Homeಅಂತರಾಷ್ಟ್ರೀಯದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು 'ಟ್ರಂಪ್ ಗೋಲ್ಡ್ ಕಾರ್ಡ್'

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

- Advertisement -
- Advertisement -

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ ‘ಟ್ರಂಪ್ ಗೋಲ್ಡ್ ಕಾರ್ಡ್’ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ.

‘ಟ್ರಂಪ್ ಗೋಲ್ಡ್ ಕಾರ್ಡ್’ ಅನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ EB-5 ವೀಸಾ ಕಾರ್ಯಕ್ರಮಕ್ಕೆ ಬದಲಾಗಿ ಪರಿಚಯಿಸಲಾಗಿದೆ. ಕಳೆದ ವರ್ಷ 14,000 EB-5 ವೀಸಾಗಳನ್ನು ನೀಡಲಾಗಿದೆ ಎಂದು EB-5ನ ವ್ಯಾಪಾರ ಸಂಘವಾದ ಇನ್‌ವೆಸ್ಟ್ ಇನ್‌ ದಿ ಯುಎಸ್‌ಎ ತಿಳಿಸಿದೆ.

ಈ ವರ್ಷದ ಜೂನ್‌ನಲ್ಲಿ ಯುಎಸ್‌ ವಾಣಿಜ್ಯ ಇಲಾಖೆಯು trumpcard.gov ವೆಬ್‌ಸೈಟ್ ಪ್ರಾರಂಭಿಸಿತ್ತು. ಈ ಮೂಲಕ ಅರ್ಜಿದಾರರು ತಮ್ಮ ಹೆಸರು, ಪ್ರದೇಶ ಮತ್ತು ಇಮೇಲ್ ವಿಳಾಸವನ್ನು ಸಲ್ಲಿಸಲು ಅವಕಾಶ ನೀಡಿತ್ತು. ವೆಬ್‌ಸೈಟ್‌ ಅಧಿಕೃತವಾಗಿ ನೋಂದಣಿಗೆ ತೆರೆದಾಗ ತಿಳಿಸುವುದಾಗಿ ಹೇಳಿತ್ತು. ಈ ವಾರ ವೆಬ್‌ಸೈಟ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಈಗ ಕೇವಲ ನೋಂದಣಿ ಮಾಡಿಕೊಳ್ಳುವುದು ಮಾತ್ರವಲ್ಲ, ನೇರವಾಗಿ ಪೂರ್ತಿ ಅರ್ಜಿ ಸಲ್ಲಿಸುವ ಸೌಲಭ್ಯವೂ ತೆರೆಯಲಾಗಿದೆ.

ವೆಬ್‌ಸೈಟ್‌ನಲ್ಲಿ ಗೋಲ್ಡ್ ಕಾರ್ಡ್ ಪೋಟೋ ಚಿನ್ನದ ಬಣ್ಣದಲ್ಲಿದೆ. ಅದರದಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ ಎಂದು ಬರೆಯಲಾಗಿದೆ. ಟ್ರಂಪ್ ಫೋಟೋ, ಸಹಿ, ಸ್ಟಾಚ್ಯೂ ಆಫ್ ಲಿಬರ್ಟಿ, ಅಮೆರಿಕದ ರಾಷ್ಟ್ರ ಧ್ವಜ ಮತ್ತು ಹದ್ದಿನ ಚಿತ್ರವಿದೆ.

ಟ್ರಂಪ್ ಈ ವರ್ಷದ ಫೆಬ್ರವರಿಯಲ್ಲಿ ಈ ಯೋಜನೆಯನ್ನು ಮೊದಲು ಘೋಷಿಸಿದ್ದರು. ನಂತರ ಏಪ್ರಿಲ್‌ನಲ್ಲಿ, ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ತಮ್ಮ ಫೋಟೋ ಇರುವ ಚಿನ್ನದ ಬಣ್ಣದ ಕಾರ್ಡ್‌ನ ಮಾದರಿಯನ್ನು ತೋರಿಸಿದ್ದರು.

ಏನಿದು EB-5 ವೀಸಾ?

ಉದ್ಯೋಗ ಆಧಾರಿತ ವೀಸಾ ವ್ಯವಸ್ಥೆಯ ಭಾಗವಾಗಿರುವ EB-5 ಕಾರ್ಯಕ್ರಮವನ್ನು 1990ರಲ್ಲಿ ಅಮೆರಿಕ ಕಾಂಗ್ರೆಸ್ ರಚಿಸಿತು. ಇದನ್ನು ಯುಎಸ್‌ ಪೌರತ್ವ ಮತ್ತು ವಲಸೆ ಸೇವೆಗಳು (USCIS) ನಿರ್ವಹಿಸುತ್ತದೆ.

