Homeಮುಖಪುಟ'ನಾನು ಕಣ್ಣೀರು ಸುರಿಸುವುದಿಲ್ಲ, ಆದಿವಾಸಿಗಳು, ಒಬಿಸಿಗಳ ಕಣ್ಣೀರಿಗೆ ಬೆಲೆಯಿಲ್ಲ': ಹೇಮಂತ್‌ ಸೊರೆನ್‌ ಭಾವುಕ

‘ನಾನು ಕಣ್ಣೀರು ಸುರಿಸುವುದಿಲ್ಲ, ಆದಿವಾಸಿಗಳು, ಒಬಿಸಿಗಳ ಕಣ್ಣೀರಿಗೆ ಬೆಲೆಯಿಲ್ಲ’: ಹೇಮಂತ್‌ ಸೊರೆನ್‌ ಭಾವುಕ

- Advertisement -
- Advertisement -

ಜಾರ್ಖಂಡ್‌ನ ನೂತನ ಸಿಎಂ ಚಂಪೈ ಸೊರೇನ್ ಸರ್ಕಾರ ಇಂದು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು  ಸಾಬೀತುಪಡಿಸಿದೆ. ಈ ವೇಳೆ ಸದನಕ್ಕೆ ಮಾಜಿ ಸಿಎಂ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತ ಹೇಮಂತ್‌ ಸೊರೆನ್ ಭಾಗವಹಿಸಿದ್ದರು. ವಿಶ್ವಾಸ ಮತಯಾಚನೆ ವೇಳೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್, ನಾನು ಕಣ್ಣೀರು ಸುರಿಸುವುದಿಲ್ಲ, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಜನರ ಕಣ್ಣೀರಿಗೆ ಬೆಲೆಯಿಲ್ಲ ಎಂದು ಭಾವುಕವಾಗಿ ಹೇಳಿದ್ದಾರೆ.

ಹೇಮಂತ್ ಸೊರೇನ್ ಅವರು ನ್ಯಾಯಾಲಯದ ಅನುಮತಿಯೊಂದಿಗೆ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಹಾಜರಾಗಿದ್ದರು. ವಿಶ್ವಾಸಮತ ಯಾಚನೆಗೂ ಮುನ್ನ ಚಂಪೈ ಸೊರೇನ್, ತಮ್ಮ ಸರ್ಕಾರವನ್ನು “ಹೇಮಂತ್ ಸೊರೇನ್ ಭಾಗ – 2” ಎಂದು ಹೇಳಲು ಇಷ್ಟಪಡುವುದಾಗಿ ಹೇಳಿದ್ದರು.

ಅಕ್ರಮ ಹಣ ವರ್ಗಾವಣೆ ಆರೋಪದ ನಡುವೆ ಜನವರಿ 31ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ  ಸೊರೆನ್‌ ರಾಜೀನಾಮೆ ನೀಡಿದ್ದರು, ನಾನು ಪಿತೂರಿ ನಡೆಸಿದ ಶಕ್ತಿಗಳಿಗೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ರಾಜ್ಯಪಾಲರ ಕಚೇರಿ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ತಮ್ಮ ಬಂಧನದಲ್ಲಿ ರಾಜಭವನವೂ ಭಾಗಿಯಾಗಿದೆ ಎಂದು ಆರೋಪಿಸಿದ್ದಾರೆ.

ನನ್ನನ್ನು ಬಂಧಿಸಲು ದೀರ್ಘಕಾಲದವರೆಗೆ ಪಿತೂರಿ ನಡೆಸಲಾಗಿದೆ. ಇದು ಕಡಿಮೆ ಉರಿಯಲ್ಲಿ ಬೇಯುತ್ತಿತ್ತು. ಬಳಿಕ ಉತ್ತಮ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಆದಿವಾಸಿಗಳು ಕಾಡಿನಲ್ಲೇ ವಾಸಿಸುವುದನ್ನು ಮುಂದುವರಿಸಬೇಕೆಂದು ಹೇಳಲು ಕೆಲವರು ಹಿಂಜರಿಯುವುದಿಲ್ಲ. ನಾವು ಕಾಡು ತೊರೆದು ಬಂದು ಅವರ ಪಕ್ಕದಲ್ಲಿ ಕುಳಿತೆವು. ಇದರಿಂದ ಅವರ ಬಟ್ಟೆಗಳು ಕೊಳೆಯಾದವು. ಅವರು ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಾರೆ. ನಾನು ವಿಮಾನದಲ್ಲಿ ಪ್ರಯಾಣಿಸುವುದನ್ನು, ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದು ಹಾಗೂ ಬಿಎಂಡಬ್ಲ್ಯು ಕಾರಿನಲ್ಲಿ ತೆರಳುವುದು ಅವರಿಗೆ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೇಮಂತ್ ಸೋರೆನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಜೆಎಂಎಂ, ಕಾಂಗ್ರೆಸ್ ಮತ್ತು ಇತರ ಮಿತ್ರಪಕ್ಷಗಳ ಶಾಸಕರ ಬೆಂಬಲದೊಂದಿಗೆ, ಸೊರೆನ್ ಅವರ ಆಪ್ತ ಸಹಾಯಕ ಚಂಪೈ ಸೊರೆನ್ ಫೆಬ್ರವರಿ 2ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಿದ್ದಾರೆ.

