Homeಮುಖಪುಟಹೀಗೂ ನೆನೆಯಬಹುದು ಹಿರಿಯರನ್ನು: ಸಾಮಾಜಿಕ ಕಾರ್ಯಗಳ ಮೂಲಕ ಪ್ರತಿ ವರ್ಷ ಅಜ್ಜ-ಅಜ್ಜಿ ನೆನಯುವ ಎಸ್. ರುದ್ರೇಶ್ವರ

ಹೀಗೂ ನೆನೆಯಬಹುದು ಹಿರಿಯರನ್ನು: ಸಾಮಾಜಿಕ ಕಾರ್ಯಗಳ ಮೂಲಕ ಪ್ರತಿ ವರ್ಷ ಅಜ್ಜ-ಅಜ್ಜಿ ನೆನಯುವ ಎಸ್. ರುದ್ರೇಶ್ವರ

- Advertisement -
- Advertisement -

ಶಾಲೆಗಳಿಗೆ ಟಿವಿ, ಡ್ರಮ್‌ ಸೆಟ್ ಕೊಡುಗೆ ನೀಡುವುದು, ವೃದ್ಧಾಶ್ರಮಕ್ಕೆ ರೆಪ್ರಿಜರೇಟರ್ ನೀಡುವುದು, ಬಡವರಿಗೆ, ಅಲೆಮಾರಿಗಳಿಗೆ ಬೆಡ್‌ಶೀಟ್ – ಸ್ವೆಟರ್ ಕೊಡಿಸುವುದು, ಮಾಸ್ಕ್-ಸ್ಯಾನಿಟೈಸರ ಕೊಡಿಸುವುದು.. ಹೀಗೆ ಪ್ರತಿ ವರ್ಷ ಸಮಾಜ ಮುಖಿ ಕೆಲಸಗಳ ಮೂಲಕ ವಿಶಿಷ್ಟವಾಗಿ ತಮ್ಮ ಅಜ್ಜ-ಅಜ್ಜಿಯರನ್ನು ನೆನೆಯುತ್ತಾರೆ ರಾಮನಗರದ ಜನಪರ ಪತ್ರಕರ್ತರು ಮತ್ತು ಸಂಶೋಧನಾ ವಿದ್ಯಾರ್ಥಿಯಾದ ಎಸ್. ರುದ್ರೇಶ್ವರ.

ಅವರು ತಮ್ಮ ಅಜ್ಜ ಅಜ್ಜಿ ಕೂನಮುದ್ದನಹಳ್ಳಿಯ ಪಾರ್ವತಮ್ಮ ಮತ್ತು ಸಿದ್ದವೀರಯ್ಯ ಹಾಗೂ ಕೆಂಚನಕುಪ್ಪೆಯ ಜಯಮ್ಮ ಮತ್ತು ಶಾಂತಯ್ಯ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಕಳೆದ 9 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಹತ್ತನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದ ಅಂಗವಾಗಿ ರಾಮನಗರದ ಸಂವರ್ಧನ ಶಾಲೆಗೆ(ವಿಶೇಷ ಮಕ್ಕಳ ಪುನಶ್ಚೇತನ ಕೇಂದ್ರ) ಟಿವಿ ವಿತರಣೆಯನ್ನು ಮಾ.3ರಂದು ಬೆಳಿಗ್ಗೆ 11 ಗಂಟೆಗೆ ವಿತರಣೆ ಮಾಡಲಿದ್ದಾರೆ.

 

ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ರಾಮನಗರ ಜಿಲ್ಲೆಯ ಬುಡಕಟ್ಟುಗಳ ಸಾಂಸ್ಕೃತಿಕ ಸ್ಥಿತ್ಯಂತರಗಳು’ ಎಂಬ ವಿಷಯವನ್ನು ಕುರಿತು ಪಿಎಚ್.ಡಿ. ಪದವಿಗಾಗಿ ಸಂಶೋಧನಾ ಕಾರ್ಯವನ್ನು ಕೈಗೊಂಡಿರುವ ಇವರ ಜನಪರ ಕಾಳಜಿ ಮತ್ತು ಸಮಾಜಮುಖಿ ಚಿಂತನೆ ಅನನ್ಯವಾದುದು. ಅಲ್ಲದೆ ಹಾಯ್ ರಾಮನಗರ ಎಂಬ ಆನ್‌ಲೈನ್ ಪತ್ರಿಕೆ ನಡೆಸುವ ಮೂಲಕ ಪತ್ರಕರ್ತರಾಗಿಯೂ ಹೆಸರು ಗಳಿಸಿದ್ದಾರೆ. ರಾಮನಗರದ ಕೂಗಳತೆ ದೂರದಲ್ಲಿರುವ ಕೂಟಗಲ್ ಎಂಬ ಗ್ರಾಮದಲ್ಲಿನ ಇರುಳಿಗ ಸಮುದಾಯ ಜನರು ಯಾವುದೇ ಮೂಲಸೌಕರ್ಯಗಳಿಲ್ಲದೆ ಬಳಲುತ್ತಿದ್ದಾರೆ ತಮ್ಮ ಬರಹ ಮತ್ತು ವಿಡಿಯೋಗಳ ಮೂಲಕ ಸತತವಾಗಿ ಗಮನ ಸೆಳೆದ ರುದ್ರೇಶ್ವರ್‌ರವರು ಅಲ್ಲಿಗೆ ಅಧಿಕಾರಿಗಳು ಭೇಟಿ ನೀಡಿ ಹಕ್ಕುಪತ್ರ ನೀಡುವಂತೆ ಮಾಡುವಲ್ಲಿ ಪಾತ್ರ ವಹಿಸಿದ್ದಾರೆ.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ತಮ್ಮ ಅಜ್ಜಿ-ತಾತರಾದಂತಹ ಪಾರ್ವತಮ್ಮ-ಸಿದ್ಧವೀರಯ್ಯ, ಜಯಮ್ಮ-ಶಾಂತಯ್ಯ ಅವರ ನೆನಪಿನಲ್ಲಿ ಶಕ್ತ್ಯಾನುಸಾರ ನೆರವು ನೀಡುವ ಮೂಲಕ ಸಮಾಜಮುಖಿ ಚಿಂತನೆಯನ್ನು ಪ್ರಕಟಿಸುತ್ತಾ ಬಂದಿದ್ದಾರೆ.

