ಮತದಾನ ದಿನದಂದು ಮತದಾನ ಕೇಂದ್ರಕ್ಕೆ ತೆರಳಿ ಕಮಲದ ಗುಂಡಿಯನ್ನು ಒತ್ತಿ, ಈ ಸಮಯದಲ್ಲಿ ಎಂತಹ ಕರೆಂಟ್ ಹೊಡೆಯುತ್ತದೆ ಎಂದರೆ ಮಮತಾ ಕುರ್ಚಿಯಿಂದ ಎರಡು ಅಡಿ ಹಾರಿ ಬೀಳುತ್ತಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪಶ್ಚಿಮ ಬಂಗಾಳದ ಜೋಯ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಕ್ಷದ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, “ಪರಿವರ್ತನೆ ಮೇ 2 ರಂದು ನಡೆಯಲಿದೆ. ಕಮಲ ಗೆಲ್ಲುತ್ತದೆ. ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಸಿಗಲಿದೆ. ಮೇ 3 ರಂದು ನಮ್ಮ ನಾಯಕ ಆಯ್ಕೆಯಾಗಲಿದ್ದಾರೆ. ಮೇ 4 ರಂದು ಬಿಜೆಪಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ: ಸಿದ್ದರಾಮಯ್ಯ
“ಮತದಾನದ ದಿನದಂದು ಬೆಳಿಗ್ಗೆ ಎದ್ದೇಳಿ. ನಿಮ್ಮ ದೇವರನ್ನು ನೆನಸಿಕೊಳ್ಳಿ. ಮತದಾನ ಕೇಂದ್ರಗಳಿಗೆ ಹೋಗಿ ಕಮಲದ ಗುಂಡಿಯನ್ನು ಒತ್ತಿ. ಈ ಸಮಯದಲ್ಲಿ ಎಂತಹ ಕೆಂಟ್ ಹೊಡೆಯುತ್ತದೆ ಎಂದರೆ ಮಮತಾ ಅವರು ತಮ್ಮ ಕುರ್ಚಿಯಿಂದ ಎರಡು ಅಡಿ ಮೇಲಕ್ಕೆ ಹಾರುತ್ತಾರೆ” ಎಂದು ಹೇಳಿದ್ದಾರೆ.
#WATCH | "…Wake up in the morning on the day of polls. Remember your God. Go to polling centres and press the button of Lotus. Aisa current lagega ki Mamata ji apni kursi se 2 foot upar uth jaaegi…," Union Minister Nitin Gadkari says during a rally in West Bengal's Joypur pic.twitter.com/B1JfcjqTVV
— ANI (@ANI) March 3, 2021
“ಅವರಿಗೆ ಈ ಕರೆಂಟ್ ಅನ್ನು ಹೊಡೆಸಿ, ನಂತರ ವಿಕಾಸದ ಬಲ್ಬ್ ಹೇಗೆ ಉರಿಯುತ್ತದೆ ಎಂದು ಕಾದುನೋಡಿ” ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಈಗಾಗಲೆ ಘೋಷಣೆಯಾಗಿದೆ. ಈ ರಾಜ್ಯಗಳಲ್ಲಿ ಕೇಂದ್ರದ ಆಡಳಿತರೂಢ ಪಕ್ಷವಾದ ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಭಾರಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ.
ಇದನ್ನೂ ಓದಿ: ಕೊರೊನಾ ವಾರಿಯರ್ಸ್ಗೆ ಸಲ್ಲಬೇಕಾದ ಪ್ರಶಂಸೆಯನ್ನು ಮೋದಿ ಕದಿಯುತ್ತಿದ್ದಾರೆ: ಚುನಾವಣಾ ಆಯೋಗಕ್ಕೆ TMC ದೂರು