ಜನವರಿ 31 ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. ರಾಜಭವನದ ಆದೇಶದ ಮೇರೆಗೆ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಲಾಗಿದೆ. ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯದ ಸಿಎಂ 5 ವರ್ಷಗಳನ್ನು ಪೂರ್ಣಗೊಳಿಸಲು ಬಿಜೆಪಿ ಬಯಸುವುದಿಲ್ಲ, ಅವರು ತಮ್ಮ ಆಡಳಿತದಲ್ಲಿಯೂ ಇದನ್ನು ಅನುಮತಿಸಿರಲಿಲ್ಲ ಎಂದು  ಹೇಮಂತ್ ಸೊರೆನ್ ಹೇಳಿದ್ದಾರೆ.

ಬಿಜೆಪಿ ಆದಿವಾಸಿಗಳನ್ನು “ಅಸ್ಪೃಶ್ಯರು” ಎಂದು ಪರಿಗಣಿಸುತ್ತದೆ, ದೇಶದಲ್ಲಿ ಈಗಿನ ಆಡಳಿತದಲ್ಲಿ ಆದಿವಾಸಿಗಳು ಮತ್ತು ದಲಿತರು ಸುರಕ್ಷಿತವಾಗಿಲ್ಲ. ನಾನು ಇನ್ನಷ್ಟು ಬಲದೊಂದಿಗೆ ಮರಳಿ ಬರುತ್ತೇನೆ. ಪ್ರತಿಪಕ್ಷಗಳ ಷಡ್ಯಂತ್ರವನ್ನು ವಿಫಲಗೊಳಿಸುತ್ತೇನೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಮಾರಂಭ ನಡೆದಾಗ ಬಿಜೆಪಿಯು ರಾಮರಾಜ್ಯವನ್ನು ತರುವುದಾಗಿ ಹೇಳಿತ್ತು, ಈಗ ಅವರು ಬಿಹಾರದಲ್ಲಿ ಮತ್ತು ನಂತರ ಜಾರ್ಖಂಡ್‌ನಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಿದ್ದಾರೆ ಎಂದು ಹೇಮಂತ್ ಸೊರೆನ್ ಹೇಳಿದ್ದಾರೆ.

ನಾನು ಸೋಲನ್ನು ಒಪ್ಪಿಕೊಂಡಿಲ್ಲ, ತಮ್ಮ ಕುತಂತ್ರಗಳಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ಅವರು ಭಾವಿಸುತ್ತಾರೆ. ಆದರೆ ಇದು ಜಾರ್ಖಂಡ್, ಆದಿವಾಸಿಗಳು ಮತ್ತು ದಲಿತರು ತ್ಯಾಗ ಮಾಡಿದ ರಾಜ್ಯ, ಕೋಟಿಗಟ್ಟಲೆ ಲೂಟಿ ಮಾಡಿ ವಿದೇಶಕ್ಕೆ ಪಲಾಯನ ಮಾಡಿದವರನ್ನು ಕೇಂದ್ರೀಯ ಸಂಸ್ಥೆಗಳಿಗೆ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಅವರು ಏನು ಮಾಡುತ್ತಾರೆಂದು ಆದಿವಾಸಿಗಳು ಮತ್ತು ಅಮಾಯಕರನ್ನು ಗುರಿಯಾಗಿಸುತ್ತಿದ್ದಾರೆ? ಆದಿವಾಸಿಗಳ ಕಣ್ಣೀರು ನಿಮಗೆ ಲೆಕ್ಕಕ್ಕಿಲ್ಲ ಎಂಬ ಕಾರಣಕ್ಕೆ ನಾನು ಅಳುವುದಿಲ್ಲ, ಸೂಕ್ತ ಸಮಯದಲ್ಲಿ ಪ್ರತಿಯೊಂದು ಷಡ್ಯಂತ್ರಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

ಇಂದು ಜೈಲಿನಿಂದ ವಿಧಾನಸಭೆಗೆ ಹೇಮಂತ್ ಸೊರೆನ್‌ ಆಗಮಿಸಿದಾಗ ಆಡಳಿತರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರು ಹೇಮಂತ್ ಸೊರೇನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಇದನ್ನು ಓದಿ: ಸಾವಿತ್ರಿಬಾಯಿ ಫುಲೆ ವಿವಿಯಲ್ಲಿ ABVP ಕಾರ್ಯಕರ್ತರಿಂದ ದಾಂಧಲೆ: ಕ್ರಮ ಕೈಗೊಳ್ಳದ ಅಧಿಕಾರಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...