Homeಚಳವಳಿಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ.

- Advertisement -
- Advertisement -

ರಘುರಾಮ್ ರಾಜನ್, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್

ಅನುವಾದ: ನಿಖಿಲ್ ಕೋಲ್ಪೆ

“ಇತ್ತೀಚಿನ ದಿನಗಳಲ್ಲಿ ಭಾರತದಿಂದ ಹೊರಬೀಳುತ್ತಿರುವ ಸುದ್ದಿಗಳು ಚಿಂತೆಗೀಡುಮಾಡುವಂತವುಗಳು. ಮುಸುಕುಧಾರಿಗಳ ಗುಂಪೊಂದು ದೇಶದ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ನುಗ್ಗಿತು. ಗುಂಪಿನವರು ಪೊಲೀಸರ ಯಾವುದೇ ಮಧ್ಯಪ್ರವೇಶವೂ ಇಲ್ಲದೇ, ಗಂಟೆಗಳ ಕಾಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾ ದಾಂಧಲೆ ಎಬ್ಬಿಸಿದರು. ದಾಳಿಗೆ ಒಳಗಾದವರು ವಿದ್ಯಾರ್ಥಿ ಕಾರ್ಯಕರ್ತರು ಎಂಬುದು ಸ್ಪಷ್ಟವಾದರೂ, ಸರಕಾರದಿಂದ ನೇಮಕವಾದ ಆಡಳಿತವಾಗಲೀ, ಪೊಲೀಸರಾಗಲೀ, ಅವರಿಗೆ ರಕ್ಷಣೆ ನೀಡಲು ಏನನ್ನೂ ಮಾಡಲಿಲ್ಲ. ಇದು ನಡೆದದ್ದು ಸಾಮಾನ್ಯವಾಗಿ ಎಲ್ಲರೂ, ಯಾವಾಗಲೂ ಕಟ್ಟೆಚ್ಚರದಲ್ಲಿರುವ ದೇಶದ ರಾಜಧಾನಿಯಲ್ಲಿ. ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಕೂಡಾ ವಸ್ತುಶಃ ರಣಾಂಗಣಗಳಾಗಿರುವುದು- ಯೋಜಿತವಾಗಿ ಅಲ್ಲದಿದ್ದರೂ, ನಿರ್ಲಕ್ಷದಿಂದಲಾದರೂ ಸರಕಾರವು ಭಿನ್ನಮತವನ್ನು ದಮನಿಸುತ್ತಿದೆ ಎಂಬ ಆರೋಪಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ.

