Homeಕರ್ನಾಟಕವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು

- Advertisement -
- Advertisement -

| ಟೆಲೆಕ್ಸ್ ರವಿಕುಮಾರ್ |

ರೋಹಿತ್ ಚಕ್ರತೀರ್ಥ ಅವರಿಗೆ ನಮಸ್ಕಾರಗಳು
ನಿಮ್ಮ ಲೇಖನ ‘ಮೋದಿ ಬಿರುಗಾಳಿಗೆ ಬೆತ್ತಲಾಗಿದ್ದಾರೆ ಬುದ್ದಿಜೀವಿಗಳು’ ಓದಿದೆ. ಸ್ವಲ್ಪ ನಿರಾಶೆಯಾಯಿತು. ನರೇಂದ್ರ ಮೋದಿ ಅವರ ‘ಮರುವಿಕ್ರಮ’ವನ್ನು ವಿಶ್ಲೇಷಿಸುವಾಗ ಇದಕ್ಕೆ ಕಾರಣವಾದ ಜನಪರ ಯೋಜನೆಗಳು, ರಾಜಕೀಯ ಧೋರಣೆ, ಆಡಳಿತಾತ್ಮಕ ಅಂಶಗಳು ಮತ್ತು ರಾಜಕೀಯ ವಿರೋಧಿಗಳ ಎಲ್ಲಾ ತಂತ್ರ, ಕುತಂತ್ರಗಳನ್ನು ಮೋದಿ ಹೇಗೆಲ್ಲಾ ಹಿಮ್ಮೆಟಿಸಿ ‘ವಿಜಯದ ಪರಾಕ್ರಮ’ ಮೆರೆದರು ಎಂಬುದನ್ನು ವಿಶ್ಲೇಷಣಾತ್ಮಕವಾಗಿ ಬರೆಯಬಹುದೆಂದು ನಿರೀಕ್ಷಿಸಿದ್ದ ನನಗೆ ಖಂಡಿತ ನಿರಾಶೆಯಾಯಿತು.

ನಿಮ್ಮ ‘ವಿದ್ವತ್ತು ಮತ್ತು ಒಳನೋಟ’ ಭಾರತದ ವರ್ತಮಾನದ ರಾಜಕೀಯ ನಾಗಾಲೋಟವನ್ನು ಸೈದ್ಧಾಂತಿಕ ಎದುರಾಳಿಗಳನ್ನು ಹೀಯಾಳಿಸುವಲ್ಲಿ ವ್ಯರ್ಥವಾಗಿ ಹೋಯಿತೇನೋ ಎಂದೆನಿಸುತ್ತಿದೆ. ಈ ಕಾರಣಕ್ಕಾಗಿಯೇ ನನಗೆ ನಿರಾಶೆಯಾಯಿತು ಎಂದು ಮೊದಲೆ ಹೇಳಿದ್ದು. ಮೋದಿ ಅವರ ವಿಜಯಯಾತ್ರೆಯನ್ನು ಜನಾಭಿಪ್ರಾಯಗಳಿಂದ ಕಟ್ಟಿಹಾಕುವಲ್ಲಿ ಅವರ ಸೈದ್ಧಾಂತಿಕ ಮತ್ತು ರಾಜಕೀಯ ಎದುರಾಳಿಗಳು ವಿಫಲರಾಗಿದ್ದಾರೆ ಎಂಬುದನ್ನು ನೀವು ಹೇಳುವುದಕ್ಕಿಂತಲೂ ಮಗತಟ್ಟೆಗಳಲ್ಲಿ ಕಂಡು ಕರಗಿದೆ.

