Homeಚಳವಳಿಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ.

- Advertisement -
- Advertisement -

ರಘುರಾಮ್ ರಾಜನ್, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್

ಅನುವಾದ: ನಿಖಿಲ್ ಕೋಲ್ಪೆ

“ಇತ್ತೀಚಿನ ದಿನಗಳಲ್ಲಿ ಭಾರತದಿಂದ ಹೊರಬೀಳುತ್ತಿರುವ ಸುದ್ದಿಗಳು ಚಿಂತೆಗೀಡುಮಾಡುವಂತವುಗಳು. ಮುಸುಕುಧಾರಿಗಳ ಗುಂಪೊಂದು ದೇಶದ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ನುಗ್ಗಿತು. ಗುಂಪಿನವರು ಪೊಲೀಸರ ಯಾವುದೇ ಮಧ್ಯಪ್ರವೇಶವೂ ಇಲ್ಲದೇ, ಗಂಟೆಗಳ ಕಾಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾ ದಾಂಧಲೆ ಎಬ್ಬಿಸಿದರು. ದಾಳಿಗೆ ಒಳಗಾದವರು ವಿದ್ಯಾರ್ಥಿ ಕಾರ್ಯಕರ್ತರು ಎಂಬುದು ಸ್ಪಷ್ಟವಾದರೂ, ಸರಕಾರದಿಂದ ನೇಮಕವಾದ ಆಡಳಿತವಾಗಲೀ, ಪೊಲೀಸರಾಗಲೀ, ಅವರಿಗೆ ರಕ್ಷಣೆ ನೀಡಲು ಏನನ್ನೂ ಮಾಡಲಿಲ್ಲ. ಇದು ನಡೆದದ್ದು ಸಾಮಾನ್ಯವಾಗಿ ಎಲ್ಲರೂ, ಯಾವಾಗಲೂ ಕಟ್ಟೆಚ್ಚರದಲ್ಲಿರುವ ದೇಶದ ರಾಜಧಾನಿಯಲ್ಲಿ. ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಕೂಡಾ ವಸ್ತುಶಃ ರಣಾಂಗಣಗಳಾಗಿರುವುದು- ಯೋಜಿತವಾಗಿ ಅಲ್ಲದಿದ್ದರೂ, ನಿರ್ಲಕ್ಷದಿಂದಲಾದರೂ ಸರಕಾರವು ಭಿನ್ನಮತವನ್ನು ದಮನಿಸುತ್ತಿದೆ ಎಂಬ ಆರೋಪಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ.

