ಗಾಜಿಯಾಬಾದ್ನಲ್ಲಿ ವಯಸ್ಸಾದ ಮುಸ್ಲೀಂ ವ್ಯಕ್ತಿಯನ್ನು ಕೆಲವು ಸಂಘಟನೆಗೆ ಸೇರಿದ ವ್ಯಕ್ತಿಗಳು ಜೈ ಶ್ರೀರಾಮ್ ಎಂದು ಪಠಿಸುವಂತೆ ಒತ್ತಾಯಿಸಿರುವುದು ಮತ್ತು ವ್ಯಕ್ತಿಯನ್ನು ಥಳಿಸಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಗಾಜಿಯಾಬಾದ್ ಘಟನೆ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಒಬ್ಬ ವಯಸ್ಸಾದ ವ್ಯಕ್ತಿಯನ್ನು ವಿನಾ ಕಾರಣ ಥಳಿಸುವುದು ಅತ್ಯಂತ ಅಮಾನವೀಯ. ಇದು ಆ ವ್ಯಕ್ತಿ ಯಾವುದೇ ಧರ್ಮಕ್ಕೆ ಸೇರಿದ್ದರೂ ಅಮಾನುಷವಾದ ವರ್ತನೆ. ಧರ್ಮದ ಕಾರಣಕ್ಕೆ ನಡೆದ ಈ ದೌರ್ಜನ್ಯ ಸಮಾಜಕ್ಕೆ ದೊಡ್ಡ ಕಳಂಕ ಎಂದಿದ್ದಾರೆ.
ಗಾಜಿಯಾಬಾದ್ ಘಟನೆಯ ಪೋಸ್ಟ್ ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮುಸ್ಲೀಂ ವೃದ್ಧರನ್ನು ರಾಮನಾಮ ಜಪಿಸುವಂತೆ ಒತ್ತಾಯಿಸುತ್ತಿರುವ ವ್ಯಕ್ತಿ ನಿಜವಾದ ರಾಮ ಭಕ್ತನಾಗಿರಲು ಸಾಧ್ಯವಿಲ್ಲ. ಇಂತಹ ಕ್ರೌರ್ಯಗಳು ಮಾನವೀಯತೆಯನ್ನು ಇಲ್ಲದಂತೆ ಮಾಡುತ್ತವೆ. ಗಾಜಿಯಾಬಾದ್ ಕ್ರೌರ್ಯ ಸಮಾಜಕ್ಕೆ ಒಂದು ಪಿಡುಗು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪಂಜಾಬ್ ಮುಖ್ಯಮಂತ್ರಿ ನಿವಾಸದೆದುರು ಸುಖಬೀರ್ ಬಾದಲ್ ಪ್ರತಿಭಟನೆ – ಬಂಧನ