ಆಡಳಿತ ವಿರೋಧಿ ಅಲೆಯನ್ನು ಹುಟ್ಟುಹಾಕುವಲ್ಲಿ ಪ್ರತಿಪಕ್ಷಗಳಾಗಲಿ, ಜನಾಭಿಪ್ರಾಯವನ್ನು ರೂಪಿಸುವಲ್ಲಿ ನೀವು ಗುರುತಿಸಲ್ಪಟ್ಟ ಬುದ್ದಿಜೀವಿಗಳಾಗಲಿ ವಿಫಲರಾಗಿದ್ದಾರೆ ನಿಜ. ಬಹುಶಃ ನಾನು ತಿಳಿದಂತೆ ಸುಳ್ಳು ಕಲೆ ಇವರಿಗೆ ಗೊತ್ತಿಲ್ಲದ ಕಾರಣ ಈ ಹಿನ್ನಡೆ ಅನುಭವಿಸಬೇಕಾಗಿ ನಿಮ್ಮ ನುಡಿ ನಾಲಿಗೆಗೆ ಈಡಾಗಬೇಕಾಗಿ ಬಂದಿದೆ. ನನ್ನ ಪ್ರಕಾರ ನರೇಂದ್ರ ಮೋದಿ ಅವರನ್ನು ಬೆತ್ತಲು (ವಿಷಯಾಧಾರಿತವಾಗಿ) ಮಾಡುವಲ್ಲಿ ಈ ನಾಡಿನ ಬುದ್ದಿಜೀವಿಗಳಿಗೆ ಸಾಧ್ಯವೆ ಆಗಲಿಲ್ಲ. ಇದೆಲ್ಲವನ್ನೂ ಮೆಟ್ಟಿ ಮೋದಿ ವಿಜಯಸಾಮ್ರಾಟರಾಗಿದ್ದು ಹೇಗೆ ಎಂಬುದನ್ನು ತಿಳಿಯಲು ನನಗಿನ್ನೂ ಕುತೂಹಲವಿದೆ.

ಮೋದಿ ಅವರನ್ನು ಸೈದ್ದಾಂತಿಕ ಕಾರಣಕ್ಕೆ, ಆಡಳಿತ ಧೋರಣೆ ಕಾರಣಕ್ಕೆ ವಿರೋಧಿಸಿದವರನ್ನು ಗುರಿಯಾಗಿಸಿಕೊಂಡ ನಿಮ್ಮ ಬರಹ ಒಂದು ಸೀಮಿತ ಚೌಕಟ್ಟಿನಲ್ಲಿ ನರಳುವಂತಿದೆ. ಮೋದಿ ಅವರು ಗೆದ್ದಾಗಿದೆ ನಿಜ, ಜನಮತವನ್ನು ಪ್ರಜಾಪ್ರಭುತ್ವ ಒಪ್ಪುವ ಎಲ್ಲರೂ ಗೌರವಿಸಲೇಬೇಕು. ಆದರೆ ಅವರ ಗೆಲುವನ್ನು ಇತರರ ಸೋಲಿಗೆ ಹೋಲಿಸುವಾಗ ಒಂದು ಘನತೆಯ ಸಂವೇದನೆ ಇಲ್ಲದೇ ಹೋದರೆ ಅದೊಂದು ‘ಅಸಾದಿಯ ಮಾರಿ ಬೈಗುಳ’ವಾಗಿ ರಂಜಿಸಬಹುದಷ್ಟೇ. ನಿಮ್ಮ ಈ ಲೇಖನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವುಗಳಿಗೆ ತಾವು ಉತ್ತರಿಸಿದಲ್ಲಿ ನಾನು ಸೇರಿದಂತೆ ಈ ನಾಡಿನ ಬಹುತೇಕರು ಗೌರವಿಸುವ ಬುದ್ದಿಜೀವಿಗಳ, ಸಾಹಿತ್ಯ-ಸಾಂಸ್ಕೃತಿಕ ವಲಯದ ಪ್ರತಿನಿಧಿಗಳ ಕುರಿತಾದ ನನ್ನ ಅಭಿಪ್ರಾಯವನ್ನು ಮರು ವಿಮರ್ಶೆ ಮಾಡಿಕೊಳ್ಳಲು ಸಹಕಾರಿಯಾಗಬಹುದು.

ಹೆಚ್.ಎಸ್ ದೊರೆಸ್ವಾಮಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು, ಗಾಂಧಿವಾದದ ಕೊಂಡಿಯಂತೆ ಗೌರವಿಸುತ್ತಾ ಬರಲಾಗಿದೆ. ಇದು ನಿಜವೂ ಹೌದು. ಅವರನ್ನು ‘ಗಾಂಧಿವಾದಿ’ ಎಂಬ ಕಾರಣಕ್ಕೆ ನೀವು ಹಿರಿಯಜೀವದ ಹೋರಾಟವನ್ನು ಲೇವಡಿ ಮಾಡಿವಷ್ಟು ಅಸಹನೆಗೆ ನಿಮ್ಮನ್ನು ಒಡ್ಡಿಕೊಳ್ಳಲು ಹೇಗೆ ಸಾಧ್ಯವಾಯಿತು? ಗಿರೀಶ್ ಕಾರ್ನಾಡ್, ಚಂಪಾ, ಮಹಮ್ಮದ್ ಕುಂಞ, ಕುಂ.ವಿ, ಎಸ್.ಜಿ.ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ. ಹೆಚ್.ಎಸ್.ಶಿವಪ್ರಕಾಶ್, ರಾಜೇಂದ್ರ ಚೆನ್ನಿ, ವಿವೇಕ್ ಶಾನುಭಾಗ ಅವರನ್ನೆಲ್ಲಾ ನೀವೆ ನಿಮ್ಮ ಲೇಖನದಲ್ಲಿ ‘ಪ್ರಗತಿಪರಜೀವಪರ ಸಾಕ್ಷಿ ಪ್ರಜ್ಞೆ’ಗಳು ಎಂದು ಗುರುತಿಸಿದ್ದೀರ. ಹೀಗಿರುವಾಗ ಅವರೆಲ್ಲಾ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಮೋದಿ ಅವರನ್ನು ವಿರೋಧಿಸಿದ ಮಾತ್ರಕ್ಕೆ ನಿಮ್ಮ ಲೇವಡಿ ಸ್ತುತಿಗೆ ಈಡಾಗಿದ್ದು ಮಾತ್ರ ಸೋಜಿಗದ ಸಂಗತಿ.