ರಘುರಾಂ ರಾಜನ್

ಇದಕ್ಕಾಗಿ ನಾಯಕತ್ವವನ್ನು ದೂರುವುದು ಸುಲಭ. ಆದರೆ, ನಮ್ಮಂತಹ ಹೆಮ್ಮೆಯ ಮತ್ತು ಬಹುಹಂತದ ಪ್ರಜಾಪ್ರಭುತ್ವದಲ್ಲಿ ನಾವು, ಸಾರ್ವಜನಿಕರು ಕೂಡಾ ಜವಾಬ್ದಾರಿ ಹೊರಬೇಕಾಗುತ್ತದೆ. ಕೊನೆಗೂ, ಅವರ ವಿಭಜನಕಾರಿ ಪ್ರಣಾಳಿಕೆಯನ್ನು ಸಮ್ಮತಿಸಿ, ಈ ನಾಯಕರನ್ನು ಅಧಿಕಾರಕ್ಕೇರಿಸಿದವರು ಇದೇ ಸಾರ್ವಜನಿಕರಾಗಿದ್ದು, ಅದನ್ನೇ ಈ ನಾಯಕರುಗಳು ಮುನ್ನುಗ್ಗಲು ಆದೇಶ ಎಂದು ಭಾವಿಸಿದ್ದಾರೆ. ಅವರು ಆರ್ಥಿಕ ಕಾರ್ಯಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ ಎಂದು ನಮಲ್ಲಿ ಕೆಲವರು ಆಶಿಸಿದ್ದರು. ನಮ್ಮದೇ ಪೂರ್ವಗ್ರಹವನ್ನು ಕೆರೆದು ಉದ್ರೇಕಿಸುವ ಅವರ ಭಾಷಣಗಳನ್ನು ನಮ್ಮಲ್ಲಿ ಕೆಲವರು ಒಪ್ಪಿಕೊಂಡೆವು. ನಮ್ಮಲ್ಲಿ ಕೆಲವರು ರಾಜಕೀಯವು ಬೇರಾರದ್ದೋ ಸಮಸ್ಯೆ ಎಂದು ಭಾವಿಸಿ ನಿರ್ಲಿಪ್ತವಾಗಿದ್ದೆವು. ಕೆಲವರನ್ನು ನಿರ್ದಯವಾಗಿ ದಂಡಿಸಿ, ಉದಾಹರಣೆಗಳನ್ನಾಗಿ ಮಾಡಲಾಗಿರುವುದರಿಂದ ಟೀಕಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ನಮಲ್ಲಿ ಕೆಲವರು ಭಯಪಟ್ಟೆವು. ಕೊನೆಗೂ, ಪ್ರಜಾಪ್ರಭುತ್ವವು ಕೇವಲ ಒಂದು ಹಕ್ಕು ಮಾತ್ರವಲ್ಲ; ಅದೊಂದು ಜವಾಬ್ದಾರಿ ಕೂಡಾ ಹೌದು- ಚುನಾವಣೆಯ ದಿನ ಮಾತ್ರವಲ್ಲ, ಪ್ರತಿದಿನವೂ ನಮ್ಮ ಗಣರಾಜ್ಯದ ಪಾಲಕರಾಗಿರಬೇಕಾದ ಹೊರೆ.

ಅದೃಷ್ಟವಶಾತ್, ಭಾರತದಿಂದ ಹೊರಹೊಮ್ಮುತ್ತಿರುವ ಸುದ್ದಿಗಳು ಆಶಾದಾಯಕವೂ ಆಗಿವೆ. ವೈವಿಧ್ಯಮಯ ನಂಬಿಕೆಗಳ ಯುವಜನರು, ಹಿಂದೂಗಳು ಮತ್ತು ಮುಸ್ಲಿಮರು ರಾಷ್ಟ್ರಧ್ವಜದ ಹಿಂದೆ ಕೈಯಲ್ಲಿ ಕೈಹಾಕಿ ಸಾಗುತ್ತಾ, ರಾಜಕೀಯ ನಾಯಕರು ತಮ್ಮ ಸ್ವಂತ ಲಾಭಕ್ಕಾಗಿ ಪ್ರಚೋದಿಸುತ್ತಿರುವ ಕೃತಕ ವಿಭಜನೆಗಳನ್ನು ತಿರಸ್ಕರಿಸುತ್ತಿರುವಾಗ- ಅದು ನಮ್ಮ ಸಂವಿಧಾನದ ಬೆಳಕು ಇನ್ನೂ ಕೂಡಾ ಉಜ್ವಲವಾಗಿ ಬೆಳಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಸರಕಾರಿ ಸೇವೆಯಲ್ಲಿದ್ದ ಅಧಿಕಾರಿಗಳು, ತಾವು ವಿಶ್ವಸನೀಯವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ತಮ್ಮ ಕನಸಿನ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ- ನಮಗೆ ಸ್ವಾತಂತ್ರ‍್ಯ ದೊರಕಿಸಿಕೊಡಲು ಕೆಲವು ತಲೆಮಾರುಗಳು ಮಾಡಿರುವ ತ್ಯಾಗಗಳು ಇನ್ನೂ ಕೂಡಾ ನಮ್ಮನ್ನು ಪ್ರೇರೇಪಿಸಬಲ್ಲವು ಎಂಬುದಕ್ಕೆ ಜೀವಂತ ಸಾಕ್ಷ್ಯವಾಗಿದೆ.

