Homeಅಂಕಣಗಳುಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

ಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

- Advertisement -
- Advertisement -

ಹೊಸ ವರ್ಷದ ಮೊದಲ ದಿನದಂದು ಪರಿಸರ-ವಿಜ್ಞಾನದ ಸಂಗತಿಗಳನ್ನು ಬೆರೆಸಿ ಕಥೆಗಳನ್ನು ಬರೆಯುವ ಜನಪ್ರಿಯ ಕಾದಂಬರಿಕಾರ ಗಣೇಶಯ್ಯನವರ ಪುಸ್ತಕಗಳ ಬಿಡುಗಡೆಯಲ್ಲಿ ಮತ್ತೋರ್ವ ಜನಪ್ರಿಯ ಕಥೆಗಾರ ಜೋಗಿ (ಗಿರೀಶ್ ರಾವ್) ಆಡಿದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ. ’ಸಾಹಿತ್ಯ ಸಮ್ಮೇಳನದಂತಹ ವೇದಿಕೆಗಳಲ್ಲಿ ಜಾತಿ ಪ್ರಾತಿನಿಧ್ಯದ ಪ್ರಶ್ನೆ ವ್ಯರ್ಥ ವಾಗ್ವಾದ. ಸಾಹಿತ್ಯದಲ್ಲಿ ನಮ್ಮ ಜಾತಿಯವರು ಎಷ್ಟಿದ್ದೀವಿ ಅಂತ ನೋಡ್ತೀವಿ; ಜ್ಞಾನ ನೋಡಲ್ಲ. ಮೊದಲಿದು ರಾಜಕಾರಣದಲ್ಲಿತ್ತು. ಅಲ್ಲಿದ್ದ ಜಾತಿವಾರು ವಿಂಗಡಣೆ ಈಗ ರಾಜಕೀಯಕ್ಕೆ ಬಂದುಬಿಟ್ಟಿದೆ. ಜಾತಿ ನೆಲೆಯಿಂದ ನೋಡುವುದು ಸುಳ್ಳು ವಾಗ್ವಾದಗಳನ್ನು ಹುಟ್ಟುಹಾಕುತ್ತೆ. ಈ ವಾಗ್ವಾದಗಳಲ್ಲಿ ಹುರುಳಿರುವುದಿಲ್ಲ. ಅದರಿಂದ ನಮಗೇನೂ ಸಿಕ್ಕುವುದಿಲ್ಲ. ಕೃತಿಯ ಕಾರಣಕ್ಕೆ ಯೋಗ್ಯತೆಯನ್ನು ಅಳೆದು ನ್ಯಾಯ ಸಲ್ಲಿಸಬೇಕು. ಆಗ ಯೋಚಿಸುವವನ ಬುದ್ಧಿಶಕ್ತಿಗೆ ಕೆಲಸ ಕೊಟ್ಟಂತೆ ಆಗುತ್ತದೆ’ ಹೀಗೆಲ್ಲಾ ಮಾತಾಡ್ತಾ ಪ್ರಾತಿನಿಧ್ಯದ ಪ್ರಶ್ನೆಗಳು ಆಳದ ಚಿಂತನೆಗಳಲ್ಲ ಬದಲಾಗಿ ಮೇಲ್ಮಟ್ಟದ ಚಿಂತನೆಗಳು ಎಂದು ಹೀಗಳೆದಿದ್ದಾರೆ. ಇಡೀ ವಿಶ್ವ ಪ್ರಾತಿನಿಧ್ಯದ ಪ್ರಶ್ನೆಗಳನ್ನು ಎತ್ತಿಕೊಂಡು ಚರ್ಚಿಸುತ್ತಿರುವಾಗ, ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಪ್ರಾತಿನಿಧ್ಯದ ಸಮಸ್ಯೆಗಳನ್ನು ಸರಿಪಡಿಸಲು ಅಧ್ಯಯನಗಳನ್ನು ನಡೆಸುತ್ತಿರುವಾಗ, ಕರ್ನಾಟಕದಲ್ಲಿ ಜೋಗಿಯಂತಹ ಜನಪ್ರಿಯ ಲೇಖಕ-ಪತ್ರಕರ್ತರಿಗೆ ಇದು ವ್ಯರ್ಥ ವಾಗ್ವಾದದಂತೆ ಕಾಣುವುದು ಏಕೆ? ಪ್ರಿವಿಲೆಜ್ ಸಮುದಾಯದಿಂದ ಬಂದಂತಹ ಇಂತಹ ಬರಹಗಾರರು ಸಮಾಜದ ಸಮಸ್ಯೆಗಳಿಗೆ ಬೆನ್ನುತಿರುಗಿಸಿ ತಮ್ಮದೇ ಲೋಕದಲ್ಲಿ ಮುಳುಗಿರುವ ಸಂಗತಿ ಮಾತ್ರವೇ ಇದು?

ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಯನ ಮತ್ತು ವರದಿಗಳನ್ನು ಪ್ರಕಟಿಸುವ ಬ್ರಿಟಿಷ್ ಮೂಲದ ’ನೇಚರ್’ ಜರ್ನಲ್ ಇತ್ತೀಚೆಗೆ “ಹೇಗೆ ಭಾರತೀಯ ಜಾತಿ ವ್ಯವಸ್ಥೆ ವಿಜ್ಞಾನದಲ್ಲಿ ವೈವಿಧ್ಯತೆಯನ್ನು ನಿರ್ಬಂಧಿಸುತ್ತದೆ- ಆರು ಚಾರ್ಟ್‌ಗಳಲ್ಲಿ” ಎಂಬ ಅಧ್ಯಯನಪೂರ್ಣ ಬರಹವನ್ನು ಪ್ರಕಟಿಸಿತು. ಭಾರತದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ದಲಿತರು ಮತ್ತು ಆದಿವಾಸಿಗಳ ಪ್ರಾತಿನಿಧ್ಯದಲ್ಲಿ ಇರುವ ಕೊರತೆಯನ್ನು ಅಂಕಿಅಂಶಗಳ ಮೂಲಕ ಬಿಚ್ಚಿಟ್ಟಿತು. ಪ್ರೊಫೆಸರ್‌ಗಳು ಮತ್ತು ವಿಜ್ಞಾನಿಗಳ ಹುದ್ದೆಗಳಲ್ಲಂತೂ ದಲಿತ, ಆದಿವಾಸಿ ಮತ್ತು ಹಿಂದುಳಿದವರ ಸಂಖ್ಯೆ 2%-5% ಮಾತ್ರ. ಈ ಪ್ರಾತಿನಿಧ್ಯದ ಕೊರತೆಯಿಂದ ಈ ದೇಶದ ವಿಜ್ಞಾನ ಕ್ಷೇತ್ರದಲ್ಲಿ ಏನಾಗಿದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ವಿಜ್ಞಾನ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದೇ ದೊಡ್ಡದಾದ ಅಥವಾ ಮನುಕುಲವನ್ನು ಬದಲಾಯಿಸಿದ ಬೆಳವಣಿಗೆ ಈ ದೇಶದ ವಿಜ್ಞಾನ ಸಂಸ್ಥೆಗಳಿಂದ ಹೊರಬಂದಿದ್ದು ಇಲ್ಲವೇಇಲ್ಲವೆನ್ನುವಷ್ಟು ವಿರಳ. ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ ವಿಭಾಗದಲ್ಲಿ ಆಯಾ ವರ್ಷ ನಡೆಯುವ ಬಹುಮುಖ್ಯ ಸಂಶೋಧನೆಗಳಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆಗೈದವರಿಗೆ ಈ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ ದೊರಕಿರುವುದನ್ನು ಎಣಿಸಲು ಬೆರೆಳೆಣಿಕೆಯ ಅಗತ್ಯವೂ ಇಲ್ಲ. ವಿವಿಧ ಜ್ಞಾನಕ್ಷೇತ್ರಗಳಲ್ಲಿ ಪರಿಣಿತರಾಗಿದ್ದ ಸಮುದಾಯಗಳನ್ನು ಕಡೆಗಣಿಸಿ ಮುಂದುವರಿದ ವಿಜ್ಞಾನ ಕ್ಷೇತ್ರದ ಬಾಳು ಇದು. ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಪಶ್ಚಿಮ ದೇಶಗಳಿಂದ ಸಿಕ್ಕುವ ಕೆಲಸಗಳಿಗೆ ಬಾಡಿಶಾಪಿಂಗ್ ಮಾಡುವ ಸಂಸ್ಥೆಗಳನ್ನು ಇಲ್ಲಿ ಕಟ್ಟಲಾಗಿದೆಯೇ ಹೊರತು, ಇಂಡಿಜೀನಸ್ ಎನ್ನುವ ತಂತ್ರಜ್ಞಾನ ಭಾರತದಿಂದ ಬೆಳೆದುಬಂದಿದೆಯೇ? ಇಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ವಿಜ್ಞಾನ ಕ್ಷೇತ್ರದಲ್ಲಿಯೂ ಜಾತಿ ಸಮುದಾಯಗಳ ಪ್ರಾತಿನಿಧ್ಯ ಏಕೆ ಬೇಕು? ಜ್ಞಾನವನ್ನು ಹುಡುಕೋಣ ಬನ್ನಿ ಎಂದು ಬೋಧನೆ ನೀಡುವ ಜೋಗಿಗಳ ಸಂಖ್ಯೆ ಇಲ್ಲಿಯೂ ಕಡಿಮೆಯೇನಿಲ್ಲ!