ಈ ಹಿಂದೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಸಿಬ್ಬಂದಿಗೆ ಸ್ವೆಟರ್ ಗಳ ವಿತರಣೆ, ಕೂಟಗಲ್ ಬಳಿ ವಾಸಿಸುತ್ತಿರುವ ಇರುಳಿಗ ಸಮುದಾಯದ ಕುಟುಂಬಗಳಿಗೆ ಸ್ವೆಟರ್ ವಿತರಣೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಡ್ರಮ್ ಸೆಟ್ ವಿತರಣೆ, ಪ್ರಗತಿ ವಿದ್ಯಾ ಸಂಸ್ಥೆಗೆ ಡ್ರಮ್ ಸೆಟ್ ವಿತರಣೆ, ಅಮೃತ ವಿಕಲಚೇತನ ವೃದ್ಧಾಶ್ರಮಕ್ಕೆ ರೆಪ್ರಿಜರೇಟರ್ ವಿತರಣೆ ಸೇರಿದಂತೆ ಪ್ರತಿ ವರ್ಷವೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮಾಜಿಕ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ.

ಜೊತೆಗೆ ತಮ್ಮ ಮಗಳಾದ ಆರ್. ಯಶಿಕಾ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷವೂ ಮತದಾನ ಕುರಿತು ಜಾಗೃತಿ, ಕೋವಿಡ್ ಕುರಿತು ಜಾಗೃತಿ ಹಾಗೂ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗೌರಿ ಹಬ್ಬದಂದು ಮನೆಗೆ ಕರೆದು ಬಾಗಿನ ನೀಡುತ್ತಾ ಬಂದಿದ್ದಾರೆ. ಇವರ ಕಾರ್ಯಕಗಳಿಂದ ಪ್ರೇರಣೆಗೊಂಡ ಕೆಲ ಸ್ನೇಹಿತರೂ ಸಹ ತಮ್ಮ ಜನ್ಮ ದಿನದಂದು, ತಮ್ಮ ಮನೆಯ ಶುಭ ಸಮಾರಂಭಗಳಂದು ಇದೇ ಬಗೆಯ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ರುದ್ರೇಶ್ವರರವರು ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಲೇಖಕರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ, ಭಾರತೀಯ ಯೂತ್ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ.

“ಸಮಾಜಮುಖಿ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ. ನಾವು ಕಳೆದುಕೊಂಡಿರುವ ಅಜ್ಜ-ಅಜ್ಜಿಯನ್ನು ಒಳ್ಳೆಯ ಕೆಲಸ ಮಾಡುವ ಮೂಲಕ ನೆನಪಿಸಿಕೊಳ್ಳಬೇಕು. ಈಗ ಬಹುತೇಕ ಮನೆಗಳಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಹಿರಿಯರಿಗೆ ಶಕ್ತಿ ತುಂಬಲು ಸರ್ಕಾರದ ವತಿಯಿಂದ ಕಾನೂನುಗಳು ಜಾರಿಯಾದರೂ ಪ್ರಯೋಜನವಾಗುತ್ತಿಲ್ಲ” ಎನ್ನುತ್ತಾರೆ ಎಸ್. ರುದ್ರೇಶ್ವರ

ಹಿರಿಯರು ಸಮಾಜದ ಆಸ್ತಿ. ವಯಸ್ಸಾದ ಹಿರಿಯರು ಬೇಡವಾದ ಜೀವಗಳಲ್ಲ. ಅವರಲ್ಲಿರುವ ಜೀವನದ ಅನುಭವಗಳು ಹತಾಶೆಗೆ ಒಳಗಾಗಿರುವ ಯುವ ಸಮುದಾಯಕ್ಕೆ ಮಾದರಿಯಾಗುತ್ತವೆ. ಹಿರಿಯರನ್ನು ದೇಶದ ಸಂಪತ್ತು ಎಂದು ಪರಿಗಣಿಸಬೇಕು. ಆದರೆ ಪ್ರಸ್ತತ ಸಂದರ್ಭದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಇಂದಿನ ಯುವ ಸಮುದಾಯ ಹಿರಿಯ ಅನುಭವವನ್ನು ತಿಳಿದುಕೊಂಡು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎನ್ನುತ್ತಾರೆ.

ಸಮಾಜ ಮುಖಿ ಕೆಲಸಗಳ ಮೂಲಕ, ಜನಪರ ಪತ್ರಿಕೋದ್ಯಮದ ಮೂಲಕ ದುಡಿಯುತ್ತಿರುವ ರುದ್ರೇಶ್ವರ್‌ರವರ ಕೆಲಸಗಳು ಯಶಸ್ವಿಯಾಗಲಿ. ಅವರಿಂದ ಮತ್ತಷ್ಟು ಜನಪರ ಕೆಲಸಗಳು ಹೊರಹೊಮ್ಮಲಿ ಎಂಬುದು ನಮ್ಮ ಆಶಯ.


ಇದನ್ನೂ ಓದಿ; ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...