ರಘುರಾಂ ರಾಜನ್

ಇದಕ್ಕಾಗಿ ನಾಯಕತ್ವವನ್ನು ದೂರುವುದು ಸುಲಭ. ಆದರೆ, ನಮ್ಮಂತಹ ಹೆಮ್ಮೆಯ ಮತ್ತು ಬಹುಹಂತದ ಪ್ರಜಾಪ್ರಭುತ್ವದಲ್ಲಿ ನಾವು, ಸಾರ್ವಜನಿಕರು ಕೂಡಾ ಜವಾಬ್ದಾರಿ ಹೊರಬೇಕಾಗುತ್ತದೆ. ಕೊನೆಗೂ, ಅವರ ವಿಭಜನಕಾರಿ ಪ್ರಣಾಳಿಕೆಯನ್ನು ಸಮ್ಮತಿಸಿ, ಈ ನಾಯಕರನ್ನು ಅಧಿಕಾರಕ್ಕೇರಿಸಿದವರು ಇದೇ ಸಾರ್ವಜನಿಕರಾಗಿದ್ದು, ಅದನ್ನೇ ಈ ನಾಯಕರುಗಳು ಮುನ್ನುಗ್ಗಲು ಆದೇಶ ಎಂದು ಭಾವಿಸಿದ್ದಾರೆ. ಅವರು ಆರ್ಥಿಕ ಕಾರ್ಯಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ ಎಂದು ನಮಲ್ಲಿ ಕೆಲವರು ಆಶಿಸಿದ್ದರು. ನಮ್ಮದೇ ಪೂರ್ವಗ್ರಹವನ್ನು ಕೆರೆದು ಉದ್ರೇಕಿಸುವ ಅವರ ಭಾಷಣಗಳನ್ನು ನಮ್ಮಲ್ಲಿ ಕೆಲವರು ಒಪ್ಪಿಕೊಂಡೆವು. ನಮ್ಮಲ್ಲಿ ಕೆಲವರು ರಾಜಕೀಯವು ಬೇರಾರದ್ದೋ ಸಮಸ್ಯೆ ಎಂದು ಭಾವಿಸಿ ನಿರ್ಲಿಪ್ತವಾಗಿದ್ದೆವು. ಕೆಲವರನ್ನು ನಿರ್ದಯವಾಗಿ ದಂಡಿಸಿ, ಉದಾಹರಣೆಗಳನ್ನಾಗಿ ಮಾಡಲಾಗಿರುವುದರಿಂದ ಟೀಕಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ನಮಲ್ಲಿ ಕೆಲವರು ಭಯಪಟ್ಟೆವು. ಕೊನೆಗೂ, ಪ್ರಜಾಪ್ರಭುತ್ವವು ಕೇವಲ ಒಂದು ಹಕ್ಕು ಮಾತ್ರವಲ್ಲ; ಅದೊಂದು ಜವಾಬ್ದಾರಿ ಕೂಡಾ ಹೌದು- ಚುನಾವಣೆಯ ದಿನ ಮಾತ್ರವಲ್ಲ, ಪ್ರತಿದಿನವೂ ನಮ್ಮ ಗಣರಾಜ್ಯದ ಪಾಲಕರಾಗಿರಬೇಕಾದ ಹೊರೆ.

ಅದೃಷ್ಟವಶಾತ್, ಭಾರತದಿಂದ ಹೊರಹೊಮ್ಮುತ್ತಿರುವ ಸುದ್ದಿಗಳು ಆಶಾದಾಯಕವೂ ಆಗಿವೆ. ವೈವಿಧ್ಯಮಯ ನಂಬಿಕೆಗಳ ಯುವಜನರು, ಹಿಂದೂಗಳು ಮತ್ತು ಮುಸ್ಲಿಮರು ರಾಷ್ಟ್ರಧ್ವಜದ ಹಿಂದೆ ಕೈಯಲ್ಲಿ ಕೈಹಾಕಿ ಸಾಗುತ್ತಾ, ರಾಜಕೀಯ ನಾಯಕರು ತಮ್ಮ ಸ್ವಂತ ಲಾಭಕ್ಕಾಗಿ ಪ್ರಚೋದಿಸುತ್ತಿರುವ ಕೃತಕ ವಿಭಜನೆಗಳನ್ನು ತಿರಸ್ಕರಿಸುತ್ತಿರುವಾಗ- ಅದು ನಮ್ಮ ಸಂವಿಧಾನದ ಬೆಳಕು ಇನ್ನೂ ಕೂಡಾ ಉಜ್ವಲವಾಗಿ ಬೆಳಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಸರಕಾರಿ ಸೇವೆಯಲ್ಲಿದ್ದ ಅಧಿಕಾರಿಗಳು, ತಾವು ವಿಶ್ವಸನೀಯವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ತಮ್ಮ ಕನಸಿನ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ- ನಮಗೆ ಸ್ವಾತಂತ್ರ‍್ಯ ದೊರಕಿಸಿಕೊಡಲು ಕೆಲವು ತಲೆಮಾರುಗಳು ಮಾಡಿರುವ ತ್ಯಾಗಗಳು ಇನ್ನೂ ಕೂಡಾ ನಮ್ಮನ್ನು ಪ್ರೇರೇಪಿಸಬಲ್ಲವು ಎಂಬುದಕ್ಕೆ ಜೀವಂತ ಸಾಕ್ಷ್ಯವಾಗಿದೆ.