ಚುನಾವಣಾಧಿಕಾರಿಯೊಬ್ಬರು, ತನ್ನ ಕುಟುಂಬಕ್ಕೆ ಇರುವ ಕಿರುಕುಳದ ಭಯದ ಹೊರತಾಗಿಯೂ ನಿಷ್ಪಕ್ಷಪಾತಿಯಾಗಿ ಕೆಲಸಮಾಡಿದಾಗ, ಪ್ರಾಮಾಣಿಕತೆ ಮತ್ತು ದೃಢತೆಗಳು ಇನ್ನೂ ಸಂಪೂರ್ಣವಾಗಿ ಬೆದರಿಲ್ಲ ಎಂಬುದನ್ನು ಸಿದ್ಧಪಡಿಸುತ್ತದೆ. ತಮ್ಮ ಬಹಳಷ್ಟು ಸಹೋದ್ಯೋಗಿಗಳು ಸರಕಾರ ಒತ್ತಡಕ್ಕೆ ಶರಣಾಗಿರುವ ಹೊತ್ತಿನಲ್ಲಿ, ಮಾಧ್ಯಮದ ಕೆಲವು ಜನರು ಸತ್ಯವನ್ನು ಹೊರತರಲು ದಣಿವರಿಯದೇ ದುಡಿಯುತ್ತಿರುವಾಗ- ನಮ್ಮ ಗಣರಾಜ್ಯದ ಕರ್ತವ್ಯಶೀಲ ಪ್ರಜೆಯಾಗಿ ಹೇಗಿರಬೇಕು ಎಂಬುದನ್ನು ಅವರು ತೋರಿಸಿಕೊಡುತ್ತಿದ್ದಾರೆ.

ಚುನಾವಣಾಧಿಕಾರಿ ಅಶೋಕ್‌ ಲಾವಾಸ

ಬಾಲಿವುಡ್ ನಟಿಯೊಬ್ಬರು ತನ್ನ ಇತ್ತೀಚಿನ ಚಲನಚಿತ್ರದ ಯಶಸ್ಸನ್ನು ಅಪಾಯಕ್ಕೆ ತಳ್ಳಿಯೂ, ಜೆಎನ್‌ಯು ದಾಳಿಯಲ್ಲಿ ಹಲ್ಲೆಗೀಡಾದವರನ್ನು ಭೇಟಿಯಾಗುವುದರ ಮೂಲಕ ಮೌನ ಪ್ರತಿಭಟನೆ ದಾಖಲಿಸುತ್ತಾರೆ ಎಂದಾದರೆ- ಅವರು, ದೇಶದಲ್ಲಿ ಯಾವುದೆಲ್ಲಾ ನಿಜವಾಗಿಯೂ ಅಪಾಯದಲ್ಲಿದೆ ಎಂಬುದನ್ನು ಯೋಚಿಸಿ ಲೆಕ್ಕಹಾಕುವಂತೆ ನಮ್ಮನ್ನು ಪ್ರೇರೇಪಿಸುತ್ತಾರೆ.

ಇವುಗಳಿಂದ ನಾವು ಪ್ರೇರಿತರಾಗದಿದ್ದರೆ, ಖಂಡಿತವಾಗಿಯೂ ನಾವು ಸಿನಿಕರಾಗಿರಲೇಬೇಕು. ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ. ಮಹಾತ್ಮಾ ಗಾಂಧಿಯವರು ಜೀವಕೊಟ್ಟ ಭಾರತಕ್ಕಾಗಿ ಇಂದು ಹೋರಾಡುತ್ತಿರುವವರು ಅವರೇ. ಅವರು ಸ್ವಾತಂತ್ರ‍್ಯ ಗಳಿಸಲು ಹೋರಾಡುತ್ತಿಲ್ಲ; ಬದಲಾಗಿ, ಆ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. “ಸ್ವಾತಂತ್ರ‍್ಯದ ಸ್ವರ್ಗದಲ್ಲಿ, ಓ ನನ್ನ ದೇವರೇ, ನನ್ನ ದೇಶವು ಎದ್ದೇಳಲಿ” ಎಂಬ ಕವಿ ರವೀಂದ್ರನಾಥ ಠಾಗೋರರ ಕನಸು ಇನ್ನು ಮುಂದೆಯೂ ನನಸಾಗಿ ಉಳಿಯಲಿದೆ ಎಂಬ ಆಶಾವಾದವನ್ನು ಅವರು ನಮಗೆ ನೀಡುತ್ತಿದ್ದಾರೆ.