ಇದು ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ವಿದೇಶಿಯರಿಗೆ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ನೀಡುತ್ತದೆ. ಹೂಡಿಕೆದಾರರು ಕನಿಷ್ಠ 1.05 ಮಿಲಿಯನ್ ಡಾಲರ್ (ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ 800,000 ಡಾಲರ್) ಹೂಡಿಕೆ ಮಾಡಬೇಕು ಮತ್ತು ಅಮೆರಿಕನ್ನರಿಗೆ ಕನಿಷ್ಠ 10 ಉದ್ಯೋಗಗಳನ್ನು ಸೃಷ್ಟಿಸಬೇಕು.

ಈ ಕಾರ್ಯಕ್ರಮದಡಿಯಲ್ಲಿ, ಹೂಡಿಕೆದಾರರು (ಮತ್ತು ಅವರ ಸಂಗಾತಿಗಳು ಮತ್ತು 21 ವರ್ಷದೊಳಗಿನ ಅವಿವಾಹಿತ ಮಕ್ಕಳು) ಅಮೆರಿಕದಲ್ಲಿ ವಾಣಿಜ್ಯ ಉದ್ಯಮದಲ್ಲಿ ಅಗತ್ಯವಾದ ಹೂಡಿಕೆ ಮಾಡಿದರೆ ಅಥವಾ ಅರ್ಹ ಅಮೆರಿಕನ್ನರಿಗೆ 10 ಶಾಶ್ವತ ಪೂರ್ಣ ಸಮಯದ ಉದ್ಯೋಗ ನೀಡುವುದಾದರೆ ಕಾನೂನುಬದ್ಧ ಶಾಶ್ವತ ನಿವಾಸಕ್ಕೆ (ಗ್ರೀನ್ ಕಾರ್ಡ್ ಹೊಂದಿರುವವರಾಗಲು) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಟ್ರಂಪ್ ಗೋಲ್ಡ್ ಕಾರ್ಡ್ ಎಂದರೇನು?

ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ಕಾರ್ಯಕ್ರಮವು ವಿದೇಶಿಯರಿಗೆ ಅಮೆರಿಕದಲ್ಲಿ ನಿವಾಸ ಮತ್ತು ಕೆಲಸದ ಹಕ್ಕುಗಳನ್ನು ನೀಡುತ್ತದೆ. ಅಲ್ಲದೆ, ಆಡಳಿತದ ತೊಂದರೆಗಳನ್ನು ಎದುರಿಸದೆ ಪೌರತ್ವವನ್ನು ಪಡೆಯುವ ಮಾರ್ಗವನ್ನು ಒದಗಿಸುತ್ತದೆ.

ವೆಬ್‌ಸೈಟ್ ಪ್ರಕಾರ, ಅನುಮೋದಿತ ಅರ್ಜಿದಾರರು EB-1 ಅಥವಾ EB-2 ವೀಸಾ ಹೊಂದಿರುವವರಾಗಿ ಕಾನೂನು ಸ್ಥಾನಮಾನವನ್ನು ಪಡೆಯುತ್ತಾರೆ. ಈ ವಿಭಾಗಗಳು ಆದ್ಯತೆಯ ಉನ್ನತ ಶ್ರೇಣಿಯ ವರ್ಗಗಳಾಗಿದ್ದು, ಅಸಾಧಾರಣ ಸಾಮರ್ಥ್ಯ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುತ್ತವೆ.

ಗೋಲ್ಡ್ ಕಾರ್ಡ್‌ಗೆ ಯಾರು ಅರ್ಹರು?

ಟ್ರಂಪ್ ಗೋಲ್ಡ್ ಕಾರ್ಡ್ ತೆಗೆದುಕೊಳ್ಳಲು 3 ಮುಖ್ಯ ಷರತ್ತುಗಳನ್ನು ಪೂರೈಸಬೇಕು.

  1. ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಅರ್ಹರಾಗಿರಬೇಕು (ಅಂದರೆ ಕ್ರಿಮಿನಲ್ ರೆಕಾರ್ಡ್, ಭಯೋತ್ಪಾದನೆ ಸಂಬಂಧ ಇರಬಾರದು)
  2. ದೇಶದ ಒಳಗೆ ಬಿಡಲು ಅಮೆರಿಕ ಸರ್ಕಾರದ ಒಪ್ಪಿಗೆ ಇರಬೇಕು (ಯಾವುದೇ ದೊಡ್ಡ ತಪ್ಪು ಮಾಡಿರಬಾರದು, ಗಂಭೀರ ರೋಗಗಳಿರಬಾರದು)
  3. ಅರ್ಜಿ ಸಲ್ಲಿಸುವಾಗ ಅರ್ಜಿದಾರರ ದೇಶದವರಿಗೆ ವೀಸಾ ಖಾಲಿ ಇರಬೇಕು