‘ಒಂದಾನೊಂದು ಕಾಲವಿತ್ತು. ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ಶಾಲೆ-ಕಾಲೇಜುಗಳ ಭಾಷಾಪಠ್ಯದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪ್ರಶಸ್ತಿ ಸಿಕ್ಕಿದೆ ಎಂಬ ಲೆಕ್ಕದ ಮೇಲೆ ಸಾಹಿತಿಗಳ ಮೌಲ್ಯವನ್ನು ಮುಗ್ಧರಾಗಿ ಅಳೆಯುತ್ತಿದ್ದೆವು. ಕುಂವೀ, ಚಂಪಾ, ಬರಗೂರು, ಕಾರ್ನಾಡ ಎಂಬೆಲ್ಲ ಪ್ರಭೃತಿಗಳನ್ನು ನೋಡಿದರೆ ಆಹಾ ಅವರದದೆಂಥ ಉನ್ನತ ವ್ಯಕ್ತಿತ್ವ ಎಂದು ಮನಸ್ಸು ತಲೆಬಾಗುತ್ತಿತ್ತು. ಅವರು ಬರೆದದ್ದೆಲ್ಲ ಘನವಾದದ್ದೇ ಇರಬೇಕು, ಅವರ ಕತೆ-ಕವಿತೆ-ಕಾದಂಬರಿ-ನಾಟಕಗಳಲ್ಲಿ ಜೀವನದ ಪರಮ ರಹಸ್ಯಗಳೆಲ್ಲ ಅಡಗಿರಬೇಕು ಎಂದು ನಾವು ಭಾವಿಸಿದ್ದೆವು.’
ಎಂದು ಬರೆಯುವ ನಿಮ್ಮ ಗತ ನಂಬಿಕೆ ನಿಮ್ಮ ಹೊರತಾದ ಜನಸಮುದಾಯದಲ್ಲಿ ಈಗಲೂ ಸತ್ತಿಲ್ಲ. ಬಹುಶಃ ನಿಮ್ಮ ಜ್ಞಾನದ ಪರಿಧಿಯಲ್ಲಿ ಈ ಎಲ್ಲರನ್ನೂ ವಿಮರ್ಶೆಗೊಳಿಸಿದರೆ ತಪ್ಪೇನಿಲ್ಲ. ಇಲ್ಲಿ ಯಾರು ಪ್ರಶ್ನಾತೀತರಲ್ಲ. ಎಲ್ಲರೂ ವಿಮರ್ಶೆಗೆ ಒಳಪಟ್ಟು ಸೋಸಿ ಶುದ್ದರಾಗಬೇಕಾಗಿದೆ. ಆ ನಿಟ್ಟಿನಲ್ಲಿ ತಮ್ಮ ವಾದ, ವಿಚಾರಮಂಡನೆಯನ್ನು ಸ್ವಾಗತಿಸುತ್ತೇನೆ. ಆದರೆ ನೀವು ಇಲ್ಲಿ ಅವರ ವಿದ್ವತ್ತು, ಸಿದ್ಧಾಂತ ಪ್ರತಿಪಾದನೆಯಲ್ಲಿರಬಹುದಾದ ಲೋಪಗಳನ್ನು ಬಯಲು ಮಾಡದೆ ಕೇವಲ ನಿಂದನಾ ರೂಪದಲ್ಲಿ ಬೆತ್ತಲಾಗಿದ್ದಾರೆ ಎಂದು ಲೇವಡಿ ಮಾಡ ಹೊರಟಿರುವುದು ಕ್ಷುಲ್ಲಕ ತಿವಿತವಾಗಬಹುದು ಅಷ್ಟೆ. ಅದೊಂದು ಮೋದಿ ಗೆಲುವಿನ ವಿಶ್ಲೇಷಣೆ ಆಗಲಾರದು.

