Homeನ್ಯಾಯ ಪಥಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ...

ಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ…

- Advertisement -
- Advertisement -

ಹೈದರಾಬಾದ್ ಅತ್ಯಾಚಾರ ಪ್ರಕರಣ ಕಂಡು ಇಡೀ ದೇಶವೇ ಮರುಕಪಟ್ಟಿತು. ಫಿಲ್ಮ್ ಇಂಡಸ್ಟ್ರಿಯೂ ಕಂಬನಿ ಮಿಡಿದು, ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿತು. ಇದೇ ಮೊದಲಲ್ಲ 2012ರ ನಿರ್ಭಯಾ ಪ್ರಕರಣದಲ್ಲಿರಲಿ, ಅಥವಾ ಇಂತಹುದೇ ಮಹಿಳಾ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದಾಗ ಸಿನಿಮಂದಿ ಆಕ್ರೋಶದಿಂದ ಮಾತನಾಡೋದು ಸಿನಿಮಾ ಡೈಲಾಗ್‍ಗಳಷ್ಟೇ ಸಹಜವಾಗಿದೆ. ಆದರೆ, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಲಾಭದ ಬೆನ್ನು ಹತ್ತಿರುವ ಸಿನಿಮೋದ್ಯಮಕ್ಕೆ, ಅದರ ಪಾಲುದಾರರಿಗೆ ನಿಜಕ್ಕೂ ಹೀಗೆಲ್ಲ ಆಕ್ರೋಶ ಹೊರಹಾಕುವ ನೈತಿಕತೆ ಉಳಿದಿದೆಯಾ ಅನ್ನೋದು ಚರ್ಚೆಯಾಗಬೇಕಿರುವ ಸಂಗತಿ.

ಕೆಲವು ವರ್ಷಗಳ ಹಿಂದೆ ಅತ್ಯಾಚಾರಿಯೊಬ್ಬ ತಾನು ಅತ್ಯಾಚಾರವೆಸಗಲು `ದಂಡುಪಾಳ್ಯ’ ಸಿನಿಮಾದ ವಿಕೃತ ಪ್ರಚೋದನೆಯೇ ಕಾರಣ ಅನ್ನೋದನ್ನು ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ. ಇದು ಒಂದು ಸಿನಿಮಾಗೆ ಸೀಮಿತವಾದುದಲ್ಲ ಅಥವಾ ಒಬ್ಬ ಕಾಮಾಂಧನ ಪ್ರೇರಣೆಗೂ ಸೀಮಿತವಾದುದಲ್ಲ. ಕಮರ್ಷಿಯಲ್ ಸಕ್ಸಸ್‍ನ ಜಾಡುಹಿಡಿದು ಹೊರಟಿರುವ ಬಹುತೇಕ ಸಿನಿಮಾಗಳ ನಿರ್ಮಾತೃಗಳು ಗೊತ್ತಿದ್ದೊ, ಗೊತ್ತಿಲ್ಲದೆಯೋ ಇಂಥಾ ಶೋಷಣೆಗಳನ್ನು ವಿಜೃಂಭಿಸುತ್ತಾ ಬಂದಿರೋದು ಇವತ್ತಿನ ವಾಸ್ತವ.

ಸಿನಿಮಾರಂಗ ಬೆಳೆದಂತೆ, 21ನೇ ಶತಮಾನದ ಮೊದಲ ದಶಕದ ಕೊನೆಯ ವರ್ಷದವರೆಗಿನ ಬಹುತೇಕ ಸಿನಿಮಾಗಳ ಕತೆಗಳಲ್ಲಿ ಅತ್ಯಾಚಾರವೆಂಬುದು ಸಾಮಾನ್ಯ ವಸ್ತುವಾಗಿ ಕಾಣಿಸಿಕೊಳ್ಳುತ್ತವೆ. ಪ್ರೀತಿ-ಪ್ರೇಮ-ಕಾಮ, ಆಸೆ, ಆಕರ್ಷಣೆ, ಸೇಡು, ದ್ವೇಷ ಇದೆಲ್ಲದಕ್ಕೂ ಕೇಂದ್ರವಾಗಿ ಅತ್ಯಾಚಾರದ ದೃಶ್ಯಗಳು ರಾರಾಜಿಸುತ್ತಿವೆ. ಅದಲ್ಲದೆ ಅನೈತಿಕ ಸಂಬಂಧದ ಕತೆ-ದೃಶ್ಯಗಳು ನೋಡುಗರಿಗೆ ಪ್ರಚೋದನೆಯ ಹೊಸ ಹುಮ್ಮಸ್ಸನ್ನು ತಂದೊಡ್ಡುವುದರ ಜೊತೆಗೆ ಸಿನಿಮಾದಲ್ಲಿ ನಟನೊಬ್ಬ ಎಸಗುವ ಅತ್ಯಾಚಾರ ಕೃತ್ಯವು ಆ ಪಾತ್ರದ ಗಂಡಸ್ತನದ ಅಹಮ್ಮಿಕೆಯನ್ನಾಗಿಯೋ, ಸ್ತ್ರೀ ಪಾತ್ರವನ್ನು ಅವಮಾನಿಸುವ ಸಾಧನವಾಗಿಯೋ ಬಳಕೆಯಾಗುತ್ತಲೇ ಇದೆ.