ಜನವರಿ 26ರಂದು ಭಾರತವು ಬಹಳಷ್ಟು ಆದರ್ಶಗಳು ಮತ್ತು ಉದಾರವಾದವನ್ನು ತುಂಬಿಕೊಂಡಂತಹ ಸಂವಿಧಾನವನ್ನು ಪಡೆದುಕೊಂಡುದರ 70ನೇ ವರ್ಷಾಚರಣೆಯಾಗಿದೆ. ನಮ್ಮ ಸಂವಿಧಾನವು ಪರಿಪೂರ್ಣವಾಗಿರಲಿಲ್ಲ. ಆದರೆ, ವಿಚ್ಛಿದ್ರಕಾರಿ ವಿಭಜನೆಯ ಭಯಾನಕತೆಯಿಂದ ಹೊರಬಂದು, ಭಾರತವು ಹೆಚ್ಚು ಏಕೀಕೃತವಾದ ಭವಿಷ್ಯವನ್ನು ಹೊಂದಿರಬೇಕು ಎಂದು ಬಯಸಿದ್ದಂತಹ ಸುಶಿಕ್ಷಿತರಾದ ಪುರುಷರು ಮತ್ತು ಮಹಿಳೆಯರು ಅದನ್ನು ರೂಪಿಸಿದರು. ಭಾರತವು ಬಹಳಷ್ಟು ಒಳ್ಳೆಯದನ್ನು ಮಾಡಲು ಸಮರ್ಥವಾಗಿದೆ; ಆದರೆ, ಅದು ಭಯಾನಕವಾದ ಸ್ವಯಂವಿನಾಶಕಾರಿ ಶಕ್ತಿಗಳನ್ನೂ ಹುಟ್ಟುಹಾಕಬಹುದು ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ಇದನ್ನು ನಮ್ಮ ಕೆಲವು ಈಗಿನ ನಾಯಕರು ಅರ್ಥಮಾಡಿಕೊಂಡರೆ ಒಳ್ಳೆಯದು. ಆದುದರಿಂದಲೇ ಅವರು ಸಮಾನ ಉದ್ದೇಶ ಹಾಗೂ ಆತ್ಮಗೌರವಗಳ ಚೈತನ್ಯದ ಮೂಲಕ ನಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಹೊಮ್ಮಿಸಬಲ್ಲ ದಾಖಲೆಯಾಗಿರುವ ಸಂವಿಧಾನವನ್ನು ರೂಪಿಸಲೆತ್ನಿಸಿದರು. ನಮ್ಮೊಳಗಿನ ಪ್ರತಿಯೊಬ್ಬರಲ್ಲೂ ಈ ಚೈತನ್ಯವು ಉರಿಯುತ್ತಿರಲಿ ಎಂಬ ಮರುಸಂಕಲ್ಪವನ್ನು ಮಾಡುವುದಕ್ಕಿಂತ ಹೆಚ್ಚಿನ ನಿರ್ಧಾರ ಈ ಹೊಸ ದಶಕದಲ್ಲಿ ಬೇರೇನಿದೆ? ಈ ಸಂಕಷ್ಟದ ಕಾಲದಲ್ಲಿ ನಮ್ಮ ದೇಶದ ನಿರ್ಮಾತೃಗಳು ಸಂಕಲ್ಪಿಸಿದ್ದಂತೆ ಭಾರತವನ್ನು ಸಹಿಷ್ಣುತೆ ಮತ್ತು ಗೌರವದ ಉಜ್ವಲ ಉದಾಹರಣೆಯನ್ನಾಗಿ ರೂಪಿಸಲು ಜೊತೆಯಾಗಿ ಕೆಲಸ ಮಾಡೋಣ. ಅಸಹನೆಯ ಪ್ರಪಂಚದಲ್ಲಿ ದಾರಿದೀಪವಾಗೋಣ. ಹೊಸ ದಶಕದಲ್ಲಿ ಇದುವೇ ನಮ್ಮ ಕಾರ್ಯವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...