“ಪ್ರತಿಭಾ ನಂದಕುಮಾರ್, ಬಿ.ಟಿ. ಲಲಿತಾ ನಾಯಕ್, ಮೊಗಳ್ಳಿ ಗಣೇಶ, ಪುರುಷೋತ್ತಮ ಬಿಳಿಮಲೆ, ಜಿ. ರಾಜಶೇಖರ ಮೊದಲಾದವರೆಲ್ಲ ಆಗಿನ ಕಾಲಕ್ಕೆ ಪ್ರಶ್ನಾತೀತ ಸಾಹಿತಿಗಳು! ಇವರು ಬರೆದದ್ದನ್ನು ಕಣ್ಣಿಗೊತ್ತಿಕೊಂಡು ದೇವರ ಮನೆಯಲ್ಲಿಟ್ಟು ಪೂಜಿಸುವ ದೊಡ್ಡ ಓದುಗ ವರ್ಗವೇ ಇತ್ತು. ಇಷ್ಟಕ್ಕೂ ಇವರೆಲ್ಲ ಬರೆಯುತ್ತಿದ್ದದ್ದು ಏನಂತೀರಿ? ಕರುಳು ಕಿವುಚುವಂಥ ಬಡತನ, ಅನಕ್ಷರತೆ, ಅಸಮಾನತೆಯ ಕಣ್ಣೀರ ಕತೆಗಳು. ಹೆಣ್ಣಿನ ಮೇಲೆ ಪುರೋಹಿತಶಾಹಿಗಳು, ಬಡವರ ಮೇಲೆ ಬಂಡವಾಳಶಾಹಿಗಳು ಮಾಡುತ್ತಿದ್ದ ಕರ್ಣಕಠೋರ ಅತ್ಯಾಚಾರದ ಹಸಿಬಿಸಿ ವಿವರಗಳಿದ್ದ ಕಾವ್ಯಗಳು. ಈ ಬುದ್ಧಿವಂತರು ಬರೆದದ್ದನ್ನಷ್ಟೇ ಓದಿ ಬೆಳೆದ ನಮ್ಮಂಥ ತಿಳಿಮಿದುಳುಗಳಿಗೆ ಜಗತ್ತೆಲ್ಲ ಹೀಗೇ ಇದೆ; ಜಗತ್ತಲ್ಲಿ ಅನ್ಯಾಯ-ಅಸಮಾನತೆ ತಾಂಡವವಾಡುತ್ತಿದೆ; ಸಮಾಜದಲ್ಲಿ ಒಂದು ವರ್ಗ ಇನ್ನೊಂದು ವರ್ಗವನ್ನು ನಿತ್ಯನಿರಂತರವಾಗಿ ತುಳಿಯುತ್ತಲೇ ಇದೆ; ಹಿಂದೂ ಧರ್ಮದಲ್ಲಿರುವಷ್ಟು ಕಂದಾಚಾರ ಕಟ್ಟುಪಾಡು ಶೋಷಣೆ ಜಗತ್ತಿನ ಬೇರಾವ ಧರ್ಮ-ಜಾತಿಗಳಲ್ಲಿಲ್ಲ; ಸಮಾಜದ ಗಂಡಸರೆಲ್ಲರೂ ಸ್ತ್ರೀಯನ್ನು ಕಾಮದ ಕಣ್ಣಿಂದ ನೋಡುವುದಕ್ಕೆಂದೇ ಹುಟ್ಟಿಬಂದ ರಾಕ್ಷಸರು – ಮುಂತಾದ ಭ್ರಮೆಗಳಿದ್ದವು.