ಸಿನಿಮಾ ಎಂಬುದು ಸಮಾಜದ ಕನ್ನಡಿಯಿದ್ದಂತೆ, ಸಮಾಜದಲ್ಲಿ ನಡೆಯೋದನ್ನೇ ಸಿನಿಮಾದಲ್ಲಿ ತೋರಿಸಬೇಕಾಗುತ್ತೆ ಎಂಬ ವಾದವನ್ನು ಕೆಲವರು ಮುಂದಿಡಬಹುದು. ಆದರೆ ಅಂತವರು, ನೈಜತೆಯ ನೆಪದಲ್ಲಿ ಇಂತಹ ವಿಕೃತಿಗಳನ್ನು ಹಸಿಹಸಿಯಾಗಿ ಬಿತ್ತರಿಸುವ ಅದೇ ಸಿನಿಮಾ ಸಮಾಜವನ್ನು ತಿದ್ದಿ ತೀಡುವ ಇನ್ನುಳಿದ ಹೊಣೆಗಾರಿಕೆಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ತಾನು ಪ್ರೀತಿಸಿದವಳು ತನಗೆ ಸಿಗಲಿಲ್ಲವೆಂದರೆ, ಆಕೆ ಬೇರಾರಿಗೂ ಸಿಗಬಾರದೆಂದು ಆಕೆಯನ್ನು ಅತ್ಯಾಚಾರಗೈಯುವ ಅಥವಾ ಕುಡಿದ ಮತ್ತಿನಲ್ಲಿ ಹೀರೋ ಎಸಗುವ ಅತ್ಯಾಚಾರವು ಆಕೆಯನ್ನು ಮದುವೆ ಆಗಿಬಿಟ್ಟರೆ ಎಲ್ಲವೂ ಸರಿಹೋಗಿಬಿಡುತ್ತದೆಂಬ ದೃಶ್ಯದೊಂದಿಗೆ ಕೊನೆಗಾಣುತ್ತದೆ. ಇವೆಲ್ಲವೂ ಅತ್ಯಾಚಾರಿಗಳಿಗೆ ಎಷ್ಟೊಂದು ಸುಲಭವೆಂಬಂತೆ ಪ್ರಭಾವಿಸುತ್ತವೆ.

ಸಿನಿಮಾದಲ್ಲಿ ಅತ್ಯಾಚಾರಗೈದವನು ಇವತ್ತು ಅವಳ ಸೊಕ್ಕು ಇಳಿಸಿದ್ದೇನೆಂದು ಗರ್ವದಿಂದ ಹೇಳಿಕೊಳ್ಳುವಂತಹ ಹಾಗೂ ನಿಷ್ಕರ್ಷ ಸಿನಿಮಾದಲ್ಲಿ ಖಳನಟನೊಬ್ಬ `ಇವಳಿಗೆ ಯೌವನ ತುಂಬಿ ತುಳುಕ್ತಾಯಿದೆ ಸ್ವಲ್ಪ ಖಾಲಿ ಮಾಡು’ ಎನ್ನುವ ಮತ್ತು ಆತ ಅತ್ಯಾಚಾರಗೈಯುವ ದೃಶ್ಯಗಳು ಹೆಣ್ಣಿನ ಬಾಯಿ ಮುಚ್ಚಿಸಲು ಅಥವಾ ಆಕೆಯನ್ನು ತನ್ನ ಅಡಿಯಾಳಾಗಿಸಿಕೊಳ್ಳಲು ಅತ್ಯಾಚಾರವೊಂದು ಸಾಧನ ಎಂಬುದನ್ನು ಸುಪ್ತವಾಗಿ ಸಮಾಜಕ್ಕೆ ದಾಟಿಸಿಬಿಡುತ್ತವೆ. ಜಾತಿ, ವರ್ಗ ಮತ್ತು ಕಾಮದ ಅಮಲನ್ನು ನೆತ್ತಿಗೇರಿಸಿಕೊಂಡವನಿಗೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತವೆ. ಇಂತಹ ಸಿನಿಮಾಗಳು ಅತ್ಯಾಚಾರವಷ್ಟೇ ಅಲ್ಲದೆ ಆಸಿಡ್ ದಾಳಿ, ಹಿಂಸೆ, ಕಿರುಕುಳಗಳೂ ಮಹಿಳಾ ದೌರ್ಜನ್ಯದ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ ಮತ್ತು ಪ್ರಚೋದಿಸುತ್ತವೆ.

