Homeಅಂಕಣಗಳುಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

ಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

- Advertisement -
- Advertisement -

ಹೊಸ ವರ್ಷದ ಮೊದಲ ದಿನದಂದು ಪರಿಸರ-ವಿಜ್ಞಾನದ ಸಂಗತಿಗಳನ್ನು ಬೆರೆಸಿ ಕಥೆಗಳನ್ನು ಬರೆಯುವ ಜನಪ್ರಿಯ ಕಾದಂಬರಿಕಾರ ಗಣೇಶಯ್ಯನವರ ಪುಸ್ತಕಗಳ ಬಿಡುಗಡೆಯಲ್ಲಿ ಮತ್ತೋರ್ವ ಜನಪ್ರಿಯ ಕಥೆಗಾರ ಜೋಗಿ (ಗಿರೀಶ್ ರಾವ್) ಆಡಿದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ. ’ಸಾಹಿತ್ಯ ಸಮ್ಮೇಳನದಂತಹ ವೇದಿಕೆಗಳಲ್ಲಿ ಜಾತಿ ಪ್ರಾತಿನಿಧ್ಯದ ಪ್ರಶ್ನೆ ವ್ಯರ್ಥ ವಾಗ್ವಾದ. ಸಾಹಿತ್ಯದಲ್ಲಿ ನಮ್ಮ ಜಾತಿಯವರು ಎಷ್ಟಿದ್ದೀವಿ ಅಂತ ನೋಡ್ತೀವಿ; ಜ್ಞಾನ ನೋಡಲ್ಲ. ಮೊದಲಿದು ರಾಜಕಾರಣದಲ್ಲಿತ್ತು. ಅಲ್ಲಿದ್ದ ಜಾತಿವಾರು ವಿಂಗಡಣೆ ಈಗ ರಾಜಕೀಯಕ್ಕೆ ಬಂದುಬಿಟ್ಟಿದೆ. ಜಾತಿ ನೆಲೆಯಿಂದ ನೋಡುವುದು ಸುಳ್ಳು ವಾಗ್ವಾದಗಳನ್ನು ಹುಟ್ಟುಹಾಕುತ್ತೆ. ಈ ವಾಗ್ವಾದಗಳಲ್ಲಿ ಹುರುಳಿರುವುದಿಲ್ಲ. ಅದರಿಂದ ನಮಗೇನೂ ಸಿಕ್ಕುವುದಿಲ್ಲ. ಕೃತಿಯ ಕಾರಣಕ್ಕೆ ಯೋಗ್ಯತೆಯನ್ನು ಅಳೆದು ನ್ಯಾಯ ಸಲ್ಲಿಸಬೇಕು. ಆಗ ಯೋಚಿಸುವವನ ಬುದ್ಧಿಶಕ್ತಿಗೆ ಕೆಲಸ ಕೊಟ್ಟಂತೆ ಆಗುತ್ತದೆ’ ಹೀಗೆಲ್ಲಾ ಮಾತಾಡ್ತಾ ಪ್ರಾತಿನಿಧ್ಯದ ಪ್ರಶ್ನೆಗಳು ಆಳದ ಚಿಂತನೆಗಳಲ್ಲ ಬದಲಾಗಿ ಮೇಲ್ಮಟ್ಟದ ಚಿಂತನೆಗಳು ಎಂದು ಹೀಗಳೆದಿದ್ದಾರೆ. ಇಡೀ ವಿಶ್ವ ಪ್ರಾತಿನಿಧ್ಯದ ಪ್ರಶ್ನೆಗಳನ್ನು ಎತ್ತಿಕೊಂಡು ಚರ್ಚಿಸುತ್ತಿರುವಾಗ, ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಪ್ರಾತಿನಿಧ್ಯದ ಸಮಸ್ಯೆಗಳನ್ನು ಸರಿಪಡಿಸಲು ಅಧ್ಯಯನಗಳನ್ನು ನಡೆಸುತ್ತಿರುವಾಗ, ಕರ್ನಾಟಕದಲ್ಲಿ ಜೋಗಿಯಂತಹ ಜನಪ್ರಿಯ ಲೇಖಕ-ಪತ್ರಕರ್ತರಿಗೆ ಇದು ವ್ಯರ್ಥ ವಾಗ್ವಾದದಂತೆ ಕಾಣುವುದು ಏಕೆ? ಪ್ರಿವಿಲೆಜ್ ಸಮುದಾಯದಿಂದ ಬಂದಂತಹ ಇಂತಹ ಬರಹಗಾರರು ಸಮಾಜದ ಸಮಸ್ಯೆಗಳಿಗೆ ಬೆನ್ನುತಿರುಗಿಸಿ ತಮ್ಮದೇ ಲೋಕದಲ್ಲಿ ಮುಳುಗಿರುವ ಸಂಗತಿ ಮಾತ್ರವೇ ಇದು?

ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಯನ ಮತ್ತು ವರದಿಗಳನ್ನು ಪ್ರಕಟಿಸುವ ಬ್ರಿಟಿಷ್ ಮೂಲದ ’ನೇಚರ್’ ಜರ್ನಲ್ ಇತ್ತೀಚೆಗೆ “ಹೇಗೆ ಭಾರತೀಯ ಜಾತಿ ವ್ಯವಸ್ಥೆ ವಿಜ್ಞಾನದಲ್ಲಿ ವೈವಿಧ್ಯತೆಯನ್ನು ನಿರ್ಬಂಧಿಸುತ್ತದೆ- ಆರು ಚಾರ್ಟ್‌ಗಳಲ್ಲಿ” ಎಂಬ ಅಧ್ಯಯನಪೂರ್ಣ ಬರಹವನ್ನು ಪ್ರಕಟಿಸಿತು. ಭಾರತದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ದಲಿತರು ಮತ್ತು ಆದಿವಾಸಿಗಳ ಪ್ರಾತಿನಿಧ್ಯದಲ್ಲಿ ಇರುವ ಕೊರತೆಯನ್ನು ಅಂಕಿಅಂಶಗಳ ಮೂಲಕ ಬಿಚ್ಚಿಟ್ಟಿತು. ಪ್ರೊಫೆಸರ್‌ಗಳು ಮತ್ತು ವಿಜ್ಞಾನಿಗಳ ಹುದ್ದೆಗಳಲ್ಲಂತೂ ದಲಿತ, ಆದಿವಾಸಿ ಮತ್ತು ಹಿಂದುಳಿದವರ ಸಂಖ್ಯೆ 2%-5% ಮಾತ್ರ. ಈ ಪ್ರಾತಿನಿಧ್ಯದ ಕೊರತೆಯಿಂದ ಈ ದೇಶದ ವಿಜ್ಞಾನ ಕ್ಷೇತ್ರದಲ್ಲಿ ಏನಾಗಿದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ವಿಜ್ಞಾನ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದೇ ದೊಡ್ಡದಾದ ಅಥವಾ ಮನುಕುಲವನ್ನು ಬದಲಾಯಿಸಿದ ಬೆಳವಣಿಗೆ ಈ ದೇಶದ ವಿಜ್ಞಾನ ಸಂಸ್ಥೆಗಳಿಂದ ಹೊರಬಂದಿದ್ದು ಇಲ್ಲವೇಇಲ್ಲವೆನ್ನುವಷ್ಟು ವಿರಳ. ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ ವಿಭಾಗದಲ್ಲಿ ಆಯಾ ವರ್ಷ ನಡೆಯುವ ಬಹುಮುಖ್ಯ ಸಂಶೋಧನೆಗಳಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆಗೈದವರಿಗೆ ಈ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ ದೊರಕಿರುವುದನ್ನು ಎಣಿಸಲು ಬೆರೆಳೆಣಿಕೆಯ ಅಗತ್ಯವೂ ಇಲ್ಲ. ವಿವಿಧ ಜ್ಞಾನಕ್ಷೇತ್ರಗಳಲ್ಲಿ ಪರಿಣಿತರಾಗಿದ್ದ ಸಮುದಾಯಗಳನ್ನು ಕಡೆಗಣಿಸಿ ಮುಂದುವರಿದ ವಿಜ್ಞಾನ ಕ್ಷೇತ್ರದ ಬಾಳು ಇದು. ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಪಶ್ಚಿಮ ದೇಶಗಳಿಂದ ಸಿಕ್ಕುವ ಕೆಲಸಗಳಿಗೆ ಬಾಡಿಶಾಪಿಂಗ್ ಮಾಡುವ ಸಂಸ್ಥೆಗಳನ್ನು ಇಲ್ಲಿ ಕಟ್ಟಲಾಗಿದೆಯೇ ಹೊರತು, ಇಂಡಿಜೀನಸ್ ಎನ್ನುವ ತಂತ್ರಜ್ಞಾನ ಭಾರತದಿಂದ ಬೆಳೆದುಬಂದಿದೆಯೇ? ಇಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ವಿಜ್ಞಾನ ಕ್ಷೇತ್ರದಲ್ಲಿಯೂ ಜಾತಿ ಸಮುದಾಯಗಳ ಪ್ರಾತಿನಿಧ್ಯ ಏಕೆ ಬೇಕು? ಜ್ಞಾನವನ್ನು ಹುಡುಕೋಣ ಬನ್ನಿ ಎಂದು ಬೋಧನೆ ನೀಡುವ ಜೋಗಿಗಳ ಸಂಖ್ಯೆ ಇಲ್ಲಿಯೂ ಕಡಿಮೆಯೇನಿಲ್ಲ!