ನಾವು ಓದುತ್ತಿದ್ದ ಪ್ರಜಾವಾಣಿಯಂಥ ಪತ್ರಿಕೆಗಳು ಕೂಡ ಅದೇ ಅಭಿಪ್ರಾಯವನ್ನು ಗಟ್ಟಿ ಮಾಡುವಂತಿದ್ದವು. ಅಲ್ಲಿನ ಭಾನುವಾರದ ಪುರವಣಿಗಳಲ್ಲಿ ಕೂಡ ಮತ್ತೆ ಇದೇ ಸಾಕ್ಷಿಪ್ರಜ್ಞೆಗಳೇ ಬರೆಯುತ್ತಿದ್ದುದರಿಂದ ಜಗತ್ತಿಗಿನ್ನೊಂದು ಆಯಾಮವಿದೆ ಎಂಬುದನ್ನು ಯೋಚಿಸಲು ಅವಕಾಶವೇ ಇರಲಿಲ್ಲ’ ಇದು ನೀವೇ ಬರೆದ ನಿಮ್ಮ ಅಭಿಪ್ರಾಯ. ಇದರಲ್ಲಿ ಯಾವುದು ಬದಲಾಗಿದೆ ನೋಡಿ. ಇಂದಿಗೂ ಹೆಣ್ಣಿನ ಮೇಲೆ ಗಂಡು ಜೀವಿಯ ಅಟ್ಟಹಾಸ ನಿಂತಿಲ್ಲ. ಕಂದಾಚಾರ- ದಲಿತರ ಮೇಲಿನ ದೌರ್ಜನ್ಯ ಕೊನೆಗೊಂಡಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟಿ ರಕ್ತಪಾತ ನಡೆಸುವುದು ಇನ್ನಷ್ಟು ಮುಂದುವರೆದಿದೆ ಹೀಗಿರುವಾಗ ಯಾವುದು ಬದಲಾಗಿದೆ, ಸುಖೀ ಸಮಾಜವೊಂದು ನಿರ್ಮಾಣವಾಗಿದ್ದಾದರು ಎಲ್ಲಿ ಎಂಬುದನ್ನು ವಿವರಿಸಿದರೆ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಬಹುದು.

“ಸಂಕ್ರಾಂತಿ ನಾಟಕದಲ್ಲಿ ಕೆಳಜಾತಿಯ ಹುಡುಗನಿಗೆ ಬ್ರಾಹ್ಮಣರ ಹುಡುಗಿಯಿಂದ ಮೋಸವಾಗುವ ಸಾಧ್ಯತೆ ಇರುತ್ತದೆಯೇ ಹೊರತು ಬ್ರಾಹ್ಮಣರ ಹುಡುಗಿಗೆ ಕೆಳಜಾತಿಯ ಹುಡುಗ ಮೋಸ ಮಾಡುವ ಸಂದರ್ಭ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ! ಯಾಕೆಂದರೆ ಈ ಸಾಹಿತ್ಯ ಕೃತಿಗಳೆಲ್ಲವೂ ಒಂದು ಅಜೆಂಡಾ ಇಟ್ಟುಕೊಂಡೇ ಹೊರಡುತ್ತವೆ.” ಎಂದು ಅದರೊಳಗಿನ ‘ತಾಕಲಾಟ’, ‘ಅಜೆಂಡಾ’ ವನ್ನು ಗುರುತಿಸುವ ನೀವು ಸಮಾಜದಲ್ಲಿನ ಶತ ಶತಮಾನಗಳ ಕಾಲದಿಂದಲೂ ಈ ಜಾತಿ ತರಮದ ಸೃಷ್ಟಿಕರ್ತರು ಹೊಣೆಗಾರರು ಯಾರು ಎಂಬುದನ್ನು ಯಾಕೆ ಜಗತ್ತಿಗೆ ಸಾರಬಾರದು? ಸಾಮಾಜಿಕ ಜಾಲತಾಣದ ಪರಿಣಾಮ ಸುಳ್ಳುಗಳು ದೇಶವನ್ನು ಆಳುತ್ತಿವೆ. ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ಹೊತ್ತಿಗೆ ಸುಳ್ಳು ಮೇಲುಗೈ ಸಾಧಿಸಿ ಹೊರಟಿರುತ್ತದೆ. ಈಗ ಆಗಿರುವುದು ಇದೆ. ಈಗ ಸಾಹಿತಿಗಳು, ಪತ್ರಕರ್ತರು, ಬುದ್ದಿಜೀವಿಗಳು ಈಗ ನಿಜವಾದ ಮೋದಿ ವಿರೋಧಿಗಳು ಎಂಬ ಷರಾ ಬರೆದಿಟ್ಟು ನಿಂದನಾ ತಿರುಗಣಿಯಲ್ಲಿ ತಿರುವಿದ್ದೀರ.

ಇದನ್ನು ಓದಿ: ಎಮರ್ಜೆನ್ಸಿ ಭಟ್ಟನ ದುಷ್ಟಾಯಣ

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು ಎಂಬುದನ್ನು ಬರೆದಿದ್ದರೆ ಚೆನ್ನಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...