ಭಾರತದ ಮತ್ತು ಕರ್ನಾಟಕದ ಪತ್ರಿಕೋದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ. ಮಾಧ್ಯಮ ಕ್ಷೇತ್ರಗಳಲ್ಲಿ ಸಂಪಾದಕರು ಯಾವ ಸಮುದಾಯದಿಂದ ಬಂದವರು ಎಂದು ಹುಡುಕುತ್ತಾ ಹೋದರೆ 90%ಗಿಂತಲೂ ಹೆಚ್ಚು ಜನ 3% ಜನಸಂಖ್ಯೆಯ ಸಮುದಾಯಕ್ಕೆ ಸೇರಿದವರು ಎಂಬುದು ಅಚ್ಚರಿಯಾಗೇನೂ ಉಳಿದಿಲ್ಲ. ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರಗಳು ಒಂದಕ್ಕೊಂದು ಬೆಸೆದುಕೊಂಡಿರುವಂತಹವು. ಮಾಧ್ಯಮ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಸಮುದಾಯದ ವ್ಯಕ್ತಿಗಳಿಂದ ಸಾಹಿತ್ಯ ಕ್ಷೇತ್ರದ ಅದೇ ಸಮುದಾಯದ ವ್ಯಕ್ತಿಗಳು ವಿಜೃಂಭಿಸುವುದು ಅಲಿಖಿತ ಒಪ್ಪಂದ. ಹೀಗೆ ಕರ್ನಾಟಕದಲ್ಲಿಯೂ ಒಂದೇ ಸಮುದಾಯದ ಹೆಚ್ಚು ಸಾಹಿತಿಗಳು ಪಾರಮ್ಯ ಗಳಿಸಿದರು. ದೇವರಾಜ ಅರಸರ ಕಾಲಘಟ್ಟದಲ್ಲಿ ಆದ ರಾಜಕೀಯ ಬೆಳವಣಿಗೆ ಮಾತ್ರ ಸಾಹಿತ್ಯದಲ್ಲಿ ದಲಿತ ಮತ್ತು ಶೂದ್ರ ಸಂವೇದನೆಗೆ ಸ್ವಲ್ಪ ಅವಕಾಶ ಕೊಟ್ಟಿತು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಲಂಕೇಶ್, ತೇಜಸ್ವಿ, ಚಂಪಾ ಮುಂತಾದ ದಲಿತ ಹಾಗೂ ಶೂದ್ರ ಸಾಹಿತಿಗಳಿಂದ (ಕುವೆಂಪು ಇವರೆಲ್ಲರಿಗೂ ಪೂರ್ವದಲ್ಲಿ ಇಂತಹ ಸಂವೇದನೆಗೆ ಕಾರಣರಾಗಿದ್ದರು) ಕನ್ನಡ ಸಾಹಿತ್ಯ ವೈವಿಧ್ಯಮಯವೂ, ಜನಪರವೂ ಆಗಿದ್ದು ಇತಿಹಾಸ. ಈ ಇತಿಹಾಸದ ಬಳವಳಿ ಎಂಬಂತೆ ಇಂದಿನ ಯುವಜನತೆ ಎಲ್ಲ ಕ್ಷೇತ್ರದಲ್ಲಿಯೂ ಎಲ್ಲ ಸಮುದಾಯಗಳಿಗೂ ಸರಿಯಾದ ಪ್ರಾತಿನಿಧ್ಯದ ಬೇಡಿಕೆಯಿಡುತ್ತಿದೆ. ಇದು ಹಲವರಿಗೆ ನುಂಗಲಾರದ ತುತ್ತಾಗಿದೆ.

ಇಂದು ರಾಜಕೀಯವೂ ಬಹುಸಂಖ್ಯಾತ ಪ್ರಭುತ್ವದ ಸುಪರ್ದಿಗೆ ಹೊರಳಿರುವಾಗ, ಪ್ರತಿಗಾಮಿ ಸಾಹಿತಿಗಳು ಮತ್ತೆ ತಮ್ಮ ದನಿಯನ್ನು ಜೋರುಮಾಡುತ್ತಿದ್ದಾರೆ. ಇದು ಈ ಸಾಹಿತಿಗಳ ಅಜ್ಞಾನದ ಪ್ರದರ್ಶನ ಮಾತ್ರವಾಗಿರದೆ, ಇಲ್ಲಿಯವರೆಗೆ ಸಾಧಿಸಲಾಗಿರುವ ತುಸು ಪ್ರಗತಿಗೂ ಗೆದ್ದಲು ಹಿಡಿಸುವ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ್ಯ ಮತ್ತು ಪ್ರಾತಿನಿಧ್ಯ ಎಂಬ ಐಡಿಯಾಗಳ ನಡುವಿನ ಸಂಘರ್ಷ ದಿನೇದಿನೇ ತೀವ್ರವಾಗುತ್ತಿದೆ. ಪ್ರಗತಿಪರವಾದ ಪ್ರಾತಿನಿಧ್ಯದ ಐಡಿಯಾದ ಕೂಗು ಬ್ರಾಹ್ಮಣ್ಯದ ಪ್ರತಿಗಾಮಿಗಳಿಗೆ ಕೇಳಿಸಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...