ಚುನಾವಣಾಧಿಕಾರಿಯೊಬ್ಬರು, ತನ್ನ ಕುಟುಂಬಕ್ಕೆ ಇರುವ ಕಿರುಕುಳದ ಭಯದ ಹೊರತಾಗಿಯೂ ನಿಷ್ಪಕ್ಷಪಾತಿಯಾಗಿ ಕೆಲಸಮಾಡಿದಾಗ, ಪ್ರಾಮಾಣಿಕತೆ ಮತ್ತು ದೃಢತೆಗಳು ಇನ್ನೂ ಸಂಪೂರ್ಣವಾಗಿ ಬೆದರಿಲ್ಲ ಎಂಬುದನ್ನು ಸಿದ್ಧಪಡಿಸುತ್ತದೆ. ತಮ್ಮ ಬಹಳಷ್ಟು ಸಹೋದ್ಯೋಗಿಗಳು ಸರಕಾರ ಒತ್ತಡಕ್ಕೆ ಶರಣಾಗಿರುವ ಹೊತ್ತಿನಲ್ಲಿ, ಮಾಧ್ಯಮದ ಕೆಲವು ಜನರು ಸತ್ಯವನ್ನು ಹೊರತರಲು ದಣಿವರಿಯದೇ ದುಡಿಯುತ್ತಿರುವಾಗ- ನಮ್ಮ ಗಣರಾಜ್ಯದ ಕರ್ತವ್ಯಶೀಲ ಪ್ರಜೆಯಾಗಿ ಹೇಗಿರಬೇಕು ಎಂಬುದನ್ನು ಅವರು ತೋರಿಸಿಕೊಡುತ್ತಿದ್ದಾರೆ.

ಚುನಾವಣಾಧಿಕಾರಿ ಅಶೋಕ್‌ ಲಾವಾಸ

ಬಾಲಿವುಡ್ ನಟಿಯೊಬ್ಬರು ತನ್ನ ಇತ್ತೀಚಿನ ಚಲನಚಿತ್ರದ ಯಶಸ್ಸನ್ನು ಅಪಾಯಕ್ಕೆ ತಳ್ಳಿಯೂ, ಜೆಎನ್‌ಯು ದಾಳಿಯಲ್ಲಿ ಹಲ್ಲೆಗೀಡಾದವರನ್ನು ಭೇಟಿಯಾಗುವುದರ ಮೂಲಕ ಮೌನ ಪ್ರತಿಭಟನೆ ದಾಖಲಿಸುತ್ತಾರೆ ಎಂದಾದರೆ- ಅವರು, ದೇಶದಲ್ಲಿ ಯಾವುದೆಲ್ಲಾ ನಿಜವಾಗಿಯೂ ಅಪಾಯದಲ್ಲಿದೆ ಎಂಬುದನ್ನು ಯೋಚಿಸಿ ಲೆಕ್ಕಹಾಕುವಂತೆ ನಮ್ಮನ್ನು ಪ್ರೇರೇಪಿಸುತ್ತಾರೆ.

ಇವುಗಳಿಂದ ನಾವು ಪ್ರೇರಿತರಾಗದಿದ್ದರೆ, ಖಂಡಿತವಾಗಿಯೂ ನಾವು ಸಿನಿಕರಾಗಿರಲೇಬೇಕು. ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ. ಮಹಾತ್ಮಾ ಗಾಂಧಿಯವರು ಜೀವಕೊಟ್ಟ ಭಾರತಕ್ಕಾಗಿ ಇಂದು ಹೋರಾಡುತ್ತಿರುವವರು ಅವರೇ. ಅವರು ಸ್ವಾತಂತ್ರ‍್ಯ ಗಳಿಸಲು ಹೋರಾಡುತ್ತಿಲ್ಲ; ಬದಲಾಗಿ, ಆ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. “ಸ್ವಾತಂತ್ರ‍್ಯದ ಸ್ವರ್ಗದಲ್ಲಿ, ಓ ನನ್ನ ದೇವರೇ, ನನ್ನ ದೇಶವು ಎದ್ದೇಳಲಿ” ಎಂಬ ಕವಿ ರವೀಂದ್ರನಾಥ ಠಾಗೋರರ ಕನಸು ಇನ್ನು ಮುಂದೆಯೂ ನನಸಾಗಿ ಉಳಿಯಲಿದೆ ಎಂಬ ಆಶಾವಾದವನ್ನು ಅವರು ನಮಗೆ ನೀಡುತ್ತಿದ್ದಾರೆ.

