ಹಫ್ತಾ ಕೊಡಲಿಲ್ಲ ಎಂಬ ಕಾರಣಕ್ಕೆ ಮೀನು ವ್ಯಾಪಾರಿಯ ಮೇಲೆ ರೌಡಿಯೊಬ್ಬ ಮಚ್ಚು ಬೀಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯ ಜೈಭೀಮ್ ನಗರದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ವ್ಯಾಪಾರಿಯು ಕೂದಲೆಳೆ ಅಂತರದಲ್ಲಿ ಮಚ್ಚೇಟಿನಿಂದ ಪಾರಾಗಿರುವುದು ಸಿಸಿಕ್ಯಾಮರದಲ್ಲಿ ದಾಖಲಾಗಿದೆ.
ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬ ಬಾಣಸವಾಡಿಯಲ್ಲಿ ಮೀರು ಮಾರಾಟ ಅಂಗಡಿ ನಡೆಸುತ್ತಿದ್ದರು. ಅಲ್ಲಿಗೆ ಬಂದ ರೌಡಿಯೊಬ್ಬ ಹಫ್ತಾ ಕೊಡಲಿಲ್ಲ ಎಂದು ಓಡಿಸಿಕೊಂಡು ಬಂದು ಮಚ್ಚು ಬೀಸಿದ್ದಾರೆ. ವ್ಯಾಪಾರಿ ತಪ್ಪಿಸಿಕೊಂಡು ಅಂಗಡಿಯೊಳಗೆ ಪ್ರವೇಶಿಸಿದ್ದಾರೆ. ಅಷ್ಟರಲ್ಲಿ ಜನ ಸೇರಿದ್ದರಿಂದ ರೌಡಿ ಅಲ್ಲಿಂದ ವಾಪಸ್ ತೆರಳಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
“ರೌಡಿಗಳನ್ನ ಮುದ್ದಿಸುವ ಬಿಜೆಪಿ ಸರ್ಕಾರದಿಂದಾಗಿ ಬೆಂಗಳೂರು ಐಟಿ ಸಿಟಿಯಿಂದ ಕ್ರೈಮ್ ಸಿಟಿಯಾಗುತ್ತಿದೆ. ಬಾಣಸವಾಡಿಯಲ್ಲಿ ಹಫ್ತಾ ವಸೂಲಿಗಾಗಿ ಮಚ್ಚು ಬೀಸಿದ್ದಾರೆ ರೌಡಿಗಳು, ಇದು ಬಿಜೆಪಿ ರೌಡಿ ಮೋರ್ಚಾದ ಪರಿಣಾಮವಲ್ಲವೇ ಬಿಜೆಪಿ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕೈಯ್ಯಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಕೆಲಸಕ್ಕೆ ಬಾರದ ಕಳ್ಳೆಪುರಿಯಂತಾಗಿದೆ!” ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.
ರೌಡಿಗಳನ್ನ ಮುದ್ದಿಸುವ ಬಿಜೆಪಿ ಸರ್ಕಾರದಿಂದಾಗಿ ಬೆಂಗಳೂರು ಐಟಿ ಸಿಟಿಯಿಂದ ಕ್ರೈಮ್ ಸಿಟಿಯಾಗುತ್ತಿದೆ.
ಬಾಣಸವಾಡಿಯಲ್ಲಿ ಹಫ್ತಾ ವಸೂಲಿಗಾಗಿ ಮಚ್ಚು ಬೀಸಿದ್ದಾರೆ ರೌಡಿಗಳು,
ಇದು #BJPRowdyMorcha ಪರಿಣಾಮವಲ್ಲವೇ @BJP4Karnataka?@JnanendraAraga ಅವರ ಕೈಯ್ಯಲ್ಲಿ
ಕಾನೂನು ಸುವ್ಯವಸ್ಥೆ ಎಂಬುದು ಕೆಲಸಕ್ಕೆ ಬಾರದ ಕಳ್ಳೆಪುರಿಯಂತಾಗಿದೆ! pic.twitter.com/n5gLNnfsXk— Karnataka Congress (@INCKarnataka) December 18, 2022
ಈ ಭಯಾನಕ ಘಟನೆಯ ಸಿಸಿ ಕ್ಯಾಮರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬಿಜೆಪಿ ಸರ್ಕಾರವನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ರೌಡಿಗಳನ್ನು ಮಟ್ಟ ಹಾಕುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಮಂಡ್ಯ: ಪದೇ ಪದೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು