ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕ ಮತ್ತು ಅವರ ಪುತ್ರನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರೇದೇಶದ ರಾಜಧಾನಿ ಲಕ್ನೋದಿಂದ 379 ಕಿ.ಮೀ. ದೂರದ ಸಂಭಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ನರೇಗಾದಡಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಂದೂಕುಧಾರಿ ವ್ಯಕ್ತಿಗಳೊಡನೆ ವಾಗ್ವಾದದ ನಂತರ ಈ ಘಟನೆ ನಡೆದಿದೆ.
ಸಮಾಜವಾದಿ ಪಕ್ಷದ ನಾಯಕ ಚೋಟೆ ಲಾಲ್ ದಿವಾಕರ್ ಮತ್ತು ಅವರ ಪುತ್ರ ಸುನಿಲ್ ಅವರು ಗ್ರಾಮದ ಹೊಲವೊಂದಕ್ಕೆ ಅಡ್ಡಲಾಗಿರುವ ರಸ್ತೆಯನ್ನು ಪರಿಶೀಲಿಸಲು ಹೋಗಿದ್ದರು.
ಹೊಲದ ಮಧ್ಯದಲ್ಲಿರುವ ಕಿರಿದಾದ ರಸ್ತೆಯಲ್ಲಿ ರೈಫಲ್ ಹಿಡಿದಿದ್ದ ಇಬ್ಬರೊಂದಿಗೆ ವಾಗ್ವಾದ ನಡೆಸಿದಾಗ, ರೊಚ್ಚಿಗೆದ್ದ ಬಂದೂಕುಧಾರಿಗಳು ಗುಂಡು ಸಿಡಿಸಿದ್ದಾರೆ. ಗುಂಡಿಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗುಂಡು ಸಿಡಿಸಿದವರಲ್ಲಿ ಒಬ್ಬರನ್ನು ಸ್ಥಳೀಯ ಪ್ರಭಾವಶಾಲಿ ವ್ಯಕ್ತಿ ಸವಿಂದರ್ ಎಂದು ಗುರುತಿಸಲಾಗಿದೆ.
संभल के दलित नेता एवं चंदौसी से पूर्व सपा विधानसभा प्रत्याशी श्री छोटे लाल दिवाकर समेत उनके पुत्र की हत्या दुखद!
हत्यारों का प्रदेश उत्तर प्रदेश @samajwadiparty @aajtak @ABPNews @azizkavish pic.twitter.com/sPmuyy8Q0X— Azhar Baba Kalpi (@Azharbaba6262) May 19, 2020
ಘಟನೆಯ 2 ನಿಮಿಷ, 30 ಸೆಕೆಂಡಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಇದರಲ್ಲಿ ಇಬ್ಬರು ಬಂದೂಕುಧಾರಿಗಳೊಂದಿಗೆ ವಾಗ್ವಾದ ನಡೆಸುವ ಹಾಗೂ ಗುಂಡು ಸಿಡಿಸುವ ದೃಶ್ಯವನ್ನು ಕಾಣಬಹುದಾಗಿದೆ.
ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ರಸ್ತೆಯಿಂದ ತಮ್ಮ ಹೊಲಗಳ ಅತಿಕ್ರಮಣವಾಗುತ್ತಿದೆ ಎಂದು ಗುಂಡು ಸಿಡಿಸಿದವರು ಕೋಪಗೊಂಡಿದ್ದರು ಎನ್ನಲಾಗಿದೆ.
ಘಟನೆಯ ಬಗ್ಗೆ ಇನ್ನೂ ಯಾರನ್ನೂ ಬಂಧಿಸಿಲ್ಲ ಆದರೆ ಶೀಘ್ರದಲ್ಲೇ ಬಂಧನ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಓದಿ: ರಿಪಬ್ಲಿಕ್ ಟಿವಿ ಅರ್ನಾಬ್ ಗೋಸ್ವಾಮಿ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್