರ್ಸ್‌ಗೆ ಸಲ್ಲಬೇಕಾದ ಪ್ರಶಂಸೆಯನ್ನು ಮೋದಿ ಕದಿಯುತ್ತಿದ್ದಾರೆ: ಚುನಾವಣಾ ಆಯೋಗಕ್ಕೆ TMC ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...