ಕೆಲವು ದೇಶದ (ಉದಾಹರಣೆಗೆ : ಭಾರತ, ಚೀನಾ, ಮೆಕ್ಸಿಕೋ) ಬಹಳ ಜನರು ಈಗಾಗಲೇ ಅರ್ಜಿ ಹಾಕಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು 10 ಲಕ್ಷ ಡಾಲರ್ ಕೊಟ್ಟರೂ ಕೂಡ ಗೋಲ್ಡ್ ಕಾರ್ಡ್ ಪಡೆಯಲು 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಕಾಯಬೇಕಾಗುತ್ತದೆ.

ಟ್ರಂಪ್ ಗೋಲ್ಡ್ ಕಾರ್ಡ್ ಅಡಿ ಬರುವ ವಿವಿಧ ವೀಸಾಗಳು ಯಾವುವು?

1.ಟ್ರಂಪ್ ಗೋಲ್ಡ್ ಕಾರ್ಡ್

ಟ್ರಂಪ್ ಗೋಲ್ಡ್ ಕಾರ್ಡ್ ಬೇಕಾದರೆ ಮೊದಲು ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಗೆ (ಡಿಹೆಚ್ಎಸ್‌) 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಪ್ರಾಸೆಸಿಂಗ್ ಶುಲ್ಕ ಕಟ್ಟಬೇಕು. ಈ ಹಣ ಮರುಪಾವತಿ ಆಗುವುದಿಲ್ಲ. ಏಕೆಂದರೆ, ಇದನ್ನು ಬ್ಯಾಕ್‌ಗ್ರೌಂಡ್ ಚೆಕ್ ಮತ್ತು ಆರಂಭದ ಪರಿಶೀಲನೆಗೆ ಬಳಸುತ್ತಾರೆ. ಈ ಶುಲ್ಕ ಕಟ್ಟಿದ ಕೂಡಲೇ ಅರ್ಜಿ ಅನುಮೋದನೆ ಮತ್ತು ವೀಸಾ ನೀಡುವ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ. ಆದರೆ, ಅರ್ಜಿ ಹಾಕಿದವರು ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ಇತರ ಶುಲ್ಕಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿರಬೇಕು.

ಗೋಲ್ಡ್ ಕಾರ್ಡ್‌ ಪಡೆಯಲು ಅರ್ಜಿ ಹಾಕಿದವರು ಕೊಡುವ 1 ಮಿಲಿಯನ್ ಡಾಲರ್ (8.5 ಕೋಟಿ ರೂ.) ಹಣವನ್ನು ‘ಗಿಫ್ಟ್’ ಅಥವಾ ನೀವು ಅಮೆರಿಕಕ್ಕೆ ದೊಡ್ಡ ಪ್ರಯೋಜನ ಕೊಡುತ್ತೀರಿ ಎಂಬ ಸಾಕ್ಷ್ಯ ಎಂದು ಪರಿಗಣಿಸುವುದಾಗಿ ವೆಬ್‌ಸೈಟ್‌ ಹೇಳುತ್ತದೆ. ಅಂದರೆ, ಅರ್ಜಿದಾರರು ಕೊಡುವ ಹಣ ನಿಜವಾಗಿಯೂ ‘ಹೂಡಿಕೆ’ ಅಲ್ಲ, ಬದಲಿಗೆ ಅದು ಸರ್ಕಾರಕ್ಕೆ ನೇರ ದಾನ ಕೊಟ್ಟಂತೆ.

ಇವಿಷ್ಟೇ ಅಲ್ಲದೆ, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ಗೆ ಹೆಚ್ಚುವರಿ ಶುಲ್ಕವನ್ನೂ ಕಟ್ಟಬೇಕಾಗಬಹುದು (ಉದಾ: ಮೆಡಿಕಲ್ ಚೆಕ್‌ಅಪ್, ಇಂಟರ್ವ್ಯೂ ಫೀಗಳು). ಇದು ಅರ್ಜಿದಾರರ ದೇಶ ಮತ್ತು ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ.