ಭಾರತದ ಮತ್ತು ಕರ್ನಾಟಕದ ಪತ್ರಿಕೋದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ. ಮಾಧ್ಯಮ ಕ್ಷೇತ್ರಗಳಲ್ಲಿ ಸಂಪಾದಕರು ಯಾವ ಸಮುದಾಯದಿಂದ ಬಂದವರು ಎಂದು ಹುಡುಕುತ್ತಾ ಹೋದರೆ 90%ಗಿಂತಲೂ ಹೆಚ್ಚು ಜನ 3% ಜನಸಂಖ್ಯೆಯ ಸಮುದಾಯಕ್ಕೆ ಸೇರಿದವರು ಎಂಬುದು ಅಚ್ಚರಿಯಾಗೇನೂ ಉಳಿದಿಲ್ಲ. ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರಗಳು ಒಂದಕ್ಕೊಂದು ಬೆಸೆದುಕೊಂಡಿರುವಂತಹವು. ಮಾಧ್ಯಮ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಸಮುದಾಯದ ವ್ಯಕ್ತಿಗಳಿಂದ ಸಾಹಿತ್ಯ ಕ್ಷೇತ್ರದ ಅದೇ ಸಮುದಾಯದ ವ್ಯಕ್ತಿಗಳು ವಿಜೃಂಭಿಸುವುದು ಅಲಿಖಿತ ಒಪ್ಪಂದ. ಹೀಗೆ ಕರ್ನಾಟಕದಲ್ಲಿಯೂ ಒಂದೇ ಸಮುದಾಯದ ಹೆಚ್ಚು ಸಾಹಿತಿಗಳು ಪಾರಮ್ಯ ಗಳಿಸಿದರು. ದೇವರಾಜ ಅರಸರ ಕಾಲಘಟ್ಟದಲ್ಲಿ ಆದ ರಾಜಕೀಯ ಬೆಳವಣಿಗೆ ಮಾತ್ರ ಸಾಹಿತ್ಯದಲ್ಲಿ ದಲಿತ ಮತ್ತು ಶೂದ್ರ ಸಂವೇದನೆಗೆ ಸ್ವಲ್ಪ ಅವಕಾಶ ಕೊಟ್ಟಿತು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಲಂಕೇಶ್, ತೇಜಸ್ವಿ, ಚಂಪಾ ಮುಂತಾದ ದಲಿತ ಹಾಗೂ ಶೂದ್ರ ಸಾಹಿತಿಗಳಿಂದ (ಕುವೆಂಪು ಇವರೆಲ್ಲರಿಗೂ ಪೂರ್ವದಲ್ಲಿ ಇಂತಹ ಸಂವೇದನೆಗೆ ಕಾರಣರಾಗಿದ್ದರು) ಕನ್ನಡ ಸಾಹಿತ್ಯ ವೈವಿಧ್ಯಮಯವೂ, ಜನಪರವೂ ಆಗಿದ್ದು ಇತಿಹಾಸ. ಈ ಇತಿಹಾಸದ ಬಳವಳಿ ಎಂಬಂತೆ ಇಂದಿನ ಯುವಜನತೆ ಎಲ್ಲ ಕ್ಷೇತ್ರದಲ್ಲಿಯೂ ಎಲ್ಲ ಸಮುದಾಯಗಳಿಗೂ ಸರಿಯಾದ ಪ್ರಾತಿನಿಧ್ಯದ ಬೇಡಿಕೆಯಿಡುತ್ತಿದೆ. ಇದು ಹಲವರಿಗೆ ನುಂಗಲಾರದ ತುತ್ತಾಗಿದೆ.

ಇಂದು ರಾಜಕೀಯವೂ ಬಹುಸಂಖ್ಯಾತ ಪ್ರಭುತ್ವದ ಸುಪರ್ದಿಗೆ ಹೊರಳಿರುವಾಗ, ಪ್ರತಿಗಾಮಿ ಸಾಹಿತಿಗಳು ಮತ್ತೆ ತಮ್ಮ ದನಿಯನ್ನು ಜೋರುಮಾಡುತ್ತಿದ್ದಾರೆ. ಇದು ಈ ಸಾಹಿತಿಗಳ ಅಜ್ಞಾನದ ಪ್ರದರ್ಶನ ಮಾತ್ರವಾಗಿರದೆ, ಇಲ್ಲಿಯವರೆಗೆ ಸಾಧಿಸಲಾಗಿರುವ ತುಸು ಪ್ರಗತಿಗೂ ಗೆದ್ದಲು ಹಿಡಿಸುವ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ್ಯ ಮತ್ತು ಪ್ರಾತಿನಿಧ್ಯ ಎಂಬ ಐಡಿಯಾಗಳ ನಡುವಿನ ಸಂಘರ್ಷ ದಿನೇದಿನೇ ತೀವ್ರವಾಗುತ್ತಿದೆ. ಪ್ರಗತಿಪರವಾದ ಪ್ರಾತಿನಿಧ್ಯದ ಐಡಿಯಾದ ಕೂಗು ಬ್ರಾಹ್ಮಣ್ಯದ ಪ್ರತಿಗಾಮಿಗಳಿಗೆ ಕೇಳಿಸಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...