ಅಲ್ಲದೆ, ಸಿನಿಮಾಗಳಲ್ಲಿ ಅವಕಾಶಬೇಕೆಂದರೆ ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು ಎಂದು ಹೇಳುವ ನಿರ್ದೇಶಕರೂ, ನಿರ್ಮಾಪಕರೂ ಸಿನಿಮಾ ಇಂಡಸ್ಟ್ರಿಯಲ್ಲಿರುವುದು ಮತ್ತೊಂದು ದುರಂತ. ಇತ್ತೀಚೆಗೆ ಸದ್ದು ಮಾಡಿದ ಮೀಟೂ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಹೀರೋ, ನಿರ್ದೇಶಕ, ನಿರ್ಮಾಪಕರ ಪರವಾಗಿ ನಿಲ್ಲುವ `ಫೇವರಿಸಂ’ ಮನಸ್ಥಿತಿ ಸಿನಿಮಾ ರಂಗದ ಯಾವ ನೈತಿಕತೆಯನ್ನು ಪ್ರತಿನಿಧಿಸುತ್ತದೆ. ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಹೇಳಿಕೊಂಡ ನಟಿಯರ ಸಿನಿ ಭವಿಷ್ಯಕ್ಕೆ ತಣ್ಣೀರೆರಚುವ ಇಂಡಸ್ರ್ಟಿಯು ಅತ್ಯಾಚಾರದ ವಿರುದ್ಧ ಮಾತನಾಡುತ್ತಿರುವುದು ನೈತಿಕತೆಯ ಪ್ರಶ್ನೆಯನ್ನು ಮತ್ತೆಮತ್ತೆ ಮುನ್ನೆಲೆಗೆ ತರುತ್ತಿದೆ.

ಇಂದು ಸಿನಿಮಾಗಳಿಂದ ಪ್ರೇರೇಪಿಸಲ್ಪಡುವ ಯುವಸಮುದಾಯ ಬೆಳೆಯುತ್ತಿದೆ. ಇಂತಹ ಯುವಜನಾಂಗಕ್ಕೆ ಆದರ್ಶವಾಗಬೇಕಿರುವ ಸಿನಿಮಾಗಳು ಮಹಿಳೆಯರನ್ನು ಗೌರವಿಸುವ, ಮಾನವ ಪ್ರೀತಿಯನ್ನು ಹಂಚುವ, ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸುವಂತಹ ಹಾಗೂ ಆರೋಗ್ಯಕರ ಮನರಂಜನೆಯ ವಾಹಿನಿಯಾಗಿರಬೇಕೇ ಹೊರತು ಹಾದಿ ತಪ್ಪಿಸಿ, ಸಮಾಜದಲ್ಲಿ ಕೊಳಕನ್ನು ಬಿತ್ತುವ ಮಾಧ್ಯಮವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು: ಕ್ಷೇತ್ರ ಪುನರ್ವಿಂಗಡೆ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಎಂ.ಕೆ. ಸ್ಟಾಲಿನ್ ಎಚ್ಚರಿಕೆ

ಚೆನ್ನೈ: ಏಪ್ರಿಲ್ 16 ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿರುವ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷರು ಮಂಗಳವಾರ ಬಿಜೆಪಿ...

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನಕ್ಕೆ ತಳ್ಳುವ ಅಪಾಯವಿದೆ : ವಿಶ್ವಸಂಸ್ಥೆ ವರದಿ

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಬಹುದು ಮತ್ತು ದೇಶದ ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನುಂಟು ಮಾಡಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಹೊಸ...

ಗೋ-ರಕ್ಷಕರ ದಾಳಿಯ ನಂತರ ವ್ಯಕ್ತಿ ನಾಪತ್ತೆ: ಜಮ್ಮುವಿನ ರಾಂಬನ್‌ನಲ್ಲಿ ತೀವ್ರ ಪ್ರತಿಭಟನೆ; ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ

ಗೋರಕ್ಷಕರ ದಾಳಿಗೆ ಸಂಬಂಧಿಸಿ ಸ್ಥಳೀಯ ನಿವಾಸಿ ತನ್ವೀರ್ ಅಹ್ಮದ್ ಚೋಪನ್ ನಾಪತ್ತೆಯಾದ ನಂತರ ಸೋಮವಾರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಾವಿರಾರು ಜನರು ಸಂಚಾರ ತಡೆದು ಪ್ರತಿಭಟಿಸಿದ್ದಾರೆ. ಪೊಲೀಸರ ಪ್ರಕಾರ,...

ನಿತೀಶ್ ಕುಮಾರ್ ರಾಜೀನಾಮೆ : ಬಿಹಾರದ ಹೊಸ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಪಾಟ್ನಾದ ಲೋಕ ಭವನದಲ್ಲಿ ಮಂಗಳವಾರ (ಏ.14) ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ)...

ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಇಬ್ಬರು ವಿದ್ಯಾರ್ಥಿಗಳು ಸಾವು, ಐವರ ಬಂಧನ; ತನಿಖೆ

ಮಂಗಳವಾರ ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಮಾದಕ ದ್ರವ್ಯ ಸೇವಿಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಮುಂಬೈನ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳು ಎಂಬಿಎ ಓದುತ್ತಿದ್ದರು ಎಂದು...

ನಸೀರ್ ಅಹ್ಮದ್‌ರನ್ನು ವಜಾಗೊಳಿಸಿದ್ದೇಕೆ… ಡಿಕೆಶಿ ಹೇಳಿದ್ದೇನು?  

ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ (ಏ.14)...

ಆಟೋ ಪರ್ಮಿಟ್‌ಗಳಿಗೆ ಮರಾಠಿ ಭಾಷೆ ಕಡ್ಡಾಯ ನಿಯಮ; ಆರ್‌ಟಿಒ ಅಧಿಕಾರಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಕಳವಳಕಾರಿ ಬೆಳವಣಿಗೆಯಲ್ಲಿ, ಆಟೋ-ರಿಕ್ಷಾ ಪರ್ಮಿಟ್ ಪರಿಶೀಲನೆಗೆ ಮರಾಠಿ ಜ್ಞಾನವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತವಾಗಿದ್ದು, ಇದರಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿ...

‘ನಾನು ಪ್ರೀತಿಯಲ್ಲಿ ನಂಬಿಕೆ ಇಡುತ್ತೇನೆ, ಬುಲ್ಡೋಜರ್‌ ರಾಜಕೀಯದಲ್ಲಿ ಅಲ್ಲ’: ಯುಪಿ ಮಾದರಿ ವಿವಾದದ ನಡುವೆ ಯೋಗಿ ವಿರುದ್ಧ ಮಮತಾ ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದಾಳಿ ನಡೆಸಿದ್ದಾರೆ. ಅವರು ಬುಲ್ಡೋಜರ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ...

ಬಿಹಾರ| ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಅಣಿಯಾದ ನಿತೀಶ್ ಕುಮಾರ್ : ಸಂಪುಟ ವಿಸರ್ಜನೆಗೆ ಶಿಫಾರಸು

ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ತೀವ್ರಗೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಣಿಯಾಗಿದ್ದು, ಅದಕ್ಕೂ ಮೊದಲು ಸಚಿವ ಸಂಪುಟ ವಿಸರ್ಜಿಸಲು ಅವರು ಶಿಫಾರಸು ಮಾಡಿದ್ದಾರೆ....

‘ರಾತ್ರೋರಾತ್ರಿ ಒಪ್ಪಂದ ಸಾಧ್ಯವಿಲ್ಲ’: ಪಶ್ಚಿಮ ಏಷ್ಯಾ ಯುದ್ಧದ ಕುರಿತು ನಿರಂತರ ಮಾತುಕತೆಗೆ ವಿಶ್ವಸಂಸ್ಥೆ ಒತ್ತಾಯ

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದ್ದಾರೆ. "ಒಂದು ಒಪ್ಪಂದವನ್ನು ರಾತ್ರೋರಾತ್ರಿ ತಲುಪಲು ಸಾಧ್ಯವಿಲ್ಲ" ಎಂದು ಒತ್ತಿ ಹೇಳಿದ ಅವರು ಪಶ್ಚಿಮ...