ಜನವರಿ 26ರಂದು ಭಾರತವು ಬಹಳಷ್ಟು ಆದರ್ಶಗಳು ಮತ್ತು ಉದಾರವಾದವನ್ನು ತುಂಬಿಕೊಂಡಂತಹ ಸಂವಿಧಾನವನ್ನು ಪಡೆದುಕೊಂಡುದರ 70ನೇ ವರ್ಷಾಚರಣೆಯಾಗಿದೆ. ನಮ್ಮ ಸಂವಿಧಾನವು ಪರಿಪೂರ್ಣವಾಗಿರಲಿಲ್ಲ. ಆದರೆ, ವಿಚ್ಛಿದ್ರಕಾರಿ ವಿಭಜನೆಯ ಭಯಾನಕತೆಯಿಂದ ಹೊರಬಂದು, ಭಾರತವು ಹೆಚ್ಚು ಏಕೀಕೃತವಾದ ಭವಿಷ್ಯವನ್ನು ಹೊಂದಿರಬೇಕು ಎಂದು ಬಯಸಿದ್ದಂತಹ ಸುಶಿಕ್ಷಿತರಾದ ಪುರುಷರು ಮತ್ತು ಮಹಿಳೆಯರು ಅದನ್ನು ರೂಪಿಸಿದರು. ಭಾರತವು ಬಹಳಷ್ಟು ಒಳ್ಳೆಯದನ್ನು ಮಾಡಲು ಸಮರ್ಥವಾಗಿದೆ; ಆದರೆ, ಅದು ಭಯಾನಕವಾದ ಸ್ವಯಂವಿನಾಶಕಾರಿ ಶಕ್ತಿಗಳನ್ನೂ ಹುಟ್ಟುಹಾಕಬಹುದು ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ಇದನ್ನು ನಮ್ಮ ಕೆಲವು ಈಗಿನ ನಾಯಕರು ಅರ್ಥಮಾಡಿಕೊಂಡರೆ ಒಳ್ಳೆಯದು. ಆದುದರಿಂದಲೇ ಅವರು ಸಮಾನ ಉದ್ದೇಶ ಹಾಗೂ ಆತ್ಮಗೌರವಗಳ ಚೈತನ್ಯದ ಮೂಲಕ ನಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಹೊಮ್ಮಿಸಬಲ್ಲ ದಾಖಲೆಯಾಗಿರುವ ಸಂವಿಧಾನವನ್ನು ರೂಪಿಸಲೆತ್ನಿಸಿದರು. ನಮ್ಮೊಳಗಿನ ಪ್ರತಿಯೊಬ್ಬರಲ್ಲೂ ಈ ಚೈತನ್ಯವು ಉರಿಯುತ್ತಿರಲಿ ಎಂಬ ಮರುಸಂಕಲ್ಪವನ್ನು ಮಾಡುವುದಕ್ಕಿಂತ ಹೆಚ್ಚಿನ ನಿರ್ಧಾರ ಈ ಹೊಸ ದಶಕದಲ್ಲಿ ಬೇರೇನಿದೆ? ಈ ಸಂಕಷ್ಟದ ಕಾಲದಲ್ಲಿ ನಮ್ಮ ದೇಶದ ನಿರ್ಮಾತೃಗಳು ಸಂಕಲ್ಪಿಸಿದ್ದಂತೆ ಭಾರತವನ್ನು ಸಹಿಷ್ಣುತೆ ಮತ್ತು ಗೌರವದ ಉಜ್ವಲ ಉದಾಹರಣೆಯನ್ನಾಗಿ ರೂಪಿಸಲು ಜೊತೆಯಾಗಿ ಕೆಲಸ ಮಾಡೋಣ. ಅಸಹನೆಯ ಪ್ರಪಂಚದಲ್ಲಿ ದಾರಿದೀಪವಾಗೋಣ. ಹೊಸ ದಶಕದಲ್ಲಿ ಇದುವೇ ನಮ್ಮ ಕಾರ್ಯವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...