2. ಟ್ರಂಪ್ ಕಾರ್ಪೊರೇಟ್ ಗೋಲ್ಡ್ ಕಾರ್ಡ್

ಈ ಕಾರ್ಪೊರೇಟ್ ಗೋಲ್ಡ್ ಕಾರ್ಡ್ ಕಂಪನಿ (ಸ್ಪಾನ್ಸರ್) ತನ್ನ ಒಬ್ಬ ಅಥವಾ ಹೆಚ್ಚು ಉದ್ಯೋಗಿಗಳಿಗೆ ನೀಡಬಹುದು. ಆದರೆ, ಕಂಪನಿ ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ (ಡಿಹೆಚ್‌ಎಸ್‌)ಗೆ 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಕಟ್ಟಬೇಕು. ಇದು ಮರುಪಾವತಿ ಆಗದು. ಇದನ್ನು ಉದ್ಯೋಗಿಯ ಬ್ಯಾಕ್‌ಗ್ರೌಂಡ್ ಚೆಕ್‌ಗೆ ಬಳಸುತ್ತಾರೆ.

ಕಂಪನಿ 2 ಮಿಲಿಯನ್ ಡಾಲರ್ (ಸುಮಾರು 17 ಕೋಟಿ ರೂ.) ‘ಗಿಫ್ಟ್’ ಹಣವನ್ನು ಕೊಡಬೇಕು. ಇದು ಅಮೆರಿಕ ಸರ್ಕಾರಕ್ಕೆ ನೇರವಾಗಿ ಹೋಗುತ್ತದೆ, ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪಡೆಯಲು ಸಹಾಯ ಮಾಡುತ್ತದೆ.

ಕಂಪನಿ ಒಬ್ಬ ಉದ್ಯೋಗಿಯ ಸ್ಪಾನ್ಸರ್‌ಷಿಪ್ ನಿಲ್ಲಿಸಿ, ಅವರಿಗೆ ಕೊಟ್ಟ 2 ಮಿಲಿಯನ್ ಡಾಲರ್ ಗಿಫ್ಟ್ ಅನ್ನು ಹೊಸ ಉದ್ಯೋಗಿಯನ್ನು ಸ್ಪಾನ್ಸರ್ ಮಾಡಲು ಬಳಸಬಹುದು.

ವಾರ್ಷಿಕವಾಗಿ 2 ಮಿಲಿಯನ್‌ನ 1 ಶೇಕಡ (ಸುಮಾರು 17 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು. ಇದು ಕಾರ್ಡ್ ಚಾಲೂಕರಣೆಯನ್ನು ಕಾಪಾಡಲು. ಉದ್ಯೋಗಿ ಬದಲಾಯಿಸಿದರೆ ಅಥವಾ ಹೊಸ ಬ್ಯಾಕ್‌ಗ್ರೌಂಡ್ ಮಾಡಿದರೆ 2 ಮಿಲಿಯನ್‌ನ ಶೇಕಡ 5ರಷ್ಟು (ಸುಮಾರು 85 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು.

3.ಟ್ರಂಪ್ ಪ್ಲಾಟಿನಂ ಕಾರ್ಡ್‌

ಈ ಕಾರ್ಡ್ ವಿದೇಶಿ ಆದಾಯದ ಮೇಲೆ ತೆರಿಗೆ ವಿಧಿಸದೆ ವ್ಯಕ್ತಿಗಳು ವರ್ಷಕ್ಕೆ 270 ದಿನಗಳವರೆಗೆ ಅಮೆರಿಕದಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ. ಇದು ಪ್ರಯಾಣ ವೀಸಾಗಳ ಅಗತ್ಯವನ್ನು ನಿವಾರಿಸುತ್ತದೆ.

ಈ ಪ್ಲಾಟಿನಂ ಕಾರ್ಯಕ್ರಮಕ್ಕೆ ಸರ್ಕಾರ ಈಗಾಗಲೇ ವೇಟ್‌ಲಿಸ್ಟ್ (ಕಾಯುವ ಪಟ್ಟಿ) ತಯಾರಿಸಿದೆ. ಇದು ಇನ್ನೂ ಆರಂಭವಾಗಿಲ್ಲ, ಹಾಗಾಗಿ ಆಸಕ್ತರನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಈ ಪಟ್ಟಿ ಇದೆ.

ಪ್ಲಾಟಿನಂ ಕಾರ್ಡ್‌ಗೆ 5 ಮಿಲಿಯನ್ ಡಾಲರ್ (ಸುಮಾರು 42 ಕೋಟಿ ರೂ.) ಕೊಡುಗೆ ನೀಡಬೇಕು. ಇದು ಇನ್ನೂ ಈ ಮಟ್ಟದಲ್ಲೇ ಇರುತ್ತದೆ ಎಂಬ ಖಚಿತತೆ ಇಲ್ಲ. ಹಾಗಾಗಿ, ಈಗಲೇ ವೇಟ್‌ಲಿಸ್ಟ್‌ಗೆ ಸೇರಿಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ. ಅಂದರೆ, ಹಣದ ಮೊತ್ತ ಬದಲಾಗಬಹುದು (ಹೆಚ್ಚಾಗಬಹುದು).

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...